ಸುದ್ದಿ

ಬ್ಯಾಂಕ್‌ ನಲ್ಲಿ ಅಗ್ನಿ ಅಪಘಾತ | ಸುಟ್ಟು ಕರಕಲವಾದ ದಾಖಲೆಗಳು

ಮಂಗಳೂರು : ವಾಣಿಜ್ಯ ಕಟ್ಟಡದರಲ್ಲಿರುವ ಬ್ಯಾಂಕ್‌ ಗೆ  ಬೆಂಕಿ ಸಂಭವಿಸಿರುವ ಘಟನೆ ಬಂಟ್ಸ್ ಹಾಸ್ಟೆಲ್ ಬಳಿಯ ಕರಂಗಲಪಾಡಿಯ ಬಳಿ ಇಂದು ಘಟನೆ  ನಡೆದಿದೆ. ಶಾರ್ಟ್ ಸರ್ಕೀಟ್‌ನಿಂದ ಬ್ಯಾಂಕ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬ್ಯಾಂಕ್‌ನಲ್ಲಿ ಹೊಗೆ ಆವರಿಸಿಕೊಂಡಿದೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಸಿಬ್ಬಂದಿಗಳು ಹೊರ ಬಂದರು. ಮಧ್ಯಾಹ್ನವಾದ್ದರಿಂದ ಗ್ರಾಹಕರ ಸಂಖ್ಯೆಯೂ ಕಡಿಮೆ ಇತ್ತು. ಹಾಗಾಗಿ ದೊಡ್ಡ ಮಟ್ಟದ ಅನಾಹುತ ತಪ್ಪಿದೆ. ಆದರೂ, ಈ ಬೆಂಕಿ ಅವಘಡದಿಂದಾಗಿ ಬ್ಯಾಂಕ್‌ನಲ್ಲಿದ್ದ ದಾಖಲೆಗಳು ಸುಟ್ಟುಹೋಗಿದೆ. ಘಟನಾ ಸ್ಥಳಕ್ಕೆ ತಕ್ಷಣವೇ ಅಗ್ನಿ ಶಾಮಕ ದಳದ ಸಿಬಂದಿ ಧಾವಿಸಿದ್ದು, ಕಾರ್ಯಾಚರಣೆ […]

ಬ್ಯಾಂಕ್‌ ನಲ್ಲಿ ಅಗ್ನಿ ಅಪಘಾತ | ಸುಟ್ಟು ಕರಕಲವಾದ ದಾಖಲೆಗಳು Read More »

ಮಾ.2 : ಪ್ರತಿಷ್ಠಿತ ಆಲಂಕಾರು ಸಿ.ಎ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ | ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಧಿಕೃತ ಅಭ್ಯರ್ಥಿಗಳನ್ನೇ ಗೆಲ್ಲಿಸಿ : ವೆಂಕಟ್ ವಳಲಂಬೆ | ಆಲಂಕಾರು ಸಿಎ ಬ್ಯಾಂಕ್‍ ನಲ್ಲಿ ಬಂಡಾಯದ ಕರಿನೆರಳು

ಪುತ್ತೂರು: ಪ್ರತಿಷ್ಠಿತ ಆಂಕಾರು ಸಿ.ಎ. ಬ್ಯಾಂಕ್‍ ಆಡಳಿತ ಮಂಡಳಿ ಚುನಾವಣೆಗೆ ದಿನನಿಗದಿಯಾಗಿದ್ದು, ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯಿಂದ ಅಧಿಕೃತವಾಗಿ ಈಗಾಗಲೇ 12 ಮಂದಿಯನ್ನು ಚುನಾವಣಾ ಕಣಕ್ಕೆ ಇಳಿಸಲಾಗಿದೆ. ಈ ನಡುವೆ ಬಿಜೆಪಿಯ ಮತ್ತೊಂದು ತಂಡ ಸಹಕಾರ ಭಾರತಿಗೆ ವಿರುದ್ಧವಾಗಿ 12 ಮಂದಿಯನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಸಹಕಾರ ಭಾರತಿಯ ಅಧಿಕೃತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿ ಸುಳ್ಯ ಬಿಜೆಪಿ ಮಂಡಲದ ಅಧ್ಯಕ್ಷ ವೆಂಕಟ್‍ ವಳಲಂಬೆ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಳ್ಯ ಹಾಗೂ ಕಡಬ ವ್ಯಾಪ್ತಿಯನ್ನೊಳಗೊಂಡಿರುವ ಕಡಬ ತಾಲೂಕಿನ

