ಪುತ್ತೂರು

ಸುಹಾಸ್ ಶೆಟ್ಟಿ ಕೊಲೆಯಲ್ಲಿ ಫಾಝೀಲ್ ಕುಟುಂಬದ ಪಾತ್ರವಿಲ್ಲ ಎಂದ ಖಾದರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ಅರುಣ್‍ ಕುಮಾರ್ ಪುತ್ತಿಲ

ಪುತ್ತೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಕೊಲೆಯಾದ ಸಂದರ್ಭ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸ್ಪೀಕರ್ ಸ್ಥಾನದಲ್ಲಿರುವ ಶಾಸಕ ಯು.ಟಿ ಖಾದರ್ ಸುಹಾಸ್ ಕೊಲೆಯಲ್ಲಿ ಫಾಝೀಲ್ ಕುಟುಂಬದವರ ಕೈವಾಡವಿಲ್ಲ, ಅವನ ತಂದೆ ತಮ್ಮಂದಿರು ನನಗೆ ಕರೆ ಮಾಡಿ ನಮಗೆ ಅಂತಹ ಪ್ರತಿಕಾರದ ಭಾವನೆ ಇಲ್ಲ, ನಾವು ಮಾಡಲೂ ಇಲ್ಲ ಎಂದಿದ್ದರು ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೆಲವೇ ಹೊತ್ತಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಂಗಳೂರು ಪೊಲೀಸ್ ಕಮಿಷನರ್ ಆರೋಪಿಗಳ ಬಗ್ಗೆ ವಿವರಿಸುತ್ತಾ […]

ಸುಹಾಸ್ ಶೆಟ್ಟಿ ಕೊಲೆಯಲ್ಲಿ ಫಾಝೀಲ್ ಕುಟುಂಬದ ಪಾತ್ರವಿಲ್ಲ ಎಂದ ಖಾದರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ಅರುಣ್‍ ಕುಮಾರ್ ಪುತ್ತಿಲ Read More »

ವಿಷ ಸೇವಿಸಿ ಆತ್ಮಹತ್ಯೆ

ಪುತ್ತೂರು: ಇಲ್ಲಿನ ತೆಂಕಿಲ ಕನ್ನೂರು ನಿವಾಸಿ ವೆಂಕಪ್ಪ (58) ಎಂಬವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೆಂಕಪ್ಪ ಅವರು ಮೇ 1ರಂದು ಮನೆಯಿಂದ ಪೇಟೆಗೆ ಹೋಗಿ ಬರುತ್ತೇನೆಂದು ಹೋದವರು ಮನೆಗೆ ಹಿಂದಿರುಗಿಲ್ಲ. ಮೇ 2ರಂದು ಅವರು ದರ್ಬೆ ಮಂಗಳ ಬಾರ್ ಬಳಿಯ ಮೈದಾನದಲ್ಲಿ ಮಲಗಿಕೊಂಡಿದ್ದ ಸ್ಥಿತಿಯಲ್ಲಿದ್ದರು. ಮಾಹಿತಿ ತಿಳಿದು ಮನೆಯವರು ಹೋಗಿ ನೋಡುವಾಗ ಮೃತಪಟ್ಟಿರುವುದು ಗೊತ್ತಾಗಿದೆ. ಮಲಗಿದ್ದ ಪಕ್ಕದಲ್ಲೇ ನೀರಿನ ಬಾಟಲಿಗೆ ನೇರಳೆ ಬಣ್ಣದ ಹುಡಿಯನ್ನು ಹಾಕಿದ್ದುದು ಬೆಳಕಿಗೆ ಬಂದಿದೆ. ಅವರು ವಿಷ ಪದಾರ್ಥ ಸೇವಿಸಿ

ವಿಷ ಸೇವಿಸಿ ಆತ್ಮಹತ್ಯೆ Read More »

