ರಾಜ್ಯ

ಉಗ್ರರಿಗೆ ನೆರವು ನೀಡುತ್ತಿದ್ದ ವೈದ್ಯ, ಎಎಸ್‌ಐ ಬಂಧನ

ಐದು ಕಡೆ ಎನ್‌ಐಎ ದಾಳಿ; ಉಗ್ರ ಜಾಲದ ಮಹತ್ವದ ಸುಳಿವು ಪತ್ತೆ ಬೆಂಗಳೂರು : ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಬೆಂಗಳೂರು, ಕೋಲಾರದಲ್ಲಿ ಒಟ್ಟು ಐದು ಕಡೆ ದಾಳಿ ಮಾಡಿ ಉಗ್ರರಿಗೆ ನೆರವಾಗುತ್ತಿದ್ದ ಮೂವರನ್ನು ಬಂಧಿಸಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಆಗಿದ್ದ ಚಾಂದ್ ಪಾಷಾ ಅನೀಸ್ ಹಾಗೂ ಫಾತಿಮಾ ಎನ್ನುವವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಉಗ್ರರ ಚಟುವಟಿಕೆಗೆ ನೆರವು ನೀಡುತ್ತಿದ್ದ ಆರೋಪದಡಿ ಮೂವರನ್ನು […]

ಉಗ್ರರಿಗೆ ನೆರವು ನೀಡುತ್ತಿದ್ದ ವೈದ್ಯ, ಎಎಸ್‌ಐ ಬಂಧನ Read More »

ನನ್ನ ಜೀವ ಇರುವುದೇ ಬಿಜೆಪಿಯಲ್ಲಿ : ಈಶ್ವರಪ್ಪ | ಹಲವು ಪಕ್ಷದವರು ನನಗೆ ಈಗಾಗಲೇ ಆಫರ್ ನೀಡಿದ್ದಾರೆ | ಬಿಜೆಪಿ ಬಿಟ್ಟು ಬೇರೆ ಪಕ್ಷಗಳನ್ನು ಸೇರುವ ಮಾತೇ ಇಲ್ಲ

ಬಳ್ಳಾರಿ: ಮಾಧ್ಯಮ ಗಳ ಮೂಲಕ ನನ್ನನ್ನು ಬಿಜೆಪಿಗೆ ‌ಸೇರ್ಪಡೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುವುದನ್ನು ನೋಡಿದ್ದೇನೆ. ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಅವರು ಮಾತನಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ನಡೆದ ವಿದ್ಯಮಾನದ ಬಗ್ಗೆ ಮಾಜಿ ಡಿ.ಸಿ.ಎಂ. ಕೆ. ಎಸ್. ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಜೀವ ಇರುವುದೇ ಬಿಜೆಪಿಯಲ್ಲಿ. ಭಾರತೀಯ ಜನತಾ ಪಕ್ಷವನ್ನು ಬಿಟ್ಟು ನಾನೆಲ್ಲಿ ಹೋಗಲಿ ಎಂದು ಹೇಳಿದ್ದಾರೆ. ನನಗೆ ಬೇರೆ ಪಕ್ಷಗಳಿಂದಲೂ ಆಫರ್ ಬಂದಿತ್ತು. ಸಮಾಜವಾದಿ ಪಕ್ಷದ ಅಖಿಲೀಶ್ ಆರದವ್

ನನ್ನ ಜೀವ ಇರುವುದೇ ಬಿಜೆಪಿಯಲ್ಲಿ : ಈಶ್ವರಪ್ಪ | ಹಲವು ಪಕ್ಷದವರು ನನಗೆ ಈಗಾಗಲೇ ಆಫರ್ ನೀಡಿದ್ದಾರೆ | ಬಿಜೆಪಿ ಬಿಟ್ಟು ಬೇರೆ ಪಕ್ಷಗಳನ್ನು ಸೇರುವ ಮಾತೇ ಇಲ್ಲ Read More »

