ಪುತ್ತೂರು

ಜಯರಾಮ್ ಪೂಜಾರಿ ಬಡಾವು ನಿ‍ಧನ

ಪುತ್ತೂರು: ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಅವರ ಸಹೋದರ ಜಯರಾಮ್ ಪೂಜಾರಿ ಬಡಾವು (52) ನಿಧನರಾಗಿದ್ದಾರೆ. ಅನಾರೋಗ್ಯದಿಂದಿದ್ದ ಅವರು ಶನಿವಾರ ನಿಧನರಾದರು. ಮೃತರು ಪತ್ನಿ, ಮಗಳು ಹಾಗೂ ಸಹೋದರರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಜಯರಾಮ್ ಪೂಜಾರಿ ಬಡಾವು ನಿ‍ಧನ Read More »

ವಿಘ್ನೇಶ್ ಮಡ್ ಬ್ಲಾಕ್ ಸಂಸ್ಥೆಯ ಮತ್ತೊಂದು ಘಟಕ ಇಂದು ಉದ್ಘಾಟನೆ |ಇಂಟರ್ ಲಾಕ್, ಹೋಲೋಬ್ಲಾಕ್ಸ್ ಉತ್ಪನ್ನಗಳ ತಯಾರಿಕಾ ಘಟಕಕ್ಕೆ ಚಾಲನೆ

ಪುತ್ತೂರು: ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ವಿಘ್ನೇಶ್ ಮಡ್ ಬ್ಲಾಕ್ ಸಂಸ್ಥೆ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದು, ಮಡ್ ಬ್ಲಾಕ್ ಜತೆಗೆ ಚಿಕ್ಕಮುಡ್ನೂರು ಗ್ರಾಮದ ಕೊಪ್ಪಳದಲ್ಲಿ ಇಂಟರ್ ಲಾಕ್ಸ್, ಹೋಲೋಬ್ಲಾಕ್ಸ್ ಉತ್ಪನ್ನಗಳ ತಯಾರಿಕಾ ಘಟಕ ಇಂದು ಶುಭಾರಂಭಗೊಳ್ಳಲಿದೆ. ಗುಣಮಟ್ಟ, ವಿಶ್ವಾಸಾರ್ಹತೆ ಜತೆಗೆ ಕಡಿಮೆ ಖರ್ಚಿನಲ್ಲಿ ಸುಂದರ ಕಟ್ಟಡ ನಿರ್ಮಾಣಕ್ಕೆ ಹೆಸರುವಾಸಿಯಾಗಿರುವ, ಕಳೆದ ಹತ್ತು ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ವಿಘ್ನೇಶ್ ಮಡ್ ಬ್ಲಾಕ್ ಸಂಸ್ಥೆಯ ಮತ್ತೊಂದು ಘಟಕ ಉದ್ಘಾಟನೆಗೊಳ್ಳಲಿದೆ. ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಮಾಜಿ ಶಾಸಕಿ ಶಕುಂತಳ ಟಿ.

ವಿಘ್ನೇಶ್ ಮಡ್ ಬ್ಲಾಕ್ ಸಂಸ್ಥೆಯ ಮತ್ತೊಂದು ಘಟಕ ಇಂದು ಉದ್ಘಾಟನೆ |ಇಂಟರ್ ಲಾಕ್, ಹೋಲೋಬ್ಲಾಕ್ಸ್ ಉತ್ಪನ್ನಗಳ ತಯಾರಿಕಾ ಘಟಕಕ್ಕೆ ಚಾಲನೆ Read More »

ಮಣ್ಣು ರಾಶಿ ಹಾಕಿ ಸಮಸ್ಯೆ | ಪುತ್ತಿಲ ಪರಿವಾರದಿಂದ ಶ್ರಮದಾನದ

ಪುತ್ತೂರು: ಪರ್ಲಡ್ಕ ಅಂಗನವಾಡಿ ಗೇಟ್ ಬಳಿ ಮಣ್ಣು ರಾಶಿ ಹಾಕಿ ತಿಂಗಳು ಕಳೆದರೂ , ಸಂಬಂಧಪಟ್ಟ ಇಲಾಖೆಗಳಿಗೆ , ನಗರಸಭೆಗೆ ತಿಳಿಸಿದರೂ ತೆರವುಗೊಳಿಸದೇ ಇರುವುದರಿಂದ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಪುತ್ತಿಲ ಪರಿವಾರದ ವತಿಯಿಂದ ಶ್ರಮದಾನದ ಮೂಲಕ ಸಮಸ್ಯೆ ಪರಿಹರಿಸಲಾಯಿತು. ಅಂಗನವಾಡಿ  ವಿದ್ಯಾರ್ಥಿಗಳಿಗೆ ನಡೆಯಲಾರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಶನಿವಾರ ಪುತ್ತಿಲ ಪರಿವಾರದ ವತಿಯಿಂದ ಶ್ರಮದಾನ ಮೂಲಕ ಮಣ್ಣು ಸಮತಟ್ಟುಗೊಳಿಸಲಾಯಿತು. ಶ್ರಮದಾನದಲ್ಲಿ  ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪ್ರಮುಖರಾದ  ಸುಧೀರ್ ಆಚಾರ್ಯ ಪ್ರವೀಣ್ ಭಂಡಾರಿ ,  ದೀಕ್ಷಿತ್ ,

