ಸುದ್ದಿ

ಬಂಟ್ವಾಳ : ಬುರ್ಖಾ ಧರಿಸಿಕೊಂಡು ಬಂದು ಜವುಳಿ ಅಂಗಡಿ ಮಾಲಕನ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಪತ್ನಿ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಂಗಡಿಯಲ್ಲೇ ನಡೆದ ಘಟನೆ ಬಂಟ್ವಾಳ : ಜವುಳಿ ಅಂಗಡಿಗೆ ಮಾರುವೇಷದಲ್ಲಿ ಬಂದ ಪತ್ನಿ ಗಂಡನಿಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಿ.ಸಿ.ರೋಡಿನಲ್ಲಿ ಬುಧವಾರ ರಾತ್ರಿ ನಡೆದಿದೆ. ಜವುಳಿ ಅಂಗಡಿ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ ಎಂಬವರಿಗೆ ಪತ್ನಿ ಜ್ಯೋತಿ ಸೋಮಯಾಜಿ ಎಂಬವರು ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾರೆ. ಬಿ.ಸಿ.ರೋಡಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಇರುವ ಸೋಮಯಾಜಿ ಟೆಕ್ಸ್‌ಟೈಲ್ಸ್‌ ಮಳಿಗೆಗೆ ನುಗ್ಗಿದ ಜ್ಯೋತಿ ಕ್ಯಾಶ್ ಕೌಂಟರ್‌ನಲ್ಲಿ ಕುಳಿತಿದ್ದ ಗಂಡನಿಗೆ ಪತ್ನಿ ಕತ್ತಿಯಿಂದ ಕಡಿದು […]

ಬಂಟ್ವಾಳ : ಬುರ್ಖಾ ಧರಿಸಿಕೊಂಡು ಬಂದು ಜವುಳಿ ಅಂಗಡಿ ಮಾಲಕನ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಪತ್ನಿ Read More »

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ 19 ವರ್ಷದ ಬಳಿಕ ಸೆರೆ

ಹಳೆ ಮನೆಯನ್ನು ಕೆಡವಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿ ಮಂಗಳೂರು : ಸುರತ್ಕಲ್‌ನಲ್ಲಿ 2006ರಲ್ಲಿ ನಡೆದ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಓರ್ವ ಆರೋಪಿಯನ್ನು ಪೊಲೀಸರು ಬರೋಬ್ಬರಿ 19 ವರ್ಷಗಳ ಬಳಿಕ ಸೆರೆ ಹಿಡಿದಿದ್ದಾರೆ. ಡಿಸೆಂಬರ್ 1, 2006ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ಸುಖಾನಂದ ಶೆಟ್ಟಿಯನ್ನು ಕಬೀರ್ ಮತ್ತು ಆತನ ಸಹಚರರು ಕೊಲೆ ಮಾಡಿದ್ದರು. ಇದು ಕರಾವಳಿಯಲ್ಲಿ ನಡೆದ ಮೊದಲ ಕೋಮುಹತ್ಯೆ ಪ್ರಕರಣವಾಗಿತ್ತು. ಕರಾವಳಿಯಲ್ಲಿ ನಂತರ ನಡೆದ ಅನೇಕ ಕೋಮು ಹಿಂಸಾಚಾರಗಳಿಗೆ ಇದೇ

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ 19 ವರ್ಷದ ಬಳಿಕ ಸೆರೆ Read More »

ಅಟಲ್‌ ವಿರಾಸತ್‌ ಸಂಪನ್ನ : ವಾಜಪೇಯಿ ಪ್ರೇರಕ ಶಕ್ತಿ ಎಂದು ಬಣ್ಣಿಸಿದ ವಿಜಯೇಂದ್ರ

ಅಟಲ್‌ 100ನೇ ಜನ್ಮದಿನದಂಗವಾಗಿ ನಡೆದ ಅಟಲ್‌ ವಿರಾಸತ್‌ನಿಂದ ಪುತ್ತೂರಿನಲ್ಲಿ ಬಿಜೆಪಿಗೆ ನವಚೈತನ್ಯ ಪುತ್ತೂರು : ಅಟಲ್ ಜೀ ಎಂಬುದು ಪ್ರೇರಕ ಶಕ್ತಿ. ಅವರೊಬ್ಬ ಕವಿಹೃದಯಿ, ಬರಹಗಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು. ಪುತ್ತೂರಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ಜನ್ಮದಿನದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ‘ಅಟಲ್ ವಿರಾಸತ್’ ಬೃಹತ್ ಜಿಲ್ಲಾಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ಅವರು ಅಜಾತಶತ್ರು, ಮಾತ್ರವಲ್ಲ; ಅವರೊಬ್ಬ ಅಪ್ಪಟ ದೇಶಭಕ್ತ. ಅಟಲ್‍ಜೀ ಅವರು ಕಟ್ಟಿದ ಬಿಜೆಪಿ ಕಾರ್ಯಕರ್ತರಾಗಿರುವುದೇ ನಮಗೆಲ್ಲರಿಗೂ