ಮಡಿಕೇರಿಯಲ್ಲಿ ನೂತನ ‘ಮುಳಿಯ ಸಿಲ್ವರಿಯ’ ಉದ್ಘಾಟನೆ

ಪುತ್ತೂರು: ಮಡಿಕೇರಿಯ ಮುಳಿಯ ಗೋಲ್ಡನ್ ಅಂಡ್ ಡೈಮಂಡ್ ಇದರ ನೂತನ ಚಿನ್ನ ಮತ್ತು ಬೆಳ್ಳಿ ಆಭರಣಗಳ ವಿಸ್ಕೖತ ಮಳಿಗೆಯಾದ ಸಿಲ್ವರಿಯಾ ಶುಭಾರಂಭಗೊಂಡಿತು. ಸಂಸ್ಥೆಯ ರಾಯಭಾರಿ, ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಸಿಲ್ವರಿಯಾವನ್ನು ಉದ್ಘಾಟಿಸಿ ಮಾತನಾಡಿ, ತಾನಿಂದು ಬ್ರಹ್ಮಗಿರಿ ತಪ್ಪಲಿನ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಆ ಬಳಿಕ ಕಾವೇರಿ ತೀಥ೯ವನ್ನು ಮಡಿಕೇರಿಯ ಮುಳಿಯ ಸಂಸ್ಥೆಗೆ ತಂದು ವಿದ್ಯುಕ್ತವಾಗಿ ಕಾವೇರಿ ತೀಥ೯ವನ್ನು ಮಳಿಗೆಗೆ ಪ್ರೋಕ್ಷಣೆ ಮಾಡಿದೆ. ನಿಜಕ್ಕೂ ಇದೊಂದು ಅಪೂವ೯  ಅನುಭವ ಎಂದು ಬಣ್ಣಿಸಿದರು.

ಮಡಿಕೇರಿಯಲ್ಲಿ ನೂತನ ‘ಮುಳಿಯ ಸಿಲ್ವರಿಯ’ ಉದ್ಘಾಟನೆ Read More »

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಶ್ರೀರಾಮ ಪುನರಾಗಮನ ನೃತ್ಯರೂಪಕ  – 05 ಮೇ  ಸಂಜೆ 6 .00 ಗಂಟೆಗೆ

ರಾಮಾಯಣ ಮಹಾಕಾವ್ಯ ನಮಗೆಲ್ಲರಿಗೂ ಗೌರವದ ಕಲಾಕೃತಿ. ಹಿಂದೂ ಪರಮಪವಿತ್ರ ಗ್ರಂಥವಾದ ಶ್ರೀ ರಾಮಾಯಣವು ನಮಗೆಲ್ಲರಿಗೂ ಸದಾ ಆದರ್ಶ ಪ್ರಾಯವಾಗಿರುವಂತಹ ಪ್ರಭು ಶ್ರೀರಾಮನ ಜೀವನದ ಚಿತ್ರಣ. ಪ್ರತಿಯೊಂದು ಜೀವಿಯೂ ತಾನು ಹೇಗೆ ಬದುಕಬೇಕು ಎಂಬುದರ ದೃಷ್ಟಾಂತರೂಪವನ್ನು  ಶ್ರೀರಾಮಾಯಣ ಮಹಾಕಾವ್ಯದಲ್ಲಿ ಅಳವಡಿಸಲಾಗಿದೆ. ಪಂಚವಟಿಯಲ್ಲಿ ರಾಮ ಲಕ್ಷ್ಮಣ ಸೀತೆಯರು ವನವಾಸ ಮಾಡುತ್ತಿರುವಾಗ ರಾವಣನಿಂದ ಅಪಹೃತಗೊಂಡ ಸೀತೆಯನ್ನು ಅರಸಿ ರಾವಣನ ವಧೆಯ ಬಳಿಕ ಮತ್ತೆ ಎಲ್ಲರೂ ಒಂದಾಗಿ ಅಯೋಧ್ಯೆಗೆ ಹಿಂದಿರುಗಿ ಪಟ್ಟಾಭಿಷೇಕವಾಗುವ ಕಥೆಯನ್ನು ಶ್ರೀರಾಮ ಪುನರಾಗಮನ ರೂಪಕದಲ್ಲಿ ಅಳವಡಿಸಲಾಗಿದೆ. ಮುಳಿಯ ದ  ನವೀಕೃತ

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಶ್ರೀರಾಮ ಪುನರಾಗಮನ ನೃತ್ಯರೂಪಕ  – 05 ಮೇ  ಸಂಜೆ 6 .00 ಗಂಟೆಗೆ Read More »

ಕಾಣಿಯೂರು (ಮೇ. 11) : ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ(ರಿ) ಕಾಣಿಯೂರು ಸುವರ್ಣ ಸಂಭ್ರಮ| ಸತ್ಯನಾರಯಣ ಪೂಜೆ

ಕಾಣಿಯೂರು : ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ(ರಿ) ಕಾಣಿಯೂರು ಸುವರ್ಣ ಸಂಭ್ರಮದ ವತಿಯಿಂದ 49ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ನರಸಿಂಹ ಜಯಂತಿ, ವಿಶೇಷ ಪೂಜೆ ಮೇ.11 ಭಾನುವಾರದಂದು ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಮೇ. 6 ಮಂಗಳವಾರದಿಂದ ಪ್ರತಿದಿನ ಸಂಜೆ 6ಗಂಟೆಯಿಂದ 9ಗಂಟೆಯವರೆಗೆ ಆಹ್ವಾನಿತ ಭಜನಾ ತಂಡಗಳಿಂದ ಸುವರ್ಣ ಸಂಭ್ರಮದ ಪ್ರಯುಕ್ತ ವಿಶೇಷ ಭಜನಾ ಸೇವೆ, ಶ್ರೀ ರಾಮತೀರ್ಥ ಕಾಣಿಯೂರು ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಆಚಾರ್‍ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮೇ.11 ಭಾನುವಾರ ಬೆಳಗ್ಗೆ

