ಸುದ್ದಿ

ಮಾದಕ ವಸ್ತು ಸೇವನೆ, ಮಾರಾಟ ಆರೋಪಿಗಳಿಗೆ ಶಿಕ್ಷೆ ಪ್ರಕಟ

ಉಪ್ಪಿನಂಗಡಿ: ಮಾದಕ ವಸ್ತು ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಹಾಗೆ ಮೂವರು ಆರೋಪಿಗಳಿಗೆ ಹತ್ತು ಸಾವಿರ ರೂ. ದಂಡ ಮತ್ತು ಒಂದು ವರ್ಷ ಸಾದಾ ಜೈಲು ಶಿಕ್ಷೆ ಪ್ರಕಟಿಸಿ ನ್ಯಾಯಾಲಯ ಆದೇಶ ನೀಡಿದೆ. ಆರೋಪಿಗಳನ್ನು ಸಲೀಂ ಹುಸೇನ್, ಶಹಜ್ ಅಹಮದ್, ಮಹಮದ್ ಶಾಫಿ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ, ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿರುವುದಾಗಿದೆ.

ಮಾದಕ ವಸ್ತು ಸೇವನೆ, ಮಾರಾಟ ಆರೋಪಿಗಳಿಗೆ ಶಿಕ್ಷೆ ಪ್ರಕಟ Read More »

ಶಬರಿಮಲೆಯಲ್ಲಿ ಭಕ್ತರ ಹೆಚ್ಚಳ: ಮಹತ್ವದ ಸೂಚನೆ ನೀಡಿದ ಕೇರಳ ಹೈಕೋರ್ಟ್

ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ಸನ್ನಿಧಾನದಲ್ಲಿ ಮಕರವಿಳಕ್ಕು ಯಾತ್ರೆ ಆರಂಭವಾಗಿದ್ದು, ಭಕ್ತರ ದಂಡೇ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಯಾತ್ರಿಕರ ಒಳಹರಿವು ನಿಯಂತ್ರಿಸುವ ನಿಟ್ಟಿನಲ್ಲಿ ಕೇರಳ ಹೈಕೋರ್ಟ್ ಸೂಚನೆಯೊಂದನ್ನು ನೀಡಿದೆ. ದಿನದ ದರ್ಶನದ ಮಿತಿಯನ್ನು 75 ಸಾವಿರಕ್ಕೆ ಇಳಿಕೆ ಮಾಡಲಾಗಿದ್ದು, ಸ್ಪಾಟ್ ಬುಕ್ಕಿಂಗ್ ಅನ್ನು 5 ಸಾವಿರಕ್ಕೆ ‌ಸೀಮಿತಗೊಳಿಸಿದೆ. ನ್ಯಾಯಾಲಯಕ್ಕೆ ನೀಡಲಾದ ಮಾಹಿತಿಯ ಪ್ರಕಾರ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ 1 ಲಕ್ಷ ದಾಟಿದ್ದು, ಹಲವರು ಸಮಯಕ್ಕೂ ಮುನ್ನವೇ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಭಕ್ತರ ದಂಡು ಕಡಿಮೆ ಮಾಡುವ

ಶಬರಿಮಲೆಯಲ್ಲಿ ಭಕ್ತರ ಹೆಚ್ಚಳ: ಮಹತ್ವದ ಸೂಚನೆ ನೀಡಿದ ಕೇರಳ ಹೈಕೋರ್ಟ್ Read More »