ಮಣ್ಣು ರಾಶಿ ಹಾಕಿ ಸಮಸ್ಯೆ | ಪುತ್ತಿಲ ಪರಿವಾರದಿಂದ ಶ್ರಮದಾನದ Read More »

ಆರ್ಯಾಪು, ನಿಡ್ಪಳ್ಳಿ ಗ್ರಾಪಂ ಉಪ ಚುನಾವಣೆ | ಆರು ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ಪುತ್ತೂರು: ಆರ್ಯಾಪು ಹಾಗೂ ನಿಡ್ನಳ್ಳಿ ಗ್ರಾ.ಪಂಗಳಲ್ಲಿ ತಲಾ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಆರು ಮಂದಿ ಸದಸ್ಯರು ಅಂತಿಮ ಕಣದಲ್ಲಿದ್ದಾರೆ. ಸದಸ್ಯರಿಬ್ಬರ ನಿಧನದಿಂದ ತೆರವಾದ ತಲಾ ಒಂದು ಸ್ಥಾನಕ್ಕೆ ಜು.23ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು ಸೇರಿದಂತೆ ಒಟ್ಟು ಆರು ಮಂದಿ ಅಂತಿಮ ಕಣದಲ್ಲಿದ್ದಾರೆ. ಹೀಗಾಗಿ ಎರಡೂ ಪಂಚಾಯತ್‌ಗಳಲ್ಲಿಯೂ ತಲಾ ಒಂದು ಸ್ಥಾನಕ್ಕೆ ತ್ರಿಕೋಣ ಸ್ಪರ್ಧೆ ಏರ್ಪಡಲಿದೆ. ನಿಡ್ನಳ್ಳಿ ಗ್ರಾ.ಪಂನ ನಿಡ್ನಳ್ಳಿ ವಾರ್ಡ್ 2ರ ಸಾಮಾನ್ಯ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ

ಆರ್ಯಾಪು, ನಿಡ್ಪಳ್ಳಿ ಗ್ರಾಪಂ ಉಪ ಚುನಾವಣೆ | ಆರು ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ Read More »

ಗ್ರಾಪಂ ಉಪಚುನಾವಣೆ : ಪುತ್ತಿಲ ಪರಿವಾರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಬ್ಯಾಟ್ ಚಿಹ್ನೆ

ಪುತ್ತೂರು: ಪುತ್ತೂರು ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬ್ಯಾಟ್ ಚಿಹ್ನೆ ದೊರಕಿದ್ದು, ಇದೀಗ ಮತ್ತೊಮ್ಮೆ ಗ್ರಾಪಂ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಬ್ಯಾಟ್ ಚಿಹ್ನೆ ದೊರಕಿದೆ. ನಿಡ್ಪಳ್ಳಿ ಗ್ರಾಪಂ ನಿಂದ ಸ್ಪರ್ಧಿಸುತ್ತಿರುವ ತೋಟ, ಜಗನ್ನಾಥ ರೈ ಬ್ಯಾಟ್ ಚಿಹ್ನೆ ಲಭಿಸಿದೆ. ಆರ್ಯಾಪು ಗ್ರಾಪಂನಿಂದ ಸ್ಪರ್ಧಿಸಿರುವ ಸುಬ್ರಹ್ಮಣ್ಯ ಬಲ್ಯಾಯ ಅವರಿಗೆ ಬ್ಯಾಟ್ ಚಹ್ನೆ ಲಭಿಸಿದೆ.

ಗ್ರಾಪಂ ಉಪಚುನಾವಣೆ : ಪುತ್ತಿಲ ಪರಿವಾರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಬ್ಯಾಟ್ ಚಿಹ್ನೆ Read More »

ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ರಾಜೇಶ್ ಬೆಜ್ಜಂಗಳ  ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಗಳವಾರ ಬೈಪಾಸ್ ರಸ್ತೆಯಲ್ಲಿರುವ ಆಶ್ಮಿ ಕಂಫಾರ್ಟ್ಸ್ ನಲ್ಲಿ ನಡೆಯಿತು. ರೋಟರಿ ವಲಯ ಸೇನಾನಿ, ಕ್ಲಬ್ ಮಾಜಿ ಅಧ್ಯಕ್ಷ ನವೀನ್ ಚಂದ್ರ ನಾಯ್ಕ ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ಕ್ಲಬ್ ನಿರ್ಗಮನ ಅಧ್ಯಕ್ಷ ರಫೀಕ್ ರವರ ತಂಡ ಉತ್ತಮ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಬೇಕಾಗಿದೆ ಹಾಗೆಯೇ ಕ್ಲಬ್ ಚುಕ್ಕಾಣಿ ಹಿಡಿದ ನೂತನ ಅಧ್ಯಕ್ಷ ರಾಜೇಶ್ ಬೆಜ್ಜಂಗಳರವರಿಗೆ

ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ Read More »

ಬಪ್ಪಳಿಗೆ ಗೆಳೆಯರ ಬಳಗ-ಮೆಸ್ಕಾಂ ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ

ಪುತ್ತೂರು: ಬಪ್ಪಳಿಗೆ ಗೆಳೆಯರ ಬಳಗ ಹಾಗೂ ಮೆಸ್ಕಾ ಸಿಬ್ಬಂದಿ ವರ್ಗದ ವತಿಯಿಂದ ‘ನಮ್ಮ ಊರು ನಮ್ಮ‌ರಕ್ಷಣೆ’ ಧ್ಯೇಯದಡಿ ನಗರದ ಬಪ್ಪಳಿಗೆಯಿಂದ ಬಲ್ನಾಡುವರೆಗೆ ರಸ್ತೆ ಬದಿ ಇರುವ ಅಪಾಯಕಾರಿ ಮರದ ಕೊಂಬೆ ಹಾಗೂ ರಸ್ತೆ ಬದಿಯನ್ನು ಸ್ವಚ್ಛ ಮಾಡುವ ಕಾರ್ಯಕ್ರಮ ನಡೆಯಿತು. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ರಸ್ತೆ ಬದಿಗಳಲ್ಲಿ ಹಲವಾರು ಅಪಾಯಕಾರಿ ಮರಗಳು ಇರುತ್ತವೆ.‌ ಕೆಲವೊಮ್ಮೆ ಆ ಮರದ ಕೊಂಬೆಗಳು ಮಳೆಯ ಸಂದರ್ಭ ಅಪಾಯವನ್ನ ತಂದೊಡ್ಡುತ್ತವೆ. ಹೀಗಿರುವಾಗ ಅದನ್ನ

ಬಪ್ಪಳಿಗೆ ಗೆಳೆಯರ ಬಳಗ-ಮೆಸ್ಕಾಂ ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ Read More »

ಹೂವಿನ ಬಳ್ಳಿಗಳನ್ನು ಛಾವಣಿಯಾಗಿ ಆಶ್ರಯಿಸಿಕೊಂಡ ಶಾಲಾ ರಂಗ ಮಂದಿರ | ಎಂತವರನ್ನೂ ಆಕರ್ಷಿಸುತ್ತಿದೆ ಹಸಿರು ಹೊದಿಕೆಯ ರಂಗಮಂದಿರ

ಪುತ್ತೂರು: ಶಾಲೆ ಅಥವಾ ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಪ್ರಕೃತಿದತ್ತ ಗಿಡ-ಬಳ್ಳಿಗಳ ಪಾತ್ರ ಮಹತ್ವದ್ದಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಶಾಲೆಯೊಂದರಲ್ಲಿ ಹೂವಿನ ಬಳ್ಳಿಯೊಂದನ್ನು ಶಾಲಾ ಸಭಾ ವೇದಿಕೆಗೆ ಹರಡಿ ಬಿಟ್ಟಿದ್ದು ಇದು ಎಂತವರನ್ನೂ ಆಕರ್ಷಿಸುವಂತಿದೆ. ಪುತ್ತೂರು ತಾಲೂಕಿನ ಕೆಯ್ಯೂರು ಕೆಪಿಎಸ್ ಶಾಲೆಯಲ್ಲಿ ಸಭಾ ವೇದಿಕೆಯ ಎರಡೂ ಬದಿಗಳಲ್ಲಿ ಈ ಬಳ್ಳಿಗಳನ್ನು ಬಿಡಲಾಗಿದ್ದು, ಅದು ಇಡೀ ವೇದಿಕೆಯನ್ನು ಹರಡಿಕೊಂಡು ಹಸಿರಿನಿಂದ ಕೂಡಿದೆ. ಹಿಂದೆ ಈ ಶಾಲೆಯಲ್ಲಿ ಫ್ಯಾಶನ್ ಫ್ರೂಟ್ ಬಳ್ಳಿಗಳನ್ನು ಇದೇ ವೇದಿಕೆಗೆ ಬಿಡಲಾಗಿತ್ತು.

