ರಾಜ್ಯ

ರಾಜಭವನಕ್ಕೂ ಬಂದ ಬಾಂಬ್ ಬೆದರಿಕೆ ಕರೆ!!

ರಾಜ್ಯದ ಶಕ್ತಿ ಕೇಂದ್ರಗಳಲ್ಲಿ ಒಂದಾದ ರಾಜ ಭವನಕ್ಕೂ ಬಾಂಬ್‌ ಬೆದರಿಕೆ ಕರೆ ಬಂದಿದೆ. ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ನಿಗೂಢ ತಾಣದಿಂದ ಈಮೇಲ್‌ ಮಾಡಿ ಭಾರಿ ಆತಂಕಕ್ಕೆ ಕಾರಣವಾದ ಘಟನೆ ಬೆನ್ನಲ್ಲೇ ಇದೀಗ ರಾಜಭವನಕ್ಕೂ ಬಾಂಬ್ ಬೆದರಿಕೆ ಕರೆ ಬಂದಿದೆ. ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂದು ಸೋಮವಾರ ರಾತ್ರಿ 11.30ರ ಸುಮಾರಿಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಹೇಳಿದ್ದಾನೆಂದು ತಿಳಿದುಬಂದಿದೆ. ಬೆದರಿಕೆ ಕರೆ ಬಂದ ಕೂಡಲೇ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದ್ದು, ಕೂಡಲೇ […]

ರಾಜಭವನಕ್ಕೂ ಬಂದ ಬಾಂಬ್ ಬೆದರಿಕೆ ಕರೆ!! Read More »

ಇಬ್ಭಾಗವಾದ ಜೆ.ಡಿ.ಎಸ್.ಗೆ ಸಿ.ಕೆ. ನಾಣು ಅಧ್ಯಕ್ಷ!

ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡ  ಅವರಿಗೆ ಅಸಮಾಧಾನಿತ ಹಾಗೂ ಉಚ್ಛಾಟಿತ ನಾಯಕರು ಸೆಡ್ಡು ಹೊಡೆದಿದ್ದಾರೆ. ಸೋಮವಾರ ನಡೆದ ಸಭೆಯಲ್ಲಿ ಉಚ್ಛಾಟಿತ ನಾಯಕ ಸಿ.ಕೆ. ನಾಣು ಅವರನ್ನು ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರಿನ ಕೆ.ಜಿ. ಹಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಸಿ.ಎಂ. ಇಬ್ರಾಹಿಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿ.ಕೆ. ನಾಣು ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಸಿ.ಎಂ ಇಬ್ರಾಹಿಂ ಮಾಹಿತಿ ನೀಡಿದ್ದಾರೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಜೆಡಿಎಸ್ ನೂತನ

ಇಬ್ಭಾಗವಾದ ಜೆ.ಡಿ.ಎಸ್.ಗೆ ಸಿ.ಕೆ. ನಾಣು ಅಧ್ಯಕ್ಷ! Read More »

ಬ್ರಹ್ಮಚಾರಿಗಳ ಸಂಘಕ್ಕೆ ರಾಷ್ಟ್ರಾಧ್ಯಕ್ಷರಾಗ್ತಾರಾ ರಾಹುಲ್ ಗಾಂಧಿ!?

ರೈತರ ಮಕ್ಕಳಿಗೆ ಹೆಣ್ಣು ಕೊಡದ ಕಾರಣಕ್ಕೆ ಬೇಸತ್ತು ಜನವರಿಯಲ್ಲಿ ಚುಂಚನಗಿರಿಗೆ ಪಾದಯಾತ್ರೆ ನಡೆಸಿ ಅರಿವು ಮೂಡಿಸಲು ಬ್ರಹ್ಮಚಾರಿ ಸಂಘ ಪ್ಲಾನ್ ಮಾಡುತ್ತಿದೆ. ಚುಂಚನಗಿರಿ ಪಾದಯಾತ್ರೆಗೆ ಈಗಾಗಲೇ ನೋಂದಣಿ ಆರಂಭವಾಗಿದೆ. ರಾಹುಲ್ ಗಾಂಧಿಗೆ ಆಹ್ವಾನ! ಈ ಪಾದಯಾತ್ರೆಗೆ ಇನ್ನೂ ಮದುವೆಯಾಗದ ಸಂಸದ ರಾಹುಲ್ ಗಾಂಧಿಯನ್ನು ಕರೆಸಲು ಚಿಂತನೆ ನಡೆಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಹ್ಮಚಾರಿಗಳ ಸಂಘದ ಪ್ರಮುಖರಾದ ಮಲ್ಲೇಶ್ ತಿಳಿಸಿದ್ದಾರೆ. ಅಲ್ಲದೇ, ವೀರೇಶ್ ಅವರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಬ್ರಹ್ಮಚಾರಿಗಳಿಗೆ ಆಹ್ವಾನವನ್ನೂ ನೀಡಿದ್ದಾರೆ.

