ಸುದ್ದಿ

ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಮತದಾನ ದಾಖಲೆಗಳೆಲ್ಲ ಧೂಳೀಪಟ

ಸ್ವಾತಂತ್ರ್ಯ ನಂತರ ಇಷ್ಟು ಮತದಾನ ಇದೇ ಮೊದಲು ನವದೆಹಲಿ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಮತದಾರರಿಗೆ ಧನ್ಯವಾದ ಹೇಳಿದೆ. ವಿಧಾನಸಭಾ ಚುನಾವಣೆಯ ಮತದಾನ ಗುರುವಾರ ಸಂಜೆ 6 ಗಂಟೆಗೆ ಮುಕ್ತಾಯವಾಗಿದ್ದು, ಎರಡೂ ರಾಜ್ಯಗಳಲ್ಲಿ ದಾಖಲೆಯ ಮತದಾನ ನಡೆದಿದೆ. ಸಂಜೆ 6 ಗಂಟೆಯವರೆಗೆ ತಮಿಳುನಾಡಿನಲ್ಲಿ ಸುಮಾರು ಶೇ. 84.51 ರಷ್ಟು ಮತದಾನವಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ಶೇ.91.78ರಷ್ಟು ಮತದಾನವಾಗಿದೆ. ಸ್ವಾತಂತ್ರ್ಯದ ನಂತರ ಪಶ್ಚಿಮ ಬಂಗಾಳ ಮತ್ತು […]

ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಮತದಾನ ದಾಖಲೆಗಳೆಲ್ಲ ಧೂಳೀಪಟ Read More »

ತಡರಾತ್ರಿ ದೇವಸ್ಥಾನಕ್ಕೆ ನುಗ್ಗಿ ಮೂರ್ತಿಯನ್ನು ಭಗ್ನಗೊಳಿಸಿದ ಯುವಕ

ಬೆಳ್ತಂಗಡಿ: ಬೆಳ್ತಂಗ ತಾಲೂಕಿನ ಪ್ರಸಿದ್ಧ ಬಳಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ತಡರಾತ್ರಿ ವ್ಯಕ್ತಿಯೋರ್ವ ದೇಗುಲಕ್ಕೆ ನುಗ್ಗಿ ದಾಂಧಲೆ ಎಸಗಿ ದೈವದ ಮೂರ್ತಿ ಭಗ್ನಗೊಳಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಅಜೇಯ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಮಾನಸಿಕ ಅಸ್ವಸ್ಥತೆಯಿಂದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ತಡರಾತ್ರಿ ಸುಬ್ರಹ್ಮಣ್ಯ ಭಟ್‌ ಎಂಬವರ ಮನೆಗೆ ಥಾರ್‌ ಕಾರಿನಲ್ಲಿ ಬಂದ ಅಜೇಯ್‌ ಎನನ್‌ ಬಚಾವು ಮಲ್ಪಿ ಎಂದು ತುಳುವಿನಲ್ಲಿ

ತಡರಾತ್ರಿ ದೇವಸ್ಥಾನಕ್ಕೆ ನುಗ್ಗಿ ಮೂರ್ತಿಯನ್ನು ಭಗ್ನಗೊಳಿಸಿದ ಯುವಕ Read More »

ಹದಗೆಟ್ಟ ಸಚಿವ ಡಿ.ಸುಧಾಕರ್‌ ಆರೋಗ್ಯ : ಐಸಿಯುನಲ್ಲಿ ಚಿಕಿತ್ಸೆ

ಶಸ್ತ್ರಚಿಕಿತ್ಸೆ ಬಳಿಕ ಶ್ವಾಸಕೋಶದ ಸೋಂಕಿಗೊಳಗಾಗಿರುವ ಸಚಿವ ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಅವರ ಆರೋಗ್ಯ ಹದಗೆಟ್ಟಿದ್ದು, ಇಲೆಕ್ಟ್ರಾನಿಕ್ ಸಿಟಿಯ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಸಚಿವ ಸುಧಾಕರ್ ಅವರು ಸಾಮಾನ್ಯ ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಯಶಸ್ವಿಯಾದ ನಂತರದ ದಿನಗಳಲ್ಲಿ ಅವರಿಗೆ ಹಠಾತ್ತನೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತು. ಮಣಿಪಾಲ್ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ನೀಡಲಾಯಿತಾದರೂ, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ.

