ಪುತ್ತೂರಿನ  ಭಾರತ್‍ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಸಂಭ್ರಮಾಚರಣೆ  | ನಟ – ನಟಿಯರು, ಹಲವು ಗಣ್ಯರು ಭಾಗಿ

ಪುತ್ತೂರು : ಯುವ ಕಲಾವಿದ ಮಯೂರ್ ಅಂಬೆಕಲ್ಲು ನಿರ್ದೇಶನದ “ಭಾವತೀರ ಯಾನ” ಕನ್ನಡ ಸಿನೆಮಾ ಫೆ.21 ರಂದು ರಾಜ್ಯಾದ್ಯಂತ ತೆರೆ ಕಂಡಿದ್ದು, ಹಾಗೆಯೇ ಪುತ್ತೂರಿನ ಜಿಎಲ್ ಒನ್ ಮಾಲ್ ನಲ್ಲಿರುವ ಭಾರತ್ ಸಿನೆಮಾಸ್ ನಲ್ಲಿ ಪ್ರದರ್ಶನಗೊಂಡು ಒಂದು ತಿಂಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಸಂಭ್ರಮಾಚರಣೆ ಮಾಡಲಾಯಿತು. ಪುತ್ತೂರಿನಲ್ಲಿ ಫೆ.21 ರಂದು ಸಿನೆಮಾ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ರಂಗನಟಿ ವಸಂತಲಕ್ಷ್ಮೀ ಶಶಿಧರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ನಟ ತೇಜಸ್ ಕಿರಣ್ ಹಾಗೂ ನಟಿ ಆರೋಹಿ ನೈನಾ, ಸಹನಟ ಸಂದೀಪ […]

ಪುತ್ತೂರಿನ  ಭಾರತ್‍ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಸಂಭ್ರಮಾಚರಣೆ  | ನಟ – ನಟಿಯರು, ಹಲವು ಗಣ್ಯರು ಭಾಗಿ Read More »

ಸಂಪಾದಕೀಯ – ಹನಿಟ್ರ್ಯಾಪ್‌ ಹೀನ ಸುಳಿಯೂ ಅವಕಾಶವಾದಿ ರಾಜಕಾರಣವೂ

ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಕಾನೂನಿನ ಮುಂದೆ ತಂದು ನಿಲ್ಲಿಸುವ ಕೆಚ್ಚೆದೆ ಇದೆಯೇ? ದೇಶಾದ್ಯಂತ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್‌ ಪ್ರಕರಣ ಅಂತಿಮವಾಗಿ ಸುತ್ತಿಕೊಳ್ಳುವುದು ಯಾರ ಕೊರಳಿಗೆ? ಹೀಗೊಂದು ಅನುಮಾನ ಈಗ ರಾಜ್ಯದ ಜನರನ್ನು ಕಾಡುತ್ತಿದೆ. ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದ್ದ ಹನಿಟ್ರ್ಯಾಪ್‌ ಗುಸುಗುಸು ನಿಜ ಎನ್ನುವುದನ್ನು ವಿಧಾನಮಂಡಲ ಕಲಾಪದಲ್ಲೇ ಒಪ್ಪಿಕೊಳ್ಳಲಾಗಿದೆ. ಹಿರಿಯ ಸಚಿವ ಕೆ.ಎನ್‌.ರಾಜಣ್ಣ ತನ್ನನ್ನೂ ಸೇರಿಸಿ ಸುಮಾರು 48 ಮಂದಿಯ ಹನಿಟ್ರ್ಯಾಪ್‌ ಪ್ರಯತ್ನ ನಡೆದಿದೆ ಹಾಗೂ ಅನೇಕರ ವೀಡಿಯೊಗಳು ದಾಖಲಾಗಿದೆ ಎಂದು ಸದನದಲ್ಲಿ ಹೇಳಿದ್ದಾರೆ.

ಸಂಪಾದಕೀಯ – ಹನಿಟ್ರ್ಯಾಪ್‌ ಹೀನ ಸುಳಿಯೂ ಅವಕಾಶವಾದಿ ರಾಜಕಾರಣವೂ Read More »