ಹೂವಿನ ಬಳ್ಳಿಗಳನ್ನು ಛಾವಣಿಯಾಗಿ ಆಶ್ರಯಿಸಿಕೊಂಡ ಶಾಲಾ ರಂಗ ಮಂದಿರ | ಎಂತವರನ್ನೂ ಆಕರ್ಷಿಸುತ್ತಿದೆ ಹಸಿರು ಹೊದಿಕೆಯ ರಂಗಮಂದಿರ Read More »

ಶ್ರೀ ರಕ್ಷಾ ಸಂಜೀವಿನಿ ಸ್ವಸಹಾಯ ಸಂಘ ರಚನೆ

ಪುತ್ತೂರು: ಶ್ರೀ ದುರ್ಗಾ ಸಂಜೀವಿನಿ ನರಿಮೊಗರು ಗ್ರಾಮ ಪಂಚಾಯತ್ ಮಟ್ಟದ  ಶ್ರೀ ರಕ್ಷಾ ಸಂಜೀವಿನಿ ಸ್ವಸಹಾಯ ಸಂಘವನ್ನು ಪೆರಡ್ಕ ಅಂಗನವಾಡಿಯಲ್ಲಿ ರಚಿಸಲಾಯಿತು. ವೀರಮಂಗಳ ಅನಾಜೆತಾಡ್ಕ ಅಂಗನವಾಡಿಯಲ್ಲಿ ನಡೆದ ಸಭೆಯಲ್ಲಿ ಸಂಘವನ್ನು ಉದ್ಘಾಟಿಸಲಾಯಿತು. ಒಕ್ಕೂಟದ ಅಧ್ಯಕ್ಷೆ ಮೋಹಿನಿ ಉದ್ಘಾಟನೆ ನೆರವೇರಿಸಿದರು. ಪುತ್ತೂರು ತಾಲೂಕು ಪಂಚಾಯತ್ ವಲಯ ಮೇಲ್ವಿಚಾರಕಿ ನಮಿತಾ NRLM ಯೋಜನೆ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಶಾಂತಿ , ಅನುರಾಧ  ಪ್ರಭು. LCRP ಸುನಿತಾ ಹಾಗೂ ಬೇಬಿ ಕೆ , ಕೃಷಿ ಸಖಿ ಭಾರತಿ

ಶ್ರೀ ರಕ್ಷಾ ಸಂಜೀವಿನಿ ಸ್ವಸಹಾಯ ಸಂಘ ರಚನೆ Read More »

ಖ್ಯಾತ ಸ್ಯಾಕ್ಸೋಫೋನ್ ವಾದಕ ಡಾ.ಪಿ.ಕೆ.ಗಣೇಶ್ ಅವರಿಗೆ ತಮಿಳುನಾಡಿನಲ್ಲಿ ಕಲಾನಿಧಿ ಪ್ರಶಸ್ತಿ ನೀಡಿ ಗೌರವ

ಪುತ್ತೂರು: ಖ್ಯಾತ ಸ್ಯಾಕ್ಸೋಫೋನ್ ವಾದಕ ಪುತ್ತೂರಿನ ಡಾ.ಪಿ.ಕೆ.ಗಣೇಶ್ ಅವರಿಗೆ ತಮಿಳುನಾಡಿನ ಮೈಲಾಡುತುರೈಯಲ್ಲಿರುವ ಧರ್ಮಪುರಂ ಅಧೀನಂ 27ನೇ ಮಹಾಸನ್ನಿಧಾನಂ ತಿರುಪ್ಪಾನಂದಲ್ ಕುಂಬಾಭಿಷೇಕದಲ್ಲಿ ಜು.7 ರಂದು ನಡೆದ ಸಂಗೀತ ಕಚೇರಿಯಲ್ಲಿ ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತಿಹಾಸದಲ್ಲೇ ಮೊದಲ ಬಾರಿಗೆ ತಮಿಳುನಾಡಿನ ಧರ್ಮಪುರಂ ಅಧೀನಂ (ಮಠ) ಸ್ಯಾಕ್ಸೋಫೋನ್ ಕ್ಷೇತ್ರಕ್ಕೆ ನೀಡಿದ ಪ್ರಶಸ್ತಿ ಹಾಗೂ ಚಿನ್ನದ ಪದಕ ಇದಾಗಿದ್ದು, ಚಿನ್ನದ ಪದಕ ಜತೆ ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಡಾ.ಪಿ.ಕೆ.ಗಣೇಶ್ ಅವರು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಧಾನ

ಖ್ಯಾತ ಸ್ಯಾಕ್ಸೋಫೋನ್ ವಾದಕ ಡಾ.ಪಿ.ಕೆ.ಗಣೇಶ್ ಅವರಿಗೆ ತಮಿಳುನಾಡಿನಲ್ಲಿ ಕಲಾನಿಧಿ ಪ್ರಶಸ್ತಿ ನೀಡಿ ಗೌರವ Read More »

error: Content is protected !!
Scroll to Top