ಹದಗೆಟ್ಟ ಸಚಿವ ಡಿ.ಸುಧಾಕರ್‌ ಆರೋಗ್ಯ : ಐಸಿಯುನಲ್ಲಿ ಚಿಕಿತ್ಸೆ Read More »

ಬೋಳಾರ ಬೇಸಿಗೆ ಶಿಬಿರದಲ್ಲಿ ಮಹಾಭಾರತ ರಸಪ್ರಶ್ನೆ

ಮಂಗಳೂರು: ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ಬೋಳಾರ, ಮಂಗಳೂರು ಮತ್ತು ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ರಿ. ಆಶ್ರಯದಲ್ಲಿ ದೇವಳದ ಪಠಾರದಲ್ಲಿ ಜರಗುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಶ್ರೀ ಮಹಾಭಾರತ ವಿಷಯಧಾರಿತ ಲಿಖಿತ ರಸಪ್ರಶ್ನೆ ನಡೆಸಲಾಯಿತು. ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ಸುವರ್ಣ ಮಹೋತ್ಸವದ ಅಂಗವಾಗಿ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ ಈ ಕಾರ್ಯಕ್ರಮವನ್ನು ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ನಡೆಸಿಕೊಟ್ಟರು. ಟ್ರಸ್ಟ್ ಸದಸ್ಯ ಶ್ರೀಧರ ಎಸ್. ಪಿ. ಕೃಷ್ಣಾಪುರ, ಶಿಬಿರದ ಸಂಯೋಜಕ

ಬೋಳಾರ ಬೇಸಿಗೆ ಶಿಬಿರದಲ್ಲಿ ಮಹಾಭಾರತ ರಸಪ್ರಶ್ನೆ Read More »

ಬಿಸಿಲು ಹೆಚ್ಚಳ: ಕರಾವಳಿಯ ಜಿಲ್ಲೆಗಳಿಗೆ ಐದು ದಿನ ಎಲ್ಲೋ ಅಲರ್ಟ್

ಮಂಗಳೂರು: ಬಿಸಿಲ ಬೇಗೆಗೆ ರಾಜ್ಯದ ಕರಾವಳಿ ಭಾಗ ಈಗಾಗಲೇ ಕಂಗೆಟ್ಟಿದೆ. ಮುಂದಿನ ಐದು ದಿನಗ‌ಳ ಕಾಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಲಿದ್ದು, ತೇವಾಂಶಭರಿತ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರಾವಳಿಯ ಮೂರೂ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆಯೂ ಸೂಚಿಸಲಾಗಿದೆ.

ಬಿಸಿಲು ಹೆಚ್ಚಳ: ಕರಾವಳಿಯ ಜಿಲ್ಲೆಗಳಿಗೆ ಐದು ದಿನ ಎಲ್ಲೋ ಅಲರ್ಟ್ Read More »

