ಪುತ್ತೂರು

ಆರ್ಥಿಕ ಸಬಲೀಕರಣಕ್ಕೆ ಒಕ್ಕಲಿಗ ಸ್ವಸಹಾಯ ಸಂಘದ ಕೊಡುಗೆ ಅಪಾರ | ಸ್ವಸಹಾಯ ಟ್ರಸ್ಟಿನ ಸ್ವಂತ ಕಚೇರಿ, ವಿವಾಹ ವೇದಿಕೆ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಒಕ್ಕಲಿಗ ಸ್ವಸಹಾಯ ಸಂಘಗಳು ಗ್ರಾಮೀಣ ಜನರ ಬದುಕಿನಲ್ಲಿ ಆರ್ಥಿಕ ಸಬಲೀಕರಣಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡಿದೆ. 10 ವರ್ಷಗಳ ಹಿಂದೆ ಆರಂಭವಾಗಿ ಸ್ವಸಹಾಯ ಸಂಘಗಳನ್ನು ಹುಟ್ಟುಹಾಕಿ, ಜನರ ಬದುಕಿಗೆ ಬೆಳಕಾದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಇದೀಗ ಸ್ವಂತ ಕಚೇರಿಗೆ ಪಾದಾರ್ಪಣೆ ಮಾಡಿರುವುದು ಅಭಿನಂದನೀಯ ಎಂದ ಶಾಸಕ ಸಂಜೀವ ಮಠಂದೂರು ಹೇಳಿದರು. ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ನೂತನ ಕಚೇರಿ ಮತ್ತು ವಿವಾಹ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಾಹ ವೇದಿಕೆ, ಸಾಮಾಜಿಕ ಚಟುವಟಿಕೆ ಮುಂತಾದ ಕಾರ್ಯಕ್ರಮಗಳೊಂದಿಗೆ […]

ಆರ್ಥಿಕ ಸಬಲೀಕರಣಕ್ಕೆ ಒಕ್ಕಲಿಗ ಸ್ವಸಹಾಯ ಸಂಘದ ಕೊಡುಗೆ ಅಪಾರ | ಸ್ವಸಹಾಯ ಟ್ರಸ್ಟಿನ ಸ್ವಂತ ಕಚೇರಿ, ವಿವಾಹ ವೇದಿಕೆ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು Read More »

ಅಜ್ಜಿಕಲ್ಲು ಶಾಲೆಯಲ್ಲಿ ಶಾಸಕರ ಹಾಗೂ ಎಂ.ಆರ್.ಪಿ.ಎಲ್ ಕೊಡುಗೆಗಳ ಅನಾವರಣ

ಪುತ್ತೂರು: ಅಜ್ಜಿಕಲ್ಲು ಏಕತಡ್ಕ ಹಿ.ಪ್ರಾ. ಶಾಲೆಯಲ್ಲಿ ಝೇಂಕಾರ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಶಾಸಕರ ಅನುದಾನದಿಂದ ನೀಡಿದ ಕೊಡುಗೆ ಹಾಗೂ ಎಂ.ಆರ್.ಪಿ.ಎಲ್.ನ ಕೊಡುಗೆಗಳನ್ನು ಅನಾವರಣ ಮಾಡಲಾಯಿತು. ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಸಮಾಜ ಹಾಗೂ ಸರಕಾರ ಪರಸ್ಪರ ಕೈ ಜೋಡಿಸಿದಾಗ ಇಂತಹ ಸಂಭ್ರಮ ಮೂಡಿಬರಲು ಸಾಧ್ಯ. ಮಕ್ಕಳನ್ನು ಪೋಷಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಸರಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವ ಕೆಲಸ ಪೋಷಕರಿಂದ ಆಗಬೇಕು ಎಂದರು. ಎಂ.ಆರ್.ಪಿ.ಎಲ್.ನಿಂದ

ಅಜ್ಜಿಕಲ್ಲು ಶಾಲೆಯಲ್ಲಿ ಶಾಸಕರ ಹಾಗೂ ಎಂ.ಆರ್.ಪಿ.ಎಲ್ ಕೊಡುಗೆಗಳ ಅನಾವರಣ Read More »

ಶಾಸಕರ ಅನುದಾನದಿಂದ ಬಹಳಷ್ಟು ಅಭಿವೃದ್ಧಿ | ವೀರಮಂಗಲ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷೆ

ವೀರಮಂಗಲ ಮಾದರಿ ಶಾಲೆ ಒಂದು ಶಾಲೆ ಹೇಗಿದೆ ಎಂದು ಆ ಊರನ್ನು ನೋಡಿ ತಿಳಿದುಕೊಳ್ಳಬಹುದು. ವೀರಮಂಗಲ ಶಾಲೆಯ ಅಭಿವೃದ್ಧಿ ನೋಡಿದಾಗ, ಊರಿನ ಜನರ ಹೃದಯ ಶ್ರೀಮಂತಿಕೆಯನ್ನು ಅರಿತುಕೊಳ್ಳಬಹುದು. ಶಾಸಕನಾಗಿ ನಾನು ಅನುದಾನ ನೀಡಿರಬಹುದು. ಅದರ ಜೊತೆಗೆ ಊರಿನ ಜನರ ಕೊಡುಗೆಯೂ ಇದೆ. ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರು ನೀಡಿರುವ ಅನುದಾನಗಳನ್ನು ಬಳಸಿಕೊಂಡು ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಶಾಲೆಯಲ್ಲಿ ಆಗಿದೆ ಎಂದು ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಹೇಳಿದರು. ವೀರಮಂಗಲ ಹಿ.ಪ್ರಾ. ಶಾಲೆಯಲ್ಲಿ ಶಾಸಕ ಸಂಜೀವ

ಶಾಸಕರ ಅನುದಾನದಿಂದ ಬಹಳಷ್ಟು ಅಭಿವೃದ್ಧಿ | ವೀರಮಂಗಲ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷೆ Read More »

ಮಾಣಿಲ ಶಾಲಾ ನೂತನ ಕಟ್ಟಡಕ್ಕೆ ಶಾಸಕರಿಂದ ಶಿಲಾನ್ಯಾಸ

ಪುತ್ತೂರು: ಬಂಟ್ವಾಳ ತಾಲೂಕಿನ ಮಾಣಿಲ ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡದ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರು ಶನಿವಾರ ಚಾಲನೆ ನೀಡಿದರು. 16.4 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿರುವ ಕಾಮಗಾರಿಗಳಿಗೆ ಶಾಲಾ ವಾರ್ಷಿಕೋತ್ಸವ ಸಂದರ್ಭ ಶಿಲಾನ್ಯಾಸ ನೆರವೇರಿಸಲಾಯಿತು. ಬಳಿಕ ಮಾತನಾಡಿದ ಶಾಸಕರು, ನಮ್ಮ ಊರಿಗಿಂತ ಮೊದಲು ನಮ್ಮ ಶಾಲೆ ಹೇಗಿರಬೇಕು ಎಂಬ ಚಿಂತನೆ ನಮ್ಮಲ್ಲಿರಬೇಕು. ಒಂದು ಶಾಲೆಯನ್ನು ನೋಡಿದಾಗ, ಆ ಊರು ಹೇಗಿದೆ ಎನ್ನುವುದನ್ನು ಅರ್ಥವಿಸಿಕೊಳ್ಳಬಹುದು ಎಂದು ಹಿರಿಯರು ಹೇಳುತ್ತಾರೆ. ಇಂದು ನಾವಿರು ಶಾಲೆ, ಮುಂದೆ ಪ್ರೌಢಶಾಲೆಯಾಗಿ ಬೆಳೆಯಬೇಕು

ಮಾಣಿಲ ಶಾಲಾ ನೂತನ ಕಟ್ಟಡಕ್ಕೆ ಶಾಸಕರಿಂದ ಶಿಲಾನ್ಯಾಸ Read More »

ಸರಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ : ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಇಂದು ಉನ್ನತ ಹುದ್ದೆಗಳಲ್ಲಿ ಇರುವವರೆಲ್ಲರೂ ಕನ್ನಡ ಮಾಧ್ಯಮದಿಂದಲೇ ಬಂದವರು. ಆದ್ದರಿಂದ ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಕಬಕ ಹಿ.ಪ್ರಾ. ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಸಂದರ್ಭ ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಕನ್ನಡ ಮಾಧ್ಯಮಗಳು ಈ ನಾಡಿಗೆ ನೀಡಿರುವ ಕೊಡುಗೆ ಅಗಣಿತ. ಇಷ್ಟು ಕೊಡುಗೆ ನೀಡಿರುವ ಕನ್ನಡ ಶಾಲೆಗಳ ಬಗ್ಗೆ ಇಂದು ಕೀಳರಿಮೆ ಹುಟ್ಟಿಕೊಂಡಿರುವುದು ಬೇಸರದ ಸಂಗತಿ.

ಸರಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ : ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು Read More »

ಭಾರತ್ ಜೋಡೋ ಯಾತ್ರೆಯ ನಿರ್ಬಂಧ ಅಮಿತ್ ಶಾಗೇಕಿಲ್ಲ | ಪುತ್ತೂರು ಕಾಂಗ್ರೆಸ್ ಪ್ರಶ್ನೆ

ಪುತ್ತೂರು: ಭಾರತ್ ಜೋಡೋ ಯಾತ್ರೆಯನ್ನು ತಡೆಯುವ ಉದ್ದೇಶದಿಂದ ರಾಹುಲ್ ಗಾಂಧಿಯವರಿಗೆ ಕೇಂದ್ರ ಸರಕಾರ ಪತ್ರ ಬರೆಯುತ್ತದೆ. ಆದರೆ ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುವಾಗ ಇದಾವುದೇ ನಿಯಮಾವಳಿ ಅನ್ವಯವಾಗುವುದಿಲ್ಲವೇ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಪ್ರಶ್ನಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ಮುಂದುವರಿಯುತ್ತಿದ್ದಂತೆ ಕೇಂದ್ರ ಸಚಿವರಾದ ಮನ್ಸೂರ್ ಮಾಂಡವಿಯಾ ಅವರು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯುತ್ತಾರೆ. ನಿಮ್ಮ ಯಾತ್ರೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸುತ್ತಾರೆ. ಅಂದರೆ ಇದು ಯಾತ್ರೆಯನ್ನು

ಭಾರತ್ ಜೋಡೋ ಯಾತ್ರೆಯ ನಿರ್ಬಂಧ ಅಮಿತ್ ಶಾಗೇಕಿಲ್ಲ | ಪುತ್ತೂರು ಕಾಂಗ್ರೆಸ್ ಪ್ರಶ್ನೆ Read More »

ಜ. 7ರಂದು ಪಾಂಗಳಾಯಿ ನೇಮೋತ್ಸವ

ಪುತ್ತೂರು: ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನ ಸಮಿತಿ ನೇತೃತ್ವದಲ್ಲಿ ಶ್ರೀ ಅರಸು ಮುಂಡ್ಯತ್ತಾಯ ದೈವದ ವರ್ಷಾವಧಿ ಪೂಜೆ, ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ನಾಗತಂಬಿಲ ಮತ್ತು ಗ್ರಾಮದೈವ ಹಾಗೂ ಪರಿವಾರ ದೈವಗಳ ಪಾಂಗಳಾಯಿ ನೇಮೋತ್ಸವ ಜ. 7ರಂದು ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ತಾರನಾಥ ರೈ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಮ್ಮಿಂಜೆ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ದೈವಸ್ಥಾನದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆಯಲಿದೆ. ದೈವಸ್ಥಾನದಲ್ಲಿ ಶ್ರೀ ಅರಸು ಮುಂಡ್ಯತ್ತಾಯ,

ಜ. 7ರಂದು ಪಾಂಗಳಾಯಿ ನೇಮೋತ್ಸವ Read More »

ವಿದ್ಯಾರಶ್ಮಿಯಲ್ಲಿ ವಿಜ್ಞಾನ ರಶ್ಮಿ

ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿಜ್ಞಾನ ರಶ್ಮಿ ಕಾರ್ಯಕ್ರಮ ಡಿ. 31ರಂದು ವಿದ್ಯಾಚೇತನ ಅಡಿಟೋರಿಯಂನಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ವಿಜ್ಞಾನ ಪ್ರಯೋಗದ ಆಧಾರದಲ್ಲಿ ಬೆಳೆದು ಬಂದಿದೆ. ಆದ್ದರಿಂದ ಪ್ರಾಯೋಗಿಕ ಅಭ್ಯಾಸ ಮಾಡಿದರೆ ಮಾತ್ರ ವಿಜ್ಞಾನದಲ್ಲಿ ಆಸಕ್ತಿ ಬೆಳೆಯುತ್ತದೆ ಎಂದರು. ದೋಲ್ಪಾಡಿ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಶಿಧರ ಪಿ. ಮಾತನಾಡಿ, ವಿಶ್ವ ಬಹಳಷ್ಟು ಅಭಿವೃದ್ಧಿಯತ್ತ ಸಾಗುತ್ತಿದೆ. ಆದ್ದರಿಂದ ಆಧುನಿಕತೆಯಲ್ಲಿ ನಮ್ಮ ಜೀವನಕ್ಕೆ ವಿಜ್ಞಾನ ಬಹು ಅಗತ್ಯ ಎಂದರು. ಪ್ರಾಂಶುಪಾಲ ಸೀತಾರಾಮ ಕೇವಳ

