ಕೃಷ್ಣ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಕೃಷ್ಣ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ ಮುಖ್ಯಮಂತ್ರಿಯಾಗಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸದಾ ಋಣಿಯಾಗಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಎಕ್ಸ್‌ನಲ್ಲಿ ಶೋಕ ಸಂದೇಶ ಫೋಸ್ಟ್‌ ಮಾಡಿದ ಸಿದ್ದರಾಮಯ್ಯ, ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅಜಾತಶತ್ರುವಾದ್ದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ‌ […]

ಕೃಷ್ಣ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ Read More »

ಮುಂಬಯಿ : ಬ್ರೇಕ್‌ಫೇಲ್‌ ಆಗಿ ಕಟ್ಟಡಕ್ಕೆ ಗುದ್ದಿದ ಬಸ್‌, 6 ಮಂದಿ ಸಾವು, 49 ಜನರಿಗೆ ಗಾಯ

100 ಮೀಟರ್‌ ಉದ್ದಕ್ಕೂ ನಿಲ್ಲಿಸಿದ್ದ 40 ವಾಹನಗಳು ಜಖಂ ಮುಂಬಯಿ: ಬ್ರೇಕ್‌ಫೇಲ್ ಆದ ಬೆಸ್ಟ್‌ ಬಸ್ ಪಾದಚಾರಿಗಳಿಗೆ ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದು ಆರು ಮಂದಿ ಸ್ಥಳದಲ್ಲೇ ದುರ್ಮರಣವನ್ನಪ್ಪಿ 49 ಮಂದಿ ಗಂಭೀರವಾಗಿ ಗಾಯಗೊಂಡ ಭೀಕರ ಅಪಘಾತ ಸೋಮವಾರ ತಡರಾತ್ರಿ ಮುಂಬಯಿಯ ಉಪನಗರ ಕುರ್ಲಾದಲ್ಲಿ ಸಂಭವಿಸಿದೆ. ಕುರ್ಲಾ ಪಶ್ಚಿಮದ ಎಲ್ ವಾರ್ಡ್‌ನ ಎಸ್‌ ಜಿ ಬರ್ವೆ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ಬ್ರೇಕ್‌ಫೇಲ್‌ ಆದ ಬಸ್‌ 100 ಮೀಟರ್‌ ಉದ್ದಕ್ಕೆ ನಿಲ್ಲಿಸಿದ್ದ ಸುಮಾರು 40 ವಾಹನಗಳಿಗೆ ಡಿಕ್ಕಿ

ಮುಂಬಯಿ : ಬ್ರೇಕ್‌ಫೇಲ್‌ ಆಗಿ ಕಟ್ಟಡಕ್ಕೆ ಗುದ್ದಿದ ಬಸ್‌, 6 ಮಂದಿ ಸಾವು, 49 ಜನರಿಗೆ ಗಾಯ Read More »

ಪಾದಚಾರಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಳೆದು ಪರಾರಿ

ಬೆಳ್ತಂಗಡಿ : ಮಹಿಳೆಯೊಬ್ಬರನ್ನು ಹಿಂಬಾಲಿಸಿಕೊಂಡು ಬಂದು ಬೆದರಿಸಿ ಚಿನ್ನದ ಕರಿಮಣಿ ಸರವನ್ನು ಎಳೆದು ಪರಾರಿಯಾದ ಘಟನೆ ಬೆಳ್ತಂಗಡಿಯ ಕೊಯ್ಯೂರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಕೋರಿಯಾರ್ ನಿವಾಸಿ ದಾಮೋಧರ್ ಭಟ್ ಅವರ ಪತ್ನಿ ರಾಜೀವಿ(50) ಎಂಬವರ ಕುತ್ತಿಗೆಯಿಂದ ಆರೋಪಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಗಿರಿಗುಡ್ಡೆ ಡೆಂಬುಗ ನಿವಾಸಿ ಕೊರಗಪ್ಪ ಗೌಡರ ಮಗ ಉಮೇಶ್‍ ಗೌಡ ಕರಿಮಣಿ ಸರ ಎಳೆದು ಪರಾರಿಯಾಗಿದ್ದನೆ ಎನ್ನಲಾಗಿದೆ. ಮಹಿಳೆ ಬೆಳ್ತಂಗಡಿಗೆ ಹೋಗಿ ವಾಪಸ್ ಮನೆಗೆ ಕೊಯ್ಯೂರು ಗ್ರಾಮದ ಪಾಂಬೇಲ್ ಕ್ರಾಸ್

ಪಾದಚಾರಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಳೆದು ಪರಾರಿ Read More »