ಅಕ್ರಮ ವಲಸಿಗರ ಮೇಲೆ ಮೃದು ಧೋರಣೆ ಇಲ್ಲ: ಡಾ. ಜಿ. ಪರಮೇಶ್ವರ್

ಅಕ್ರಮ ವಲಸಿಗರನ್ನು ಮತಬ್ಯಾಂಕ್‌ಗೆ ಬಳಸುವ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿಲ್ಲ ಬೆಂಗಳೂರು: ಸುಮಾರು 200 ಕ್ಕೂ ಅಧಿಕ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಕಳೆದ ಕೆಲವು ತಿಂಗಳುಗಳಲ್ಲಿ ರಾಜ್ಯದಿಂದ ಗಡೀಪಾರು ಮಾಡಿರುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ರಾಜ್ಯದಲ್ಲಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ವಲಸಿಗರ ವಿರುದ್ಧ ದೂರುಗಳು ಬಂದಿದ್ದು, ಅಕ್ರಮವಾಗಿ ಇಲ್ಲಿ ಬಂದು ನೆಲೆಸಿರುವವರನ್ನು ಗಡೀಪಾರು ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆ ನಿರಂತರ ಎಂದು ಅವರು ಮಾಹಿತಿ ನೀಡಿದ್ದಾರೆ. ಅಕ್ರಮ ವಲಸಿಗರ ಬಗ್ಗೆ ಪ್ರಾದೇಶಿಕ

ಅಕ್ರಮ ವಲಸಿಗರ ಮೇಲೆ ಮೃದು ಧೋರಣೆ ಇಲ್ಲ: ಡಾ. ಜಿ. ಪರಮೇಶ್ವರ್ Read More »

ರಾಷ್ಟ್ರ ರಾಜಕಾರಣಕ್ಕೆ ಹೋಗಲಾರೆ : ಸಿದ್ದರಾಮಯ್ಯ ಸ್ಪಷ್ಟನೆ

ಮುಖ್ಯಮಂತ್ರಿ ಬದಲಾಯಿಸುವ ಹೈಕಮಾಂಡ್‌ ಪ್ರಯತ್ನಕ್ಕೆ ಪರೋಕ್ಷ ಎಚ್ಚರಿಕೆ ಬೆಂಗಳೂರು: ತಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಈ ಮೂಲಕ ರಾಷ್ಟ್ರ ರಾಜಕಾರಣಕ್ಕೆ ತನ್ನನ್ನು ಸಾಗಹಾಕಿ ಮುಖ್ಯಮಂತ್ರಿ ಹುದ್ದೆಯನ್ನು ಬದಲಾಯಿಸುವ ಹೈಕಮಾಂಡ್‌ ಪ್ರಯತ್ನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರನ್ನು ಎಐಸಿಸಿಯಲ್ಲಿ ಒಬಿಸಿ ಸಲಹಾ ಮಂಡಳಿ ಸೃಷ್ಟಿಸಿ ಅದಕ್ಕೆ ಅಧ್ಯಕ್ಷರನ್ನಾಗಿ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಅಧ್ಯಕ್ಷ ಹುದ್ದೆ ಬೇಡ ಎಂದು ಸಿದ್ದರಾಮಯ್ಯನವರು ಹೇಳಿದ ಬಳಿಕ ಅವರನ್ನು ಈ ಮಂಡಳಿಯ ಸದಸ್ಯರನ್ನಾಗಿ ಮಾಡಲಾಗಿತ್ತು. ಇದು ಅವರನ್ನು

ರಾಷ್ಟ್ರ ರಾಜಕಾರಣಕ್ಕೆ ಹೋಗಲಾರೆ : ಸಿದ್ದರಾಮಯ್ಯ ಸ್ಪಷ್ಟನೆ Read More »

