ಕೊಳ್ಯ, ಸಂಪ್ಯ ಪರಿಸರದಲ್ಲಿ ಸ್ವಚ್ಛತೆ

ಸಂಪ್ಯ: ಆರ್ಯಾಪು ಗ್ರಾಮ ಪಂಚಾಯಿತಿ ವತಿಯಿಂದ ಕೊಳ್ಯ ಮತ್ತು ಸಂಪ್ಯ ವ್ಯಾಪ್ತಿಯಲ್ಲಿ ಸ್ವಚ್ಚತೆ ನಡೆಸಲಾಯಿತು. ಸ್ವಚ್ಛತಾ ಹೀ ಸೇವಾ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಆಂದೋಲನದ ಹಿನ್ನಲೆಯಲ್ಲಿ ಈ ಸ್ವಚ್ಚತಾ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷೆ ಪೂರ್ಣಿಮಾ ರೈ, 3ನೇ ವಾರ್ಡಿನ ಸದಸ್ಯರಾದ ಪವಿತ್ರ ರೈ, ರತ್ನಾವತಿ, 5ನೇ ವಾರ್ಡಿನ ಸದಸ್ಯೆ ರಶೀದಾ, ಸ್ಥಳೀಯರು ಉಪಸ್ಥಿತರಿದ್ದರು.

ಕೊಳ್ಯ, ಸಂಪ್ಯ ಪರಿಸರದಲ್ಲಿ ಸ್ವಚ್ಛತೆ Read More »

ರಸ್ತೆ ದಾಟುತ್ತಿದ್ದ ಯುವತಿಗೆ ಕಾರು ಡಿಕ್ಕಿ : ಸ್ಥಳದಲ್ಲೇ ಮೃತ್ಯು

ಬಂಟ್ವಾಳ : ರಸ್ತೆ ದಾಟುತ್ತಿದ್ದ ಯುವತಿಯೋರ್ವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ದಾಸಕೋಡಿ ಎಂಬಲ್ಲಿ ನಡೆದಿದೆ.ವೀರಕಂಭ ಗ್ರಾಮದ ಬಾಯಿಲ ನಿವಾಸಿ ಶೇಖರ ಪೂಜಾರಿ ಎಂಬವರ ಪುತ್ರಿ ಪಾವನ (23) ಮೃತಪಟ್ಟವರು. ಬಿ.ಸಿ.ರೋಡಿನ ಸ್ಕ್ಯಾನಿಂಗ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿರುವ ಪಾವನಿ ಸಂಜೆ ಕೆಲಸ ಬಿಟ್ಟು ಬಸ್‍ ನಲ್ಲಿ ತೆರಳಿ ದಾಸಕೋಡಿಯಲ್ಲಿ ಇಳಿದು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಕಾರೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಯುವತಿ

ರಸ್ತೆ ದಾಟುತ್ತಿದ್ದ ಯುವತಿಗೆ ಕಾರು ಡಿಕ್ಕಿ : ಸ್ಥಳದಲ್ಲೇ ಮೃತ್ಯು Read More »

ಅಪಘಾತ: ಮಾನವೀಯತೆ ಮೆರೆದ ಪುತ್ತಿಲ ಪರಿವಾರ

ಪುತ್ತೂರು: ಕಾರು ಡಿಕ್ಕಿಯಾಗಿ ಗಾಯಗೊಂಡ ವ್ಯಕ್ತಿಯೊಬ್ಬರನ್ನು ಪುತ್ತಿಲ ಪರಿವಾರ ಕಾರ್ಯಕರ್ತರು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಗುರುವಾರ ಸಂಜೆ ಭಾರಿ ಮಳೆ ಸುರಿಯುತ್ತಿದ್ದ ಸಂದರ್ಭ ರಸ್ತೆ ದಾಟುತಿದ್ದ ವ್ಯಕ್ತಿಗೆ ಕುಂಬ್ರದಲ್ಲಿ ಕಾರು  ಅಪಘಾತಗೊಂಡಿದೆ. ಅಪಘಾತಗೊಂಡ ವ್ಯಕ್ತಿಯನ್ನು ತಕ್ಷಣ ಪುತ್ತಿಲ ಪರಿವಾರದ ಕಾರ್ಯಕರ್ತರು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಅಪಘಾತ: ಮಾನವೀಯತೆ ಮೆರೆದ ಪುತ್ತಿಲ ಪರಿವಾರ Read More »