ಮರವೂರು ಸೇತುವೆಯಲ್ಲಿ ಕಾರು ಡಿಕ್ಕಿ ಹೊಡೆದು ದನ ಸಾವು

ಬಜಪೆ: ಮಂಗಳೂರು – ಬಜಪೆ ರಾಜ್ಯ ಹೆದ್ದಾರಿ 67ರ ಮರವೂರು ಸೇತುವೆಯಲ್ಲಿ ಮಂಗಳೂರು ಕಡೆಯಿಂದ ಬಂದ ಕಾರೊಂದು ಸೇತುವೆಯ ಅವೈಜ್ಞಾನಿಕ ಮಾರ್ಗಸೂಚಿ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಯ ತಪ್ಪಿ ದನವೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಸೋಮವಾರ ರಾತ್ರಿ ಸಂಭವಿಸಿದ್ದು ಅಪಘಾತಕ್ಕೊಳಗಾದ ದನ ಮೃತಪಟ್ಟಿದೆ. ಮರವೂರಿನಲ್ಲಿರುವ ಎರಡು ಸೇತುವೆಗಳ ಪೈಕಿ ಒಂದರಲ್ಲಿ ಸಂಚಾರ ನಿಷೇಧಿಸಲಾಗಿದ್ದು ಸಂಚಾರದ ಮಾರ್ಗಸೂಚಿ ತೀರಾ ಗೊಂದಲಕಾರಿಯಾಗಿದ್ದು ಕಾಮಗಾರಿ ಕೂಡಾ ಅವೈಜ್ಞಾನಿಕವಾಗಿರುವುದರಿಂದ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿದೆ ಎಂದು ಸ್ಥಳೀಯರ ಆರೋಪ. ಅಪಘಾತಕ್ಕೊಳಗಾದ ಕಾರಿನಲ್ಲಿದ್ದ ವ್ಯಕ್ತಿಗಳಿಗೆ ಸಣ್ಣಪುಟ್ಟ

ಮರವೂರು ಸೇತುವೆಯಲ್ಲಿ ಕಾರು ಡಿಕ್ಕಿ ಹೊಡೆದು ದನ ಸಾವು Read More »

ಮೂಡುಬಿದಿರೆ : ಇಂದಿನಿಂದ ಆಳ್ವಾಸ್‌ ವಿರಾಸತ್‌ ವೈಭವ

30ನೇ ವರ್ಷದವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು, ಮೇಳಗಳ ಬೆರಗು ಮೂಡುಬಿದಿರೆ: ಮೋಹನ್‌ ಆಳ್ವ ನೇತೃತ್ವದ ವಿರಾಸತ್‌ ಸಾಂಸ್ಕೃತಿಕ ವೈಭವಕ್ಕೆ 30ನೇ ವರ್ಷದ ಸಂಭ್ರಮ. ಈ ವರ್ಷದ ವಿರಾಸತ್‌ ಇಂದಿನಿಂದ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಅನಾವರಣಗೊಳ್ಳಲಿದೆ. ಈ ರಾಷ್ಟ್ರೀಯ ಸಾಂಸ್ಕೃತಿಕ ಹಬ್ಬಕ್ಕಾಗಿ ವಿದ್ಯಾಗಿರಿ ಸರ್ವಾಲಂಕಾರಗೊಂಡು ಸಜ್ಜಾಗಿದೆ. ಇಂದಿನಿಂದ ಭಾನುವಾರದವರೆಗೆ ಆರು ದಿನಗಳ ಮಹಾಮೇಳಗಳ ಜೊತೆ ಸಾಂಸ್ಕೃತಿಕ ರಸದೌತಣ ವಿದ್ಯಾಗಿರಿಯಲ್ಲಿ ಸಿಗಲಿದೆ.ಈ ಬಾರಿ ಡಿ.10ರಿಂದ 14ರವರೆಗೆ ಮೇಳಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದ್ದರೆ, ಡಿ.15ರ ಭಾನುವಾರದ ಪೂರ್ಣ ದಿನವನ್ನು ಜನ ಮೇಳಗಳಲ್ಲಿ

ಮೂಡುಬಿದಿರೆ : ಇಂದಿನಿಂದ ಆಳ್ವಾಸ್‌ ವಿರಾಸತ್‌ ವೈಭವ Read More »

ಆ ಒಂದು ಪತ್ರವನ್ನು ಹಾರ್ಡಿ ಸರ್ ತೆರೆಯದೇ ಇದ್ದಿದ್ದರೆ…!

