ಪುತ್ತೂರು

ಕಾವು ಶಾಲಾ ಶಿಕ್ಷಕ ಭಾಸ್ಕರ ಗೌಡರಿಗೆ ವಿದಾಯ ಸಮಾರಂಭ

ಪುತ್ತೂರು: ಒಂದು ಸರಕಾರಿ ಶಾಲೆ ಹೇಗಿರಬೆಕೆಂಬುದಕ್ಕೆ ಕಾವು ಸರಕಾರಿ ಹಿ ಪ್ರಾ ಶಾಲೆಯೇ ಉದಾಹರಣೆಯಾಗಿದೆ, ಸರಕಾರ ಕೆಪಿಎಸ್ ಸ್ಕೂಲ್‌ಗೆ ಕಾವು ಶಾಲೆಯನ್ನೇ ಮಾದರಿಯನ್ನಾಗಿ ಪರಿಗಣಿಸಬಹುದಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಕಾವು ಸರಕಾರಿ ಉ ಹಿ ಪ್ರಾ ಶಾಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕ ಭಾಸ್ಕರ ಗೌಡ ನರಿಯೂರು ಅವರ ವಿದಾಯ ಸ,ಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು. ಈ ಶಾಲೆಯನ್ನು ದತ್ತು ಪಡೆದುಕೊಂಡಿರುವ ಕಾವು ಹೇಮನಾಥ ಶೆಟ್ಟಿಯವರ ಮುತುವರ್ಜಿಯಿಂದ ಇಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನಡೆದಿದೆ […]

ಕಾವು ಶಾಲಾ ಶಿಕ್ಷಕ ಭಾಸ್ಕರ ಗೌಡರಿಗೆ ವಿದಾಯ ಸಮಾರಂಭ Read More »

ಭಾರೀ ಗಾಳಿ ಮಳೆಗೆ ಧರಾಶಾಹಿಯಾದ ಮರ | ನೆಲಕ್ಕುರುಳಿದ 11 ವಿದ್ಯುತ್ ಕಂಬಗಳು

ಪುತ್ತೂರು: ಭಾನುವಾರ ಸುರಿದ ಭಾರೀ ಗಾಳಿ ಮಳೆಗೆ ನಗರದ ಬಪ್ಪಳಿಗೆಯಲ್ಲಿ ಮೇ ಫ್ಲವರ್ ಮರ ಧರಾಶಾಹಿಯಾದ ಪರಿಣಾಮ 11 ಕರೆಂಟ್ ಕಂಬಗಳು ನೆಲಕ್ಕುರುಳಿವೆ. ಜನನಿಬಿಡ ಪ್ರದೇಶದಲ್ಲೇ ಇದ್ದ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಉರುಳಿ ಬಿದ್ದುದಲ್ಲದೆ ವಾಹನ ಸವಾರರು ಕೂದಳೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ಮರ ಬಿದ್ದ ಪರಿಣಾಮ ಬಲ್ನಾಡು-ವಿಟ್ಲ  ರಸ್ತೆ ಸಂಚಾರಕ್ಕೆ ತಡೆ ಉಂಟಾದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಮನೆಯೊಂದರ ಕಾಂಪೌಂಡ್ ಗೋಡೆಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ

ಭಾರೀ ಗಾಳಿ ಮಳೆಗೆ ಧರಾಶಾಹಿಯಾದ ಮರ | ನೆಲಕ್ಕುರುಳಿದ 11 ವಿದ್ಯುತ್ ಕಂಬಗಳು Read More »

ಭಾರತದ ಜನರು ವಿಶಿಷ್ಟ ಫಲಿತಾಂಶ ನೀಡಿದ್ದಾರೆ | ‘ಲೋಕಸಭಾ ಚುನಾವಣೆ-2024’ರ ವಿಶ್ಲೇಷಣಾ ಕಾರ್ಯಕ್ರಮದಲ್ಲಿ ವಿಕಾಸ್ ಪಿ.