ತಾಯಿಗೆ ಬೈಕ್‌ನಿಂದ ಗುದ್ದಿದ ಪಾಪಿ ಮಗ: ದೂರು ದಾಖಲು

ಕಡಬ: ಮಗನೇ ತಾಯಿಗೆ ಬೈಕ್ ಢಿಕ್ಕಿ ಹೊಡೆಸಿ ಗಾಯಗೊಳಿಸಿದ್ದು, ಆರೋಪಿ ಮಗ ದಯಾನಂದನ ‌ವಿರುದ್ಧ ಕಡಬ ‌ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳು ಮಹಿಳೆಯನ್ನು ಕುಂತೂರು ಗ್ರಾಮದ ಬೀರಂತಡ್ಕ ನಿವಾಸಿ ಪುಷ್ಪಾವತಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಪುಷ್ಪಾವತಿ ಅವರ ಪುತ್ರಿ ಬಂಟ್ವಾಳದ ಇರ್ವತ್ತೂರು ನಿವಾಸಿ ಚೇತನಾ ಬಿ. ಅವರು ಪೊಲೀಸರಿಗೆ ದೂರು ನೀಡಿರುವುದಾಗಿದೆ. ದೂರಿನಲ್ಲಿ ಎ. 4 ರಂದು ದಯಾನಂದ್ ಅವರು ತಮ್ಮ ತಾಯಿ ಪುಷ್ಪಾವತಿ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಅಜ್ಜಿ ಮನೆಗೆ ಹೋಗುವುದಾಗಿ ಕರೆದುಕೊಂಡು

ತಾಯಿಗೆ ಬೈಕ್‌ನಿಂದ ಗುದ್ದಿದ ಪಾಪಿ ಮಗ: ದೂರು ದಾಖಲು Read More »

ಖರ್ಗೆ ‌ಪ್ರಧಾನಿ ಮೋದಿ ಅವರಲ್ಲಿ ಕ್ಷಮೆ ಕೇಳಬೇಕು: ಬಿ.ವೈ. ವಿಜಯೇಂದ್ರ

ಬೆಂಗಳೂರು: ಪ್ರಧಾನಿ ಮೋದಿ ಅವರನ್ನು ಮಲ್ಲಿಕಾರ್ಜುನ ಖರ್ಗೆ ‘ಭಯೋತ್ಪಾದಕ’ ಎಂದು ಟೀಕೆ ಮಾಡಿದ್ದು, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ‌ಅವರು ಕೆಂಡಾಮಂಡಲವಾಗಿದ್ದಾರೆ. ಖರ್ಗೆ ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ನಾವು ಖರ್ಗೆ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇವೆ. ಕಾಂಗ್ರೆಸ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಪರಿಸ್ಥಿತಿಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅವರ ಬಗ್ಗೆ ಕರುಣೆ ತೋರುತ್ತೇನೆ. ಅವರಿಗೆ ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. 25

ಖರ್ಗೆ ‌ಪ್ರಧಾನಿ ಮೋದಿ ಅವರಲ್ಲಿ ಕ್ಷಮೆ ಕೇಳಬೇಕು: ಬಿ.ವೈ. ವಿಜಯೇಂದ್ರ Read More »

ಸಿಲಿಂಡರ್ ಸ್ಪೋಟ: ಹೊತ್ತುರಿದ ‌ಹೊಟೇಲ್, ಓರ್ವನಿಗೆ ‌ಗಾಯ

ಬಳ್ಳಾರಿ: ಎರಡು ಗ್ಯಾಸ್‌‌ ಸಿಲಿಂಡರ್‌ಗಳು ‌ಸ್ಪೋಟಗೊಂಡ ಪರಿಣಾಮ ಹೊಟೇಲ್ ಒಂದು ಬೆಂಕಿಗೆ ಹೊತ್ತಿ ಉರಿದ ಘಟನೆ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ‌ನಡೆದಿದೆ. ಈರಣ್ಣ ಎನ್ನುವವರ ಹೊಟೇಲ್‌ನಲ್ಲಿ ‌ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಈರಣ್ಣ ಅವರ ಕುಟುಂಬದ 9 ಜನರು ಹೊಟೇಲ್‌ನಲ್ಲಿ ‌ಮಲಗಿದ್ದು, ಇದರಲ್ಲಿ 10 ವರ್ಷದ ಶ್ರೀನಿವಾಸ್ ಎಂಬವನಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳು ಬಾಲಕನನ್ನು ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಹೊಟೇಲ್‌ನ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿದೆ. ಅಕ್ಕಪಕ್ಕದಲ್ಲಿದ್ದ

ಸಿಲಿಂಡರ್ ಸ್ಪೋಟ: ಹೊತ್ತುರಿದ ‌ಹೊಟೇಲ್, ಓರ್ವನಿಗೆ ‌ಗಾಯ Read More »