ರಾಮಾನುಜನ್ ಬದುಕಿನಲ್ಲಿ ತಿರುವು ಕೊಟ್ಟ ಆ ಘಟನೆ ಯಾವುದು? 1913ನೇ ಇಸವಿಯ ಡಿಸೆಂಬರ್ ತಿಂಗಳ ಮೈ ಕೊರೆಯುವ ಚಳಿಯ ಒಂದು ದಿನ. ಆಕ್ಸಫರ್ಡ್ ವಿವಿಯ ತನ್ನ ಕೊಠಡಿಯಲ್ಲಿ ಕುಳಿತು ಗಣಿತದ ಪ್ರಸಿದ್ಧ ಪ್ರೊಫೆಸರ್ ಹಾರ್ಡಿ ಸರ್ ಅವರು ಸಿಗಾರ್ ಎಳೆಯುತ್ತಿದ್ದರು. ಅವರ ಟೇಬಲ್ ಮೇಲೆ ಅಂಚೆಚೀಟಿ ಹೊತ್ತ ಕಂದು ಬಣ್ಣದ ಒಂದು ಕವರ್ ಬಂದು ಕೂತಿತ್ತು. ಅದು ಭಾರತದಿಂದ ಹಡಗಿನಲ್ಲಿ ಕೂತು ಇಂಗ್ಲೆಂಡಿಗೆ ಬಂದಿತ್ತು. ಹಾರ್ಡಿ ಸರ್ ಅದನ್ನು ಮೇಲೆ ಮೇಲೆ ಒಮ್ಮೆ ನೋಡಿ ಬದಿಗೆ ಸರಿಸಿದರು.

ಆ ಒಂದು ಪತ್ರವನ್ನು ಹಾರ್ಡಿ ಸರ್ ತೆರೆಯದೇ ಇದ್ದಿದ್ದರೆ…! Read More »

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಇನ್ನಿಲ್ಲ

ರಾಜ್ಯಪಾಲರಾಗಿ, ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದ ಮುತ್ಸದ್ದಿ ರಾಜಕಾರಣಿ ಬೆಂಗಳೂರು : ಕರ್ನಾಟಕ ರಾಜಕಾರಣ ಕಂಡ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು (ಡಿಸೆಂಬರ್​ 10) ನಸುಕಿನ ಜಾವ 2.30ರ ಸುಮಾರಿಗೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್​​.ಎಂ ಕೃಷ್ಣರನ್ನು ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಗಿತ್ತು. ಶ್ವಾಸಕೋಶದ ಸೋಂಕಿನ ಕಾರಣಕ್ಕೆ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಇನ್ನಿಲ್ಲ Read More »

ಅಕ್ರಮ ಮರಳುಗಾರಿಕೆ ಕುರಿತು ಇಲಾಖಾಧಿಕಾರಿಗಳಿಗೆ ಸ್ಥಳೀಯರಿಂದ ದೂರು | ಮರಳುಗಾರಿಕೆ ಸಕ್ರಮ ಎಂದು ಪರಿಶೀಲಿಸಿದ ಅಧಿಕಾರಿಗಳಿಂದ ಸ್ಪಷ್ಟನೆ | ಇನ್ನುಮುಂದೆ ಅಡ್ಡಿಪಡಿಸಿದರೆ ಕಾನೂನು ಕ್ರಮದ ಎಚ್ಚರಿಕೆ

ಕಡಬ: ತಾಲೂಕಿನ ಪೇರಾಬೆ ಗ್ರಾಮದ ಕುಮಾರಧಾರ ನದಿಯಲ್ಲಿ ಪರವಾನಿಗೆ ಪಡೆದು ಮರುಳುಗಾರಿಕೆ ನಡೆಸುತ್ತಿದ್ದರೂ, ಸ್ಥಳೀಯರಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಇಲಾಖೆಗಳಿಗೂ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಗಣಿ ಇಲಾಖೆ ಅಧಿಕಾರಿಗಳಾದ ವಸುದ ಜಿಪಿಎಸ್ ಅಧಿಕಾರಿ ಯಶವಂತ್, ಕಡಬ ಪೊಲೀಸ್ ಇಲಾಖೆ ಸಬ್ ಇನ್ಸ್ಪೆಕ್ಟರ್, ಸಿಬ್ಬಂದಿ ವರ್ಗ ಕಂದಾಯ ಇಲಾಖೆ ಅಧಿಕಾರಿ ಸಂತೋಷ್, ಪೇರಾಬೆ ಗ್ರಾಮ ಪಂಚಾಯಿತಿ ಪಿಡಿಯೋ ಉಪಸ್ಥಿತಿಯಲ್ಲಿ ತನಿಖೆ ನಡೆಸಿ ಗಡಿ ಗುರುತು ಮಾಡಿದ್ದು, ಇಲ್ಲಿ ನಡೆಯುತ್ತಿರುವ ಮರಳುಗಾರಿಕೆ

