ತಾತ್ಕಾಲಿಕವಾಗಿ ನಿಂತು ಹೋಗಿದ್ದ ಹಾರಾಡಿ ರೈಲ್ವೇ ಕಾಮಗಾರಿ ಪುನರಾರಂಭ ; ಮಾರ್ಚ್ ತಿಂಗಳೊಳಗೆ ರಸ್ತೆ ಲೋಕಾರ್ಪಣೆ : ಜೀವಂಧರ್ ಜೈನ್
ಪುತ್ತೂರು : ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಯನ್ನು ಪುನರಾರಂಭಿಸಲಾಗಿದೆ. ಜಲ್ಲಿ ಹಾಗೂ ಕ್ರಷರ್ ಮುಷ್ಕರದ ಹಿನ್ನಲೆಯಲ್ಲಿ ಕಾಮಗಾರಿಗೆ ಬೇಕಾದ ಜಲ್ಲಿ ಕಲ್ಲುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾದ ಹಿನ್ನಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಸುಮಾರು 1.7 ಕೋಟಿ ವೆಚ್ಚದ 5.5 ಮೀಟರ್ ಅಗಲದ ರಸ್ತೆ ಕಾಮಗಾರಿಗೆ 2022ನೇ ನವೆಂಬರ್ ತಿಂಗಳಲ್ಲಿ ಶಿಲಾನ್ಯಾಸದ ಮೂಲಕ ಚಾಲನೆ ನೀಡಲಾಗಿತ್ತು. ಬಳಿಕ ಜಲ್ಲಿ ಕ್ರಷರ್ ಮಾಲಕರ ಮುಷ್ಕರದಿಂದಾಗಿ ಸಮಸ್ಯೆ ಉಂಟಾಗಿ ಕೇವಲ ಅರ್ಥ್ವರ್ಕ್ ಮಾಡಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. […]