ಬ್ರಹ್ಮಚಾರಿಗಳ ಸಂಘಕ್ಕೆ ರಾಷ್ಟ್ರಾಧ್ಯಕ್ಷರಾಗ್ತಾರಾ ರಾಹುಲ್ ಗಾಂಧಿ!? Read More »

ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ!

ಬೆಳಗಾವಿ: ಒಂದೆಡೆ ರಾಜ್ಯದ ಸಮಸ್ಯೆಗಳ ಚರ್ಚೆಗಾಗಿ ಬೆಳಗಾವಿ ಅಧಿವೇಶನ ನಡೆಯುತ್ತಿದ್ದರೆ, ಅದೇ ಅಧಿವೇಶನ ನಡೆಯುತ್ತಿರುವ ಸೌಧದ ಹೊರಗಡೆ ರಾಜ್ಯವೇ ತಲೆತಗ್ಗಿಸುವ ಘಟನೆಯೊಂದು ನಡೆದಿದೆ. ಯುವಕನೊಬ್ಬ ಪ್ರೀತಿಸಿದ ಯುವತಿ ಜತೆಗೆ ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡು ಯುವತಿ ಸಂಬಂಧಿಕರು, ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿಹಾಕಿ, ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಅಮಾನವೀಯ ಘಟನೆಗೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮ ಸಾಕ್ಷಿಯಾಗಿದೆ. ವಂಟಮೂರಿ ಗ್ರಾಮದ ನಿವಾಸಿ ದುಂಡಪ್ಪ ಅಶೋಕ ನಾಯಕ್ ಟ್ರಕ್‌ ಡೈವರ್‌ ಆಗಿದ್ದಾನೆ. ಈತನ ತಾಯಿ ಕಮಲವ್ವ ಅವರ  ಮೇಲೆ

ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ! Read More »

ಮುರುಡೇಶ್ವರದಲ್ಲಿ ರಾಜ್ಯದ ಅತಿ ಉದ್ದದ ತೇಲುವ ಸೇತುವೆ!

ಮುರುಡೇಶ್ವರದಲ್ಲಿ ಪ್ರವಾಸಿಗರಿಗೆ ಸ್ಕೂಬಾ ಡೈವಿಂಗ್ ಮತ್ತು ಇತರ ಕಾರ್ಯಕ್ರಮಗಳ ಜೊತೆಗೆ ತೇಲುವ ಸೇತುವೆಯನ್ನು  ನಿರ್ಮಿಸಲಾಗಿದೆ. ನೀರಿನಲ್ಲಿ ಮುಳುಗುವ ಭಯದಿಂದ ಅನೇಕ ಪ್ರವಾಸಿಗರು ಆದಷ್ಟು ನೀರಿನಿಂದ ದೂರವೇ ಉಳಿಯುತ್ತಾರೆ. ಪ್ರವಾಸಿಗರು ಕೊಚ್ಚಿಕೊಂಡು ಹೋದ ಹಲವಾರು ನಿದರ್ಶನಗಳೂ ಇವೆ. ಅದರೆ, ಇದೆಲ್ಲದರ ಮಧ್ಯೆಯೇ ಪ್ರವಾಸಿಗರಿಗೆ ಉತ್ತಮ ಅನುಭವವನ್ನು ಒದಗಿಸಲೆಂದು ತೇಲುವ ಸೇತುವೆ ನಿರ್ಮಾಣ ಮಾಡಲಾಗಿದ್ದು, ಈ ಮೂಲಕ ಪ್ರವಾಸಿಗರು ಸಮುದ್ರದಲ್ಲಿ ಹೆಜ್ಜೆ ಹಾಕಬಹುದಾಗಿದೆ. ರಾಜ್ಯದಲ್ಲಿಯೇ ಅತಿ ಉದ್ಧದ ತೂಗು ಸೇತುವೆ ಇದೀಗ ಮುರುಡೇಶ್ವರದಲ್ಲಿ ನಿರ್ಮಾಣಗೊಂಡಿದೆ. 130 ಮೀಟರ್ ಉದ್ದದ ಈ

ಮುರುಡೇಶ್ವರದಲ್ಲಿ ರಾಜ್ಯದ ಅತಿ ಉದ್ದದ ತೇಲುವ ಸೇತುವೆ! Read More »

ಕ್ರೆಡಿಟ್‌ ಕಾರ್ಡ್‌ ನೆಪದಲ್ಲಿ ಹಿರಿಯ ನಾಗರಿಕರೋರ್ವರ ಸುಲಿಗೆ!