ಅಟಲ್‌ ವಿರಾಸತ್‌ ಸಂಪನ್ನ : ವಾಜಪೇಯಿ ಪ್ರೇರಕ ಶಕ್ತಿ ಎಂದು ಬಣ್ಣಿಸಿದ ವಿಜಯೇಂದ್ರ Read More »

ಬೆಂಗಳೂರಿನಲ್ಲಿ 7.11 ಕೋ. ರೂ. ದರೋಡೆ : ಸಿಎಂಎಸ್‌ ವಾಹನ ಸಿಬ್ಬಂದಿ ತೀವ್ರ ವಿಚಾರಣೆ

ಹಾಡಹಗಲೇ ನಗರ ಮಧ್ಯದಲ್ಲಿ ನಡೆದ ದರೋಡೆ ಕೃತ್ಯದಿಂದ ಸರ್ಕಾರಕ್ಕೆಎ ತೀವ್ರ ಮುಜುಗರ ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ಹಾಡಹಗಲೇ ನಡೆದ ಸಿನಿಮೀಯ ಶೈಲಿಯ ದರೋಡೆ ಕೃತ್ಯದಲ್ಲಿ ಸಿಎಂಎಸ್‌ ವಾಹನ ಚಾಲಕ ಮತ್ತು ಸಿಬ್ಬಂದಿ ಮೇಲೆಯೇ ಅನುಮಾನ ಮೂಡಿದೆ. ಎಟಿಎಂಗೆ ಹಣ ತುಂಬುವ ಸಿಎಂಎಸ್‌ ವಾಹನವನ್ನು ಅಡ್ಡಗಟ್ಟಿ 7 ಕೋಟಿ 11 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿರುವ ಘಟನೆಯಿಂದ ಬೆಂಗಳೂರು ನಗರ ಬೆಚ್ಚಿಬಿದ್ದಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಸರ್ಕಾರಕ್ಕೆ ಈ ದರೋಡೆ ಕೃತ್ಯದಿಂದ ಬಹಳ ಮುಜುಗರವಾಗಿದೆ.

ಬೆಂಗಳೂರಿನಲ್ಲಿ 7.11 ಕೋ. ರೂ. ದರೋಡೆ : ಸಿಎಂಎಸ್‌ ವಾಹನ ಸಿಬ್ಬಂದಿ ತೀವ್ರ ವಿಚಾರಣೆ Read More »

ಅಕ್ಷಯ ಕಾಲೇಜಿನಲ್ಲಿ ಆಧುನಿಕ ಉಪಕರಣಗಳ ಮಾಹಿತಿ ಕಾರ್ಯಾಗಾರ

ಪುತ್ತೂರು: ಅಕ್ಷಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ “ಎಲೈಟ್” ಆಂತರಿಕ ವಿನ್ಯಾಸ ಸಂಘ ಹಾಗೂ ಐಕ್ಯೂಎಸಿ ಸಹಭಾಗಿತ್ವದಲ್ಲಿ ಆಂತರಿಕ ವಿನ್ಯಾಸ ವಿಭಾಗದ ವಿದ್ಯಾರ್ಥಿಗಳಿಗೆ “ಆಧುನಿಕ ಉಪಕರಣಗಳು” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರ ನಡೆಸಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ, ಯು-ಮನೆ ಸಂಘದ ಮಾಲಕ ವಾಸ್ತುಶಿಲ್ಪಿ ಅಜೇಯಕೃಷ್ಣಉಪಾಂಗಲ ಇವರು ದೀಪಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ,ಆಧುನಿಕ ಉಪಕರಣಗಳ ಬಗೆಗೆ ಮಾಹಿತಿ, ಪ್ರಾಚೀನ ಮತ್ತು ಈಗಿನ ಆಂತರಿಕ ವಿನ್ಯಾಸ ಶೈಲಿ,