ಮದುವೆ ಮನೆಗೆ ಕನ್ನ ಹಾಕಿ ಅಡಿಕೆ ಹೊತ್ತೊಯ್ದ ಕಳ್ಳರು

ಪುತ್ತೂರು: ಮಗಳ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರ ಮೇಲೆ ಕಳ್ಳರು ವಕ್ರದೃಷ್ಟಿ ಬೀರಿದ್ದು, ಮದುವೆ ಮನೆಯಿಂದ ಸುಮಾರು 1 ಲಕ್ಷ ರೂ. ಮೌಲ್ಯದ ಅಡಿಕೆ ಕಳ್ಳತನ ಮಾಡಿ ಶಾಕ್ ನೀಡಿದೆ. ಈ ಸಂಬಂಧ ಮನೆಯ ಮಾಲೀಕ ವೀರಮಂಗಲದ ಸುಳಿಮೇಲು ‌ನಿವಾಸಿ ಅಚ್ಯುತ ಗೌಡ (57) ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಗಳ ನಿಶ್ಚಿತಾರ್ಥ, ಮದುವೆಯ ಕಾರ್ಯಗಳಲ್ಲಿ ಕುಟುಂಬ ಬ್ಯುಸಿ ಯಾಗಿದ್ದ ಸಮಯದಲ್ಲಿ ಕಳ್ಳರು ಕೈಚಳಕ ತೋರಿರುವುದಾಗಿದೆ. ಅಚ್ಯುತ ಗೌಡ ಅವರು ಸುಮಾರು 36 ಗೋಣಿ

ಮದುವೆ ಮನೆಗೆ ಕನ್ನ ಹಾಕಿ ಅಡಿಕೆ ಹೊತ್ತೊಯ್ದ ಕಳ್ಳರು Read More »

G.L. ಆಚಾರ್ಯದಲ್ಲಿ ಕರಿಮಣಿ ಮೇಳ: ಕೊನೆಯ 4 ದಿನಗಳಷ್ಟೇ ಬಾಕಿ

ಪುತ್ತೂರು: ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಕರಿಮಣಿ ಮೇಳ ನಡೆಯುತ್ತಿದ್ದು, ಇನ್ನು ಕೇವಲ ನಾಲ್ಕು ದಿನಗಳ ಕಾಲ ಈ ಮೇಳ ನಡೆಯಲಿದೆ. ನ. 23 ರಂದು ಕರಿಮಣಿ ಮೇಳದ ಕೊನೆಯ ದಿನವಾಗಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ‌ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಈ ಮೇಳದಲ್ಲಿ ಹಳೆಯ ಚಿನ್ನ ಅಥವಾ ಕರಿಮಣಿಯನ್ನು ಹೊಸತರ ಜೊತೆಗೆ ಬದಲಾವಣೆ ಮಾಡುವ ಅವಕಾಶ ಇದ್ದು, 1500 ಕ್ಕೂ ಹೆಚ್ಚು ವಿನ್ಯಾಸಗಳಲ್ಲಿ ಕರಿಮಣಿ ಸರಗಳು ಲಭ್ಯವಿವೆ. ಖರೀದಿಗೆ ಉಡುಗೊರೆಗಳು ಸಹ

G.L. ಆಚಾರ್ಯದಲ್ಲಿ ಕರಿಮಣಿ ಮೇಳ: ಕೊನೆಯ 4 ದಿನಗಳಷ್ಟೇ ಬಾಕಿ Read More »

ನಿಷೇಧಿತ ಮಾದಕ ವಸ್ತು ಮಾರಾಟ: ಮುಸ್ತಫಾ ವಶಕ್ಕೆ

ಪುತ್ತೂರು: ಅಕ್ರಮವಾಗಿ ನಿಷೇಧಿತ ಮಾದಕ ವಸ್ತು MDMA ಯನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ನಗರದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕಬಕದ ಮಹಮ್ಮದ್ ಮುಸ್ತಫಾ(36) ಎಂದು ಗುರುತಿಸಲಾಗಿದೆ. ಆರೋಪಿ ಮುಕ್ರಂಪಾಡಿ ಸಮೀಪದ ಬಾಡಿಗೆ ಮನೆಯೊಂದರಲ್ಲಿ 14 ಗ್ರಾಂ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದನು. ಆರೋಪಿಯ ವಿರುದ್ಧ ಈಗಾಗಲೇ ಪೋಕ್ಸೋ ಪ್ರಕರಣ ಸಹ ದಾಖಲಾಗಿ, ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಸಹ ಮುಗಿಸಿದ್ದ ಎಂದು ತಿಳಿದು ಬಂದಿದೆ. 2024 ರಲ್ಲಿಯೂ ಈತನ ವಿರುದ್ಧ ಮಾದಕ ವಸ್ತುಗಳನ್ನು ಮಾರಾಟ

ನಿಷೇಧಿತ ಮಾದಕ ವಸ್ತು ಮಾರಾಟ: ಮುಸ್ತಫಾ ವಶಕ್ಕೆ Read More »