ವಿದ್ಯಾರಶ್ಮಿಯಲ್ಲಿ ವಿಜ್ಞಾನ ರಶ್ಮಿ Read More »

ಕುಂಬ್ಲಾಡಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶ, ಮಾಚಿಲ ಶ್ರೀ ಉಳ್ಳಾಕ್ಲು ಶ್ರೀ ಉಳ್ಳಾಲ್ತಿ ಪ್ರತಿಷ್ಠೆ, ನೇಮೋತ್ಸವ

ಪುತ್ತೂರು: ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಮಣ್ಯ ದೇವಸ್ಥಾನದಲ್ಲಿಡಿ. 31ರಿಂದ ಜ. 7ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮಾಚಿಲ ಶ್ರೀ ಉಳ್ಳಾಕ್ಲು ಹಾಗೂ ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಮತ್ತು ನೇಮೋತ್ಸವ ನಡೆಯಲಿದೆ. 31ರಂದು ಬೆಳಿಗ್ಗೆ 8ಕ್ಕೆ ಅರುವಗುತ್ತು ಮನೆಯಿಂದ ದೇವರ ಆಭರಣ ತರುವುದು, 8:30ಕ್ಕೆ ನಾಲ್ಕಂಬ ಕ್ಷೇತ್ರದಲ್ಲಿ ಪ್ರಾರ್ಥನೆ, ಹೊರಕಾಣಿಕೆ ತರಲಾಗುವುದು. 9ಕ್ಕೆ ದೇವಾಲಯದಲ್ಲಿ ತೋರಣ ಮುಹೂರ್ತ, 12ಕ್ಕೆ ಮಹಾಪೂಜೆ, ಸಂಜೆ 5ಕ್ಕೆ ತಂತ್ರಿ ಪರಿವಾರದವರ ಆಗಮನ, ಸ್ವಾಗತ. ರಾತ್ರಿ 7ಕ್ಕೆ ಪ್ರಾಸಾದ ಪರಿಗ್ರಹ, ಪುಣ್ಯಾಹ, ಅಂಕುರಾರ್ಪಣೆ, ವಾಸ್ತು

ಕುಂಬ್ಲಾಡಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶ, ಮಾಚಿಲ ಶ್ರೀ ಉಳ್ಳಾಕ್ಲು ಶ್ರೀ ಉಳ್ಳಾಲ್ತಿ ಪ್ರತಿಷ್ಠೆ, ನೇಮೋತ್ಸವ Read More »

ಜ. 1: ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ನ ನೂತನ ಕಟ್ಟಡ, ನೂತನ ಕಚೇರಿ ಉದ್ಘಾಟನೆ

ಪುತ್ತೂರು: ಯುವ ಒಕ್ಕಲಿಗ ಗೌಡ ಸೇವಾ ಸಂಘ ಪ್ರಾಯೋಜಕತ್ವದ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಪುತ್ತೂರು ಇದರ ಸ್ವಂತ ಕಟ್ಟಡದಲ್ಲಿ ನೂತನ ಕಚೇರಿಯ ಉದ್ಘಾಟನಾ ಸಮಾರಂಭ ಹಾಗೂ ಸಭಾ ಕಾರ್ಯಕ್ರಮ ಜ. 1ರಂದು ಬೆಳಿಗ್ಗೆ 9 ಗಂಟೆಗೆ ನೆಲ್ಲಿಕಟ್ಟೆ ಒಕ್ಕಲಿಗ ಸೌಧದಲ್ಲಿ ನಡೆಯಲಿದೆ. ಮಂಗಳೂರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಕಚೇರಿ ಉದ್ಘಾಟಿಸಿ, ಆಶೀರ್ಚನ ನೀಡುವರು. ಪುತ್ತೂರು ಒಕ್ಕಲಿಗ ಸ್ವ-ಸಹಾಯ ಸಂಘದ ಅಧ್ಯಕ್ಷ ಡಿ.ವಿ. ಮನೋಹರ ಅಧ್ಯಕ್ಷತೆ ವಹಿಸುವರು. ಶಾಸಕ ಸಂಜೀವ

ಜ. 1: ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ನ ನೂತನ ಕಟ್ಟಡ, ನೂತನ ಕಚೇರಿ ಉದ್ಘಾಟನೆ Read More »

error: Content is protected !!
Scroll to Top