ಮಾ.2 : ಪ್ರತಿಷ್ಠಿತ ಆಲಂಕಾರು ಸಿ.ಎ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ | ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಧಿಕೃತ ಅಭ್ಯರ್ಥಿಗಳನ್ನೇ ಗೆಲ್ಲಿಸಿ : ವೆಂಕಟ್ ವಳಲಂಬೆ | ಆಲಂಕಾರು ಸಿಎ ಬ್ಯಾಂಕ್‍ ನಲ್ಲಿ ಬಂಡಾಯದ ಕರಿನೆರಳು Read More »

ಕಾಣಿಯೂರು: ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 25ನೇ ವರ್ಷದ ಮಹಾಶಿವರಾತ್ರಿ “ರಜತ ಪಥ” | ವಿವಿಧ ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮ | ಶ್ರೀ ದೇವರಿಗೆ ರಜತ ಕವಚ ಸಮರ್ಪಣೆ

ಕಡಬ: ತಾಲೂಕಿನ ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 25ನೇ ವರ್ಷದ ಮಹಾಶಿವರಾತ್ರಿ ಉತ್ಸವ ‘ರಜತ ಪಥ’ ಬುಧವಾರ ನಡೆಯಿತು. ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಬೆಳಿಗ್ಗೆ 6.30 ರಿಂದ ಅರ್ಧ ಏಕಾಹ ಭಜನೆ, ಬ್ರಹ್ಮಶ್ರೀ ನಾಗೇಶ್‍ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 7.30 ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಏಕಾದಶ ರುದ್ರಾಭಿಷೇಕ, ಶ್ರೀ ಪಂಚಲಿಂಗೇಶ್ವರ ದೇವರಿಗೆ ರಜತ ಕವಚ ಸಮರ್ಪಣೆ, ಶ್ರೀ ರುದ್ರಯಾಗದ ಪ್ರಾರಂಭ, ಮಧ್ಯಾಹ್ನ 12.30 ಕ್ಕೆ ರುದ್ರ ಯಾಗದ ಪೂರ್ಣಾಹುತಿ, ಮಹಾಪೂಜೆ,

ಕಾಣಿಯೂರು: ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 25ನೇ ವರ್ಷದ ಮಹಾಶಿವರಾತ್ರಿ “ರಜತ ಪಥ” | ವಿವಿಧ ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮ | ಶ್ರೀ ದೇವರಿಗೆ ರಜತ ಕವಚ ಸಮರ್ಪಣೆ Read More »

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಕಚೇರಿಗೆ ಬಾಂಬ್‌ ಬೆದರಿಕೆ| ಪಾಕಿಸ್ಥಾನದ ಮೊಬೈಲ್‌ ನಂಬರ್‌ನಿಂದ ಬಂದ ಬೆದರಿಕೆ ಸಂದೇಶ

ಮುಂಬಯಿ: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕಚೇರಿಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಪಾಕಿಸ್ಥಾನಿ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಾಕಿಸ್ಥಾನದ ಸಂಖ್ಯೆಯಿಂದ ವರ್ಲಿ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಈ ಸಂದೇಶ ಕಳುಹಿಸಲಾಗಿದೆ. ಇದು ಗಂಭೀರ ಭದ್ರತಾ ಕಳವಳ ಹುಟ್ಟುಹಾಕಿದೆ. ಮುಂಬಯಿ ಪೊಲೀಸರು ತ್ವರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಸಂದೇಶದ ಮೂಲವನ್ನು ಪತ್ತೆಹಚ್ಚಲು ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸಿಎಂಒ ಮತ್ತು ಇತರ ಪ್ರಮುಖ ಸರ್ಕಾರಿ ಕಟ್ಟಡಗಳ ಸುತ್ತಲೂ ಭದ್ರತೆಯನ್ನು