ಎತ್ತಿಹೊಳೆ ಯೋಜನೆಗೆ ಹೆಚ್ಚುವರಿ ಅರಣ್ಯ ಭೂಮಿ ಬಳಕೆಗಿಲ್ಲ ಅನುಮತಿ

ಈಗಾಗಲೇ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ಅರಣ್ಯ ನಾಶವಾಗಿದೆ ಎಂದ ಪರಿಸರ ಸಚಿವಾಲಯ ನವದೆಹಲಿ: ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ 23 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆಗೆ ಹೆಚ್ಚುವರಿಯಾಗಿ 423 ಎಕರೆ ಅರಣ್ಯ ಬಳಕೆಗೆ ಅನುಮೋದನೆ ನೀಡಬೇಕೆಂಬ ಕರ್ನಾಟಕ ಸರ್ಕಾರದ ಪ್ರಸ್ತಾವವನ್ನು ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ತಿರಸ್ಕರಿಸಿದೆ. ಗುರುತ್ವಾಕರ್ಷಣೆ ಕಾಲುವೆ ನಿರ್ಮಾಣಕ್ಕೆ ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ 432 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ನೀಡುವಂತೆ ಕೋರಿ ರಾಜ್ಯ ಸರ್ಕಾರ

ಎತ್ತಿಹೊಳೆ ಯೋಜನೆಗೆ ಹೆಚ್ಚುವರಿ ಅರಣ್ಯ ಭೂಮಿ ಬಳಕೆಗಿಲ್ಲ ಅನುಮತಿ Read More »

ವಾರದ ಆರು ದಿನ ಮೊಟ್ಟೆ ವಿತರಣೆ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

ಸೋಮವಾರ, ಶನಿವಾರ ಮೊಟ್ಟೆ ಕೊಡದ ಕುರಿತು ದೂರು ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ 6 ದಿನ ಮೊಟ್ಟೆ ವಿತರಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನಿವಾರಿಸುವ ಉದ್ದೇಶದಿಂದ 1ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ವಾರದ 6 ದಿನ ಮೊಟ್ಟೆ ಕೊಡುವ ಕಾರ್ಯಕ್ರಮ ಸರ್ಕಾರ ಘೋಷಣೆ ಮಾಡಿದೆ. ಕೆಲವು ಶಾಲೆಗಳಲ್ಲಿ ಎಸ್‌ಡಿಎಂಸಿ ಸೂಚನೆ ಮೇರೆಗೆ 3 ದಿನ ಮೊಟ್ಟೆ, 3 ದಿನ ಬಾಳೆಹಣ್ಣು ಕೊಡುತ್ತಿದ್ದಾರೆ. ಸೋಮವಾರ ಮತ್ತು ಶನಿವಾರ

ವಾರದ ಆರು ದಿನ ಮೊಟ್ಟೆ ವಿತರಣೆ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ Read More »

ಕುಡುಪು ಗುಂಪು ಹತ್ಯೆ ಪ್ರಕರಣ : ಆಶ್ರಫ್‌ ಕುಟುಂಬಸ್ಥರಿಗೆ ಪರಿಹಾರ ವಿತರಣೆ

ಸಚಿವ ಜಮೀರ್‌ 10 ಲ.ರೂ. ; ಸ್ಪೀಕರ್‌ ಯು.ಟಿ.ಖಾದರ್‌ 5 ಲ.ರೂ. ವೈಯಕ್ತಿಕ ನೆಲೆಯಲ್ಲಿ ಕೊಡುಗೆ ಮಂಗಳೂರು: ನಗರದ ಕುಡುಪು ಸಮೀಪ ಮೈದಾನದಲ್ಲಿ ನಡೆದಿದ್ದ ಗುಂಪು ಹತ್ಯೆಯಲ್ಲಿ ಸಾವನ್ನಪ್ಪಿದ ಕೇರಳದ ವಯನಾಡಿನ ಅಶ್ರಫ್ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಧನ ವಿತರಿಸಿದೆ. ನಿನ್ನೆ ರಾಜ್ಯ ಕಾಂಗ್ರೆಸ್ ನಿಯೋಗ ಆಶ್ರಫ್‌ ಕುಟುಂಬಸ್ಥರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದು, ಈ ಸಂದರ್ಭದಲ್ಲಿ ಪರಿಹಾರದ ಚೆಕ್‌ ಹಸ್ತಾಂತರಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಕೆ.ಸಿ.ವೇಣುಗೋಪಾಲ್ ಕೋರಿಕೆಯಂತೆ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಬೆಂಗಳೂರು ನಿವಾಸದಲ್ಲಿ

