ಪುತ್ತೂರು

ಮತ್ತೆ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಕಾಣಿಸಿಕೊಂಡ ಆನೆ

ಪುತ್ತೂರು : ಮತ್ತೆ ಆನೆಯೊಂದು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ತೋಟವೊಂದರದಲ್ಲಿ ಕಾಣಿಸಿಕೊಂಡಿದೆ. ಸವಣೂರಿನ ಗೌರಿ ಹೊಳೆ ದಾಟಿ ಬಂದಿದ್ದ ಆನೆ ಸುಳ್ಯ ತಾಲೂಕಿನ ಕೆಲವೆಡೆ ತೋಟಗಳಿಗೆ ನುಗ್ಗಿ ಕೃಷಿ ಹಾನಿಗೊಳಿಸಿದೆ. ಬಳಿಕ ಆನೆ ಪುತ್ತೂರು ತಾಲೂಕಿನ ಮಾಡಾವು ಸುತ್ತಮುತ್ತಲ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಸೋಮವಾರ ಶಾಂತಿಗೋಡು ಗ್ರಾಮದಲ್ಲಿ ಕಾಣಿಸಿಕೊಂಡು ಮನೆಯೊಂದರ ಗೇಟಿಗೆ ಹಾನಿ ಮಾಡಿ, ಕೃಷಿ ತೋಟಕ್ಕೆ ನುಗ್ಗಿತ್ತು. ಇದೀಗ ಈ ಆನೆ ಇಂದು ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿ ತೋಟದಲ್ಲಿ ಕಂಡು ಬಂದಿದೆ. […]

ಮತ್ತೆ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಕಾಣಿಸಿಕೊಂಡ ಆನೆ Read More »

ವಿವೇಕಾನಂದ ಕಾಲೇಜಿನಲ್ಲಿ ದೀಪ ಪ್ರದಾನ ಕಾರ್ಯಕ್ರಮ, ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ

ಪುತ್ತೂರು: ದೀಪವು ಪ್ರಗತಿಯ ಸಂಕೇತ. ದೀಪದಂತೆ ವಿದ್ಯಾರ್ಥಿಗಳ ಬದುಕಿನಲ್ಲಿಯೂ ರಾಷ್ಟ್ರೀಯತೆ ಹಾಗೂ ಹೊಸ ಚಿಂತನೆಗಳು ಬೆಳಗಲಿ. ಯುವಜನತೆ ದೇಶದ ಸರ್ವತೋಮುಖ ಬೆಳವಣಿಗೆಯತ್ತ ಗಮನ ಹರಿಸಬೇಕಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೇಕಾದ ಉತ್ತಮ ಆಚಾರ ವಿಚಾರಗಳನ್ನು, ಆದರ್ಶ ಹಾಗೂ ಧ್ಯೇಯವನ್ನಿಟ್ಟುಕೊಂಡು ಈ ಸಂಸ್ಥೆ ಬೆಳೆದು ಬಂದಿದೆ. ಹಾಗಾಗಿ ಸದ್ವಿಚಾರಗಳನ್ನು ಮೈಗೂಡಿಸಿಕೊಂಡು ತಮ್ಮ ಗುರಿಗಳನ್ನು ಸಾಧಿಸುವತ್ತ ಗಮನಹರಿಸಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ

ವಿವೇಕಾನಂದ ಕಾಲೇಜಿನಲ್ಲಿ ದೀಪ ಪ್ರದಾನ ಕಾರ್ಯಕ್ರಮ, ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ Read More »

