ಕಬಕ ವಿದ್ಯಾಪುರ ಶ್ರೀ ನಾಗಪಂಚಶ್ರೀ ಭಜನಾ ಮಂಡಳಿಗೆ ಪುತ್ತಿಲ ಪರಿವಾರದಿಂದ ಸಮವಸ್ತ್ರ ವಿತರಣೆ
ಪುತ್ತೂರು: ನಾಗ ಮತ್ತು ಪಂಚ ದೈವಗಳ ಸಾನಿಧ್ಯದಲ್ಲಿ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ಮಾರ್ಗದರ್ಶನದಲ್ಲಿ ನಡೆಸಲ್ಪಡುತ್ತಿರುವ ಕಬಕ ವಿದ್ಯಾಪುರ ಶ್ರೀ ನಾಗಪಂಚಶ್ರೀ ಭಜನೆ ಮತ್ತು ಕುಣಿತ ಭಜನಾ ಮಂಡಳಿಯವರಿಗೆ ಪುತ್ತಿಲ ಪರಿವಾರದ ಸೇವಾ ಸಮರ್ಪಣೆಯ ಅಂಗವಾಗಿ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಸಾಂಕೇತಿಕವಾಗಿ ಸಮವಸ್ತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಅನಿಲ್ ತೆಂಕಿಲ, ಮತ್ತಿತರರು ಉಪಸ್ಥಿತರಿದ್ದರು.
ಕಬಕ ವಿದ್ಯಾಪುರ ಶ್ರೀ ನಾಗಪಂಚಶ್ರೀ ಭಜನಾ ಮಂಡಳಿಗೆ ಪುತ್ತಿಲ ಪರಿವಾರದಿಂದ ಸಮವಸ್ತ್ರ ವಿತರಣೆ Read More »