ಕುಡುಪು ಗುಂಪು ಹತ್ಯೆ ಪ್ರಕರಣ : ಆಶ್ರಫ್‌ ಕುಟುಂಬಸ್ಥರಿಗೆ ಪರಿಹಾರ ವಿತರಣೆ Read More »

ಹೃದಯಾಘಾತಕ್ಕೆ ಕೊರೋನಾ ‌ಲಸಿಕೆ ಕಾರಣವಲ್ಲ : ದಿನೇಶ್ ಗುಂಡೂರಾವ್ | ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಕಡ್ಡಾಯ | ಹಾರ್ಟ್ ಅಟ್ಯಾಕ್‌ಗೆ ‌ಸಂಬಂಧಿಸಿದಂತೆ ಪ್ರತ್ಯೇಕ ಪಠ್ಯ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆಯಿಂದಾಗಿ ಹೃದಯಾಘಾತ ಸಂಭವಿಸಿರುವುದಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಸಭೆ ನಡೆಸಿ‌ ಮಾತನಾಡಿದ ಅವರು, ಕೊರೋನಾ‌ದಿಂದ ಸ್ವಲ್ಪ ಮಟ್ಟಿಗೆ ಹೃದಯಾಘಾತಗಳಂತಹ ಅಪಾಯ ಹೆಚ್ಚಾಗಿದೆ. ಆದರೆ ಕೊರೋನಾ ಬಂದ ಒಂದು ವರ್ಷದೊಳಗೆ ರಕ್ತನಾಳ ಬ್ಲಾಕ್ ಆಗುವ ಸಂಭವ ಹೆಚ್ಚು. ಮೂರು ವರ್ಷಗಳ ನಂತರ ಅದರ ಸಾಧ್ಯತೆ ಕಡಿಮೆ. ಹೃದಯಾಘಾತ ಪ್ರಕರಣಗಳಿಗೆ ಕೊರೋನಾ ‌ಲಸಿಕೆ ಕಾರಣ ಅಲ್ಲ ಎಂದು ಅವರು ಹೇಳಿದ್ದಾರೆ. ಕೊರೋನಾ ‌ಲಸಿಕೆಯಿಂದ ಜನರಿಗೆ

ಹೃದಯಾಘಾತಕ್ಕೆ ಕೊರೋನಾ ‌ಲಸಿಕೆ ಕಾರಣವಲ್ಲ : ದಿನೇಶ್ ಗುಂಡೂರಾವ್ | ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಕಡ್ಡಾಯ | ಹಾರ್ಟ್ ಅಟ್ಯಾಕ್‌ಗೆ ‌ಸಂಬಂಧಿಸಿದಂತೆ ಪ್ರತ್ಯೇಕ ಪಠ್ಯ Read More »

ಹಿಂದುತ್ವದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? | ಹೇರ್‌ಸ್ಟೈಲ್ ಬಗ್ಗೆ ಟೀಕೆ ಮಾಡಿದವರಿಗೆ ಸಚಿವರು ಕೊಟ್ಟ ಉತ್ತರ ಹೇಗಿತ್ತು?