ಸವಣೂರು ವಿದ್ಯಾರಶ್ಮಿಯಲ್ಲಿ ಅಧ್ಯಕ್ಷರ ದಿನಾಚರಣೆ ಮತ್ತು ಪ್ರಾರಂಭೋತ್ಸವ

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಶಾಲಾ ಅಧ್ಯಕ್ಷ, ಸಹಕಾರ ರತ್ನ ಸವಣೂರು ಸೀತಾರಾಮ ರೈ ಅವರ 77 ಹುಟ್ಟುಹಬ್ಬವನ್ನು ’ಅಧ್ಯಕ್ಷರ ದಿನ’ವನ್ನಾಗಿ ಆಚರಿಸುವುದರ ಜೊತೆಗೆ ಶಾಲಾ ಪ್ರಾರಂಭೋತ್ಸವವನ್ನೂ ಆಚರಿಸಲಾಯಿತು. ಸವಣೂರು ಸೀತಾರಾಮ ರೈ ಕಾರ್ಯಕ್ರಮ ಉದ್ಘಾಟಿಸಿ, ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದು ಲಾಭದ ಉದ್ದೇಶಕ್ಕಾಗಿ ಅಲ್ಲ, ಬದಲಾಗಿ ಇಲ್ಲಿ ಕಲಿತ ಮಕ್ಕಳು ದೇಶಕ್ಕೊಂದು ಆಸ್ತಿ ಆಗಬೇಕು ಎಂಬ ಉದ್ದೇಶದಿಂದ. ತಂದೆಯವರ ಆದರ್ಶಗಳನ್ನು ಸಾಕ್ಷಾತ್ಕರಿಸುವುದಕ್ಕಾಗಿ ಶಾಲೆಯನ್ನು ಕಟ್ಟಿದ್ದೇನೆ ಎಂದರು. ಮುಖ್ಯ ಅತಿಥಿಯಾಗಿ ಕೆಯ್ಯೂರು ಕರ್ನಾಟಕ

ಸವಣೂರು ವಿದ್ಯಾರಶ್ಮಿಯಲ್ಲಿ ಅಧ್ಯಕ್ಷರ ದಿನಾಚರಣೆ ಮತ್ತು ಪ್ರಾರಂಭೋತ್ಸವ Read More »

ಪುತ್ತೂರು,ಸುಬ್ರಹ್ಮಣ್ಯ,ಬೆಳ್ತಂಗಡಿ ,ಕಡಬದಲ್ಲಿ ಮಿಂಚು ನಿರ್ಬಂಧಕ ಅಳವಡಿಕೆ : ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ

ಪುತ್ತೂರು : ಪ್ರತೀ ಮಳೆಗಾಲದಲ್ಲಿ‌ ಸಿಡಿಲು ಮತ್ತು ಮಿಂಚಿಗೆ ಅನೇಕ ಜೀವಗಳು ಬಲಿಯಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಮಿಂಚು‌ಬಂಧಕ ಅಳವಡಿಸಲಯ ಸರಕಾರ ತೀರ್ಮಾನಿಸಿದ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು ಪುತ್ತೂರು ಭಾಗದಲ್ಲಿ ಹೆಚ್ಚಾಗಿ ಮಿಂಚಿಗೆ ಜೀವ ಬಲಿಯಾಗುತ್ತದ . ಮಳೆಗಾಲ ಆರಂಭ ಮತ್ತು ಕೊನೇಯ ದಿನಗಳಲ್ಲಿ ಮಿಂಚು ಹೆಚ್ಚಾಗಿ ಈ ಭಾಗದಲ್ಲೇ ಇರುತ್ತದೆ. ಶಾಸಕರಾದ ಅಶೋಕ್ ರೈ ಯವರು ಈಗಾಗಲೇ ಮನವಿ ಮಾಡಿದ್ದರು.‌ಮನವಿಯನ್ನು ಸರಕಾರ ಪುರಸ್ಕರಿಸಿದೆ. ಮಿಂಚು ಬಂಧಕ

ಪುತ್ತೂರು,ಸುಬ್ರಹ್ಮಣ್ಯ,ಬೆಳ್ತಂಗಡಿ ,ಕಡಬದಲ್ಲಿ ಮಿಂಚು ನಿರ್ಬಂಧಕ ಅಳವಡಿಕೆ : ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ Read More »

ಜೆಇಇ ಅಡ್ವಾನ್ಸ್ -2024 ಪರೀಕ್ಷೆ : ಅಂಬಿಕಾ ಪದವಿಪೂರ್ವ ವಿದ್ಯಾಲಯದ  ಪ್ರಮಿತ್ ರೈ ಗೆ 746ನೇ ರ್‍ಯಾಂಕ್

ಪುತ್ತೂರು: ರಾಷ್ಟ್ರಮಟ್ಟದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿ ಪ್ರಮಿತ್ ರೈ 746ನೇ ಹಾಗೂ 6390 ನೇ ರ್‍ಯಾಂಕ್ ಪಡೆದಿದ್ದಾರೆ. ಪ್ರಮಿತ್ ರೈ ಕೆದಂಬಾಡಿಯ ಕೆ ಪುರಂದರ ರೈ ಮತ್ತು ಕೆ ಮೈನಾ ಪಿ ರೈ ದಂಪತಿ ಪುತ್ರನಾಗಿದ್ದು, ರಾಷ್ಟ್ರಮಟ್ಟದ ಜೆ.ಇ.ಇ. ಅಡ್ವಾನ್ಸ್ ಪರೀಕ್ಷೆಯಲ್ಲಿ 746ನೇ ರ್ಯಾಂಕ್ (ಇಡಬ್ಲ್ಯೂ ಎಸ್‍) ಹಾಗೂ 6390ನೇ ರ್‍ಯಾಂಕ್ (ಸಿಆರ್‍ ಎಲ್) ಪಡೆದುಕೊಂಡಿದ್ದಾರೆ. ಅವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಮತ್ತು ಉಪನ್ಯಾಸಕೇತರ

