ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರಿ ಸಂಘ ಕಾಣಿಯೂರು ಶಾಖಾ ವತಿಯಿಂದ ಸವಣೂರು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ತಾರನಾಥ ಕಾಯರ್ಗ, ನಿರ್ದೇಶಕಿ ಜ್ಞಾನೇಶ್ವರಿಯವರಿಗೆ ಸನ್ಮಾನ

ಕಾಣಿಯೂರು: ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರಿ ಸಂಘ ಕಾಣಿಯೂರು ಶಾಖಾ ವತಿಯಿಂದ ಸವಣೂರು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ತಾರನಾಥ ಕಾಯರ್ಗ ಹಾಗೂ ನಿರ್ದೇಶಕಿ ಜ್ಞಾನೇಶ್ವರಿ ಅವರಿಗೆ ಸನ್ಮಾನ ಕಾರ್ಯಕ್ರಮ ಕಾಣಿಯೂರು ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆಯಿತು. ಕಾಣಿಯೂರು ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಗೌಡ ಯು.ಪಿ., ನಿರ್ದೇಶಕರಾದ ರಾಮಕೃಷ್ಣ ಗೌಡ ಕೆ., ಪ್ರವೀಣ್‍ […]

ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರಿ ಸಂಘ ಕಾಣಿಯೂರು ಶಾಖಾ ವತಿಯಿಂದ ಸವಣೂರು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ತಾರನಾಥ ಕಾಯರ್ಗ, ನಿರ್ದೇಶಕಿ ಜ್ಞಾನೇಶ್ವರಿಯವರಿಗೆ ಸನ್ಮಾನ Read More »

ಸುಳ್ಯ ಶಾಸಕಿ ಬಾಗೀರಥಿ ಮುರುಳ್ಯ ಬೆಂಗಳೂರು ಕಚೇರಿ ಪ್ರಾರಂಭ | ಶಾಸಕರ ಭವನದಲ್ಲಿ ಧಾರ್ಮಿಕ ವಿಧಿವಿಧಾನದೊಂದಿಗೆ ಆರಂಭ

ಬೆಂಗಳೂರು: ಸುಳ್ಯ ಶಾಸಕಿ ಬಾಗೀರಥಿ ಮುರುಳ್ಯ ಬೆಂಗಳೂರು ಕಚೇರಿ ಶುಕ್ರವಾರ ಆರಂಭಗೊಂಡಿತು. ಬೆಂಗಳೂರಿನ ಶಾಸಕರ ಭವನದಲ್ಲಿ ಭವನದಲ್ಲಿ ಕಚೇರಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಿಸಲಾಯಿತು. ಬೆಂಗಳೂರಿನ ಶಾಸಕರ ಭವನದ ಎರಡು ಹಾಗೂ ಮೂರನೇ ಮಹಡಿಯ ರೂಂ ಸಂಖ್ಯೆ 335 ಹಾಗೂ 226 ರಲ್ಲಿ ಆರಂಭಗೊಂಡಿತು. ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಮುರುಳ್ಯ ಗ್ರಾಪಂ ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಮುಖಂಡರಾದ ಎ.ವಿ.ತೀರ್ಥರಾಮ, ರಂಜಿತ್ ಎನ್‍.ಆರ್., ಸುನಿಲ್‍

ಸುಳ್ಯ ಶಾಸಕಿ ಬಾಗೀರಥಿ ಮುರುಳ್ಯ ಬೆಂಗಳೂರು ಕಚೇರಿ ಪ್ರಾರಂಭ | ಶಾಸಕರ ಭವನದಲ್ಲಿ ಧಾರ್ಮಿಕ ವಿಧಿವಿಧಾನದೊಂದಿಗೆ ಆರಂಭ Read More »

ಜ್ಞಾನವಾಪಿ ಮಸೀದಿ ಕೆಳಮಹಡಿಯಲ್ಲಿ ಹಿಂದೂಗಳ ಪೂಜೆಗೆ ಯಾವುದೇ ತಡೆ ನೀಡಲು ಸಾಧ್ಯವಿಲ್ಲ| ಅಲಹಾಬಾದ್ ಹೈಕೋರ್ಟ್‍ ಹೇಳಿಕೆ