ಕೆನರಾ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಕೊಡಿಸುವುದಾಗಿ ಹಿರಿಯ ನಾಗರಿಕರೋರ್ವರನ್ನು ನಂಬಿಸಿ 4.77 ಲಕ್ಷ ರೂ. ಹಣ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋಡಿಚಿಕ್ಕನಹಳ್ಳಿ ನಿವಾಸಿ ಸತ್ಯನಾರಾಯಣ (70) ಸೈಬರ್‌ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಂಡವರು. ವಂಚನೆ ಸಂಬಂಧ ಇವರ ಪುತ್ರ ಸುರ್ಜಿತ್‌ ಕಾಮತ್‌ ನೀಡಿದ ದೂರಿನ ಮೇರೆಗೆ ಐಡಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಸತ್ಯನಾರಾಯಣ ಕಾಮತ್‌ ಅವರ ಮೊಬೈಲ್‌ಗೆ ಕರೆ ಮಾಡಿದ್ದ ಅಪರಿಚಿತರು, ತಾವು

ಕ್ರೆಡಿಟ್‌ ಕಾರ್ಡ್‌ ನೆಪದಲ್ಲಿ ಹಿರಿಯ ನಾಗರಿಕರೋರ್ವರ ಸುಲಿಗೆ! Read More »

12 ಎಕರೆ ಆಸ್ತಿಗಾಗಿ ವಕೀಲ ಈರಣ್ಣ ಗೌಡ ಕಗ್ಗೊಲೆ! | 3 ನಿಮಿಷ, 30ಕ್ಕೂ ಹೆಚ್ಚು ಬಾರಿ ಅಟ್ಯಾಕ್‌!! | ಹತ್ಯೆಯ ಮಾಸ್ಟರ್ ಮೈಂಡ್ ದಂಪತಿ ಅರೆಸ್ಟ್‌!!

ಕಲಬುರಗಿಯಲ್ಲಿ ವಕೀಲ ಈರಣ್ಣ ಮರ್ಡರ್‌ ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತರ ಕರ್ನಾಟಕವನ್ನೇ ನಡುಗಿಸಿದ ಭೀಭತ್ಸ ಕೃತ್ಯ. ಈ ಕೃತ್ಯದ ಮತ್ತೊಂದು ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಖತರ್ನಾಕ್ ದಂಪತಿ ಪೊಲೀಸರ ಅತಿಥಿಗಳಾಗಿದ್ದಾರೆ. ಕಲಬುರಗಿ  ಮಾತ್ರವಲ್ಲದೆ ಇಡೀ ರಾಜ್ಯದ ಜನ ಬೆಚ್ಚಿ ಬೀಳಿಸಿದ ಘಟನೆ ಇದು. ಸ್ವಲ್ಪವೂ ಕರುಣೆ, ದಯೆ ಇರದ ಮನಸ್ಥಿತಿಗಳು ವಕೀಲನನ್ನು ಮನಸೋ ಇಚ್ಛೆ ಕತ್ತರಿಸಿ ಕೊಂದು ಹಾಕಿದ್ದಾರೆ. ಡಿ. 7ರಂದು ಕಲಬುರಗಿಯಲ್ಲಿ ನಡೆದಿದ್ದ ವಕೀಲ ಈರಣ್ಣಗೌಡನ  ಹತ್ಯೆಗೆ ಜನ ಆತಂಕಕ್ಕೀಡಾಗಿದ್ದರು. ಏಕೆಂದರೆ

12 ಎಕರೆ ಆಸ್ತಿಗಾಗಿ ವಕೀಲ ಈರಣ್ಣ ಗೌಡ ಕಗ್ಗೊಲೆ! | 3 ನಿಮಿಷ, 30ಕ್ಕೂ ಹೆಚ್ಚು ಬಾರಿ ಅಟ್ಯಾಕ್‌!! | ಹತ್ಯೆಯ ಮಾಸ್ಟರ್ ಮೈಂಡ್ ದಂಪತಿ ಅರೆಸ್ಟ್‌!! Read More »

ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ!