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಕಚೇರಿಗೆ ಬಾಂಬ್‌ ಬೆದರಿಕೆ| ಪಾಕಿಸ್ಥಾನದ ಮೊಬೈಲ್‌ ನಂಬರ್‌ನಿಂದ ಬಂದ ಬೆದರಿಕೆ ಸಂದೇಶ Read More »

ಪೋಕ್ಸೋ ಕೇಸ್‌ : ಯಡಿಯೂರಪ್ಪ ಖುದ್ದು ಹಾಜರಾತಿಗೆ ಸಮನ್ಸ್‌

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಮಾಜಿ  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ 1ನೇ ತ್ವರಿತಗತಿ  ನ್ಯಾಯಾಲಯ ಮಾರ್ಚ್ 15ಕ್ಕೆ ನಿಗದಿಪಡಿಸಿದೆ.  ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಆರೋಪ ಪಟ್ಟಿಯ ವಿಚಾರಣೆಗೆ ಕೋರ್ಟ್ ಸಮ್ಮತಿಸಿದ್ದು, ಮಾರ್ಚ್ 15ರಂದು ಖುದ್ದಾಗಿ ಹಾಜರಾಗುವಂತೆ ಯಡಿಯೂರಪ್ಪ ಹಾಗೂ ಇತರ ಆರೋಪಿಗಳಿಗೆ ಸಮನ್ಸ್ ನೀಡಿದೆ. ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ಕೆಲವೇ ದಿನಗಳ ಹಿಂದಷ್ಟೇ ಕರ್ನಾಟಕ ಹೈಕೋರ್ಟ್​ನಲ್ಲಿ ರಿಲೀಫ್ ದೊರೆತಿತ್ತು. ಪ್ರಕರಣ ರದ್ದತಿ ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ

ಪೋಕ್ಸೋ ಕೇಸ್‌ : ಯಡಿಯೂರಪ್ಪ ಖುದ್ದು ಹಾಜರಾತಿಗೆ ಸಮನ್ಸ್‌ Read More »

ಮಹಾಶಿವರಾತ್ರಿಯಂದು ಶಾಲೆಯ ಸೊತ್ತುಗಳನ್ನು  ಧ್ವಂಸ ಮಾಡಿದ ವಿದ್ಯಾರ್ಥಿಗಳು

ಕಡಬ : ವಿದ್ಯಾರ್ಥಿಗಳು ಮಹಾಶಿವರಾತ್ರಿಯಂದು ಹೂವಿನ ಚಟ್ಟಿ ಹಾಗೂ ಇನ್ನೀತರ ವಸ್ತುಗಳನ್ನು ಹಗಲು ವೇಳೆಯಲ್ಲಿ ಧ್ವಂಸ ಮಾಡಿರುವ ಘಟನೆ ಅಲಂಕಾರು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ನಡೆದಿದೆ. ಶಾಲೆಯ ಹೂವಿನ ಗಿಡ, ಹೂವಿನ ಚಟ್ಟಿ, ವಾಲಿಬಾಲ್ ನೆಟ್ ಹಾಳುಮಾಡಿದ್ದಲ್ಲದೇ, ಕಸದ ತೊಟ್ಟಿಯಲ್ಲಿದ್ದ ಕಸವನ್ನು ಚೆಲ್ಲಿ ಪಪ್ಪಾಯ ಗಿಡವನ್ನು ನಾಶ ಮಾಡಿದ್ದಾರೆ. ಶಾಲಾ ನೋಟಿಸ್ ಬೋರ್ಡ್‌ ಗೆ ಕೂಡ ಹಾನಿ ಮಾಡಲಾಗಿದ್ದು, ಶಾಲೆಯ ಬಾಳೆಗಿಡದಲ್ಲಿದ್ದ ಗೊನೆಯನ್ನು ಕಡಿದು ಶಾಲಾ ಆವರಣದಲ್ಲಿ ಹಾಕಿದಲ್ಲದೆ,  ಶೌಚಾಲಯದ ಟ್ಯಾಪ್ ಸಹ ಮುರಿದು ಹಾಕಿದ್ದಾರೆ. ಶಾಲಾ