ಅಕ್ರಮ ಮರಳುಗಾರಿಕೆ ಕುರಿತು ಇಲಾಖಾಧಿಕಾರಿಗಳಿಗೆ ಸ್ಥಳೀಯರಿಂದ ದೂರು | ಮರಳುಗಾರಿಕೆ ಸಕ್ರಮ ಎಂದು ಪರಿಶೀಲಿಸಿದ ಅಧಿಕಾರಿಗಳಿಂದ ಸ್ಪಷ್ಟನೆ | ಇನ್ನುಮುಂದೆ ಅಡ್ಡಿಪಡಿಸಿದರೆ ಕಾನೂನು ಕ್ರಮದ ಎಚ್ಚರಿಕೆ Read More »

ವಿಟ್ಲದ ತೀರ್ಥಶ್ರೀ ಸಾವಿನ ಪ್ರಕರಣದಲ್ಲಿ ಬಿಗ್‍ ಟ್ವಿಸ್ಟ್ | ಮಾಹಿತಿ ಕಲೆಹಾಕುವಲ್ಲಿ ವಿಟ್ಲ ಪೋಲಿಸರ ಹರಸಾಹಸ

ವಿಟ್ಲ : ಬಂಟ್ವಾಳ ತಾಲೂಕಿನ ಪೆರಾಜೆಯ  ಬಾಲಕಿ ತೀರ್ಥಶ್ರೀ (8) ಜೋಕಾಲಿಯಲ್ಲಿ ಸಿಲುಕಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಭಂದಿಸಿದಂತೆ ವಿಟ್ಲ ಪೊಲೀಸರು ತನಿಖೆಯನ್ನು ನಡೆಸಿದ್ದಾರೆ. ತನಿಖೆಯ ವರದಿ ಪ್ರಕಾರ ಅದೊಂದು ಆತ್ಮಹತ್ಯೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆರಂಭದಲ್ಲಿ ಆಶೆ ಜೋಕಾಲಿಯ ಹಗ್ಗ ಸಿಲುಕಿ ಮೃತಪಟ್ಟಿರಬಹುದು ಎಂದು ವರದಿಯಾಗಿತ್ತು. ಶೇರಾ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ ಮಡಲ ನಿವಾಸಿ ಕಿಶೋರ್ ರವರ ಪುತ್ರಿ ತೀರ್ಥಶ್ರೀ ಡಿ 8ರ ಸಂಜೆ 5 ಗಂಟೆಯಿಂದ 7.30ರ ಅವಧಿಯಲ್ಲಿ ಮೃತಪಟ್ಟಿದ್ದಾಳೆ. ಬಟ್ಟೆ ಹಾಕಲು ಹಾಕಿದ ಸ್ಟೀಲ್

ವಿಟ್ಲದ ತೀರ್ಥಶ್ರೀ ಸಾವಿನ ಪ್ರಕರಣದಲ್ಲಿ ಬಿಗ್‍ ಟ್ವಿಸ್ಟ್ | ಮಾಹಿತಿ ಕಲೆಹಾಕುವಲ್ಲಿ ವಿಟ್ಲ ಪೋಲಿಸರ ಹರಸಾಹಸ Read More »

ಡಿವೈಡರ್‌ಗೆ  ಕಾರು ಡಿಕ್ಕಿ | ಐವರು ಸೇರಿ 7 ಮಂದಿ ವಿದ್ಯಾರ್ಥಿಗಳ ದಾರುಣ ಸಾವು

ಗುಜರಾತ್‍ : ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಐವರು ವಿದ್ಯಾರ್ಥಿಗಳು ಸೇರಿ 7 ಮಂದಿ ಸಾವನ್ನಪ್ಪಿದ  ಘಟನೆ ಗುಜರಾತ್‌ನ ಜುನಾಗಢದಲ್ಲಿ ನಡೆದಿದೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಹಿನ್ನಲೆ ಐವರು ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ವೇಗವಾಗಿ ಬಂದ ವಿದ್ಯಾರ್ಥಿಗಳ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಪಲ್ಟಿಯಾಗಿದೆ. ಅದೇ ಸಮಯದಲ್ಲಿ ಅಭಿಮುಖವಾಗಿ ವೇಗವಾಗಿ ಬಂದ ಎರಡನೇ ಕಾರಿಗೆ ಡಿಕ್ಕಿ ಹೊಡೆದಿದೆ . ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ

ಡಿವೈಡರ್‌ಗೆ  ಕಾರು ಡಿಕ್ಕಿ | ಐವರು ಸೇರಿ 7 ಮಂದಿ ವಿದ್ಯಾರ್ಥಿಗಳ ದಾರುಣ ಸಾವು Read More »

error: Content is protected !!
Scroll to Top