ಚೌಕಿಯಲ್ಲಿ ವೇಷ ಕಳಚುತ್ತಿರುವಾಗಲೇ ಯಕ್ಷಗಾನ ಕಲಾವಿದ ಕುಸಿದು ಬಿದ್ದು ಸಾವು

ಮಂದಾರ್ತಿ ಮೇಳದ ಮಹಿಷಾಸುರ ವೇಷಧಾರಿ ಈಶ್ವರ ಗೌಡ ನೆಮ್ಮಾರ್‌ ಮುಖದ ಬಣ್ಣ ತೆಗೆಯುವ ಮುನ್ನವೇ ಸೆಳೆದೊಯ್ದ ವಿಧಿ ಉಡುಪಿ: ಯಕ್ಷಗಾನ ಕಲಾವಿದರೊಬ್ಬರು ಚೌಕಿಯಲ್ಲಿ ಬಣ್ಣ ಕಳಚುತ್ತಿರುವಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಮಂದಾರ್ತಿ ಮೇಳದ ಬಣ್ಣದ ವೇಷಗಾರ ಈಶ್ವರ ಗೌಡ ನೆಮ್ಮಾರ್‌ ತೀರಿಕೊಂಡಿರುವ ಕಲಾವಿದ. ಕುಂದಾಪುರ ಸಮೀಪ ಸೌಡ ಎಂಬಲ್ಲಿ ನಿನ್ನೆ ರಾತ್ರಿ ದೇವಿ ಮಹಾತ್ಮೆ ಪ್ರಸಂಗ ಯಕ್ಷಗಾನವಿತ್ತು. ಈಶ್ವರ ಗೌಡ ನೆಮ್ಮಾರ್‌ ಮಹಿಷಾಸುರನ ಪಾತ್ರ ಮಾಡಿದ್ದರು. ಪಾತ್ರ ಮುಗಿದ ಬಳಿಕ ತಡರಾತ್ರಿ ಚೌಕಿಯಲ್ಲಿ

ಚೌಕಿಯಲ್ಲಿ ವೇಷ ಕಳಚುತ್ತಿರುವಾಗಲೇ ಯಕ್ಷಗಾನ ಕಲಾವಿದ ಕುಸಿದು ಬಿದ್ದು ಸಾವು Read More »

ಸ್ಕೂಟಿಗೆ ಕಾರು ಡಿಕ್ಕಿ : ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು

ಬೆಳ್ತಂಗಡಿ: ಇಂಜಿನಿಯರಿಂಗ್‌ ವಿದ್ಯಾರ್ಥಿನಿಯರು ಸಂಚರಿಸುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿನಿ ಮೃತಪಟ್ಟು ಮತ್ತೋರ್ವ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆ ಕಾವಳಕಟ್ಟೆ ಸಮೀಪದ ಎನ್.ಸಿ.ರೋಡ್ ಬಳಿ ಬುಧವಾರ ಸಂಭವಿಸಿದೆ. ಕಡಬ ನಿವಾಸಿ ಸುನಿಲ್ ಎಂಬವರ ಪುತ್ರಿ ಅನನ್ಯ (21) ಮೃತ ವಿದ್ಯಾರ್ಥಿನಿ. ಗುರುವಾಯನಕೆರೆ ನಿವಾಸಿ ಪೃಥ್ವಿ ರಾವ್ ಎಂಬವರು ಗಾಯಗೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಇವರಿಬ್ಬರೂ ಮಂಗಳೂರಿನ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನಾ

ಸ್ಕೂಟಿಗೆ ಕಾರು ಡಿಕ್ಕಿ : ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು Read More »

ಧರ್ಮಸ್ಥಳ ಪ್ರಕರಣ : ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್‌ಶೀಟ್‌ ರೆಡಿ