ಕ್ರಿಟಿಕಲ್ ಇಲ್ನೆಸ್ ಫಂಡ್ ಹಸ್ತಾಂತರ

ಪೆರ್ನೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ವಲಯದ ಕೆದಿಲ ‘ಬಿ’ ಕಾರ್ಯಕ್ಷೇತ್ರದ ಶಬರಿ ಸ್ವ ಸಹಾಯ ಸಂಘದ ಸದಸ್ಯೆ ನಳಿನಿ ಅವರ ಪುತ್ರಿ ಕಾವ್ಯ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಧರ್ಮಸ್ಥಳ ಕ್ಷೇತ್ರದಿಂದ ಮಂಜೂರಾದ 25000 ರೂ. ಕ್ರಿಟಿಕಲ್ ಇಲ್ನೆಸ್ ಫಂಡನ್ನು ಹಸ್ತಾಂತರಿಸಲಾಯಿತು. ಯೋಜನಾಧಿಕಾರಿ ಚೆನ್ನಪ್ಪ ಗೌಡ ಅವರ ಶಿಫಾರಸ್ಸಿನ ಮೇರೆಗೆ ಪೆರ್ನೆ ವಲಯ ಮೇಲ್ವಿಚಾರಕಿ ಶಾರದ ವಿತರಿಸಿದರು. ಈ ಸಂದರ್ಭದಲ್ಲಿ ಸೇವಾಪ್ರತಿನಿಧಿಗಳಾದ ಜಯಂತಿ, ಶಾರದ, ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ, ಕೆದಿಲ ಶೌರ್ಯ ವಿಪತ್ತು ನಿರ್ವಹಣಾ

ಕ್ರಿಟಿಕಲ್ ಇಲ್ನೆಸ್ ಫಂಡ್ ಹಸ್ತಾಂತರ Read More »

ನಿಮಗಿನ್ನೂ ಎಮರ್ಜೆನ್ಸಿ ಅಲರ್ಟ್‌ ಮೆಸೇಜ್‌ ಬಂದಿಲ್ಲವೇ? ಗೊಂದಲ ಬೇಡ. ಈ ವರದಿ ಓದಿ

ಪುತ್ತೂರು: ನಿಮ್ಮ ಪಕ್ಕ ಕುಳಿತವರು, ಗೆಳೆಯರಿಗೆ, ಕುಟುಂಬಸ್ಥರ ಮೊಬೈಲ್‌ಗಳಿಗೆಲ್ಲ ಎಮರ್ಜೆನ್ಸಿ ಅಲರ್ಟ್‌ ಮೆಸೇಜ್‌ ಬಂದಿದೆ. ಆದರೆ, ನಿಮ್ಮ ಮೊಬೈಲ್‌ಗೆ ಮಾತ್ರ ಈ ಮೆಸೇಜ್‌ ಬಂದಿಲ್ಲವೇ? ಅದಕ್ಕೆ ಹಲವು ಕಾರಣಗಳಿವೆ. ಹೌದು, ದೇಶದ ಕೋಟ್ಯಂತರ ಜನರಿಗೆ ಎಮರ್ಜೆನ್ಸಿ ಅಲರ್ಟ್- ಎಕ್ಸ್‌ಟ್ರೀಮ್ ಎಂಬ ಸಂದೇಶ ರವಾನಿಸಲಾಗಿದೆ. ಈ ಸಂದೇಶವನ್ನು ಪ್ರಾಯೋಗಿಕವಾಗಿ ಕೇಂದ್ರ ಟೆಲಿಕಾಂ ಸಚಿವಾಲಯ ಕಳುಹಿಸಿದೆ. ಈ ಅಲರ್ಟ್‌ ಸುಮಾರು 11:35ಕ್ಕೆ ಫ್ಲ್ಯಾಶ್ ಸಂದೇಶ ಮತ್ತು ಆಂಡ್ರಾಯ್ಡ್ ಮತ್ತು ಐಫೋನ್‌ಗಳಿಗೆ ತುರ್ತು ಧ್ವನಿಯೊಂದಿಗೆ ಕಳುಹಿಸಿದೆ. ಒಮ್ಮೆ ಇಂಗ್ಲಿಷ್‌ನಲ್ಲಿ ಮತ್ತು ಕೆಲವೇ