ಪುತ್ತೂರು: ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶವು ಮತ್ತೊಂದು ಸಮ್ಮಿಶ್ರ ಸರಕಾರ ರಚನೆಗೆ ಮುನ್ನುಡಿ ಬರೆದಿದೆ. ಸಮ್ಮಿಶ್ರ ಸರಕಾರಗಳು ನಮ್ಮ ದೇಶಕ್ಕೆ ಹೊಸ ವಿಚಾರವಲ್ಲ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಸಮ್ಮಿಶ್ರ ಸರಕಾರಗಳು ಹೊಸದಲ್ಲ. ಅವರು ಕಳೆದ 10 ವರ್ಷದಲ್ಲಿ ಸಮ್ಮಿಶ್ರ ಮಾದರಿಯ ಸರಕಾರವನ್ನೇ ಮುನ್ನಡೆಸಿದ್ದಾರೆ. ಆದರೆ ಈ ಭಾರಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹೊಸ ಮಾದರಿ ಸಮ್ಮಿಶ್ರ ಸರಕಾರ ಈ ದೇಶವನ್ನು ಮುನ್ನಡೆಸಲಿದೆ ಎಂದು ಖ್ಯಾತ ರಾಜಕೀಯ ವಿಶ್ಲೇಷಕ ವಿಕಾಸ್ ಪಿ. ಹೇಳಿದರು. ಅವರು

ಭಾರತದ ಜನರು ವಿಶಿಷ್ಟ ಫಲಿತಾಂಶ ನೀಡಿದ್ದಾರೆ | ‘ಲೋಕಸಭಾ ಚುನಾವಣೆ-2024’ರ ವಿಶ್ಲೇಷಣಾ ಕಾರ್ಯಕ್ರಮದಲ್ಲಿ ವಿಕಾಸ್ ಪಿ. Read More »

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ | ಇಂದು ಸಂಜೆ ವಿಟ್ಲ ಬಿಜೆಪಿ ವತಿಯಿಂದ ವಿಜಯೋತ್ಸವ, ನೇರ ಪ್ರಸಾರ

ವಿಟ್ಲ: ನರೇಂದ್ರ ಮೋದಿ ಮೂರನೇ ಬಾರಿಗೆ ಇಂದು ಪ್ರಧಾನಿ ಪಟ್ಟ ಏರಲಿರುವ ಹಿನ್ನಲೆಯಲ್ಲಿ ವಿಟ್ಲ ಬಿಜೆಪಿ ಕಾರ್ಯಾಲಯದ ವತಿಯಿಂದ ವಿಜಯೋತ್ಸವ ಇಂದು ಸಂಜೆ ವಿಟ್ಲ ಖಾಸಗಿ ಬಸ್‍ ನಿಲ್ದಾಣದಲ್ಲಿ ನಡೆಯಲಿದೆ. ಇಂದು ಸಂಜೆ 6. 00 ಗಂಟೆಗೆ  ಜಗ ಮೆಚ್ಚಿದ ವಿಶ್ವನಾಯಕ ನರೇಂದ್ರ ಮೋದಿಯವರ  3 ನೇ ಅವಧಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸಂದರ್ಭದಲ್ಲಿ ವಿಟ್ಲ ಬಿಜೆಪಿ ಕಾರ್ಯಾಲಯದಿಂದ ವಿಜಯೋತ್ಸವ ಮೆರವಣಿಗೆ ಹೊರಟು ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮದ  ನೇರ ಪ್ರಸಾರ ವೀಕ್ಷಣೆ ಹಾಗೂ

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ | ಇಂದು ಸಂಜೆ ವಿಟ್ಲ ಬಿಜೆಪಿ ವತಿಯಿಂದ ವಿಜಯೋತ್ಸವ, ನೇರ ಪ್ರಸಾರ Read More »