ಮಹಾಶಿವರಾತ್ರಿಯಂದು ಶಾಲೆಯ ಸೊತ್ತುಗಳನ್ನು  ಧ್ವಂಸ ಮಾಡಿದ ವಿದ್ಯಾರ್ಥಿಗಳು Read More »

ಪೆರ್ನೆ ಶೌರ್ಯ ವಿಪತ್ತು  ನಿರ್ವಹಣಾ ಘಟಕದಿಂದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ  ದೇವಸ್ಥಾನದಲ್ಲಿ  ಸ್ವಚ್ಛತಾ ಕಾರ್ಯ

ಉಪ್ಪಿನಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಭಿವೃದ್ಧಿ ಯೋಜನೆ   ಪೆರ್ನೆ ಶೌರ್ಯ ವಿಪತ್ತು  ನಿರ್ವಹಣಾ  ಘಟಕದಿಂದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ  ದೇವಸ್ಥಾನದಲ್ಲಿ  ಸ್ವಚ್ಛತಾ ಕಾರ್ಯ ಮಾಡಿದರು. ಮಹಾಶಿವರಾತ್ರಿಯ  ದಿನ  2 ಮಖೆ  ಉತ್ಸವದ ಮರುದಿನ   ಫೆ. 27 ಗುರುವಾರದಂದು  ದೇವಸ್ಥಾನದ  ಸುತ್ತ ಮುತ್ತ  ಸ್ವಚ್ಛತೆಯನ್ನು  ಮಾಡಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಭಿವೃದ್ಧಿ ಯೋಜನೆ   ಪೆರ್ನೆ ಶೌರ್ಯ ವಿಪತ್ತು  ನಿರ್ವಹಣಾ  ಘಟಕದ  ಸದಸ್ಯರಾದ  ಗೋಪಾಲ, ರಮೇಶ, ಕೇಶವ, ಕೃಷ್ಣಪ್ಪ, ಅಶೋಕ, ಮಮತಾ, ಸುನಂದಾ, ಚಂದ್ರಾವತಿ, ಜಗದೀಶ, ಶೀನಪ್ಪ, ವೆಂಕಪ್ಪ,

ಪೆರ್ನೆ ಶೌರ್ಯ ವಿಪತ್ತು  ನಿರ್ವಹಣಾ ಘಟಕದಿಂದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ  ದೇವಸ್ಥಾನದಲ್ಲಿ  ಸ್ವಚ್ಛತಾ ಕಾರ್ಯ Read More »

14 ವರ್ಷದ ಬಾಲಕನ ಜೊತೆ ಓಡಿಹೋದ 35ರ ಹರೆಯದ ಮಹಿಳೆ!

ಮಗನ ವಯಸ್ಸಿನ ಬಾಲಕನ ಜೊತೆ ವಿವಾಹಿತೆಯ ಲವ್‌ ತಿರುವನಂತಪುರ: 35 ವರ್ಷದ ವಿವಾಹಿತ ಮಹಿಳೆಯೊಬ್ಬಳು ತನ್ನ ಮಗನ ವಯಸ್ಸಿನ ಬಾಲಕನ ಜೊತೆ ಓಡಿಹೋದ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ಸಂಭವಿಸಿದೆ. ಆಕೆ ತನ್ನ ಮಗನ ಸ್ನೇಹಿತನ ಜತೆ ಓಡಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಪಾಲಕ್ಕಾಡ್‌ನ ಅಲತೂರ್‌ನ ಬಾಲಕ ಫೆಬ್ರವರಿ 25ರಂದು ಶಾಲೆಗೆ ಹೋದವನು ಮನೆಗೆ ಹಿಂದಿರುಗಿರಲಿಲ್ಲ, ತನಿಖೆ ನಡೆಸಿದಾಗ ಅವನು ಮಹಿಳೆಯೊಂದಿಗೆ ಓಡಿ ಹೋಗಿದ್ದಾನೆ ಎಂಬುದು ತಿಳಿದು ಬಂದಿದೆ. ಆಲತ್ತೂರು ಪೊಲೀಸರು ಬಾಲಕ ಮತ್ತು ಮಹಿಳೆಯನ್ನು ಎರ್ನಾಕುಲಂನಲ್ಲಿ ಪತ್ತೆಹಚ್ಚಿದ್ದು,

14 ವರ್ಷದ ಬಾಲಕನ ಜೊತೆ ಓಡಿಹೋದ 35ರ ಹರೆಯದ ಮಹಿಳೆ! Read More »

ಒಂದು ತಿಂಗಳು ಶಿರಾಡಿ ಘಾಟಿ ಬಂದ್‌?

