ಅಜ್ಮೀರ್ ದರ್ಗಾ ಕುರಿತು ಹೊಸ ವಿವಾದ ಸೃಷ್ಟಿ: ಶಿವಾಲಯವನ್ನು ದರ್ಗಾವಾಗಿ ಪರಿವರ್ತಿಸಲಾಗಿದೆ ಎಂದು ಕೋರ್ಟ್ಗೆ ಅರ್ಜಿ
ರಾಜಸ್ಥಾನ: ಅಜ್ಮೀರ್ ದರ್ಗಾ ಪ್ರದೇಶವು ಮೂಲತಃ ಶಿವನಿಗೆ ಸಮರ್ಪಿತವಾದ ದೇವಾಲಯವಾಗಿತ್ತು ಎಂಬ ಹೇಳಿಕೆಯೊಂದಿಗೆ ಅಜ್ಮೀರ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಇದು ಸದ್ಯ ಹೊಸ ವಿವಾದವೊಂದನ್ನು ಸೃಷ್ಠಿ ಮಾಡಿದೆ. ಬಲಪಂಥೀಯ ಸಂಘಟನೆ ಮಹಾರಾಣಾ ಪ್ರತಾಪ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜವರ್ಧನ್ ಸಿಂಗ್ ಪರ್ಮಾರ್ ಈ ಅರ್ಜಿ ಸಲ್ಲಿಕೆ ಮಾಡಿರುವುದಾಗಿದೆ. ಅಜ್ಮೀರ್ ಶಿವ ದೇವಾಲಯವನ್ನು ನಂತರದ ಕಾಲದಲ್ಲಿ ದರ್ಗಾವಾಗಿ ಪರಿವರ್ತನೆ ಮಾಡಲಾಗಿದೆ. ಬಹುಕಾಲದಿಂದಲೂ ನಾನು ಈ ವಿಚಾರವನ್ನು ಮುಂದಿಟ್ಟುಕೊಂಡು ಬಂದಿದ್ದು, ಆ ಪ್ರದೇಶದಲ್ಲಿ ಪುರಾತತ್ವ ಸಮೀಕ್ಷೆ ನಡೆಸುವಂತೆಯೂ ಅವರು […]