ಜೆಇಇ ಅಡ್ವಾನ್ಸ್ -2024 ಪರೀಕ್ಷೆ : ಅಂಬಿಕಾ ಪದವಿಪೂರ್ವ ವಿದ್ಯಾಲಯದ  ಪ್ರಮಿತ್ ರೈ ಗೆ 746ನೇ ರ್‍ಯಾಂಕ್ Read More »

ಮೂರು ವರ್ಷಗಳ ಕಾಲ ಪಕ್ಷಕ್ಕೆ ಚ್ಯುತಿ ಬಾರದ ರೀತಿಯಲ್ಲಿ ದುಡಿದ ತೃಪ್ತಿ ನಮಗಿದೆ | ಪಕ್ಷದ ಜವಾಬ್ದಾರಿಯಿಂದ ನಮ್ಮನ್ನು ಮುಕ್ತಗೊಳಿಸಿ : ಪುತ್ತೂರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್‍ ಅಧ್ಯಕ್ಷರಿಂದ ವರಿಷ್ಠರಿಗೆ ಮನವಿ | ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ.ವಿಶ್ವನಾಥ ರೈ , ಡಾ.ರಾಜಾರಾಮ ಕೆ.ಬಿ.

ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದರೂ ಪಕ್ಷದ ಹೈಕಮಾಂಡ್ ಅಶೋಕ್ ಕುಮಾರ್ ರೈ ಯವರಿಗೆ ಅವಕಾಶ ಕಲ್ಪಿಸಿತ್ತು. ಈ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿ ನಾವು ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿ ಚ್ಯುತಿ ಬಾರದಂತೆ ಅಹರ್ನಿಶಿ ದುಡಿದಿದ್ದೇವೆ. ಇದೀಗ ನಮ್ಮ ಪಕ್ಷದ ಜವಾಬ್ದಾರಿ ಅವಧಿ ಮುಗಿದಿದ್ದು, ನಮ್ಮನ್ನು ಪಕ್ಷದ ಹುದ್ದೆಯಿಂದ ಬಿಡುಗಡೆ ಮಾಡವಂತೆ ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ ಎಂದು ಪುತ್ತೂರು ಬ್ಲಾಕ್‍ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು

ಮೂರು ವರ್ಷಗಳ ಕಾಲ ಪಕ್ಷಕ್ಕೆ ಚ್ಯುತಿ ಬಾರದ ರೀತಿಯಲ್ಲಿ ದುಡಿದ ತೃಪ್ತಿ ನಮಗಿದೆ | ಪಕ್ಷದ ಜವಾಬ್ದಾರಿಯಿಂದ ನಮ್ಮನ್ನು ಮುಕ್ತಗೊಳಿಸಿ : ಪುತ್ತೂರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್‍ ಅಧ್ಯಕ್ಷರಿಂದ ವರಿಷ್ಠರಿಗೆ ಮನವಿ | ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ.ವಿಶ್ವನಾಥ ರೈ , ಡಾ.ರಾಜಾರಾಮ ಕೆ.ಬಿ. Read More »

ಧರೆಗುರುಳಿದ ನೂರು ವರ್ಷ ಹಳೆಯದ ಅಶ್ವತ್ಥ ಮರ | ದೈವಸ್ಥಾನಗಳ ಪ್ರಸಾದ ವಿತರಣೆಗೆ ಈ ಅಶ್ವತ್ಥ ಮರದ ಎಲೆ ಬಳಕೆ

ಪುತ್ತೂರು: ನೂರು ವರ್ಷ ಹಳೆಯದಾದ ಅಶ್ವತ್ಥ ಮರವೊಂದು ಧರೆಗುರುಳಿದ ಘಟನೆ ಶಾಂತಿಗೋಡಿನ ಕೈಂದಾಡಿಯಲ್ಲಿ ಇಂದು ನಡೆದಿದೆ. ಮರ ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ರಸ್ತೆಗೆ ಉರುಳಿದ ಪರಿಣಾಮ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಸ್ಥಳೀಯರಿಂದ ಮರ ತೆರವು ಕಾರ್ಯ ನಡೆಯುತ್ತಿದೆ. ಗ್ರಾಮದ ಹಲವು ದೈವಸ್ಥಾನಗಳ ಪ್ರಸಾದ ವಿತರಣೆಗೆ ಈ ಅಶ್ವತ್ಥ ಮರದ ಎಲೆಯನ್ನು ಬಳಕೆ ಮಾಡುತ್ತಿದ್ದರು.