ಹೊಸದಿಲ್ಲಿ: ಜ್ಞಾನವಾಪಿ ಮಸೀದಿಯ ಕೆಳಮಹಡಿಯಲ್ಲಿ ಹಿಂದುಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಿರುವ ವಾರಣಾಸಿ ಜಿಲ್ಲಾ ಕೋರ್ಟ್‌ನ ಆದೇಶದ ಬೆನ್ನಲ್ಲೇ ಹಿಂದೂಗಳ ಪೂಜೆ ಯಾವುದೇ ರೀತಿಯ ತಡೆ ನೀಡಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್‍ ತಿಳಿಸುವ ಮೂಲಕ ಮತ್ತೊಂದು ಜಯ ಲಭಿಸಿದಂತಾಗಿದೆ. ಇದೀಗ ಈ ಕುರಿತು ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟ್‌ಗೆ ಏರಿದ್ದ ಮಸೀದಿ ಸಮಿತಿಗೆ ಹಿನ್ನಡೆಯಾಗಿದೆ. ಅಲಹಾಬಾದ್ ಹೈಕೋರ್ಟ್‌ನಲ್ಲಿ ಜ್ಞಾನವಾಪಿ ಪ್ರಕರಣದ ಶುಕ್ರವಾರದ ವಿಚಾರಣೆ ಪೂರ್ಣಗೊಂಡಿದ್ದು, ಈ ಸಮಯದಲ್ಲಿ ಮಸೀದಿ ಸಮಿತಿಗೆ ಹೈಕೋರ್ಟ್‌ನಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಇದರಿಂದಾಗಿ

ಜ್ಞಾನವಾಪಿ ಮಸೀದಿ ಕೆಳಮಹಡಿಯಲ್ಲಿ ಹಿಂದೂಗಳ ಪೂಜೆಗೆ ಯಾವುದೇ ತಡೆ ನೀಡಲು ಸಾಧ್ಯವಿಲ್ಲ| ಅಲಹಾಬಾದ್ ಹೈಕೋರ್ಟ್‍ ಹೇಳಿಕೆ Read More »

ಮೀನುಗಾರಿಕೆ ಬೋಟ್ ಮುಳುಗಡೆ ! | ಬೋಟ್‍ಗೆ ಹಾನಿ

ಉಳ್ಳಾಲ: ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಟ್ರಾಲ್‌ ಬೋಟೊಂದು ಬಂಡೆಗೆ ಬಡಿದು ಮುಳುಗಿದ ಘಟನೆ ಉಳ್ಳಾಲದಲ್ಲಿ ಶುಕ್ರವಾರ ನಸುಕಿನ ವೇಳೆ ನಡೆದಿದೆ. ಸ್ಥಳೀಯ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‍ನ ಮೀನುಗಾರರು ಬೋಟ್‍ನಲ್ಲಿದ್ದ ಐವರನ್ನು ರಕ್ಷಣೆ ಮಾಡಿದ್ದಾರೆ. ಮುಳುಗಡೆಯಾಗಿರುವ ಬೋಟ್‍ನಲ್ಲಿ ಮೀನು, ಬಲೆ ಸಮುದ್ರ ಪಾಲಾಗಿದ್ದು, ಲಕ್ಷಾಂತರ ಮೌಲ್ಯದ ಬೋಟ್‍ಗೆ ಹಾನಿಯಾಗಿದೆ. ಉಳ್ಳಾಲ ನಿವಾಸಿ ನಯನಾ ಪಿ.ಸುವರ್ಣ ಅವರಿಗೆ ಸೇರಿದ `ನವಾಮಿ – ಶಿವಾನಿ’ ಬೋಟ್ ದುರಂತಕ್ಕೀಡಾಗಿದ್ದು, ಬೋಟ್ ಚಲಾಯಿಸುತ್ತಿದ್ದ ಪ್ರವೀಣ್ ಸುವರ್ಣ, ಉತ್ತರ ಪ್ರದೇಶದ ಮೀನುಗಾರರಾದ ಸಮರ ಬಹಯದ್ದೂರ್,

ಮೀನುಗಾರಿಕೆ ಬೋಟ್ ಮುಳುಗಡೆ ! | ಬೋಟ್‍ಗೆ ಹಾನಿ Read More »

