ಬೆಟ್ಟಂಪಾಡಿಯ ಕಕ್ಕೂರಿನಲ್ಲಿ ನೂತನ ಸುಸಜ್ಜಿತ ಬಸ್ ತಂಗುದಾಣ ಲೋಕಾರ್ಪಣೆ | ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್, ಕೌಶಲ್ ಮೀಡಿಯಾ ಸಂಸ್ಥೆಯಿಂದ ಕೊಡುಗೆ
ಪುತ್ತೂರು: ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಹಾಗೂ ಕೌಶಲ್ ಮೀಡಿಯಾ ವತಿಯಿಂದ ಕೊಡುಗೆಯಾಗಿ ನೀಡಿದ ಸುಸಜ್ಜಿತ ಬಸ್ ತಂಗುದಾಣದ ಲೋಕಾರ್ಪಣೆ ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಎಂಬಲ್ಲಿ ಗುರುವಾರ ನಡೆಯಿತು. ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನ ಮುಖ್ಯಸ್ಥ ಜಿ..ಎಲ್.ಬಲರಾಮ ಆಚಾರ್ಯ ತಂಗುದಾಣವನ್ನು ದೀಪ ಬೆಳಗಿಸಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಕಕ್ಕೂರು ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಇದೀಗ ಬಸ್ ತಂಗುದಾಣವನ್ನು ಕೌಶಲ್ ಮೀಡಯಾ ಜತೆಗೂಡಿ ನಿರ್ಮಿಸಲಾಗಿದೆ. ಇದು ಆ ಭಾಗದ ಜನತೆಯ ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದೀಗ ಉದ್ಘಾಟನೆಗೊಂಡ ತಂಗುದಾಣ ಉತ್ತಮ […]