ಧರೆಗುರುಳಿದ ನೂರು ವರ್ಷ ಹಳೆಯದ ಅಶ್ವತ್ಥ ಮರ | ದೈವಸ್ಥಾನಗಳ ಪ್ರಸಾದ ವಿತರಣೆಗೆ ಈ ಅಶ್ವತ್ಥ ಮರದ ಎಲೆ ಬಳಕೆ Read More »

ಶಾಂತಿಗೋಡಿನಲ್ಲಿ ಆನೆ ಪ್ರತ್ಯಕ್ಷ | ಮನೆಯ ಗೇಟು, ತೆಂಗಿನ ಮರಳಿಗೆ ಹಾನಿ

ಪುತ್ತೂರು: ವೀರಮಂಗಲ ಬಳಿ ಭಾನುವಾರ ಕಾಣಿಸಿಕೊಂಡ ಆನೆ ನಿನ್ನೆ ರಾತ್ರಿಯಿಂದ ಶಾಂತಿಗೋಡಿನಲ್ಲಿ ಪ್ರತ್ಯಕ್ಷವಾಗಿದೆ. ಸ್ಥಳೀಯ ಮೋಹನ ಕಂರ್ಬಡ್ಕ ಎಂಬವರ ಮನೆ ಗೇಟು ಮುರಿದು ತೋಟಕ್ಕೆ ಲಗ್ಗೆಯಿಟ್ಟಿದೆ. ಪರಿಣಾಮ ತೆಂಗಿನ ಮರಗಳಿಗೆ ಹಾನಿಯಾಗಿದೆ. ಬಳಿಕ ಆನೆ ಶಾಂತಿಗೋಡು ಗೇರು ಸಂಶೋಧನಾ ನಿರ್ದೇಶನಾಲಯದ ಗೇರು ತೋಟಕ್ಕೆ ಲಗ್ಗೆಯಿಟ್ಟಿದೆ ಎನ್ನಲಾಗಿದೆ. ಆನೆ ಪ್ರತ್ಯಕ್ಷದ ಪರಿಣಾಮ ಶಾಲಾ ಮಕ್ಕಳು ಶಾಲೆಗೆ, ಗೇರು ಸಂಶೋಧನಾಲಯದ ಸಿಬ್ಬಂದಿಗಳು ಭಯದಿಂದ ಕೆಲಸಕ್ಕೆ ತೆರಳುವಂತಾಗಿದೆ. ತಕ್ಷಣ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಶಾಂತಿಗೋಡಿನಲ್ಲಿ ಆನೆ ಪ್ರತ್ಯಕ್ಷ | ಮನೆಯ ಗೇಟು, ತೆಂಗಿನ ಮರಳಿಗೆ ಹಾನಿ Read More »

ಮೋದಿ ಪ್ರಮಾಣ ವಚನ ಸ್ವೀಕಾರ : ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು

ಪುತ್ತೂರು: ನರೇಂದ್ರ ಮೋದಿ ಪ್ರಧಾನಿಯಾಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಪುತ್ತೂರಿನಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪುತ್ತೂರು ಹೊರವಲಯದ ಪುರುಷರಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಘೊಷಣೆಗಳು ಕೂಗುತ್ತಾ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮೋದಿ ಪ್ರಮಾಣ ವಚನ ಸ್ವೀಕಾರ : ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು Read More »

ನೇಣು ಬಿಗಿದು ಆತ್ಮಹತ್ಯೆ

ವಿಟ್ಲ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಕನ್ಯಾನ ಸಮೀಪದ ಮಂಡಿಯೂರು ಎಂಬಲ್ಲಿ ಇಂದು ನಡೆದಿದೆ. ನಾರಾಯಣ ನಾಯ್ಕ (60) ಆತ್ಮಹತ್ಯೆ ಮಾಡಿಕೊಂಡವರು. ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ನೇಣು ಬಿಗಿದು ಆತ್ಮಹತ್ಯೆ Read More »

error: Content is protected !!
Scroll to Top