ಪುತ್ತೂರು

ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ದಿನಾಚರಣೆ

ಅಕ್ಷಯ ಕಾಲೇಜ್ ಪುತ್ತೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಜಯಂತ ನಡುಬೈಲು, ಅಧ್ಯಕ್ಷರು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ, ಪುತ್ತೂರು ವಹಿಸಿದ್ದರು. ಇವರು “NSS ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಹಕಾರ ಮತ್ತು ಸಮಾಜಮುಖಿ ದೃಷ್ಟಿಕೋನವನ್ನು ಬೆಳೆಸುತ್ತವೆ. ಇವರ ಸೇವಾ ಚಟುವಟಿಕೆಗಳು ಸಮಾಜದ ಬೆಳವಣಿಗೆಗೆ ಅಗತ್ಯ. ವಿದ್ಯಾರ್ಥಿಗಳು ತಂಡಬದ್ಧತೆಯೊಂದಿಗೆ ಕಾರ್ಯನಿರ್ವಹಿಸಬೇಕು. NSS ಚಟುವಟಿಕೆಗಳು ಅವರನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುತ್ತವೆ” ಎಂದರು. ಕಾರ್ಯಕ್ರಮಕ್ಕೆ […]

ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ದಿನಾಚರಣೆ Read More »

ಎ.ವಿ.ಜಿ. ಸೌಹಾರ್ದ ಸೊಸೈಟಿ ಲೋಕಾರ್ಪಣೆ

ಪುತ್ತೂರು: ಎವಿಜಿ ಸಮೂಹ ಸಂಸ್ಥೆಗಳಿಂದ ಪ್ರವರ್ತಿತ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಲೋಕಾರ್ಪಣೆ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ನಟರಾಜ’ ವೇದಿಕೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜರುಗಿತು. ಪೂರ್ವಾಹ್ನ ಗಂಟೆ 9.30ಕ್ಕೆ ಖಾಸಗಿ ಬಸ್ ನಿಲ್ದಾಣದ ಎದುರಿನ ಕಚೇರಿಯಲ್ಲಿ ಉದ್ಘಾಟನ ಕಾರ್ಯಗಳು ನಡೆದಾಗ ಬೆಂಗಳೂರಿನ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ. ಗಂಗಾಧರ ಅವರು ಕಚೇರಿಯ ಉದ್ಘಾಟನೆ, ಮಂಗಳೂರಿನ ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷರಾದ ಭಾಸ್ಕರ ದೇವಸ್ಯ

ಎ.ವಿ.ಜಿ. ಸೌಹಾರ್ದ ಸೊಸೈಟಿ ಲೋಕಾರ್ಪಣೆ Read More »

ಪುತ್ತೂರುದ ಪಿಲಿಗೊಬ್ಬು ಸೀಸನ್ 3ರ ಫುಡ್ ಫೆಸ್ಟ್’ಗೆ ಚಾಲನೆ

ಪುತ್ತೂರು: ಪುತ್ತೂರುದ ಪಿಲಿಗೊಬ್ಬು ಸೀಸನ್ 3ರ ಫುಡ್ ಫೆಸ್ಟ್’ಗೆ ಶನಿವಾರ ಸಂಜೆ ಚಾಲನೆ ನೀಡಲಾಯಿತು.ಮುಳಿಯ ಜ್ಯುವೆಲ್ಸ್ ಸಿಎಂಡಿ ಕೇಶವ ಪ್ರಸಾದ್ ಮುಳಿಯ ಅವರು ಚಾಲನೆ ನೀಡಿ, ಶುಭಹಾರೈಸಿದರುಮುಖ್ಯ ಅತಿಥಿಯಾಗಿದ್ದ ಭಟ್ & ಭಟ್ ಪ್ರೊಡಕ್ಟ್ಸ್’ನ ಸುದರ್ಶನ್ ಭಟ್ ಬೆದ್ರಾಡಿ ಅವರು ಶುಭಹಾರೈಸಿದರು. ವಿಜಯ ಸಾಮ್ರಾಟ್ ಸಂಸ್ಥಾಪಕಾಧ್ಯಕ್ಷ, ಪಿಲಿಗೊಬ್ಬು ಸಮಿತಿ ಗೌರವಾಧ್ಯಕ್ಷ ಸಹಜ್ ಜೆ. ರೈ ಬಳಜ್ಜ, ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಸಂಚಾಲಕ ನಾಗರಾಜ್ ನಡುವಡ್ಕ, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ

ಪುತ್ತೂರುದ ಪಿಲಿಗೊಬ್ಬು ಸೀಸನ್ 3ರ ಫುಡ್ ಫೆಸ್ಟ್’ಗೆ ಚಾಲನೆ Read More »

ಕೊಳ್ತಿಗೆ ಗ್ರಾಮೀಣ ದಸರಾ ಉದ್ಘಾಟನೆ

ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ 8 ಕೋಟಿ ಅನುದಾನ: ಶಾಸಕ ಅಶೋಕ್ ರೈ ಪುತ್ತೂರು: ಶಾಸಕನಾದ ಬಳಿಕ ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ ಒಟ್ಟು 8 ಕೋಟಿ ಅನುದಣಾನವನ್ನು ನೀಡಿದ್ದೇನೆ ಇದರ ಜೊತೆಗೆ ಇತರ ಧರ್ಮಿಯರ ಧಾರ್ಮಿಕ ಕೇಂದ್ರಗಳಿಗೂ ಅನುದಾನವನ್ನು ನೀಡಿದ್ದೇವೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಶಾರದೋತ್ಸವ ಸಮಿತಿ ಹಾಗೂ ಸುಙದರ ಯಕ್ಷಕಲಾ ವೇದಿಕೆ ವತಿಯಿಂದ ನಡೆದ ಕೊಳ್ತಿಗೆ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಾವು ಎಲ್ಲರಿಗೂ ಒಳಿತನ್ನು

ಕೊಳ್ತಿಗೆ ಗ್ರಾಮೀಣ ದಸರಾ ಉದ್ಘಾಟನೆ Read More »

ದೇವಸ್ಥಾನಗಳ ಸೇವೆಗಳ ದರ ಏರಿಕೆಯಲ್ಲಿ ಸರಕಾರದ ಪಾತ್ರವಿಲ್ಲ| ದೇವಸ್ಥಾನದ ಹಣ ಮುಸ್ಲಿಂಮರ ಕಲ್ಯಾಣ ನಿಧಿಗೆ ಹೋಗುವುದಾಗಿ ಅಪಪ್ರಚಾರ ಮಾಡುವವರು ಬಹಿರಂಗ ಚರ್ಚೆಗೆ ಬರಲಿ – ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ

ಪುತ್ತೂರು: ಎ ಗ್ರೇಡ್ ದೇವಸ್ಥಾನಗಳಲ್ಲಿ ಸೇವೆಗಳ ಶುಲ್ಕ ಪರಿಷ್ಕರಣೆಯನ್ನು ಅಲ್ಲಿನ ಆಡಳಿತ ಸಮಿತಿಯವರು ಮಾಡಿದ್ದಾರೆ. ಇದರಲ್ಲಿ ಸರಕಾರದ ಪಾತ್ರವಿಲ್ಲ. ದೇವಸ್ಥಾನದ ಹಣ ಮುಸ್ಲಿಂಮರ ಕಲ್ಯಾಣ ನಿಧಿಗೆ ಹೋಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವವರಲ್ಲಿ ದೇವಸ್ಥಾನದ ಹಣ ಸರಕಾರಕ್ಕೆ ಹೋಗುವ ಬಗ್ಗೆ ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಬರಲಿ. ಅವರು ದಾಖಲೆ ಸಹಿತ ಸಾಬೀತು ಮಾಡಲಿ. ಚರ್ಚೆಗೆ ನಾವು ಸಿದ್ದ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ್ ರೈ ಮೇಗಿನಗುತ್ತು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎ

ದೇವಸ್ಥಾನಗಳ ಸೇವೆಗಳ ದರ ಏರಿಕೆಯಲ್ಲಿ ಸರಕಾರದ ಪಾತ್ರವಿಲ್ಲ| ದೇವಸ್ಥಾನದ ಹಣ ಮುಸ್ಲಿಂಮರ ಕಲ್ಯಾಣ ನಿಧಿಗೆ ಹೋಗುವುದಾಗಿ ಅಪಪ್ರಚಾರ ಮಾಡುವವರು ಬಹಿರಂಗ ಚರ್ಚೆಗೆ ಬರಲಿ – ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ Read More »