ಹೆತ್ತೂರು: ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ. ಅರ್ಜನನ ಕಾಲಿಗೆ ಕೂಳೆ ಚುಚ್ಚಿ ಗಾಯ ಆಗಿತ್ತು. ಕಾರ್ಯಾಚರಣೆ ವೇಳೆ ಯಾವುದೇ ಲೋಪ ಆಗಿಲ್ಲ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರಿವಳಿಕೆ ತಜ್ಞ ಡಾ. ರಮೇಶ್‌ ಹೇಳಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ. ನಮ್ಮ ಕಾರ್ಯಾಚರಣೆ ತಂಡದ ಯಾರ ಬಳಿಯೂ ಬಂದೂಕು ಇರಲಿಲ್ಲ. ನಮ್ಮ ಸಿಬ್ಬಂದಿ ಬಳಿ ಇದ್ದದ್ದು ಡಬಲ್ ಬ್ಯಾರಲ್ ಚರ್‍ರೆ ಕೋವಿ ಮಾತ್ರ. ಅದರಲ್ಲಿ ಹಾರಿದ ಚರ್‍ರೆಯಿಂದ ಆನೆ ಸಾಯುವುದಿಲ್ಲ. ಕಾಡಾನೆ ಹೆದರಿಸಲು ಮಾತ್ರ

ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ! Read More »

ಮಡಿಕೇರಿ ರೆಸಾರ್ಟ್‍ನಲ್ಲಿ ದಂಪತಿ, ಮಗುವಿನ ಮೃತದೇಹ ಪತ್ತೆ !

ಮಡಿಕೇರಿ: ತಾಲೂಕಿನ ಕಗ್ಗೋಡು ಗ್ರಾಮದ ರೆಸಾರ್ಟ್‍ ಒಂದರಲ್ಲಿ ದಂಪತಿ ಹಾಗೂ ಮಗುವಿನ ಮೃತದೇಹ ಶನಿವಾರ ಪತ್ತೆಯಾಗಿದೆ. ರೆಸಾರ್ಟ್‍ನ ಕೋಣೆಯಲ್ಲಿ ಪತಿ, ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಮಗುವಿನ ಮೃತದೇಹ ಹಾಸಿಗೆಯಲ್ಲಿ ಪತ್ತೆಯಾಗಿದೆ. ಕೇರಳದ ಕೊಟ್ಟಾಯಂ ಬಳಿಯ ಪಡಿಚಾಟು ಗ್ರಾಮದ ವಿನೋದ್ (37), ಪತ್ನಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ. ಮಗುವನ್ನು ಕೊಂದು ಬಳಿಕ ದಂಪತಿ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಸಂಜೆ ರೆಸಾರ್ಟ್‍ಗೆ ಬಂದು ತಂಗಿದ್ದರು ಎಂದು ಹೇಳಲಾಗಿದ್ದು, ಶನಿವಾರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ

ಮಡಿಕೇರಿ ರೆಸಾರ್ಟ್‍ನಲ್ಲಿ ದಂಪತಿ, ಮಗುವಿನ ಮೃತದೇಹ ಪತ್ತೆ ! Read More »

ಲಾರಿಯಡಿಗೆ ಸಿಲುಕಿ ಚಾಲಕ ಮೃತ್ಯು

ಕಾಸರಗೋಡು: ಚಾಲಕನೋರ್ವ ಲಾರಿಯಡಿಗೆ ಸಿಲುಕಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಬದಿಯಡ್ಕ ಸಮೀಪದ ನೀರ್ಚಾಲ್ ಗೋಳಿಯಡ್ಕದಲ್ಲಿ ನಡೆದಿದೆ. ಪಾಡಿ ಉತ್ತರತ್ತೋಡಿಯ ಮುಹಮ್ಮದ್ ನೌಫಲ್ (23) ಮೃತಪಟ್ಟವರು. ಲಾರಿಯನ್ನು ಸ್ಟಾರ್ಟಿನಲ್ಲಿರಿಸಿ ಗೇಟ್ ತೆರೆಯಲು ತೆರಳಿದ ಸಂದರ್ಭ ಲಾರಿ ಮುಂದಕ್ಕೆ ಚಲಿಸಿದೆ. ಎದುರಿನಲ್ಲಿದ್ದ ಮಹಮ್ಮದ್ ನೌಫಲ್ ಲಾರಿಯಡಿಗೆ ಸಿಲುಕಿದ್ದು, ತಕ್ಷಣ ಅವರನ್ನು ಕುಂಬಳೆ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಲಾರಿಯಡಿಗೆ ಸಿಲುಕಿ ಚಾಲಕ ಮೃತ್ಯು Read More »

error: Content is protected !!
Scroll to Top