ಪ್ರಕೃತಿಯ ವೈಪರೀತ್ಯಗಳಿಗೆ ಮನುಷ್ಯನೇ ಕಾರಣ | ವಿಶ್ವ ಪರಿಸರ ದಿನಾಚರಣೆಯಲ್ಲಿ ಲತಾ ಜಿ. ಭಟ್

ಪುತ್ತೂರು: ಪ್ರಕೃತಿಯ ವೈಪರೀತ್ಯಗಳಿಗೆ ಮನುಷ್ಯನೇ ಕಾರಣ. ಆದ್ದರಿಂದ ಪ್ರಕೃತಿಯ ಸಂರಕ್ಷಣಾ ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳಬೇಕು. ಕೇವಲ ನಮ್ಮ ಪ್ರಾಂತ್ಯವಲ್ಲದೇ ಇಡೀ ಪ್ರಪಂಚದಲ್ಲಿ ಪರಿಸರ ರಕ್ಷಣೆಯಾಗಬೇಕು ಎಂದು ಅರಣ್ಯ ಸಂರಕ್ಷಣಾ ಅಧಿಕಾರಿ ಲತಾ ಜಿ. ಭಟ್ ಹೇಳಿದರು. ಅವರು ನಗರದ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ,  ಮನುಷ್ಯ ತನ್ನ ಸ್ವಾರ್ಥದಿಂದ ಪ್ರಕೃತಿಯನ್ನು ದುರುಪಯೋಗಗೊಳಿಸುತ್ತಿದ್ದಾನೆ. ಆದ್ದರಿಂದ ಇಂದಿನ ಪೀಳಿಗೆಯಾದ

ಪ್ರಕೃತಿಯ ವೈಪರೀತ್ಯಗಳಿಗೆ ಮನುಷ್ಯನೇ ಕಾರಣ | ವಿಶ್ವ ಪರಿಸರ ದಿನಾಚರಣೆಯಲ್ಲಿ ಲತಾ ಜಿ. ಭಟ್ Read More »

ವೀರಮಂಗಲ, ಕಾಯರ್ ಮುಗೇರು, ಪಲ್ಲತ್ತೋಡಿ ಪರಿಸರದಲ್ಲಿ ಆನೆ ಪ್ರತ್ಯಕ್ಷ | ಕೃಷಿ ತೋಟಗಳಿಗೆ ಹಾನಿ

ಪುತ್ತೂರು: ವೀರಮಂಗಲ, ಕಾಯರ್ ಮುಗೇರು ಹಾಗೂ ಪಲ್ಲತ್ತೋಡಿ, ಖಂಡಿಗೆ  ಪರಿಸರದಲ್ಲಿ ಇಂದು ಆನೆ ಪ್ರತ್ಯಕ್ಷವಾಗಿದ್ದು, ಕೃಷಿ ತೋಟಗಳಿಗೆ ಹಾನಿ ಮಾಡಿದೆ. ಬಾಳೆಗಿಡ, ಅಡಕೆ ಮರಗಳಿಗೆ ಆನೆ ಹಾನಿ ಮಾಡಿದ್ದು, ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಆನೆಯನ್ನು ಕಾಡಿಗೆ ಅಟ್ಟುವ ಕೆಲಸ ಮಾಡಬೇಕು ಎಂದು ಸ್ಥಳೀಯರು ವಿನಂತಿಸಿದ್ದಾರೆ. ಸವಣೂರು ಪರಿಸರದಿಂದ ನೇರವಾಗಿ ಗೌರಿ ಹೊಳೆ ದಾಟಿ ಬಂದಿರುವ ಆನೆ  ಅರ್ತಿಕೆರೆ, ಕಾಯರ್ ಮುಗೇರು, ವೀರಮಂಂಗಲ ಮುಂತಾದ ಕಡೆಗಳಲ್ಲಿ ತಿರುಗಾಡುತ್ತಿದೆ. ಪರಿಣಾಮ ಜನರು ಆತಂಕಿತರಾಗಿದ್ದಾರೆ. ಆನೆಯ ಹೆಜ್ಜೆ ಗುರುತು ಕಂಡು