ಅಕ್ಷಯ ಕಾಲೇಜಿನಲ್ಲಿ ಆಧುನಿಕ ಉಪಕರಣಗಳ ಮಾಹಿತಿ ಕಾರ್ಯಾಗಾರ Read More »

ಶ್ರೀ ಆಂಜನೇಯ 57ನೇ ವಾರ್ಷಿಕೋತ್ಸವದ ಪೂರ್ವಭಾವಿ ಸಭೆ

ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಸಂಘ ಬೊಳುವಾರು ಪುತ್ತೂರು ಇದರ ಶ್ರೀ ಆಂಜನೇಯ 57ನೇ ವಾರ್ಷಿಕೋತ್ಸವವು ಡಿಸೆಂಬರ್ 25 ರಂದು ಗುರುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಅಪರಾಹ್ನ ಗಂಟೆ 2 ರಿಂದ ನಡೆಯಲಿದೆ. ಹಿರಿಯ ಕಲಾವಿದರಿಂದ ತಾಳಮದ್ದಳೆ,ಶ್ರೀ ಶ್ರೀ ಎಡನೀರು ಶ್ರೀಗಳ ಸಾನಿಧ್ಯದಲ್ಲಿ ಶ್ರೀಯಕ್ಷಾಂಜನೇಯ ಪ್ರಶಸ್ತಿ ಮತ್ತು ಶ್ರೀಮತಿ ಶಾಂತ ಮತ್ತು ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಆವಾರ್ಡ್ ಪ್ರದಾನಿಸುವುದೆಂದು ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ತಿಳಿಸಿದರು. ಪರ್ಲಡ್ಕದ ಶಿವಪೇಟೆಯ ಅಗಸ್ತ್ಯದಲ್ಲಿ ಜರಗಿದ

ಶ್ರೀ ಆಂಜನೇಯ 57ನೇ ವಾರ್ಷಿಕೋತ್ಸವದ ಪೂರ್ವಭಾವಿ ಸಭೆ Read More »

ಆಂಧ್ರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 7 ಮಂದಿ ನಕ್ಸಲರು ಯಮಪುರಕ್ಕೆ

ನವದೆಹಲಿ: ಆಂಧ್ರಪ್ರದೇಶದ ಮಾರೆಡುಮಿಲ್ಲಿಯ ಸುತ್ತಮುತ್ತಲ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಒಟ್ಟು ಏಳು ಮಂದಿ ನಕ್ಸಲರನ್ನು ಯಮಪುರಕ್ಕೆ ‌ಕಳುಹಿಸಲಾಗಿದೆ. ಈ ಹಿಂದೆ ನಡೆದ ಎನ್‌ಕೌಂಟರ್‌ನಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಕಮಾಂಡರ್ ಮದ್ವಿ ಹಿದ್ಮಾ ‌ಸೇರಿ ಆರು ಮಂದಿ ನಕ್ಸಲರನ್ನು ಕೊಲ್ಲಲಾಗಿತ್ತು. ಇಂದು ಎನ್‌ಕೌಂಟರ್‌ಗೆ ಗುರಿಯಾದ ನಕ್ಸಲರು ಪೈಕಿ ಮೂವರು ಮಹಿಳೆಯರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಿನ್ನೆ ಕಾರ್ಯಾಚರಣೆ ಆರಂಭ ಮಾಡಿದ 7 ಕಿಮೀ ದೂರದ ಪ್ರದೇಶದಿಂದ ಇಂದು ಕಾರ್ಯಾಚರಣೆ ಆರಂಭ ಮಾಡಲಾಗಿತ್ತು. ಇಂದು ಹತ್ಯೆಯಾದ

ಆಂಧ್ರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 7 ಮಂದಿ ನಕ್ಸಲರು ಯಮಪುರಕ್ಕೆ Read More »