ಪುತ್ತೂರು ತಹಶೀಲ್ದಾರ್‌ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಜಮೀನಿನ ನಿರಾಕ್ಷೇಪಣಾ ಪತ್ರಕ್ಕೆ ಲಂಚ ಕೇಳಿದ ಪ್ರಕರಣ ಮಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪುತ್ತೂರು ತಹಶೀಲ್ದಾರ್ ಎಸ್.ಬಿ. ಕೂಡಲಗಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಜಮೀನಿನ ನಿರಾಕ್ಷೇಪಣಾ ಪತ್ರಕ್ಕೆ ಸಂಬಂಧಿಸಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿ ತಹಶೀಲ್ದಾರ್ ಎಸ್.ಬಿ. ಕೂಡಲಗಿ ವಿರುದ್ಧ ಆ.28ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 09/2025ರಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪುತ್ತೂರು ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಸುನೀಲ್

ಪುತ್ತೂರು ತಹಶೀಲ್ದಾರ್‌ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ Read More »

ಅಕ್ಷಯ  ಪದವಿ ಪೂರ್ವ  ಕಾಲೇಜಿನಲ್ಲಿ ‘ಭಾರತದಲ್ಲಿ ತೆರಿಗೆ ವ್ಯವಸ್ಥೆ’ ವಿಷಯದ  ಬಗ್ಗೆ ಉಪನ್ಯಾಸ ಕಾರ್ಯಕ್ರಮ.

 ಪುತ್ತೂರಿನ ಅಕ್ಷಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘದ  ವತಿಯಿಂದ  ‘ಭಾರತದಲ್ಲಿ ತೆರಿಗೆ ವ್ಯವಸ್ಥೆ’ ಎನ್ನುವ ವಿಷಯದ  ಬಗ್ಗೆ ವಿದ್ಯಾರ್ಥಿಗಳಿಗೆ  ಉಪನ್ಯಾಸ  ಕಾರ್ಯಕ್ರಮ  ನಡೆಯಿತು. ಸಂಪನ್ಮೂಲ  ವ್ಯಕ್ತಿಯಾಗಿ  ಅಕ್ಷಯ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀ ರಾಕೇಶ್ .ಕೆ  ಭಾಗವಹಿಸಿದ್ದರು. ಅವರು  ವಿವಿಧ  ರೀತಿಯ  ತೆರಿಗೆಗಳ  ಬಗ್ಗೆ ವಿವರಿಸುತ್ತಾ, ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ತೆರಿಗೆದಾರನಾಗಿರುತ್ತಾನೆ; ತೆರಿಗೆಯ  ದರ ಮತ್ತು ತೆರಿಗೆಯ  ವಿವಿಧ ಯೋಜನೆಗಳ  ಬಗ್ಗೆ ವಿದ್ಯಾರ್ಥಿಗಳು ಅರಿವನ್ನು  ಹೊಂದಿರಬೇಕು  ಎಂದರು.  ತೆರಿಗೆಯ ಬಗ್ಗೆ  ಓದು ಬರಹದ

ಅಕ್ಷಯ  ಪದವಿ ಪೂರ್ವ  ಕಾಲೇಜಿನಲ್ಲಿ ‘ಭಾರತದಲ್ಲಿ ತೆರಿಗೆ ವ್ಯವಸ್ಥೆ’ ವಿಷಯದ  ಬಗ್ಗೆ ಉಪನ್ಯಾಸ ಕಾರ್ಯಕ್ರಮ. Read More »