ರಸ್ತೆ ದಾಟುತ್ತಿದ್ದ ಮಹಿಳೆಗೆ ಅಪರಿಚಿತ ಕಾರು ಡಿಕ್ಕಿ : ಮಹಿಳೆ ಮೃತ್ಯು

ಬಿ.ಸಿ.ರೋಡ್  : ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ಪರಂಗಿಪೇಟೆ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಅಪಘಾತವೆಸಗಿದ ಕಾರು ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. 10 ನೇ ಮೈಲುಕಲ್ಲು ನಿವಾಸಿ ವಸಂತಿ ಶೆಟ್ಟಿ ಅಪಘಾತದಲ್ಲಿ ಮೃತಪಟ್ಟವರು. ಫರಂಗಿಪೇಟೆ ಸಮೀಪದ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ 10ನೇ ಮೈಲುಕಲ್ಲು ಎಂಬಲ್ಲಿ ಪಾದಚಾರಿ ಮಹಿಳೆಯೋರ್ವರಿಗೆ ಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ದೂರಕ್ಕೆ ಎಸೆಯಲ್ಪಟ್ಟ

ರಸ್ತೆ ದಾಟುತ್ತಿದ್ದ ಮಹಿಳೆಗೆ ಅಪರಿಚಿತ ಕಾರು ಡಿಕ್ಕಿ : ಮಹಿಳೆ ಮೃತ್ಯು Read More »

ಅಪಾರ್ಟ್‌ಮೆಂಟ್‌ನಲ್ಲಿತ್ತು ಬರೋಬ್ಬರಿ 100 ಕೆಜಿ ಚಿನ್ನ!

ಅಪ್ಪ-ಮಗ ಕಳ್ಳ ಸಾಗಾಟ ಮೂಲಕ ತಂದ ಚಿನ್ನ ವಶ ಅಹಮ್ಮದಾಬಾದ್: ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡಿ ಚಿನ್ನ, ನಗದು ಸೇರಿ ಅಕ್ರಮ ಸಂಪತ್ತು ವಶಪಡಿಸಿಕೊಳ್ಳುವುದು ಮಾಮೂಲು ಸುದ್ದಿ. ಆದರೆ ಗುಜರಾತ್‌ನ ಅಹ್ಮದಾಬಾದ್‌ನ ಅಪಾರ್ಟ್‌ಮೆಂಟ್‌ ಒಂದರ ಮೇಲೆ ನಡೆದ ದಾಳಿ ದೇಶದ ಇತಿಹಾಸದಲ್ಲಿ ಇತ್ತೀಚೆಗೆ ನಡೆದ ಜಪ್ತಿಯಲ್ಲಿ ದಾಖಲೆ ಬರೆದಿದೆ. ಇಲ್ಲಿದ್ದ ಚಿನ್ನವನ್ನು ನೋಡಿ ಅಧಿಕಾರಿಗಳು ಅಕ್ಷರಶ ದಂಗಾಗಿದ್ದಾರೆ. ಕಾರಣ ಈ ಅಪಾರ್ಟ್‌ಮೆಂಟ್‌ನಲ್ಲಿ ಬರೋಬ್ಬರಿ 88 ಕೆಜಿ ಚಿನ್ನ, 19.6 ಕೆಜಿ ಚಿನ್ನಾಭರಣ, 1.3 ಕೋಟಿ ರೂಪಾಯಿ

ಅಪಾರ್ಟ್‌ಮೆಂಟ್‌ನಲ್ಲಿತ್ತು ಬರೋಬ್ಬರಿ 100 ಕೆಜಿ ಚಿನ್ನ! Read More »

ಉಪ್ಪಿನಂಗಡಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಉಪ್ಪಿನಂಗಡಿ: ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ ಪಡ್ಡಡ್ಕದಲ್ಲಿ ನಡೆದಿದೆ. ಶೇಷಪ್ಪ (38) ಎಂಬವರೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು ಗುರುವಾರದಂದು ರಾತ್ರಿ ಮನೆಗೆ ಬಂದಾತ ತಾಯಿಯೊಂದಿಗೆ ಜಗಳವಾಡಿದ್ದರು. ಈ ಸಂದರ್ಭಸ್ಮರಕ್ಷಣೆಗಾಗಿ ತಾಯಿ ನೆರೆಮನೆಗೆ ಹೋಗಿದ್ದರು. ಈ ವೇಳೆ ಮನೆಯ ಎದುರುಗಡೆಯ ಹಾಲ್‌ನಲ್ಲಿ ಅಡ್ಡಕ್ಕೆ ನೇಣು ಬಿಗಿದು ಈತ ಆತ್ಮಹತ್ಯೆ ಮಾಡಿದ್ದಾನೆ. ಆತನ ಪತ್ನಿ ತವರು ಮನೆಗೆ ಹೋಗಿರುವ ಬೇಸರದಿಂದ ಜೀವನದಲ್ಲಿ ಜಿಗುಪ್ಪೆ ಹೊಂದಿ ಈ ಕೃತ್ಯವೆಸಗಿರುವುದಾಗಿ ರಾಮಕ್ಕ

ಉಪ್ಪಿನಂಗಡಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಸಂಪ್ಯ ಅಕ್ಷಯ ಕಾಲೇಜಿನಲ್ಲಿ “ಒತ್ತಡ ಮತ್ತು ಮಾನಸಿಕ ಆರೋಗ್ಯ ನಿರ್ವಹಣೆ” ಕಾರ್ಯಕ್ರಮ

ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಬೆಳ್ಳಾರೆ ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ, ಸಮಾಜ ಕಾರ್ಯ ವಿಭಾಗ ಮತ್ತು ಪ್ರಜ್ಞಾಶ್ರಮ ಬೌದ್ಧಿಕ ದಿವ್ಯಾಂಗರ ವಸತಿಯುಕ್ತ ಕೇಂದ್ರ ಬೀರಮಲೆ ಬೆಟ್ಟ ಪುತ್ತೂರು ಸಯುಕ್ತ ಆಶ್ರಯದಲ್ಲಿ “ಒತ್ತಡ ಮತ್ತು ಮಾನಸಿಕ ಆರೋಗ್ಯ ನಿರ್ವಹಣೆ” ಕಾರ್ಯಕ್ರಮ ಅಕ್ಷಯ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಮೇಲೆ

ಸಂಪ್ಯ ಅಕ್ಷಯ ಕಾಲೇಜಿನಲ್ಲಿ “ಒತ್ತಡ ಮತ್ತು ಮಾನಸಿಕ ಆರೋಗ್ಯ ನಿರ್ವಹಣೆ” ಕಾರ್ಯಕ್ರಮ Read More »

ಇಂದು ಕರ್ನಾಟಕ ಬಂದ್‌ : ಬೆಂಗಳೂರಿನಲ್ಲಿ ಪರಿಣಾಮ ಗೋಚರ, ಉಳಿದೆಡೆ ಆಂಶಿಕ

ಉಡುಪಿ, ದಕ್ಷಿಣ ಕನ್ನಡದಲ್ಲಿ ಜನಜೀವನ ಯಥಾಸ್ಥಿತಿ; ವಾಹನಗಳ ಓಡಾಟ ಬೆಂಗಳೂರು: ಬೆಳಗಾವಿಯಲ್ಲಿ ಸರಕಾರಿ ಬಸ್‌ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ಮಡಿರುವುದನ್ನು ಖಂಡಿಸಿ ಹಾಗೂ ಕರ್ನಾಟಕದಲ್ಲಿ ಎಂಇಎಸ್ ನಿಷೇಧ, ಮೇಕೆದಾಟು, ಕಳಸಬಂಡೂರಿ ಯೋಜನೆಗೆ ಶೀಘ್ರ ಅನುಮತಿ ಸೇರಿದಂತೆ ನಾಡು-ನುಡಿ, ನೆಲ-ಜಲ ವಿಷಯಗಳ ಬೇಡಿಕೆ ಮುಂದಿರಿಸಿಕೊಂಡು ಕನ್ನಡ ಒಕ್ಕೂಟಗಳು ಕರೆ ನೀಡಿದ ಬಂದ್‌ ಬೆಳಗ್ಗೆ ಆರು ಗಂಟೆಯಿಂದಲೇ ಶುರುವಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು ಬೆಳಗ್ಗೆ ಬೆಂಗಳೂರಿನ

ಇಂದು ಕರ್ನಾಟಕ ಬಂದ್‌ : ಬೆಂಗಳೂರಿನಲ್ಲಿ ಪರಿಣಾಮ ಗೋಚರ, ಉಳಿದೆಡೆ ಆಂಶಿಕ Read More »