ಶ್ರೀ ಕ್ಷೇತ್ರ ದೈಪಿಲ ನೇಮೋತ್ಸವಕ್ಕೆ ಅರುವಗುತ್ತಿನಲ್ಲಿ ಗೊನೆ ಮುಹೂರ್ತ

ಕಾಣಿಯೂರು: ಶ್ರೀ ಕ್ಷೇತ್ರ ದೈಪಿಲ ಶಿರಾಡಿ ರಾಜನ್ ದೈವದ, ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವಕ್ಕೆ ಫೆ. 1ರಂದು ಅರುವಗುತ್ತಿನಲ್ಲಿ ಗೊನೆ ಮುಹೂರ್ತ ನೆರವೇರಿತು. ಫೆ. 7ರಂದು ಕೊಪ್ಪ ಚಾವಡಿಯಿಂದ ಭಂಡಾರ ಆಗಮಿಸಿ ದೈಪಿಲ ಕ್ಷೇತ್ರದಲ್ಲಿ ನೇಮೋತ್ಸವ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ನಾಲ್ಕು ಮನೆ, ಹದಿನಾಲ್ಕು ವರ್ಗ, ಕೊಪ್ಪ ಮೂವತ್ತು ಮನೆಯವರ ಸಹಕಾರದಲ್ಲಿ ಪ್ರತಿವರ್ಷ ನೇಮೋತ್ಸವ ನಡೆದುಕೊಂಡು ಬರುತ್ತಿದೆ. ಫೆ. 8ರಂದು ಶ್ರೀ ಕ್ಷೇತ್ರ ದೈಪಿಲದಲ್ಲಿ ನಡೆಯುವ ನೇಮೋತ್ಸವಕ್ಕೆ ಅರುವಗುತ್ತಿನ ದೈವಗಳಿಗೆ ಪ್ರಾರ್ಥನೆ ನೆರವೇರಿಸಿ, ಗೊನೆ ಮುಹೂರ್ತ ನಡೆಸಲಾಯಿತು.

ಶ್ರೀ ಕ್ಷೇತ್ರ ದೈಪಿಲ ನೇಮೋತ್ಸವಕ್ಕೆ ಅರುವಗುತ್ತಿನಲ್ಲಿ ಗೊನೆ ಮುಹೂರ್ತ Read More »

ನಾಳೆ ಸಂಟ್ಯಾರ್ ಅಪಾಯಕಾರಿ ರಸ್ತೆ ದುರಸ್ಥಿಗೆ ಚಾಲನೆ | ಶಾಸಕರ ಸೂಚನೆಗೆ ಸ್ಪಂದಿಸಿದ ಇಲಾಖೆ

ಪುತ್ತೂರು: ಸಂಟ್ಯಾರ್ ಅಪಾಯಕಾರಿ ರಸ್ತೆ ದುರಸ್ಥಿ ಕಾರ್ಯ ಫೆ.3 ರಂದು ಆರಂಭಗೊಳ್ಳಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಸಂಟ್ಯಾರ್ ನಿಂದ ಪಾಣಾಜೆಗೆ ತೆರಳುವ ರಸ್ತೆಯ ಬಳಕ್ಕ ಎಂಬಲ್ಲಿರುವ ಸೇತುವೆಯ ಬಳಿ ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ. ರಸ್ತೆ ನಿರ್ಮಾಣದ ವೇಳೆ ಅಪಾಯಕಾರಿ ಹುಬ್ಬುಗಳನ್ನು ತೆರವು ಮಾಡದೆ ಇರುವ ಕಾರಣ ಈ ಭಾಗದಲ್ಲಿ ಸಂಚರಿಸುವ ವಾಹನಗಳು ರಸ್ತೆಯ ಪಕ್ಕಕ್ಕೆ ತೆರಳಿ ಪಲ್ಟಿಯಾಗುತ್ತಿದೆ. ಇದೇ ಸ್ಥಳದಲ್ಲಿ ವಾಹನ ಅಪಘಾತದಿಂದ ಮೂರು ಜೀವಗಳು ಬಲಿಯಾಗಿದೆ. ಮೂರು ‌ದಿನಗಳ ಹಿಂದೆ ರಿಕ್ಷಾವೊಂದು