ಪಾಲಕರಿಂದ ಉಗ್ರನಾಗುವಂತೆ ಒತ್ತಡ: ಬಾಲಕನಿಂದ ಪೊಲೀಸರಿಗೆ ದೂರು

ತಿರುವನಂತಪುರ: ತನ್ನನ್ನು ಉಗ್ರನಾಗುವಂತೆ ಪಾಲಕರು ಪೀಡಿಸುತ್ತಿರುವುದಾಗಿ ‌ಕೇರಳದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ. ತನ್ನ ತಾಯಿ ಮತ್ತು ಮಲತಂದೆ ಮತೀಯವಾದದ ವಿಡಿಯೋ‌ಗಳನ್ನು ತೋರಿಸಿ, ತನ್ನನ್ನು ಉಗ್ರಗಾಮಿಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು 16 ವರ್ಷದ ಹುಡುಗನೊಬ್ಬ ಪೊಲೀಸರ ಮೊರೆ ಹೋಗಿರುವುದಾಗಿದೆ. ಈತನ ದೂರನ್ನಾಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣವನ್ನು ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ದಾಖಲು ಮಾಡಿಕೊಳ್ಳಲಾಗಿದೆ. ಬಾಲಕನ ದೂರನ್ನು ಪರಿಶೀಲಿಸಿ, ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

ಪಾಲಕರಿಂದ ಉಗ್ರನಾಗುವಂತೆ ಒತ್ತಡ: ಬಾಲಕನಿಂದ ಪೊಲೀಸರಿಗೆ ದೂರು Read More »

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಪಿಎಂಶ್ರೀ ಸಡಗರ:ಮೆರುಗು ನೀಡಿದ ವಾರ್ಷಿಕೋತ್ಸವ ಸಂಭ್ರಮ

ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯ ವಾರ್ಷಿಕೋತ್ಸವ ಪಿಎಂಶ್ರೀ ಸಡಗರ ಸಂಭ್ರಮದಿಂದ ನಡೆಯಿತು. ಮಕ್ಕಳ ಸೃಜನಶೀಲ ಅಭಿವ್ಯಕ್ತಿ ಕಾರಣವಾದ ಶಾಲಾ ವಾರ್ಷಿಕೋತ್ಸವವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ಧ್ವಜಾರೋಹಣಗೈದು ದೀಪ ಬೆಳಗಿಸಿ ಉದ್ಘಾಟಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಉಪಸ್ಥಿತರಿದ್ದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಸದಸ್ಯರಾದ ಬಾಬು ಶೆಟ್ಟಿ, ವಸಂತಿ, ಪದ್ಮಾವತಿ, ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ದಾಮೋದರ ಕುಲಾಲ್ ಉಪಸ್ಥಿತರಿದ್ದರು. ಶಾಲೆಗೆ ಚಯರ್ ಕೊಡುಗೆ ನೀಡಿದ

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಪಿಎಂಶ್ರೀ ಸಡಗರ:ಮೆರುಗು ನೀಡಿದ ವಾರ್ಷಿಕೋತ್ಸವ ಸಂಭ್ರಮ Read More »

ಪುರುಷೋತ್ತಮ ಬಿಳಿಮಲೆ ‌ವಿರುದ್ಧ ಹರಿಹಾಯ್ದ ಬಿ. ವೈ. ವಿಜಯೇಂದ್ರ

ಪುತ್ತೂರು: ಯಕ್ಷಗಾನ ಕಲಾವಿದರಲ್ಲಿ ಹಲವರು ಸಲಿಂಗ ಕಾಮಿಗಳಿದ್ದಾರೆ ಎಂದು ಹೇಳುವ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ವಿವಾದ ಸೃಷ್ಟಿ ಮಾಡಿದ್ದು, ಅವರನ್ನು ತಕ್ಷಣವೇ ಹುದ್ದೆಯಿಂದ ವಜಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ. ಬಿಳಿಮಲೆ ಕೇವಲ ಯಕ್ಷಗಾನಕ್ಕೆ ಮಾತ್ರವಲ್ಲ, ಕರಾವಳಿ ಭಾಗಕ್ಕೆ, ಹಿಂದೂ ಸಮಾಜಕ್ಕೆ ಅವಮಾನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮನಸ್ಥಿತಿ ಇದು. ಕರಾವಳಿಯ ಸಂಸ್ಕೃತಿ, ಪರಂಪರೆಯ ಬಗ್ಗೆ ಕೊಂಚವಾದರೂ ಗೌರವ ಇದ್ದಿದ್ದರೆ ಅವರು ಈ ತರದ ಹೇಳಿಕೆ

ಪುರುಷೋತ್ತಮ ಬಿಳಿಮಲೆ ‌ವಿರುದ್ಧ ಹರಿಹಾಯ್ದ ಬಿ. ವೈ. ವಿಜಯೇಂದ್ರ Read More »

error: Content is protected !!
Scroll to Top