ಮಾದಕ ವಸ್ತು ಸೇವಿಸಿದ ವ್ಯಕ್ತಿಯ ಬಂಧನ

ಉಪ್ಪಿನಂಗಡಿ: ಮಾದಕ ವಸ್ತು ಮಾರಾಟದ ಜತೆಗೆ ಸೇವನೆ ಮಾಡಿದ ವ್ಯಕ್ತಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ಪೆರ್ನೆಯಲ್ಲಿ ನಡೆದಿದೆ. ಕೌಕ್ರಾಡಿ ಗ್ರಾಮದ ದೋಂತಿಲ್ಲ ಮನೆ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಮಹಮ್ಮದ್ ತೌಫೀಕ್ (22) ಬಂಧಿತ ಆರೋಪಿ. ಪೊಲೀಸರು ಶನಿವಾರ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆಟೋ ರಿಕ್ಷಾವೊಂದು ನಿಲ್ಲಿಸಲು ಸೂಚಿಸಿದ್ದರು. ರಿಕ್ಷಾ ಚಾಲಕ ಸೂಚನೆಯನ್ನು ಪರಿಗಣಿಸದೆ ಮುಂದಕ್ಕೆ ಚಲಿಸಿದಾಗ ಬೆನ್ನಟ್ಟಿದ ಪೊಲೀಸರು ಚಾಲಕ ಮುಹಮ್ಮದ್ ತೌಫೀಕ್ ನನ್ನು ವಿಚಾರಣೆಗೊಳಪಡಿಸಿದಾಗ ತಾನು ಮಾದಕ […]

ಮಾದಕ ವಸ್ತು ಸೇವಿಸಿದ ವ್ಯಕ್ತಿಯ ಬಂಧನ Read More »

ಮುಂಜಾನೆ ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್‌ ಚಂಡಮಾರುತಕ್ಕೆ 4 ಮಂದಿ ಬಲಿ

ಭಾರಿ ಮಳೆಯಿಂದ ಹಲವು ಪ್ರದೇಶ ಜಲಾವೃತ, ಸಂಚಾರ ವ್ಯತ್ಯಯ ಚೆನ್ನೈ : ಫೆಂಗಲ್ ಚಂಡಮಾರುತ ಭಾನುವಾರ ಮುಂಜಾನೆ 2 ಗಂಟೆಗೆ ತಮಿಳುನಾಡು ಕರಾವಳಿಗೆ ಅಪ್ಪಳಿಸಿ ಭಾರಿ ಅನಾಹುತಗಳನ್ನು ಉಂಟುಮಾಡಿದೆ. ವಿದ್ಯುತ್‌ ಆಘಾತ ಹಾಗೂ ಭೂಕುಸಿತದಿಂದಾಗಿ ನಾಲ್ವರು ಸಾವನ್ನಪ್ಪಿದ್ದು, ಹಲವೆಡೆ ಜಲಾವೃತವಾಗಿ ಜನಜೀವನ ಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ನಿನ್ನೆ ಮುಚ್ಚಲಾಗಿದ್ದ ಚೆನ್ನಯ ಏರ್​ಪೋರ್ಟನ್ನು 16 ಗಂಟೆಗಳ ಬಳಿಕ ತೆರೆಯಲಾಗಿದ್ದು, ವಿಮಾನಗಳ ಕಾರ್ಯಾಚರಣೆ ಆರಂಭವಾಗಿದೆ. ಭಾರತೀಯ

ಮುಂಜಾನೆ ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್‌ ಚಂಡಮಾರುತಕ್ಕೆ 4 ಮಂದಿ ಬಲಿ Read More »

ಸವಣೂರು ಶಕ್ತಿ ಕೇಂದ್ರದ ಬೂತ್ 65 ರ ಸಂಘಟನಾ ಪರ್ವ ಕಾರ್ಯಚಟುವಟಿಕೆಗಳ ಅಂಗವಾಗಿ ಬೂತ್ ಸಮಿತಿ ಸಭೆ