ನಾಳೆ ಸಂಟ್ಯಾರ್ ಅಪಾಯಕಾರಿ ರಸ್ತೆ ದುರಸ್ಥಿಗೆ ಚಾಲನೆ | ಶಾಸಕರ ಸೂಚನೆಗೆ ಸ್ಪಂದಿಸಿದ ಇಲಾಖೆ Read More »

ತುಳುನಾಡ ಜನತೆಗೆ ಆಶೀರ್ವಾದ ತಂದಿದೆ ಶುಭ ಸುದ್ದಿ

ಕಾರು, ಮನೆ, ಎಲೆಕ್ಟ್ರಾನಿಕ್ಸ್ ವಸ್ತುಗಳು ಯಾರಿಗೆ ಬೇಡ ಹೇಳಿ… ಈಗ ನಾನು ಹೇಳ್ತಾ ಇರೋ ವಿಶ್ಯ, ಕಡಿಮೆ ಕಂತಿನಲ್ಲಿ ಮನೆ ಪಡೆಯುವ ಆಶೀರ್ವಾದ ಲಕ್ಕಿ ಸ್ಕೀಂ ಬಗ್ಗೆ. ಕೈಗೆಟಕುವ ಕಂತಿನಲ್ಲಿ ಪ್ರತಿ ತಿಂಗಳು ಮನೆಗೆ ಬೇಕಾಗುವ ವಸ್ತುಗಳನ್ನು ಗೆಲ್ಲುವ ಅವಕಾಶ ಇಲ್ಲಿ ನೀಡಲಾಗಿದೆ. 1,500ಕ್ಕಿಂತಲೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿರುವ ಆಶೀರ್ವಾದ, ಪ್ರತಿಯೊಬ್ಬ ಗ್ರಾಹಕರಿಗೂ 24/7 ಗ್ರಾಹಕ ಸೇವೆಯನ್ನು ಕೂಡ ಒದಗಿಸುತ್ತಾ ಬಂದಿದೆ. ನಿಮ್ಮ ತಿಂಗಳ ದುಡಿಮೆಯ ಕೇವಲ ಒಂದು ಸಾವಿರ ರೂ.ವನ್ನು ಹೂಡಿಕೆ ಮಾಡಿ. ತಿಂಗಳ

ತುಳುನಾಡ ಜನತೆಗೆ ಆಶೀರ್ವಾದ ತಂದಿದೆ ಶುಭ ಸುದ್ದಿ Read More »

ಪುತ್ತೂರು ನೂತನ ತಹಶೀಲ್ದಾರ್ ಆಗಿ ಪುರಂದರ ಕರ್ತವ್ಯಕ್ಕೆ ಹಾಜರು

ಪುತ್ತೂರು: ಪುತ್ತೂರಿನ ನೂತನ ತಹಶೀಲ್ದಾರ್ ಆಗಿ ಪುರಂದರ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ತಹಶೀಲ್ದಾರ್ ಆಗಿದ್ದ ಪುರಂದರ ಅವರು ವರ್ಗಾವಣೆಗೊಂಡು ಬಂದಿದ್ದಾರೆ. ಮೂಲತ: ಬೆಳ್ತಂಗಡಿ ನಿವಾಸಿಯಾಗಿರುವ ಪುರಂದರರವರು ಕಾರ್ಕಳ, ಬೈಂದೂರು, ಕುಂದಾಪುರ, ಬಂಟ್ವಾಳ, ಕಡಬ, ಮಂಗಳೂರು, ಬಾಗಲಕೋಟೆ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬೆಳ್ತಂಗಡಿಯಲ್ಲಿ ಉಪ ತಹಶೀಲ್ದಾ‌ರ್ ಆಗಿ, ಮಂಗಳೂರು ಜಿಲ್ಲಾ ಪಂಚಾಯಿತಿ, ಉಡುಪಿ ತಾಲೂಕು ಪಂಚಾಯಿತಿ, ಮಂಗಳೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿಯೂ ಕರ್ತವ್ಯ ನಿರ್ವಹಿಸಿರುತ್ತಾರೆ. ಬಂಟ್ವಾಳದಲ್ಲಿ

ಪುತ್ತೂರು ನೂತನ ತಹಶೀಲ್ದಾರ್ ಆಗಿ ಪುರಂದರ ಕರ್ತವ್ಯಕ್ಕೆ ಹಾಜರು Read More »