ವೀರಮಂಗಲ, ಕಾಯರ್ ಮುಗೇರು, ಪಲ್ಲತ್ತೋಡಿ ಪರಿಸರದಲ್ಲಿ ಆನೆ ಪ್ರತ್ಯಕ್ಷ | ಕೃಷಿ ತೋಟಗಳಿಗೆ ಹಾನಿ Read More »

ಕೆದಿಲ ಅನುದಾನಿತ ಹಿ ಪ್ರಾ ಶಾಲಾ ನೂತನ ಕೊಠಡಿಗಳ ಉದ್ಘಾಟನೆ |ದಾನಿಗಳ ಮೂಲಕ ಶಾಲಾ ಕಟ್ಟಡ ನಿರ್ಮಾಣ ಮಾಡಿರುವುದು ಅಭಿನಂದನಾರ್ಹ: ಅಶೋಕ್ ರೈ

ಪುತ್ತೂರು : ಊರಿನ ಹಾಗೂ ಇತರೆ ದಾನಿಗಳ ನೆರವಿನಿಂದ ತಮ್ಮ ಗ್ರಾಮದಲ್ಲಿ ಪಾಳು ಬಿದ್ದ ಶಾಲೆಯನ್ನು ನವೀಕರಣ ಮಾಡಿದ್ದು ಅಭಿನಂದನಾರ್ಹ ಕಾರ್ಯಕವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಕೆದಿಲ ಅನುದಾನಿತ ಹಿ ಪ್ರಾ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಇದೇ ಶಾಲೆಯ ಶೌಚಾಲಯಕ್ಕೆ 5ಲಕ್ಷ ಅನುದಾನ ನೀಡುವುದಾಗಿ ಘೋಷಣೆ ಮಾಡಿದರು. ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದ ಶಿಕ್ಷಣ ಅತೀ ಅಗತ್ಯವಾಗಿದೆ. ಬಡವರ ಮಕ್ಕಳೂ ಇಂಗ್ಲೀಷ್ ಮಾತನಾಡಬೇಕು, ಒಳ್ಳೆಯ ಕೆಲಸವನ್ನು ಪಡೆಯಬೇಕು ಇಲ್ಲಿ ಶಿಕ್ಷಕರ

ಕೆದಿಲ ಅನುದಾನಿತ ಹಿ ಪ್ರಾ ಶಾಲಾ ನೂತನ ಕೊಠಡಿಗಳ ಉದ್ಘಾಟನೆ |ದಾನಿಗಳ ಮೂಲಕ ಶಾಲಾ ಕಟ್ಟಡ ನಿರ್ಮಾಣ ಮಾಡಿರುವುದು ಅಭಿನಂದನಾರ್ಹ: ಅಶೋಕ್ ರೈ Read More »

ಕೊಂಬೆಟ್ಟು ಕಾಲೇಜಿನ ನೂತನ ಸಭಾಂಗಣಕ್ಕೆ ಶಾಸಕ ಅಶೋಕ ರೈ  ಶಿಲಾನ್ಯಾಸ

 ಪುತ್ತೂರು : ಕೊಂಬೆಟ್ಟು ಸರಕಾರಿ ಪ ಪೂ ಕಾಲೇಜಿನಲ್ಲಿ 80 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಭಾಂಗಣಕ್ಕೆ ಶಾಸಕ ಅಶೋಕ ರೈ  ಶಿಲಾನ್ಯಾಸ ಮಾಡಿದರು.  ಇದೇ ಶಾಲೆಯಲ್ಲಿ ಶಾಸಕರು ಹಳೆಯ ವಿದ್ಯಾರ್ಥಿ ಕೂಡ ಆಗಿದ್ದರು. ವೇದಿಕೆಯಲ್ಲಿ ಕಾರ್ಯಾಧ್ಯಕ್ಷರಾದ ಪ್ರಸಾದ್ ಕೌಶಲ್ ಶೆಟ್ಟಿ, ಜೊಕಿಂ ಡಿಸೋಜಾ, ಕೌನ್ಸಿಲರ್ ಜನಗನ್ನಿವಾಸ್ ರಾವ್ ಉಪಸ್ಥಿತರಿದ್ದರು.

