‘ನಮ್ಮ ದೇಶ ನಮ್ಮ ಮಣ್ಣು’ ಕಾರ್ಯಕ್ರಮದ ಮಣ್ಣು ಹಸ್ತಾಂತರಕ್ಕೆ ಚಾಲನೆ | ದೆಹಲಿಗೆ ತೆರಳಲಿದ್ದಾರೆ ಐದು ವಿದ್ಯಾರ್ಥಿಗಳು
ಪುತ್ತೂರು: ದೇಶಕ್ಕೆ ಸ್ವಾತಂತ್ರ್ಯೋತ್ಸವ ಸಿಕ್ಕಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಮ್ಮಿಕೊಳ್ಳಲಾದ ‘ನಮ್ಮ ಮಣ್ಣು ನಮ್ಮ ದೇಶ” ಅಭಿಯಾನದಂಗವಾಗಿ ಪುತ್ತೂರಿನಲ್ಲಿ ಸಂಗ್ರಹಿಸಲಾದ ಮಣ್ಣನ್ನು ಶುಕ್ರವಾರ ಪುತ್ತೂರು ತಾಲೂಕು ಆಡಳಿತ ಸೌಧದ ಬಳಿ ಎನ್.ಎಸ್.ಎಸ್. ಘಟಕಕ್ಕೆ ಹಸ್ತಾಂತರಿಸಲಾಯಿತು. ಎನ್.ಎಸ್.ಎಸ್. ಘಟಕದ ಐವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಅವರು ಈ ಮಣ್ಣನ್ನು ದೆಹಲಿಗೆ ತಲುಪಿಸಲಿದ್ದಾರೆ. ಸಂತ ಫಿಲೋಮಿನಾ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿ ಮಣ್ಣು ಸ್ವೀಕರಿಸಿದರು. ಮಣ್ಣನ್ನು ಹಸ್ತಾಂತರಿಸಿ ಮಾತನಾಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್, ನಾವು ಸ್ವಾತಂತ್ರ್ಯೋತ್ಸವದ […]