ತುಮಕೂರು ಜಿಲ್ಲೆಯಲ್ಲಿ 32 ನವಿಲುಗಳ‌ ಸಾವು

ತುಮಕೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 32 ನವಿಲುಗಳು ಮೃತಪಟ್ಚಿವೆ.‌ ನವಿಲುಗಳ ಸಾವಿಗೆ ಬಿಸಿಲಿನ ತಾಪವೇ ಕಾರಣ ಎಂದು ಹೇಳಲಾಗುತ್ತಿದೆ. ಎ.16 – 21 ರ ವರೆಗೆ ತಾಲೂಕಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂಧ್ರ, ಹುಲ್ಲೆನಹಳ್ಳಿ ಗ್ರಾಮದಲ್ಲಿ ಮೂವತ್ತೆರಡು ನವಿಲುಗಳು ಸಾವನ್ನಪ್ಪಿರುವುದಾಗಿದೆ. ಜಿಲ್ಲೆಯಲ್ಲಿಯೂ ಬಿಸಿಲಿನ ಧಗೆ ಹೆಚ್ಚುತ್ತಿದ್ದು, ಹೀಟ್‌ಸ್ಟ್ರೋಕ್‌ನಿಂದ ನವಿಲುಗಳ ಸಾವಾಗಿದೆ ಎಂದು ಹೇಳಲಾಗುತ್ತಿದೆ.

ತುಮಕೂರು ಜಿಲ್ಲೆಯಲ್ಲಿ 32 ನವಿಲುಗಳ‌ ಸಾವು Read More »

ಪತಿಯ ಮನೆಯವರ ವರದಕ್ಷಿಣೆ ದಾಹಕ್ಕೆ ‌ಮಹಿಳೆ ಆತ್ಮಹತ್ಯೆ: ಒಂದೂವರೆ ವರ್ಷದ ಕೂಸು ಅನಾಥ

ಬೆಂಗಳೂರು: ಪತಿಯ ಮನೆಯವರ ವರದಕ್ಷಿಣೆ ಕಿರುಕುಳ ಸಹಿಸಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತಲಘಟ್ಟಪುರದಲ್ಲಿ ನಡೆದಿದೆ. ಇವರ ಒಂದೂವರೆ ವರ್ಷದ ಮಗು ತಾಯಿಯ ಸಾವಿನಿಂದ ಅನಾಥವಾಗಿದೆ. ಮೃತರನ್ನು ತಮಿಳುನಾಡಿನ ತಿರುವಾರೂರ್ ಜಿಲ್ಲೆಯ ನೀಡಮಂಗಳಂ ನಿವಾಸಿ, ಸಾಫ್ಟ್‌ವೇರ್ ಉದ್ಯೋಗಿ ಭುವನೇಶ್ವರಿ ಎಂದು ಗುರುತಿಸಲಾಗಿದೆ. ಭುವನೇಶ್ವರಿ ಮತ್ತು ಹರೀಶ್ ಕುಮಾರ್ ಪ್ರೀತಿಸಿ ಮದುವೆಯಾಗಿದ್ದರು. ಅದ್ಧೂರಿಯಾಗಿ ಈ ಮದುವೆಯನ್ನು ಸಹ ಭುವನೇಶ್ವರಿ ಕುಟುಂಬಸ್ಥರು ‌ಮಾಡಿಕೊಟ್ಟಿದ್ದು, ಇದಕ್ಕಾಗಿ 25 ಲಕ್ಷ ರೂ. ವ್ಯಯಿಸಿದ್ದರು. ಹೀಗಿದ್ದರೂ ಪತಿ, ಪತಿಯ ತಾಯಿ ಮತ್ತು ಸಹೋದರ ಭುವನೇಶ್ವರಿ

ಪತಿಯ ಮನೆಯವರ ವರದಕ್ಷಿಣೆ ದಾಹಕ್ಕೆ ‌ಮಹಿಳೆ ಆತ್ಮಹತ್ಯೆ: ಒಂದೂವರೆ ವರ್ಷದ ಕೂಸು ಅನಾಥ Read More »

error: Content is protected !!
Scroll to Top