ಸವಣೂರು: ಸುಳ್ಯ ಮಂಡಲದ ಕುಟ್ರುಪ್ಪಾಡಿ ಮಹಾ ಶಕ್ತಿ ಕೇಂದ್ರ, ಸವಣೂರು ಶಕ್ತಿ ಕೇಂದ್ರದ ಬೂತ್ ಸಂಖ್ಯೆ 65 ರ ಸವಣೂರು ಯುವ ಸಭಾ ಭವನದಲ್ಲಿ ಸಂಘಟನಾ ಪರ್ವ ಕಾರ್ಯ ಚಟುವಟಿಕೆಯ ಅಂಗವಾಗಿ  ಬೂತ್ ಸಮಿತಿ ಸಭೆ ನಡೆಯಿತು. ಪಕ್ಷದ ಸೂಚನೆಯ0ತೆ 12 ಜನರ ಬೂತ್ ಸಮಿತಿಯಲ್ಲಿ ಮೂವರು ಮಹಿಳೆಯರು ಮನ್ ಕೀ ಬಾತ್ ಪ್ರಮುಕ್, ಸೋಶಿಯಲ್ ಮಿಡಿಯಾ ಪ್ರಮುಖ್, ಲಾಭಾರ್ಥಿ ಪ್ರಮುಖ್ ರನ್ನು ಆಯ್ಕೆ ಮಾಡಲಾಯಿತು. ಬಿಜೆಪಿ ಸದಸ್ಯತನ, ಮತದಾರರ ಪಟ್ಟಿಗೆ ಸೇರ್ಪಡೆ ಕುರಿತಾದ ವಿಚಾರಗಳ ಕುರಿತಾಗಿ

ಸವಣೂರು ಶಕ್ತಿ ಕೇಂದ್ರದ ಬೂತ್ 65 ರ ಸಂಘಟನಾ ಪರ್ವ ಕಾರ್ಯಚಟುವಟಿಕೆಗಳ ಅಂಗವಾಗಿ ಬೂತ್ ಸಮಿತಿ ಸಭೆ Read More »

ಶಬರಿಮಲೆ : 12 ದಿನದಲ್ಲಿ 63 ಕೋ.ರೂ. ಸಂಗ್ರಹ; 16 ಕೋ. ರೂ ಹೆಚ್ಚಳ

ಭಾರಿ ಸಂಖ್ಯೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರು ಶಬರಿಮಲೆ : ಶಬರಿಮಲೆ ಯಾತ್ರಾ ಋತು ಶುರುವಾದ ಬರೀ 12 ದಿನದಲ್ಲೇ ಕ್ಷೇತ್ರದ ಆದಾಯದಲ್ಲಿ 15.89 ಕೋ.ರೂ. ಏರಿಕೆ ಕಂಡುಬಂದಿದೆ. ಪ್ರತಿವರ್ಷದಂತೆ ಈ ವರ್ಷವೂ ಭಾರಿ ಸಂಖ್ಯೆಯಲ್ಲಿ ಅಯ್ಯಪ್ಪ ವ್ರತಧಾರಿಗಳು ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ಆಗಮಿಸುತ್ತಿದ್ದಾರೆ. ಭಕ್ತರಿಗೆ ಅನುಕೂಲವಾಗುವ ಅನೇಕ ಉಪಕ್ರಮಗಳನ್ನು ಕೇರಳದ ದೇವಸ್ವಂ ಬೋರ್ಡ್‌ ಈ ಸಲ ಕೈಗೊಂಡಿರುವುದರಿಂದ ಇಷ್ಟರ ತನಕದ ಯಾತ್ರೆ ಸರಾಗವಾಗಿ ನಡೆದಿದೆ. ಅಂತೆಯೇ ಕ್ಷೇತ್ರದ ಆದಾಯವೂ ಗಣನೀಯವಾಗಿ ಏರಿಕೆಯಾಗಿದೆ.ಕಳೆದ ವರ್ಷ ಆರಂಭದ 12

ಶಬರಿಮಲೆ : 12 ದಿನದಲ್ಲಿ 63 ಕೋ.ರೂ. ಸಂಗ್ರಹ; 16 ಕೋ. ರೂ ಹೆಚ್ಚಳ Read More »

ಬೆಳಗಾವಿಯಲ್ಲಿ ಹಾಡುಹಗಲೇ ಯುವಕನಿಗೆ ಚಾಕು ಇರಿದು ಹತ್ಯೆ !

ಬೆಳಗಾವಿ: ಯುವಕನೊಬ್ಬನಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಹಾಡುಹಗಲೇ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಸೋಹಿಲ್ ಅಹ್ಮದ್ ಕಿತ್ತೂರು (17) ಚಾಕು ಇರಿತದಿಂದ ಹತ್ಯೆಯಾದವ. ಸೋಹಿಲ್ ಗ್ರಾಮದಲ್ಲಿ ಎಗ್‌ ರೈಸ್ ಅಂಗಡಿ ಇಟ್ಟುಕೊಂಡಿದ್ದು, ಆತನನ್ನು ಐದು ಮಂದಿಯ ತಂಡ ಹತ್ಯೆಗೈದಿದ್ದಾರೆ ಎಂದು ಶಂಕಿಸಲಾಗಿದೆ. ಈ ಹಿಂದೆ ಕೆಲವು ಯುವಕರಿಂದ ಮೃತನಿಗೆ ಕೊಲೆ ಬೆದರಿಕೆ ಬಂದಿತ್ತು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮುರಗೋಡು ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ

ಬೆಳಗಾವಿಯಲ್ಲಿ ಹಾಡುಹಗಲೇ ಯುವಕನಿಗೆ ಚಾಕು ಇರಿದು ಹತ್ಯೆ ! Read More »

ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಆರ್‌ಎಸ್‌ಎಸ್‌ ಮನವಿ

ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ಜಗತ್ತು ಮೌನವಾಗಿರುವುದಕ್ಕೆ ಖಂಡನೆ ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರಕ್ಕೆ ಆರ್‌ಎಸ್‌ಎಸ್‌ ಕಳವಳ ವ್ಯಕ್ತಪಡಿಸಿದೆ. ಅಲ್ಲಿನ ಸರ್ಕಾರ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಮೌನವಾಗಿದೆ. ಈ ದಾಳಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿವೆ ಎಂದು ಆರ್‌ಎಸ್‌ಎಸ್‌ ಆಕ್ರೋಶ ವ್ಯಕ್ತಪಡಿಸಿದೆ.ಇಸ್ಲಾಮಿಕ್ ಉಗ್ರಗಾಮಿಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ದಾಳಿ, ಹತ್ಯೆ, ಲೂಟಿಗಳು ಸೇರಿದಂತೆ ಅಮಾನವೀಯ ಕೃತ್ಯಗಳು ನಡೆಯುತ್ತಿವೆ. ಈ ಪರಿಸ್ಥಿತಿ ತೀವ್ರ ಆತಂಕಕಾರಿಯಾಗಿದೆ. ಇದನ್ನು ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ

ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಆರ್‌ಎಸ್‌ಎಸ್‌ ಮನವಿ Read More »

ಕೆರೆಕಟ್ಟೆ, ಶೃಂಗೇರಿ ಪರಿಸರದಲ್ಲಿ ನಕ್ಸಲರು?

ನಡುರಾತ್ರಿ ದಟ್ಟ ಕಾಡಿನ ನಡುವೆ ಕಾಣಿಸಿದ ಟಾರ್ಚ್‌ ಬೆಳಕಿನ ಹಿನ್ನೆಲೆಯಲ್ಲಿ ಅನುಮಾನ ಕಾರ್ಕಳ : ನಕ್ಸಲರು ಇನ್ನೂ ಕೊಪ್ಪ, ಶೃಂಗೇರಿ ಭಾಗದಲ್ಲೇ ಇರುವ ಅನುಮಾನವಿದ್ದು, ಈ ಹಿನ್ನೆಲೆಯಲ್ಲಿ ಕೂಂಬಿಂಗ್‌ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಶುಕ್ರವಾರ ನಡುರಾತ್ರಿ ವೇಳೆ ಕುದುರೆಮುಖ ರಾಷ್ಟ್ರೀಯ ಅರಣ್ಯ ವ್ಯಾಪ್ತಿಯ ಕೆರೆಕಟ್ಟೆ ಪರಿಸರದಲ್ಲಿ ದಟ್ಟ ಕಾಡಿನ ನಡುವೆ ಟಾರ್ಚ್‌ ಬೆಳಕು ಕಂಡುಬಂದಿದೆ. ಇದು ನಕ್ಸಲರ ಓಡಾಟ ಇರಬಹುದು ಎಂಬ ಅನುಮಾನದಲ್ಲಿ ನಕ್ಸಲ್‌ ನಿಗ್ರಹ ಪಡೆ ಕೂಂಬಿಂಗ್‌ ತೀವ್ರಗೊಳಿಸಿದೆ.ಹೆಬ್ರಿಯ ನಾಡ್ಪಾಲು ಸಮೀಪ ಪೀತಬೈಲಿನಲ್ಲಿ ನಕ್ಸಲ್‌ ಮುಖಂಡ ವಿಕ್ರಂ

ಕೆರೆಕಟ್ಟೆ, ಶೃಂಗೇರಿ ಪರಿಸರದಲ್ಲಿ ನಕ್ಸಲರು? Read More »