ಚತುಷ್ಪಥ ಕಾಮಗಾರಿಗಾಗಿ ವಾಹನ ಸಂಚಾರ ನಿಷೇಧಿಸಲು ಪ್ರಸ್ತಾವ ಮಂಗಳೂರು: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿ ಘಾಟಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು ಜೂ.30ರೊಳಗೆ ಪೂರ್ಣಗೊಳಿಸಲು ನಿರ್ಧರಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕನಿಷ್ಠ ಒಂದು ತಿಂಗಳು ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸ್ಪಂದಿಸಿ ಹಾಸನ ಜಿಲ್ಲಾಡಳಿತ ಮಾ.15ರಿಂದ ಏಪ್ರಿಲ್‌ ಅಂತ್ಯದವರೆಗೆ ಶಿರಾಡಿಯಲ್ಲಿ ವಾಹನ ಸಂಚಾರ ನಿರ್ಬಂಧಿಸುವ ಸಾಧ್ಯತೆಯಿದೆ. ಸಂಸದ ಶ್ರೇಯಸ್‌ ಪಟೇಲ್‌ ಗುರುವಾರ ಕಾಮಗಾರಿ ಪರಿವೀಕ್ಷಣೆ ನಡೆಸಿದ ವೇಳೆ ಕಾಮಗಾರಿಯನ್ನು ತ್ವರಿತವಾಗಿ

ಒಂದು ತಿಂಗಳು ಶಿರಾಡಿ ಘಾಟಿ ಬಂದ್‌? Read More »

ಬಜ್ಪೆಯಲ್ಲಿ ಕಾಂತೇರಿ ಜುಮಾದಿ V/S ಎಂಎಸ್‌ಇಝಡ್‌ ಕಂಪನಿ : ದೈವಸ್ಥಾನ ಉಳಿಸಲು ಹೋರಾಟ

800 ವರ್ಷ ಪುರಾತನ ದೈವಸ್ಥಾನದ ಆರಾಧನೆಗೆ ತಡೆಯೊಡ್ಡಿದ ಅಧಿಕಾರಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ ಮಂಗಳೂರು : ಬಜ್ಪೆ ಸಮೀಪ ಇರುವ ಕಾಂತೇರಿ ಜುಮಾದಿ ದೈವಸ್ಥಾನದಲ್ಲಿ ಆರಾಧನೆಗೆ ತಡೆಯೊಡ್ಡಿರುವ ಮಂಗಳೂರು ವಿಶೇಷ ಆರ್ಥಿಕ ವಲಯ (ಎಂಎಸ್‌ಇಝಡ್‌) ಅಧಿಕಾರಿಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಾಂತೇರಿ ಜುಮಾದಿ ದೈವಸ್ಥಾನ ಉಳಿಸಿ ಹೋರಾಟಕ್ಕೆ ತಯಾರಿ ನಡೆಯುತ್ತಿದೆ. ನಿನ್ನೆ ಮೊನ್ನೆ ಬಂದ ಎಂಎಸ್‌ಇಝಡ್‌ ಅಧಿಕಾರಿಗಳು 800 ವರ್ಷಕ್ಕೂ ಹಿಂದಿನ ದೈವದ ಆಚರಣೆ ಮತ್ತು ಆರಾಧನೆಗೆ ತಡೆಯೊಡ್ಡಿರುವುದು ಜನರ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿದೆ. ಕಂಪನಿಯ

ಬಜ್ಪೆಯಲ್ಲಿ ಕಾಂತೇರಿ ಜುಮಾದಿ V/S ಎಂಎಸ್‌ಇಝಡ್‌ ಕಂಪನಿ : ದೈವಸ್ಥಾನ ಉಳಿಸಲು ಹೋರಾಟ Read More »

error: Content is protected !!
Scroll to Top