ಬಿಜೆಪಿ ಮನೆ ಮನೆ ಭೇಟಿ ಮಹಾ ಅಭಿಯಾನಕ್ಕೆ ಚಾಲನೆ | ಬೂತ್ 49 ರಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರುರವರಿಂದ ಮತ ಯಾಚನೆ
ಉಪ್ಪಿನಂಗಡಿ: ಬಿಜೆಪಿ ವತಿಯಿಂದ ಮನೆ ಮನೆ ಭೇಟಿ ಮಹಾ ಅಭಿಯಾನಕ್ಕೆ ಇಂದು ಮುಂಜಾನೆ ಚಾಲನೆ ನೀಡಲಾಗಿದೆ. ಹಿರೇಬಂಡಾಡಿ ಬೂತ್ ಸಂಖ್ಯೆ 49 ರಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು ಮನೆ ಮನೆ ಭೇಟಿ ನೀಡಿ ಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಪ್ರಮುಖರಾದ ಜನಾರ್ದನ ಅನಂತಿಮಾರ್, ವಿಶ್ವನಾಥ ಕೆಮ್ಮಟೆ, ನಿತಿನ್ ತಾರಿತ್ತಡಿ, ಲಕ್ಷ್ಮೀಶ ನಿಡ್ಡೆಂಕಿ, ಸುರೇಶ್ ಹಳೆಮನೆ, ಡೀಕಯ್ಯ ಪನ್ನೊಟ್ಟು, ಭರತ್ ಜಾಲು ಉಪಸ್ಥಿತರಿದ್ದರು.