ಕಾಣಿಯೂರು (ಮೇ. 11) : ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ(ರಿ) ಕಾಣಿಯೂರು ಸುವರ್ಣ ಸಂಭ್ರಮ| ಸತ್ಯನಾರಯಣ ಪೂಜೆ Read More »

ಡಾ. ಆಶಾಪುತ್ತೂರಾಯರಿಗೆ ಹಲ್ಲೆ ಯತ್ನ | ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

ಪುತ್ತೂರು: ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯರಿಗೆ ಅವಮಾನಿಸಿ  ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಿಗೂ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸುಳ್ಯ ಪದವಿನ ಜೊಹರಾ ಮತ್ತು ಅವರ ಮಗ ಸಮದ್ ಎಂಬವರು ಪ್ರಕರಣದ ಆರೋಪಿಗಳು. ಆರೋಪಿಗಳ ಪರ ವಕೀಲರಾದ ಅಶ್ರಫ್ ಅಗ್ನಾಡಿ, ಅಬ್ದುಲ್ ಮಜೀದ್ ಖಾನ್, ಸೆಲೀನಾ ನೆಕ್ಕಿಲಾಡಿ, ಮಿತ್ರಿಯಾ ವಾದಿಸಿದ್ದರು. ಹಲ್ಲೆ ಯತ್ನ ನಡೆದ ಬಗ್ಗೆ ಮಾಹಿತಿ ದೊರೆತು ಪುತ್ತೂರು

ಡಾ. ಆಶಾಪುತ್ತೂರಾಯರಿಗೆ ಹಲ್ಲೆ ಯತ್ನ | ಆರೋಪಿಗಳಿಗೆ ನಿರೀಕ್ಷಣಾ ಜಾಮೀನು Read More »

ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 100 ಫಲಿತಾಂಶ ಮತ್ತು 16 ಡಿಸ್ಟಿಂಕ್ಷನ್

ಸವಣೂರು: ವಿದ್ಯಾರಶ್ಮಿ ವಿದ್ಯಾಲಯ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾದ ವಿದ್ಯಾರಶ್ಮಿ ವಿದ್ಯಾಲಯದ 41 ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳು ತೇರ್ಗಡೆಯಾಗಿ 100 ಶೇಕಡಾ ಫಲಿತಾಂಶ ಲಭಿಸಿದೆ. 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಶಿಷ್ಟ ಶ್ರೇಣಿಯ ಸಾಧಕರು: ಸೃಜನ್.ಕೆ-618 (ಸುಧೀರ್ ಕೆ ಮತ್ತು ಸುಪ್ರಿಯ ಇವರ ಪುತ್ರ),  ಹೆಚ್.ಎಸ್.ಶ್ರುತ ಜೈನ್-617 (ಹೆಚ್ ಶ್ರೇಯಾಂಸ ಕುಮಾರ್ ಇಂದ್ರ ಮತ್ತು ಶ್ವೇತ ಬಿ ಎಸ್ ಇವರ ಪುತ್ರಿ), ಎಂ.ವೈಷ್ಣವಿ-616 (ಲಕ್ಷ್ಮೀಶ ಮತ್ತು ರಾಧಿಕ

ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 100 ಫಲಿತಾಂಶ ಮತ್ತು 16 ಡಿಸ್ಟಿಂಕ್ಷನ್ Read More »

ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆಗೆ ನೂರು ಶೇಕಡಾ ಫಲಿತಾಂಶ

ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರು 2025 ಮಾರ್ಚ ನಲ್ಲಿ ಜರಗಿದ ಎಸ್. ಎಸ್. ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪರೀಕ್ಷೆಗೆ ಹಾಜರಾದ 11 ವಿದ್ಯಾರ್ಥಿಗಳು  ಉತ್ತೀರ್ಣರಾಗಿ ನೂರು ಶೇಕಡ ಫಲಿತಾಂಶ ಬಂದಿರುತ್ತದೆ. ಸಂಸ್ಥೆಯ ಪರಮ ಪೋಷಕರಾದ ಪೂಜ್ಯ  ಶ್ರೀ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾದ ಸೂರ್ಯ ಕುಮಾರ್ ಹಳೆಯಂಗಡಿ, ಕಾರ್ಯದರ್ಶಿ ಗುರುರಾಜ ಕೆ ಮಂಗಳೂರು ಮತ್ತು ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ  ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆಗೆ ನೂರು ಶೇಕಡಾ ಫಲಿತಾಂಶ Read More »