ಹಂಟ್ಯಾರು-ಬೆಟ್ಟಂಪಾಡಿ ರಸ್ತೆ ತುರ್ತು ಕಾಮಗಾರಿ | ಸಂಚಾರದಲ್ಲಿ ಬದಲಾವಣೆ

ಪುತ್ತೂರು: ತಾಲೂಕಿನ ಹಂಟ್ಯಾರು-ಬೆಟ್ಟಂಪಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಒಂದು ಕಿ.ಮೀ. ಅಪಘಾತ ವಲಯವಾದ ಬಳಕ್ಕ ಎಂಬಲ್ಲಿ ರಸ್ತೆ ಅಗಲೀಕರಣಕ್ಕಾಗಿ ತುರ್ತು ಕಾಮಗಾರಿ ನಡೆಯಲಿರುವುದರಿಂದ ಫೆ.3 ರಿಂದ 12 ರ ತನಕ ಘನ ವಾಹನ ಸಂಚಾರ ಸ್ಥಗಿತಗೊಳಿಸಲಾಗುವುದು. ಸಾರ್ವಜನಿಕ ಹಿತದೃಷ್ಟಿಯಿಂದ ಈ ಅಗತ್ಯ ಕಾಮಗಾರಿ ನಡೆಯಲಿದ್ದು, ಲಘು ವಾಹನ ಹೊರತುಪಡಿಸಿ ಘನ ವಾಹನ ಸಂಚಾರ ಸ್ಥಗಿತಗೊಳಿಸಲಾಗುವುದು. ಘನ ವಾಹನಗಳು ಈ ಕೆಳಗೆ ತಿಳಿಸಿದ ಬದಲಿ ರಸ್ತೆಯ ಮೂಲಕ ಸಂಚರಿಸಬಹುದು ಎಂದು ಲೋಕೋಪಯೋಗಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬದಲಿ ವ್ಯವಸ್ಥೆ

ಹಂಟ್ಯಾರು-ಬೆಟ್ಟಂಪಾಡಿ ರಸ್ತೆ ತುರ್ತು ಕಾಮಗಾರಿ | ಸಂಚಾರದಲ್ಲಿ ಬದಲಾವಣೆ Read More »

ಫೆ. 3-4: ಮೊಟ್ಟೆತ್ತಡ್ಕ ಗೋವಿಹಾರ ಧಾಮದಲ್ಲಿ ‘ಗೋಲೋಕೋತ್ಸವ’ | ಮೇಳೈಸಲಿದೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗದ ನೇತೃತ್ವದಲ್ಲಿ ಗೋಲೋಕೋತ್ಸವ ಫೆ. 3 ಹಾಗೂ 4ರಂದು ಕುರಿಯ ಗ್ರಾಮದ ಸಂಪ್ಯದಮೂಲೆಯ ಮೊಟ್ಟೆತ್ತಡ್ಕ ಎನ್.ಆರ್.ಸಿ.ಸಿ. ಬಳಿ ಗೋವಿಹಾರ ಧಾಮದಲ್ಲಿ ನಡೆಯಲಿದೆ. ಗೋಲೋಕೋತ್ಸವ ಅಂಗವಾಗಿ ಫೆ. 3 ಶನಿವಾರ ಬೆಳಿಗ್ಗೆ 7.30ರಿಂದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಗಣಪತಿ ಹೋಮ, ಗೋಸೂಕ್ತ ಹೋಮ, ಗೋಪೂಜೆ, ಮಧ್ಯಾಹ್ನ 2ರಿಂದ ಭಜನೆ, ಕುಣಿತ ಭಜನೆ ನಡೆಯಲಿದೆ. ಸಂಜೆ 4ರಿಂದ ಮೊಟ್ಟೆತ್ತಡ್ಕ ನೃತ್ಯರಂಜಿನಿ ಕಲಾಲಯ ವತಿಯಿಂದ ನೃತ್ಯರೂಪಕ

ಫೆ. 3-4: ಮೊಟ್ಟೆತ್ತಡ್ಕ ಗೋವಿಹಾರ ಧಾಮದಲ್ಲಿ ‘ಗೋಲೋಕೋತ್ಸವ’ | ಮೇಳೈಸಲಿದೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ Read More »

error: Content is protected !!
Scroll to Top