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಲಕ್ಷದೀಪೋತ್ಸವ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಲಕ್ಷದೀಪೋತ್ಸವ ಶನಿವಾರ ರಾತ್ರಿ ನಡೆಯಿತು. ದೀಪೋತ್ಸವದ ಅಂಗವಾಗಿ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸಂಜೆ ಬಲಿ ಉತ್ಸವ ನಡೆದು ಬಳಿಕ ಮಹಾಮಂಗಳಾರತಿ ನಡೆಯಿತು. ಮಹಾಮಂಗಳಾರತಿಯ ದೀಪದಿಂದ ದೇವಸ್ಥಾನ ರಥಬೀದಿ ಸಹಿತ ಒಳಾಂಗಣದಲ್ಲಿ ಹಲವಾರು ಸಂಘ ಸಂಸ್ಥೆಗಳ ಕಾರ್ಯಕರ್ತರಿಂದ ಅಚ್ಚುಕಟ್ಟಾಗಿ ಜೋಡಿಸಿಡಲಾದ ಹಣತೆಗೆ ಉರಿಸಲಾಯಿತು. ದೇವಸ್ಥಾನದ ಇಡಿ ವಠಾರ ಹಣತೆಯ ಬೆಳಕಿನಿಂದ  ಸೇರಿದ್ದ ಸಾವಿರಾರು ಭಕ್ತಾದಿಗಳಲ್ಲಿ ಭಕ್ತಿಯನ್ನುಂಟು ಮಾಡಿತು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹೊರಾಂಗಣದಲ್ಲಿ ಕುಣಿತ ಭಜನೆ

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಲಕ್ಷದೀಪೋತ್ಸವ Read More »

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಅಧ್ಯಾಪನಾ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು.

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಕೆ. ಎಂ. ದೀಪ ಬೆಳಗುವ ಮೂಲಕ ಚಾಲನೆ ನೀಡಿ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರು, ಶಿಕ್ಷಕ ಅಥವಾ ಉಪನ್ಯಾಸಕ ವೃತ್ತಿಯನ್ನು ಶ್ರೇಷ್ಟ ಹಾಗೂ ಪವಿತ್ರವಾದ ಹುದ್ದಯೆಂದು ಪರಿಗಣಿಸಲಾಗಿದೆ. ಉಪನ್ಯಾಸಕರಾದವರು ಪ್ರತಿಕ್ಷಣ ಕಲಿಯುತ್ತಿರಬೇಕು. ಈ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಇಂದಿನ ಆಧುನಿಕ ಯುಗದಲ್ಲಿ ಉತ್ತಮ ಉಪನ್ಯಾಸಕ ಎಂದು ಕರೆಸಿಕೊಳ್ಳಲು ವಿಷಯ ಜ್ಞಾನ ಮತ್ತು ಬುದ್ಧಿವಂತಿಕೆಯ ಜೊತೆಗೆ ನಿರ್ದಿಷ್ಟ ಕೌಶಲ್ಯಗಳನ್ನು ಹೊಂದಿರಬೇಕು. ಅದನ್ನು ಇಂತಹ ಅಧ್ಯಾಪನಾ ಅಭಿವೃದ್ಧಿ ಕಾರ್ಯಕ್ರಮಗಳು ತಿಳಿಸಿಕೊಡುತ್ತದೆ

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಅಧ್ಯಾಪನಾ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು. Read More »

ಒಡಿಯೂರು  ಶ್ರೀಗಳಿಂದ ವಾರ್ಷಿಕೋತ್ಸವದ ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು :  ಡಿ. 25 ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ ನಡೆಯಲಿರುವ ಶ್ರೀ ಆಂಜನೇಯ ಯಕ್ಷಗಾನ ಸಂಘ ಬೊಳುವಾರು  ಇದರ  56 ನೇ ವಾರ್ಷಿಕೋತ್ಸವ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ” ವಿಂಶತಿ”ವರ್ಷದ  ಆಮಂತ್ರಣ ಪತ್ರಿಕೆಯನ್ನು  ಒಡಿಯೂರಿನಲ್ಲಿ ಪರಮಪೂಜ್ಯ ಶ್ರೀ  ಶ್ರೀ ಗುರುದೇವಾನಂದ ಸ್ವಾಮೀಜಿ ಬಿಡುಗಡೆಗೊಳಿಸಿ ಶುಭಹಾರೈಸಿದರು . ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ ಪ್ರಾಸ್ತವಿಕವಾಗಿ ಮಾತನಾಡಿ ಮಹಿಳಾ ಕಲಾವಿದರಿಂದ ಯಕ್ಷ ತಾಪಸಿಯರು  ಸರಣಿ ಸಂವಾದ ಕಾರ್ಯಕ್ರಮ, ಹಿರಿಯ ಕಲಾವಿದರಿಂದ ತಾಳಮದ್ದಳೆ, ಯಕ್ಷಗಾನ ಸಂಘಟಕ

ಒಡಿಯೂರು  ಶ್ರೀಗಳಿಂದ ವಾರ್ಷಿಕೋತ್ಸವದ ಆಮಂತ್ರಣ ಪತ್ರ ಬಿಡುಗಡೆ Read More »

error: Content is protected !!
Scroll to Top