ಪುತ್ತೂರು

10ರಿಂದ 12 ಸಾವಿರ ಮತಗಳ ಅಂತರದಿಂದ ಗೆಲುವು ನಿಶ್ಚಿತ: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ

ಪುತ್ತೂರು: ಪ್ರಜಾಪ್ರಭುತ್ವದ ಮೌಲ್ಯವನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ನಿನ್ನೆಯ ಮತದಾನದಿಂದ ತಿಳಿದುಬರುತ್ತದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದ್ದು, ಬಿಜೆಪಿ ಜಯ ಗಳಿಸುವುದು ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತದಾನದ ಹಿನ್ನೆಲೆಯಲ್ಲಿ ನ್ಯೂಸ್ ಪುತ್ತೂರು ಜೊತೆ ಮಾತನಾಡಿದ ಅವರು, ಬಿಜೆಪಿ ಗೆಲುವು ನಿಶ್ಚಿತ. ಅದರಲ್ಲಿ ಎರಡು ಮಾತಿಲ್ಲ. ಗೆಲುವಿನ ಅಂತರ ಸುಮಾರು 10ರಿಂದ 12 ಸಾವಿರದಷ್ಟು ಇರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಮತದಾನದಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡಿರುವುದು […]

10ರಿಂದ 12 ಸಾವಿರ ಮತಗಳ ಅಂತರದಿಂದ ಗೆಲುವು ನಿಶ್ಚಿತ: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ Read More »

ಪಿಯು ಪರೀಕ್ಷೆ: ನಿಂತಿಕಲ್ಲು ಕೆ.ಎಸ್. ಗೌಡ ಪಿಯು ಕಾಲೇಜಿಗೆ ಶೇ. 100 ಫಲಿತಾಂಶ

ಪುತ್ತೂರು: ಇತ್ತೀಚೆಗೆ ನಡೆದ ಪದವಿ ಪೂರ್ವ ಪರೀಕ್ಷೆಯಲ್ಲಿ ನಿಂತಿಕಲ್ಲು ಕೆ.ಎಸ್. ಗೌಡ ಪಿಯು ಕಾಲೇಜು ಶೇ. 100 ಫಲಿತಾಂಶ ಪಡೆದುಕೊಂಡಿದೆ. ಕಾಲೇಜಿನಲ್ಲಿ ವಿಜ್ಞಾನಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರ ವಿಭಾಗಗಳಿದ್ದು, ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ವಾಣಿಜ್ಯಶಾಸ್ತ್ರ ವಿಭಾಗದ ರಿಫಾಷ್ ಶೇಖ್ ಐ.ಎಫ್. ಅವರು 584 (ಶೇ. 97.33) ಅಂಕ ಗಳಿಸಿ, ಕಾಲೇಜಿಗೆ ಪ್ರಥಮ ಹಾಗೂ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಂಪ್ಯೂಟರ್ ಸೈನ್ಸ್ 100, ಬ್ಯುಸಿನೆಸ್ ಸ್ಟಡೀಸ್  100, ಅರ್ಥ ಶಾಸ್ತ್ರ 98, ಲೆಕ್ಕ

ಪಿಯು ಪರೀಕ್ಷೆ: ನಿಂತಿಕಲ್ಲು ಕೆ.ಎಸ್. ಗೌಡ ಪಿಯು ಕಾಲೇಜಿಗೆ ಶೇ. 100 ಫಲಿತಾಂಶ Read More »

ಬೆಟ್ಟಂಪಾಡಿ: SPYSS ಸಮಿತಿಯ ಪುತ್ತೂರಿನ 11 ನೇ ಶಾಖೆ ಆರಂಭ

ಪುತ್ತೂರು: ಬೆಟ್ಟಂಪಾಡಿ ಶ್ರೀ ಕ್ಷೇತ್ರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ದಿ SPYSS ಸಮಿತಿಯ ಪುತ್ತೂರಿನ 11 ನೇ ಶಾಖೆಯನ್ನು ಜಿಲ್ಲಾ ಸಮಿತಿಯ ಮಾರ್ಗದರ್ಶನದಲ್ಲಿ ತಾಲೂಕು ಶಿಕ್ಷಕರ ಮತ್ತು ಆತ್ಮೀಯ ಬಂಧುಗಳ ಸಹಕಾರದಲ್ಲಿ ಪ್ರಾರಂಭಿಸಲಾಯಿತು. ಮುಖ್ಯ ಶಿಕ್ಷಕಿ ಆಶಾಲತಾ ಪ್ರಾಸ್ತಾವಿಕ ಮಾತನಾಡಿದರು. ಸುರೇಶ್ ವಾಗ್ಲೆ ಅಧ್ಯಕ್ಷತೆ ವಹಿಸಿದ್ದರು.ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಟ್ಟಂಪಾಡಿ ಅನುವಂಶಿಯ ಮೋಕ್ತೇಸರರು ವಿನೋದ್ ಕುಮಾರ್ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವಾನ್ವಿತ ಮತ್ತು ಪ್ರಣತಿ ಪ್ರಾರ್ಥಿಸಿ,ಸಂಧ್ಯ ನಿರೂಪಿಸಿ, ಸಂತೋಷ ಸ್ವಾಗತಿಸಿ, ನಮಿತಾ ವಂದಿಸಿದರು.