ಕೊಪ್ಪಳ: ಹಿಂದುತ್ವದ ಕುರಿತು ಮಾತನಾಡುವವರು ಬಾಯಿ ಮುಚ್ಚಿಕೊಂಡಿರಲಿ. ಹಿಂದುತ್ವ ಎನ್ನುವವರಿಗೆ ಗೊತ್ತಿರುವುದು ಬದನೆಕಾಯಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ. ಬಂಗಾರಪ್ಪ ಅವರು ಈ ಹಿಂದೆ ಹಳ್ಳಿಗಳಲ್ಲಿ ದೇಗುಲಗಳಲ್ಲಿ ಆರ್ಥಿಕ ಬಲ ತುಂಬಲು ಆರಾಧನಾ ಯೋಜನೆ ಆರಂಭ ಮಾಡಿದ್ದರು. ಈಗ ಅಜೀಂ ಪ್ರೇಮ್‌ಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ಹಣ ನೀಡಿದ್ದಾರೆ. ಆದರೆ ಇವರ್ಯಾರೂ ಜಾತಿ ನೋಡಿಲ್ಲ. ಮಕ್ಕಳಿಗೆ ಬಾಳೆಹಣ್ಣು, ಮೊಟ್ಟೆ ನೀಡಿದ್ದಾರೆ ಎಂದಿದ್ದಾರೆ. ಹಾಗೆಯೇ ಗ್ಯಾರಂಟಿ ಯೋಜನೆಗಳಿಂದ ಪುರುಷರಿಗೆ ಯಾವುದೇ ಬೇಸರ ಇಲ್ಲ ಎಂದು

ಹಿಂದುತ್ವದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? | ಹೇರ್‌ಸ್ಟೈಲ್ ಬಗ್ಗೆ ಟೀಕೆ ಮಾಡಿದವರಿಗೆ ಸಚಿವರು ಕೊಟ್ಟ ಉತ್ತರ ಹೇಗಿತ್ತು? Read More »

ಡ್ರಗ್ಸ್ ಪಾರ್ಟಿ ನಡೆದರೆ ಬಾಡಿಗೆಗೆ ಸ್ಥಳಾವಕಾಶ ಒದಗಿಸಿದ ಮಾಲೀಕನ ಮೇಲೆಯೂ ಕೇಸ್?

ಬೆಂಗಳೂರು: ಡ್ರಗ್ಸ್ ದಂಧೆಗೆ, ಸೇವನೆಗೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಈಶಾನ್ಯ ವಿಭಾಗ ಪೊಲೀಸರು ರೆಸಾರ್ಟ್, ಹೋಂಸ್ಟೇ, ಹೊಟೇಲ್ ಸೇರಿದಂತೆ ಇನ್ನಿತರ ಪಾರ್ಟಿ ಮಾಡುವ ಸ್ಥಳಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ಹೊರವಲಯದಲ್ಲಿರುವ ರೆಸಾರ್ಟ್‌ಗಳು, ಹೊಟೇಲ್‌ಗಳು, ಹೋಮ್‌ಸ್ಟೇ‌ಗಳಲ್ಲಿ ಪಾರ್ಟಿಗಾಗಿ ಬುಕ್ ಮಾಡುವ ಕೆಲ ಆಯೋಜಕರು, ಅಲ್ಲಿ ಮಾದಕ ದ್ರವ್ಯಗಳಿಗಾಗಿಯೂ ವ್ಯವಸ್ಥೆ ಮಾಡುತ್ತಾರೆ‌. ಡ್ರಗ್ಸ್ ಸೇವನೆಯಂತಹ ಸಮಾಜ ಘಾತುಕ ಕೆಲಸಗಳೂ ನಡೆಯುತ್ತಿವೆ. ಈ ಹಿನ್ನೆಲೆ ಪಾರ್ಟಿಗಳಿಗೆ ತಮ್ಮ ಕಟ್ಟಡಗಳು, ಸ್ಥಳಗಳನ್ನು ಬಿಟ್ಟು ಕೊಡುವವರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಹೋಂಸ್ಟೇ ನಡೆಸುವವರು

ಡ್ರಗ್ಸ್ ಪಾರ್ಟಿ ನಡೆದರೆ ಬಾಡಿಗೆಗೆ ಸ್ಥಳಾವಕಾಶ ಒದಗಿಸಿದ ಮಾಲೀಕನ ಮೇಲೆಯೂ ಕೇಸ್? Read More »

error: Content is protected !!
Scroll to Top