ಧರ್ಮ ಶಿಕ್ಷಣ ಉದ್ಘಾಟನೆಗೆ ಸಹಸ್ರಾರು ಮಂದಿ ಭಾಗಿಯಾಗಬೇಕು : ಬಾಲಕೃಷ್ಣ ಬೋರ್ಕರ್ | ತಾಲೂಕು ಧರ್ಮ ಶಿಕ್ಷಣ ಸಮಿತಿ ಸಭೆ

ಪುತ್ತೂರು: ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಇಡಿಯ ದೇಶದಲ್ಲೇ ನಡೆಸಲು ಉದ್ದೇಶಿಸಲಾಗಿರುವ ಹಿಂದೂ ಧರ್ಮ ಶಿಕ್ಷಣ ವ್ಯವಸ್ಥೆ ಮೊದಲು ಪುತ್ತೂರಿನಲ್ಲಿ ಜಾರಿಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಇಂತಹ ಮಹೋನ್ನತ ಹಾಗೂ ಐತಿಹಾಸಿಕ ಘಟನೆಗೆ ಪುತ್ತೂರಿನ ನಾಗರಿಕ ಸಮಾಜ ಸಾಕ್ಷಿಯಾಗುತ್ತಿದೆ ಎಂದು ತಾಲೂಕು ಧರ್ಮ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಹೇಳಿದರು. ಅವರು ನಗರದ ತೆಂಕಿಲದಲ್ಲಿರುವ ಸ್ವಾಮಿ ಕಲಾ ಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತಾಲೂಕು ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಧರ್ಮ ಶಿಕ್ಷಣ ಉದ್ಘಾಟನೆಗೆ ಸಹಸ್ರಾರು ಮಂದಿ ಭಾಗಿಯಾಗಬೇಕು : ಬಾಲಕೃಷ್ಣ ಬೋರ್ಕರ್ | ತಾಲೂಕು ಧರ್ಮ ಶಿಕ್ಷಣ ಸಮಿತಿ ಸಭೆ Read More »

ಪುತ್ತೂರಿನ ಬಂದ್ ಮಾಡದ ಅಂಗಡಿಗಳ ವಿರುದ್ಧ ಹಿಂದೂ ಸಂಘಟನೆಗಳಿಂದ ಆಕ್ರೋಶ | ಪುತ್ತೂರು ಬಸ್‍ ನಿಲ್ದಾಣದ ಬಳಿ ಜಮಾಯಿಸಿದ ಹಿಂದೂ ಸಂಘಟನೆಗಳು

ಪುತ್ತೂರು: ಸುಹಾಸ್‍ ಶೆಟ್ಟಿ ಹತ್ಯೆ  ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷದ್ ಬಂದ್ ಗೆ ಕರೆ ನೀಡಿದರೂ ಶುಕ್ರವಾರ ಪುತ್ತೂರಿನಲ್ಲಿ ಕೆಲವು ಅಂಗಡಿಗಳು ಬಂದ್‍ ಮಾಡದ ಕಾರಣ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಪರ ಸಂಘಟನೆಗಳು, ಪುತ್ತೂರು ಬಸ್ ನಿಲ್ದಾಣ ಬಳಿ ಜಮಾಯಿಸಿದ ಘಟನೆ ನಡೆದಿದೆ. 11 ಗಂಟೆ ಸುಮಾರಿಗೆ ಅರುಣ್ ಕುಮಾರ್ ಪುತ್ತಿಲ ಅವರು ಪೊಲೀಸರ ಜೊತೆ ಮಾತನಾಡಿ, ಅಂಗಡಿಗಳನ್ನು ಬಂದ್ ಮಾಡಿಸಿ, ಹಾಗೊಂದು ವೇಳೆ ಬಂದ್ ಮಾಡದೇ ಇದ್ದರೆ ಸವಾಲು ಎದುರಿಸಲು ಸಿದ್ಧ ಎಂದರು. ಮುರಳೀಕೃಷ್ಣ ಹಸಂತ್ತಡ್ಕ

ಪುತ್ತೂರಿನ ಬಂದ್ ಮಾಡದ ಅಂಗಡಿಗಳ ವಿರುದ್ಧ ಹಿಂದೂ ಸಂಘಟನೆಗಳಿಂದ ಆಕ್ರೋಶ | ಪುತ್ತೂರು ಬಸ್‍ ನಿಲ್ದಾಣದ ಬಳಿ ಜಮಾಯಿಸಿದ ಹಿಂದೂ ಸಂಘಟನೆಗಳು Read More »

error: Content is protected !!
Scroll to Top