ಬೆಟ್ಟಂಪಾಡಿ: SPYSS ಸಮಿತಿಯ ಪುತ್ತೂರಿನ 11 ನೇ ಶಾಖೆ ಆರಂಭ Read More »

ಬಲ್ನಾಡು: SPYSS ಸಮಿತಿಯ ಪುತ್ತೂರಿನ 10ನೇ ಶಾಖೆ ಆರಂಭ

ಪುತ್ತೂರು: ಪುತ್ತೂರಿನ ಕಾರಣಿಕದ ದೈವಬೀಡು ಬಲ್ನಾಡು ಶ್ರೀ ದಂಡ ನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ SPYSS ಸಮಿತಿಯ ಪುತ್ತೂರಿನ 10 ನೇ ಶಾಖೆಯನ್ನು ಜಿಲ್ಲಾ ಸಮಿತಿಯ ಮಾರ್ಗದರ್ಶನದಲ್ಲಿ ತಾಲೂಕು ಶಿಕ್ಷಕರ ಮತ್ತು ಆತ್ಮೀಯ ಬಂಧುಗಳ ಸಹಕಾರದಲ್ಲಿ ವಿದ್ಯುಕ್ತವಾಗಿ ಪ್ರಾರಂಭಿಸಲಾಯಿತು. ಶ್ರೀ ದಂಡನಾಯಕ ಉಳ್ಳಾಳ್ತಿ ದೇವಸ್ಥಾನ ವ್ಯವಸ್ಥಾಪನಾ ಮಂಡಳಿ ಮಾಜಿ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ದೀಪಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಭಗವಾನ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದಂಡನಾಯಕ ಉಳ್ಳಾಳ್ತಿ ದೇವಸ್ಥಾನ ಕಾಂತಿಲ ವ್ಯವಸ್ಥಾಪನಾ ಮಂಡಳಿಯ ಮಾಧವ ಗೌಡ ಅತಿಥಿಯಾಗಿ ಭಾಗವಹಿಸಿದರು.

ಬಲ್ನಾಡು: SPYSS ಸಮಿತಿಯ ಪುತ್ತೂರಿನ 10ನೇ ಶಾಖೆ ಆರಂಭ Read More »

ಕದನ ವಿರಾಮ: ಪುತ್ತೂರಿನಲ್ಲಿ ಉತ್ತಮ ಮತದಾನ

ಪುತ್ತೂರು: ಚುನಾವಣೆಯ ಹಣಾಹಣಿ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ಮತ ಎಣಿಕೆಯಂದಿನ ಧಾವಂತ. ಅಲ್ಲಿವರೆಗೆ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದೊಳಗೆ ಭದ್ರವಾಗಿರಲಿದೆ. ಪುತ್ತೂರು ತಾಲೂಕಿನಲ್ಲಿ ಸಂಜೆ 6 ಗಂಟೆಯವರೆಗೆ ಒಟ್ಟು ಶೇ. 79.98ರಷ್ಟು ಮತದಾನವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇದು ಹೆಚ್ಚಿನ ಮತದಾನ ಎಂದು ಅಂದಾಜಿಸಲಾಗಿದೆ‌. ಬೆಳಿಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಬಿಡುವಿಲ್ಲದೆ ಮತದಾನವಾಗಿದೆ. ಹೆಚ್ಚಿನ ಮತಗಟ್ಟೆಗಳಲ್ಲಿ ಉದ್ದನೆಯ ಸಾಲು ಇತ್ತು. ಆದ್ದರಿಂದ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುತ್ತದೆ ಎಂದು ಮಧ್ಯಾಹ್ನದ ಹೊತ್ತಿಗೆ ಸೂಚನೆ ಲಭ್ಯವಾಗಿತ್ತು.

ಕದನ ವಿರಾಮ: ಪುತ್ತೂರಿನಲ್ಲಿ ಉತ್ತಮ ಮತದಾನ Read More »

ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಮತದಾನ

ಪುತ್ತೂರು : ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಮಂಗಳೂರಿನಲ್ಲಿ ಮತದಾನ ಮಾಡಿದರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಮಂಗಳೂರಿನ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಎಂದು ಸಂದೇಶ ನೀಡಿದ್ದಾರೆ.

ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಮತದಾನ Read More »

ಮತ ಚಲಾಯಿಸಿದ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ

ಪುತ್ತೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಶ್ರೀ ಸಂಸ್ಥಾನದ ಸ್ವಾಮೀಜಿಯವರು ಅವರೊಂದಿಗೆ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಅವರು ತಮ್ಮ ಮತ ಚೀಟಿಯನ್ನು ಪ್ರದರ್ಶಿಸಿ ಮತದಾನ ಮಾಡುವಂತೆ ಸಂದೇಶ ನೀಡಿದರು.

ಮತ ಚಲಾಯಿಸಿದ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ Read More »

ಸುಳ್ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಿರೇಬಂಡಾಡಿ ಕ್ಷೇತ್ರಕ್ಕೆ ಭೇಟಿ

ಪುತ್ತೂರು: ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ  ಅವರು ಬೂತ್ ಪ್ರವಾಸದ ಮಧ್ಯೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಕ್ಷೇತ್ರದ ಹಿರೇಬಂಡಾಡಿ ಬೂತಿಗೆ ಭೇಟಿ ನೀಡಿದರು. ಭೇಟಿ ನೀಡಿದ ಅವರು ಅಲ್ಲಿನ ಕಾರ್ಯಕರ್ತರ ಜತೆ ಫೋಟೊ ಕ್ಲಿಕ್ಕಿಸಿಕೊಂಡರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸುಳ್ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಿರೇಬಂಡಾಡಿ ಕ್ಷೇತ್ರಕ್ಕೆ ಭೇಟಿ Read More »

ಆಟೋದಲ್ಲಿ ಬಂದು ಮತದಾನ ಮಾಡಿದ ಒಡಿಯೂರು ಶ್ರೀ | ಸರಳತೆಯ ಸಂದೇಶ ಸಾರಿದ ಸ್ವಾಮೀಜಿ

ಪುತ್ತೂರು: ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಬುಧವಾರ ಆಟೊ ರಿಕ್ಷಾದಲ್ಲಿ ಬಂದು ಮತದಾನ ಮಾಡಿದರು. ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬವೆಂದೇ ಹೇಳಲಾಗುವ ಮತದಾನಕ್ಕೆ ರಿಕ್ಷಾದಲ್ಲಿ ಬಂದು, ಸರಳತೆಯ ಟಚ್ ನೀಡಿದರು. ಮತದಾನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂಬ ಸಂದೇಶವನ್ನು ನೀಡಿದರು.

ಆಟೋದಲ್ಲಿ ಬಂದು ಮತದಾನ ಮಾಡಿದ ಒಡಿಯೂರು ಶ್ರೀ | ಸರಳತೆಯ ಸಂದೇಶ ಸಾರಿದ ಸ್ವಾಮೀಜಿ Read More »

ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆ ಆನೆ ಶಿಬಿರದಲ್ಲಿ ಸಾವು

ಸುಳ್ಯ: ಕೆರೆಗೆ ಬಿದ್ದು ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆ ದುಬಾರೆಯ ಆನೆ ಶಿಬಿರದಲ್ಲಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಸುಳ್ಯದ ಅಜ್ಜಾವರದಲ್ಲಿ ಏಪ್ರಿಲ್ 13ರಂದು ನಾಲ್ಕು ಆನೆಗಳು ಕೆರೆಗೆ ಬಿದ್ದಿದ್ದವು. ಇದರಲ್ಲಿ ಮೂರು ಆನೆಗಳನ್ನು ಮೆಲಕ್ಕೆತ್ತಲಾಗಿತ್ತು. ಮರಿಯಾನೆ ಮಾತ್ರ ಕೆರೆಯಲ್ಲೇ ಬಾಕಿಯಾಗಿದ್ದು, ಸ್ಥಳೀಯರು ರಕ್ಷಿಸಿದ್ದರು. ಆ ವೇಳೆ ಆನೆಗಳ ಹಿಂಡು ಮುಂದಕ್ಕೆ ಸಾಗಿದ್ದರಿಂದ, ಮರಿಯಾನೆ ಬಾಕಿಯಾಗಿತ್ತು. ಮರಿಯಾನೆಯನ್ನು ತನ್ನ ಗುಂಪಿಗೂ ಆನೆಗಳು ಸೇರಿಸಿಕೊಳ್ಳಲಿಲ್ಲ. ತಜ್ಞರ ಅಭಿಪ್ರಾಯದಂತೆ, ಮರಿಯಾನೆಯನ್ನು ದುಬಾರೆ ಆನೆ ಶಿಬಿರಕ್ಕೆ ಕಳುಹಿಸಿಕೊಡಲಾಗಿತ್ತು. ಶಿಬಿರದಲ್ಲಿ ಮರಿಯಾನೆ ಚುರುಕಾಗಿಯೇ ಇತ್ತು. ಆದರೆ

ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆ ಆನೆ ಶಿಬಿರದಲ್ಲಿ ಸಾವು Read More »

error: Content is protected !!
Scroll to Top