ನಿಮಗಿನ್ನೂ ಎಮರ್ಜೆನ್ಸಿ ಅಲರ್ಟ್‌ ಮೆಸೇಜ್‌ ಬಂದಿಲ್ಲವೇ? ಗೊಂದಲ ಬೇಡ. ಈ ವರದಿ ಓದಿ Read More »

ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿ ಪೊಲೀಸ್ ವಶ

ವಿಟ್ಲ: ಅನ್ಯಕೋಮಿನ ಯುವಕರ ಜೊತೆಗೆ ಓರ್ವ ಹಿಂದೂ ಯುವತಿ ಪತ್ತೆಯಾಗಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಸಮೀಪ ಘಟನೆ ನಡೆದಿದೆ. ಇಬ್ಬರು ಅನ್ಯಧರ್ಮೀಯ ಯುವಕರು ಹಾಗೂ ಹಿಂದೂ ಯುವತಿ ಬಸ್ಸಿನಿಂದ ಇಳಿದು, ಕುದ್ದುಪದವು ಬಸ್ಸು ತಂಗುದಾಣದಲ್ಲಿ ಕುಳಿತಿದ್ದರು. ಸ್ಥಳೀಯರು ವಿಚಾರಿಸಿದಾಗ ಉಪ್ಪಳ ಕಡೆ ತೆರಳುವುದಾಗಿ ತಿಳಿಸಿದ್ದರು ಎಂದು ಹೇಳಲಾಗಿದೆ. ಈ ಮೂವರು ಸಲುಗೆಯಿಂದ ಇರುವುದರಿಂದ ಸ್ಥಳೀಯರು ಸಂಶಯಗೊಂಡಿದ್ದಾರೆ. ತಕ್ಷಣ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಟ್ಲ ಠಾಣಾ ಪೊಲೀಸರು

ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿ ಪೊಲೀಸ್ ವಶ Read More »

ಕಲಿತ ಶಾಲೆಗೆ ಲಕ್ಷ ರೂ. ದೇಣಿಗೆ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್.ಎಸ್.ಪಿ.ಯು. ಕಾಲೇಜಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಉದ್ಯಮಿ ರಾಕೇಶ್ ಬೆಂಗಳೂರು ಅವರು 1 ಲಕ್ಷ ರೂ. ದೇಣಿಗೆ ನೀಡಿದರು. ಬುಧವಾರ ಕಾಲೇಜಿಗೆ ಆಗಮಿಸಿದ ಅವರು, ಪ್ರಾಂಶುಪಾಲ ಸೋಮಶೇಖರ್ ನಾಯಕ್ ಅವರಿಗೆ ದೇಣಿಗೆಯ ಚೆಕ್ ಹಸ್ತಾಂತರಿಸಿದರು. ಕಾಲೇಜಿನಲ್ಲಿ ನಡೆಯುವ ಸ್ಪರ್ಧಾತ್ಮಕ ಪರಿಕ್ಷಾ ತರಬೇತಿ ಕಾರ್ಯಕ್ಕೆ, ಕಾಲೇಜಿನ ಗಾರ್ಡನಿಂಗ್, ತೂಗು ಹೂದಾನಿ ಅಳವಡಿಕೆ ಮತ್ತು ಹೂದಾನಿ ಅಳವಡಿಕೆಗಾಗಿ ಈ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಸಂದರ್ಭ ಉಪನ್ಯಾಸಕರಾದ ಸವಿತಾ ಕೈಲಾಸ್,

ಕಲಿತ ಶಾಲೆಗೆ ಲಕ್ಷ ರೂ. ದೇಣಿಗೆ Read More »

