ಸಿಡಿಲು ಬಡಿದು ಮನೆಗೆ ಹಾನಿ,
ಪತ್ತೂರು : ಇಂದು ಮಧ್ಯಾಹ್ನ ವೇಳೆ ಗುಡುಗು ಮಳೆಗೆ ಕಾವು ಮಾಡ್ನರು ಗ್ರಾಮದ ಪರನೀರು ಎಂಬಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯಾದ ಘಟನೆ ನಡೆದಿದೆ. ಪರನೀರು ನಿವಾಸಿ ಈಶ್ವರ ಗೌಡ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಮೀಟರ್ ಸುಟ್ಟುಹೋಗಿದೆ. ನೆಲಕ್ಕೆ ಹಾಕಲಾಗಿದ್ದ ಟೈಲ್ಸ್ ಪುಡಿಯಾಗಿದೆ. ಘಟನೆ ಸಂದರ್ಭ ಈಶ್ವರ ಗೌಡರು ಮಾತ್ರ ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಸಿಡಿಲು ಬಡಿದು ಮನೆಗೆ ಹಾನಿ, Read More »