ಅಕ್ಷಯ ಕಾಲೇಜಿನಲ್ಲಿ ಆತಿಥ್ಯ ವಿಜ್ಞಾನ ವಿಭಾಗದ ‘ಕಾಯು’ ಸಂಘ ಉದ್ಘಾಟನೆ

ಪುತ್ತೂರು:ನಗರದ ಅಕ್ಷಯ ಕಾಲೇಜಿನ ಆತಿಥ್ಯ ವಿಜ್ಞಾನ ವಿಭಾಗದ ವತಿಯಿಂದ ಇತ್ತೀಚೆಗೆ ವಿಭಾಗದ ನೂತನ ಸಂಘ“ಕಾಯು”ಮತ್ತು ಅದರ ಲೋಗೋವನ್ನು ಕಾಲೇಜು ಸಭಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಉದ್ಘಾಟಿಸಲಾಯಿತು.  ಕಾರ್ಯಕ್ರಮವನ್ನು ಉದ್ಘಾಟಿಸಿದ   ಗ್ಯಾಸ್ಪರ್ ರೆಸ್ಟೋರೆಂಟ್, ಲುಟಿನಾ ಯುರೋಪ್‌ನ ಮುಖ್ಯ ಬಾಣಸಿಗಶ್ರೀ ನವೀನ್ ಶಂಕರ್ ಮಾತನಾಡಿ ಆತಿಥ್ಯ ಉದ್ಯಮದಲ್ಲಿ ವೃತ್ತಿಪರತೆ, ಬೆಳವಣಿಗೆ ಮತ್ತು ಸಮರ್ಪಣಾ ಮನೋಭಾವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿಧ ಹೋಂ ಬೇಕರ್ ಶ್ರೀಮತಿ ಮೇಘಾ ಕುಕ್ಕುಂಜೆಅವರು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸಿನಿಂದ ಬೇಕಿಂಗ್ ಇಂಡಸ್ಟ್ರಿ,ಸ್ವಂತ ಉದ್ಯಮ

ಅಕ್ಷಯ ಕಾಲೇಜಿನಲ್ಲಿ ಆತಿಥ್ಯ ವಿಜ್ಞಾನ ವಿಭಾಗದ ‘ಕಾಯು’ ಸಂಘ ಉದ್ಘಾಟನೆ Read More »

ಹೃದಯಾಘಾತದಿಂದ ಯುವಕ ಮೃತ್ಯು

ಕಡಬ: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತಪಟ್ಟ ಯುವಕ ಕಡಬ ತಾಲೂಕಿನ ಕಡಬ ಗ್ರಾಮದ ಪಿಜಕಳ ಪರಪ್ಪು ನಿವಾಸಿ ಜನಾರ್ದನ ನಾಯ್ಕ ಅವರ ಪುತ್ರ ವಿನೋದ್ ಪಿ.ಜೆ.(23) ಎಂದು ಗುರುತಿಸಲಾಗಿದೆ.ಮೈಸೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ವಿನೋದ್ ಅವರಿಗೆ ಎರಡು ದಿನಗಳ ಹಿಂದೆ ಜ್ವರ ಬಂದು ಕಡಿಮೆಯಾಗಿತ್ತು. ಭಾನುವಾರ ರಾತ್ರಿ ತನ್ನ ರೂಂನಲ್ಲಿ ಊಟ ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು

ಹೃದಯಾಘಾತದಿಂದ ಯುವಕ ಮೃತ್ಯು Read More »

ಬಾರ್ಯ ದೇವಸ್ಥಾನದಲ್ಲಿ ತೆನೆ ಹಬ್ಬ

ಬಾರ್ಯ ದೇವಸ್ಥಾನದಲ್ಲಿ ತೆನೆ ಹಬ್ಬ.ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ 9 ದಿನಗಳ ಪರ್ಯಂತ ನವದುರ್ಗೆಯರ ಆರಾಧನೆ ಮತ್ತು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ದೇವಳದ ಮತ್ತು ಪರಿವಾರದೈವಗಳ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ ನೆರವೇರಿಸಿದರು. ನವರಾತ್ರಿ ಪ್ರಥಮ ದಿನದಂದು ಗ್ರಾಮಸ್ಥರಿಗೆ ತೆನೆಯನ್ನು ವಿತರಿಸಲಾಯಿತು. ದೇವಳದ ಅರ್ಚಕ ಗುರುಪ್ರಸಾದ್ ನೂರಿತ್ತಾಯ,, ಆಡಳಿತ ಟ್ರಸ್ಟ್ ಕಾರ್ಯದರ್ಶಿ ಪ್ರಶಾಂತ್ ಪೈ ಬಾರ್ಯ ಮತ್ತು ಟ್ರಸ್ಟಿಗಳು, ಊರ ಹತ್ತು

ಬಾರ್ಯ ದೇವಸ್ಥಾನದಲ್ಲಿ ತೆನೆ ಹಬ್ಬ Read More »

error: Content is protected !!
Scroll to Top