ಕೊಂಬೆಟ್ಟು ನಿವಾಸಿ, ಎನ್.ಐ.ಟಿ.ಕೆ. ನಿವೃತ್ತ ರಿಜಿಸ್ಟ್ರಾರ್ ಬಿ.ಆರ್. ಕಡಂಬಳಿತ್ತಾಯ ನಿಧನ

ಮಂಗಳೂರು: ಕೊಂಬೆಟ್ಟು ವಿಷ್ಣು ನಿಲಯದ ನಿವಾಸಿ ಸುರತ್ಕಲ್ ಎನ್‍ಐಟಿಕೆಯ ನಿವೃತ್ತ ಆಡಳಿತಾಧಿಕಾರಿ, ರಿಜಿಸ್ಟಾರ್ ಬಿ.ರಾಧಾಕೃಷ್ಣ ಕಡಂಬಳಿತ್ತಾಯ (94 ವ.) ಗುರುವಾರ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಬಿ.ರಾಧಾಕೃಷ್ಣ ಕಡಂಬಳಿತ್ತಾಯ ಅವರು ಕೊಂಬೆಟ್ಟು ಸರಕಾರಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು. ಕಳೆದ ವರ್ಷ ಹಿರಿಯ ವಿದ್ಯಾರ್ಥಿಗಳಿಂದ ಜೀರ್ಣೋದ್ಧಾರವಾಗುವ ಸಂದರ್ಭದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರೊಂದಿಗೆ ಪಾಲ್ಗೊಂಡಿದ್ದರು. ಮೃತರು ಪುತ್ರರಾದ ಬಿ.ಹರೇಕೃಷ್ಣ, ಬಿ.ರಾಜೇಶ್ವರ, ಬಿ.ಪುಂಡರೀಕಾಕ್ಷ, ಬಿ.ವೆಂಕಟಕೃಷ್ಣ, ಮಗಳು ಕಮಲಾಕ್ಷಿ ಹಾಗೂ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕೊಂಬೆಟ್ಟು ನಿವಾಸಿ, ಎನ್.ಐ.ಟಿ.ಕೆ. ನಿವೃತ್ತ ರಿಜಿಸ್ಟ್ರಾರ್ ಬಿ.ಆರ್. ಕಡಂಬಳಿತ್ತಾಯ ನಿಧನ Read More »

11-10-2023ರ ಕೃಷಿ ಮಾರುಕಟ್ಟೆ ಧಾರಣೆ

ರಬ್ಬರ್ ದರ ಕೊಂಚ ಏರಿಕೆ; ಹಳೆಅಡಿಕೆ, ಡಬ್ಬಲ್ ಚೋಲ್ ಧಾರಣೆ ಇಳಿಕೆ ಹೊಸಅಡಿಕೆ                                               325- 365 ಹಳೆ ಅಡಿಕೆ       380 -430 430-435( S quality) ಡಬ್ಬಲ್ ಚೋಲ್ 390 – 470 470- 485( S quality) ಕಾಳು ಮೆಣಸು 315 – 585 ಒಣ ಕೊಕ್ಕೊ 215 – 235 ಹಸಿ ಕೊಕ್ಕೊ 53- 58 ಕೊಬ್ಬರಿ 70-73 ರಬ್ಬರ್ ಆರ್.ಎಸ್.ಎಸ್4 : 145.00 ಆರ್.ಎಸ್.ಎಸ್5 : 136.50 ಲೋಟ್ : 127.50 ಸ್ಕ್ರಾಪ್

11-10-2023ರ ಕೃಷಿ ಮಾರುಕಟ್ಟೆ ಧಾರಣೆ Read More »

ರೈಲ್ವೆ ಪ್ಲಾಟ್ ಪಾರ್ಮ್‍ಗೆ ಬಿದ್ದ ಕಾಂಕ್ರೀಟ್ ಮಿಕ್ಸರ್!

ಬಂಟ್ವಾಳ: ಕಾಮಗಾರಿ ನಿರತ ಕಾಂಕ್ರೀಟ್ ಮಿಕ್ಸರ್ ವಾಹನ ರೈಲ್ವೇ ಹಳಿಗೆ ಬಿದ್ದ ಘಟನೆ ಬಂಟ್ವಾಳ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಅಭಿವೃದ್ಧಿ ಕಾಮಗಾರಿ ವೇಳೆ ಘಟನೆ ನಡೆದಿದೆ. ಹಳಿಯಲ್ಲಿ ರೈಲು ಆಗಮಿಸದೇ ಇದ್ದುದರಿಂದ, ಯಾವುದೇ ಅನಾಹುತ ಸಂಭವಿಸಿಲ್ಲ. ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆಯಾದರೂ, ಬೇಜವಾಬ್ದಾರಿ ಬಗ್ಗೆ ಆಕ್ರೋಶವೂ ಕೇಳಿಬಂದಿದೆ. ರೈಲು ಆಗಮಿಸುವ ಮೊದಲು ಯಂತ್ರದ ತೆರವು ಆಗಬೇಕಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ.

ರೈಲ್ವೆ ಪ್ಲಾಟ್ ಪಾರ್ಮ್‍ಗೆ ಬಿದ್ದ ಕಾಂಕ್ರೀಟ್ ಮಿಕ್ಸರ್! Read More »

error: Content is protected !!
Scroll to Top