ಐಪಿಎಲ್‌ 2025: ಇಂದು ಮೊದಲ ಪಂದ್ಯ; ಆರ್‌ಸಿಬಿ-ಕೆಕೆಆರ್‌ ಮುಖಾಮುಖಿ

ತಾರೆಯರ ಮೆರುಗಿನೊಂದಿಗೆ ಕೋಲ್ಕತ್ತಾದಲ್ಲಿ ಉದ್ಘಾಟನೆ ಹೊಸದಿಲ್ಲಿ : ಕ್ರಿಕೆಟ್‌ ಪ್ರೇಮಿಗಳು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಐಪಿಎಲ್‌-2025 ಕ್ರಿಕೆಟ್‌ ಟೂರ್ನಿ ಇಂದಿನಿಂದ ಶುರುವಾಗಲಿದ್ದು, ಅದ್ದೂರಿ ಉದ್ಘಾಟನೆಗೆ ಎಲ್ಲ ತಯಾರಿ ನಡೆದಿದೆ. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇಂದು ರಾತ್ರಿ ಸಿನೆಮಾ ತಾರೆಯರು, ಕ್ರಿಕೆಟ್‌ ದಿಗ್ಗಜರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಈ ಋತುವಿನ ಐಪಿಎಲ್‌ ಶೂಭಾರಂಭವಾಗಲಿದೆ. ಇದು ಐಪಿಎಲ್‌ 18ನೇ ಆವೃತ್ತಿಯಾಗಿದ್ದು, ಲೀಗ್‌ ಹಂತದ ಮೊದಲ ಪಂದ್ಯ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್‌ 2025: ಇಂದು ಮೊದಲ ಪಂದ್ಯ; ಆರ್‌ಸಿಬಿ-ಕೆಕೆಆರ್‌ ಮುಖಾಮುಖಿ Read More »

ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಶ್ವತ್ಥ ಪೂಜಾ ಕಾರ್ಯ

ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಶ್ವತ್ಥ ಪೂಜಾ ಕಾರ್ಯ ಮಾ. 21 ಶುಕ್ರವಾರ ( ಇಂದು ) ನಡೆಯಿತು. ಮಾ. 21, 2025 ಶುಕ್ರವಾರ ಪೂರ್ವಾಹ್ನ ಗಂಟೆ 8.00ರಿಂದ ಅಭಿಷೇಕ,ಗಣಹೋಮ, ಅಶ್ವತ್ಥ ಪೂಜೆ ನೆರವೇರಿತು. ಪೂರ್ವಾಹ್ನ ಗಂಟೆ 9.00ರಿಂದ ಶ್ರೀ ಲಕ್ಷ್ಮೀಪ್ರಿಯ ಭಜನಾ ಮಂಡಳಿ ಬೆಳಂದೂರು ವಲಯ ಇವರಿಂದ ಭಜನಾ ಕಾರ್ಯಕ್ರಮ, ಪೂರ್ವಾಹ್ನ ಗಂಟೆ 11.30ರಿಂದ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು. ಸಂಜೆ 5: 30ರಿಂದ ದುರ್ಗಾಪೂಜೆ ಮತ್ತು ದೀಪಾರಾಧನೆ, ಸಂಜೆ 6.00ರಿಂದ 7.00 ಗಂಟೆಯವರೆಗೆ

ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಶ್ವತ್ಥ ಪೂಜಾ ಕಾರ್ಯ Read More »

ಸುಳ್ಯದ ಯುವಕ ನಾಪತ್ತೆ | ಪತ್ತೆಹಚ್ಚುವಂತೆ ಬೆಳ್ಳಾರೆ ಪೊಲೀಸರಿಗೆ ದೂರು

ಸುಳ್ಯ: ಮದುವೆ ನಿಗದಿಯಾಗಿದ್ದ ಯುವಕನೋರ್ವ ನಾಪತ್ತೆಯಾದ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಳಿಲ ಗ್ರಾಮದ ದೇರಂಪಾಲು ಆರ್.ಸಿ.ಮನೆ ಶೀನಪ್ಪ ರೈಯವರ ಪುತ್ರ ಹರೀಶ್ ರೈ ಕಾಣೆಯಾದವರು. ಹರೀಶ್ ಸುಮಾರು 13 ವರ್ಷಗಳಿಂದ ಪುತ್ತೂರಿನ ಖಾಸಗಿ ಫೈನಾನ್ಸ್ ನಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ದೂರದ ಸಂಬಂಧಿ ಯುವತಿ ಜೊತೆ ವಿವಾಹ ನಿಶ್ಚಯವಾಗಿತ್ತು. ಹರೀಶ್ ಮಾ.20 ರಂದು ಬೆಳಿಗ್ಗೆ 7:30 ಗಂಟೆಗೆ ಯುವತಿಯ ಮನೆಗೆ ಹೋಗಿ ಬಳಿಕ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಬೈಕ್‌ನಲ್ಲಿ

ಸುಳ್ಯದ ಯುವಕ ನಾಪತ್ತೆ | ಪತ್ತೆಹಚ್ಚುವಂತೆ ಬೆಳ್ಳಾರೆ ಪೊಲೀಸರಿಗೆ ದೂರು Read More »

error: Content is protected !!
Scroll to Top