ಕೊಂಬೆಟ್ಟು ಕಾಲೇಜಿನ ನೂತನ ಸಭಾಂಗಣಕ್ಕೆ ಶಾಸಕ ಅಶೋಕ ರೈ  ಶಿಲಾನ್ಯಾಸ Read More »

ಬ್ರಹ್ಮರಕೋಡಿ ತರವಾಡು ಮನೆಯ ಹಿರಿಯರಾದ ದೇವಪ್ಪ ಗೌಡ ನಿಧನ

ಪುತ್ತೂರು: ಬಲ್ನಾಡು ಗ್ರಾಮದ ಉಜ್ರುಪಾದೆ ಬ್ರಹ್ಮರಕೋಡಿ ತರವಾಡು ಕುಟುಂಬದ ಹಿರಿಯರಾದ ದೇವಪ್ಪ ಗೌಡ ಬ್ರಹ್ಮರಕೋಡಿ ನಿಧನರಾದರು. ಕೆಲವು ಸಮಯದಿಂದ ಅಸೌಖ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜೂನ್ 6 ರಂದು ನಿಧನ ಹೊಂದಿದ್ದರು. ಮೃತರು ಪತ್ನಿ, ಮೂವರು ಮಕ್ಕಳು, ಕುಟುಂಬಸ್ಥರನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಬ್ರಹ್ಮರಕೋಡಿ ತರವಾಡು ಮನೆಯ ಹಿರಿಯರಾದ ದೇವಪ್ಪ ಗೌಡ ನಿಧನ Read More »

ರೈತರ ಪಹಣಿಗಳಿಗೆ ಆಧಾರ್ ಸೀಡಿಂಗ್ ಗೆ ಆದೇಶ | ಕೊನೆಯ ದಿನಾಂಕ ಯಾವಾಗ ? ಇಲ್ಲಿದೆ ಡಿಟೈಲ್ಸ್

ಪುತ್ತೂರು : ಕರ್ನಾಟಕ ಸರಕಾರ ಕಂದಾಯ ಇಲಾಖೆಯನ್ನು ಡಿಜಿಟಲೀಕರಣ ಮಾಡುವ ಮಹತ್ವಾಕಾಂಕ್ಷೆ ಯೋಜನೆ ಹೊಂದಿದ್ದು, ಎಲ್ಲಾ ರೈತರು ಪಹಣಿಗಳಿಗೆ ಸೀಡಿಂಗ್ ಮಾಡುವಂತೆ ಆದೇಶಿಸಲಾಗಿದೆ. ಯೋಜನೆಯ ಅಂಗವಾಗಿ ಎಲ್ಲಾ ರೈತರು ತಮ್ಮ ಜಮೀನುಗಳ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಳ್ಳಬೇಕು. ಈ ಪ್ರಕ್ರಿಯೆ ಮಾಡದೇ ಇದ್ದಲ್ಲಿ ಬ್ಯಾಂಕ್ ಸಾಲ ಸೌಲಭ್ಯ, ಬೆಳೆ ಪರಿಹಾರ, ಬೆಳೆ ವಿಮೆ, ಕೃಷಿ ಸೌಲಭ್ಯಗಳು, ಉಪನೋಂದಣಾಧಿಕಾರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಇನ್ನಿತರ ಸರಕಾರ ಸೇವೆಗಳಿಂದ ವಂಚಿತರಾಗುವ ಕುರಿತು ತಿಳಿಸಿದೆ. ಆದ್ದರಿಂದ ಜೂ.10 ರ ಒಳಗಾಗಿ ಎಲ್ಲಾ

ರೈತರ ಪಹಣಿಗಳಿಗೆ ಆಧಾರ್ ಸೀಡಿಂಗ್ ಗೆ ಆದೇಶ | ಕೊನೆಯ ದಿನಾಂಕ ಯಾವಾಗ ? ಇಲ್ಲಿದೆ ಡಿಟೈಲ್ಸ್ Read More »

error: Content is protected !!
Scroll to Top