ಇಂದು ನ್ಯಾಯಾಲಯಕ್ಕೆ ಸಲ್ಲಿಕೆ ; ತನಿಖೆ ನಿಲ್ಲಿಸಲು ಬುರುಡೆ ಗ್ಯಾಂಗ್‌ನಿಂದ ಶತ ಪ್ರಯತ್ನ ಧರ್ಮಸ್ಥಳ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬರೋಬ್ಬರಿ 4,000 ಪುಟಗಳ ಚಾರ್ಜ್‌ಶೀಟ್‌ ಸಿದ್ಧಪಡಿಸಿದೆ. ನಾಲ್ಕು ತಿಂಗಳ ಕಾಲ ತನಿಖೆ ನಡೆಸಿರುವ ಪೊಲೀಸರು ಎಲ್ಲ ಅಂಶಗಳನ್ನು ಎಲ್ಲ ಆಯಾಮದಿಂದ ಪರಿಶೀಲಿಸಿದ್ದಾರೆ. ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್

ಧರ್ಮಸ್ಥಳ ಪ್ರಕರಣ : ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್‌ಶೀಟ್‌ ರೆಡಿ Read More »

ಬಂಟ್ವಾಳ : ಬುರ್ಖಾ ಧರಿಸಿಕೊಂಡು ಬಂದು ಜವುಳಿ ಅಂಗಡಿ ಮಾಲಕನ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಪತ್ನಿ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಂಗಡಿಯಲ್ಲೇ ನಡೆದ ಘಟನೆ ಬಂಟ್ವಾಳ : ಜವುಳಿ ಅಂಗಡಿಗೆ ಮಾರುವೇಷದಲ್ಲಿ ಬಂದ ಪತ್ನಿ ಗಂಡನಿಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಿ.ಸಿ.ರೋಡಿನಲ್ಲಿ ಬುಧವಾರ ರಾತ್ರಿ ನಡೆದಿದೆ. ಜವುಳಿ ಅಂಗಡಿ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ ಎಂಬವರಿಗೆ ಪತ್ನಿ ಜ್ಯೋತಿ ಸೋಮಯಾಜಿ ಎಂಬವರು ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾರೆ. ಬಿ.ಸಿ.ರೋಡಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಇರುವ ಸೋಮಯಾಜಿ ಟೆಕ್ಸ್‌ಟೈಲ್ಸ್‌ ಮಳಿಗೆಗೆ ನುಗ್ಗಿದ ಜ್ಯೋತಿ ಕ್ಯಾಶ್ ಕೌಂಟರ್‌ನಲ್ಲಿ ಕುಳಿತಿದ್ದ ಗಂಡನಿಗೆ ಪತ್ನಿ ಕತ್ತಿಯಿಂದ ಕಡಿದು

ಬಂಟ್ವಾಳ : ಬುರ್ಖಾ ಧರಿಸಿಕೊಂಡು ಬಂದು ಜವುಳಿ ಅಂಗಡಿ ಮಾಲಕನ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಪತ್ನಿ Read More »

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ 19 ವರ್ಷದ ಬಳಿಕ ಸೆರೆ

ಹಳೆ ಮನೆಯನ್ನು ಕೆಡವಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿ ಮಂಗಳೂರು : ಸುರತ್ಕಲ್‌ನಲ್ಲಿ 2006ರಲ್ಲಿ ನಡೆದ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಓರ್ವ ಆರೋಪಿಯನ್ನು ಪೊಲೀಸರು ಬರೋಬ್ಬರಿ 19 ವರ್ಷಗಳ ಬಳಿಕ ಸೆರೆ ಹಿಡಿದಿದ್ದಾರೆ. ಡಿಸೆಂಬರ್ 1, 2006ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ಸುಖಾನಂದ ಶೆಟ್ಟಿಯನ್ನು ಕಬೀರ್ ಮತ್ತು ಆತನ ಸಹಚರರು ಕೊಲೆ ಮಾಡಿದ್ದರು. ಇದು ಕರಾವಳಿಯಲ್ಲಿ ನಡೆದ ಮೊದಲ ಕೋಮುಹತ್ಯೆ ಪ್ರಕರಣವಾಗಿತ್ತು. ಕರಾವಳಿಯಲ್ಲಿ ನಂತರ ನಡೆದ ಅನೇಕ ಕೋಮು ಹಿಂಸಾಚಾರಗಳಿಗೆ ಇದೇ

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ 19 ವರ್ಷದ ಬಳಿಕ ಸೆರೆ Read More »

error: Content is protected !!
Scroll to Top