ವಿಶ್ವಕರ್ಮ ಕುಲಶಾಸ್ತ್ರೀಯ ಅಧ್ಯಯನದ ಸಮಾಲೋಚನಾ ಸಭೆ | ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಆರೋಗ್ಯ, ರಾಜಕೀಯ ಸ್ಥಿತಿ ದಾಖಲು
ಬೆಳ್ತಂಗಡಿ: ಕರ್ನಾಟಕ ಸರಕಾರದ ಆದೇಶದ ಅನ್ವಯ ವಿಶ್ವಕರ್ಮ ಮತ್ತು ಅದರ ಉಪಜಾತಿಗಳ ಕುಲಶಾಸ್ತ್ರೀಯ ಅಧ್ಯಯನದ ಸಮಾಲೋಚನಾ ಸಭೆ ಬೆಳ್ತಂಗಡಿ ಶ್ರೀ ವಿಶ್ವಕರ್ಮಭ್ಯುದಯ ಸಭಾ ಭವನದಲ್ಲಿ ಜರಗಿತು. ಮೈಸೂರು ವಿಶ್ವವಿದ್ಯಾಲಯದ ನೀತಿ ಅಧ್ಯಯನ ಕೇಂದ್ರದ ಸಹಾಯಕ ಸಂಶೋಧಕ ಡಾ.ಮಹಾದೇವ ಮತ್ತು ಡಾ. ಕೃಷ್ಣಮೂರ್ತಿ ಅವರು ಅಧ್ಯಯನದ ಉದ್ದೇಶ ಮತ್ತು ಸ್ವರೂಪದ ಬಗ್ಗೆ ಮಾಹಿತಿ ನೀಡಿ, ವಿಶ್ವಕರ್ಮ ಸಮುದಾಯದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಆರೋಗ್ಯ ಮತ್ತು ರಾಜಕೀಯ ಸ್ಥಿತಿಗಳ ಹೇಳಿಕೆಗಳನ್ನು ದಾಖಲೀಕರಣ ಮಾಡಿಕೊಂಡರು. ವೈಯಕ್ತಿಕ ಪ್ರಶ್ನಾವಳಿ ಮತ್ತು ಸೂಕ್ತ […]










