ಪುತ್ತೂರು

ಸವಣೂರು ರೈಲ್ವೆ ಗೇಟ್ ಬಳಿ  ಹೊಂಡ, ಗುಂಡಿಗಳು| ಶ್ರಮದಾನದ ಮೂಲಕ ದುರಸ್ತಿಪಡಿಸಿದ ಸ್ಥಳೀಯರು

ಸವಣೂರು : ಸವಣೂರು ರೈಲ್ವೆ ಗೇಟ್ ಬಳಿ ಸಾಕಷ್ಟು ಹೊಂಡ, ಗುಂಡಿಗಳು ಕಂಡು ಬಂದಿದ್ದು, ಹೊಂಡಗಳನ್ನು ಶ್ರಮದಾನದ ಮೂಲಕ ಮುಚ್ಚಲಾಯಿತು. ಶ್ರಮದಾನದಲ್ಲಿ ಸತೀಶ್ ಬಲ್ಯಾಯ, ಚೇತನ್ ಕುಮಾರ್ ಕೋಡಿಬೈಲ್, ಶರತ್ ಕುಮಾರ್ ಕೋಡಿಬೈಲ್, ಕೀರ್ತನ್ ಕೋಡಿಬೈಲ್, ಅಶ್ರಪ್ ಕೋಡಿಬೈಲ್, ಸುಪ್ರಿತ್ ರೈ ಖಂಡಿಗ, ತೇಜಸ್ ಬೇರಿಕೆ, ಕುಮಾರ ಬೇರಿಕೆ, ದಿನೇಶ್ ಬೇರಿಕೆ, ಶೈಲೇಶ್ ಭಂಡಾರಿ, ಬಾಲಚಂದ್ರ ಕನ್ನಡ ಕುಮೇರು , ದಮಾನಂದ ಮೆದು, ಪ್ರಕಾಶ್ ಮಾಲೆತ್ತಾರ್, ಹಿತೇಶ್ ನೆಕ್ಕರೆ, ಸಚಿನ್ ಭಂಡಾರಿ, ರೈಲ್ವೆ ಸಿಬ್ಬಂದಿಗಳಾದ ಪ್ರಜೀತ್, ತೀರ್ಥರಾಮ […]

ಸವಣೂರು ರೈಲ್ವೆ ಗೇಟ್ ಬಳಿ  ಹೊಂಡ, ಗುಂಡಿಗಳು| ಶ್ರಮದಾನದ ಮೂಲಕ ದುರಸ್ತಿಪಡಿಸಿದ ಸ್ಥಳೀಯರು Read More »

ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಪುತ್ತೂರು: ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಬಂಟ್ವಾಳ ಪೊಲೀಸರು ಮುಂಬೈಯಲ್ಲಿ ಬಂಧಿಸಿದ ಘಟನೆ ನಡೆದಿದೆ. ಆರ್ಯಪು ಗ್ರಾಮದ ಸಂಪ್ಯ ನಿವಾಸಿ ಅಬ್ದುಲ್ ಅಜೀಜ್ ಬಂಧಿತ ಆರೋಪಿ ಬಂಟ್ವಾಳ ಉಪವಿಭಾಗದ ಪೋಲಿಸ್ ಉಪಾಧಿಕ್ಷಕ ವಿಜಯಪ್ರಸಾದ ಅವರ ಮಾರ್ಗದರ್ಶನಲ್ಲಿ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಪೊಲೀಸ್ ಉಪ ನಿರೀಕ್ಷಕರಾದ ರಾಮಕೃಷ್ಣ ಕಲೈ ಮಾರ್, ದುರ್ಗಪ್ಪ, ಗೋಪಾಲ ನೇತೃತ್ವದಲ್ಲಿ ಸಿಬ್ಬಂದಿಗಳಾದ ASI ಸುಜು ಹಾಗೂ HC ಜಗದೀಶ್ ರವರು ಮಾಹಿತಿ ಸಂಗ್ರಹಿಸಿ ಮಹಾರಾಷ್ಟ್ರ ರಾಜ್ಯದ ಮುಂಬಯಿ ಎಂಬಲ್ಲಿ ದಸ್ತಗಿರಿ ಮಾಡಿದ್ದಾರೆ. ಆರೋಪಿ ಅಬ್ದುಲ್

ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಕೌಕ್ರಾಡಿಯ ದಲಿತೆ ವೃದ್ಧೆ ರಾಧಮ್ಮ ಮನೆ ದ್ವಂಸ ಪ್ರಕರಣ | ದಲಿತ, ರೈತ ಕಾರ್ಮಿಕ ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಪುತ್ತೂರು: ಕೌಕ್ರಾಡಿ ಗ್ರಾಮದ ವೃದ್ಧೆ ದಲಿತೆ ರಾಧಮ್ಮ ಅವರ ಮನೆಯನ್ನು ಕಾನೂನು ಬಾಹಿರವಾಗಿ, ಆದೇಶರಹಿತವಾಗಿ ದ್ವಂಸ ಮಾಡಿದ ಕಡಬ ತಹಸೀಲ್ದಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಮಾನತು ಮಾಡಬೇಕು ಹಾಗೂ ಸುಳ್ಳು ಕೇಸು ದಾಖಲಿಸಿದ ವಿಎ ಅವರನ್ನು ಉಚ್ಛಾಟಿಸುವಂತೆ ಒತ್ತಾಯಿಸಿ ದಲಿತ, ರೈತ ಕಾರ್ಮಿಕ ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಕಿಲ್ಲೇ ಮೈದಾನದ ಬಳಿ ಇರುವ ಅಮರ್ ಜವಾನ್ ಸ್ಮಾರಕದ ಬಳಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಸಿಪಿಎಂ ಮುಖಂಡ ಬಿ.ಎಂ.ಭಟ್‍ ಮಾತನಾಡಿ, ರಾಜ್ಯ ರೈತ ಸಂಘದ

ಕೌಕ್ರಾಡಿಯ ದಲಿತೆ ವೃದ್ಧೆ ರಾಧಮ್ಮ ಮನೆ ದ್ವಂಸ ಪ್ರಕರಣ | ದಲಿತ, ರೈತ ಕಾರ್ಮಿಕ ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ Read More »

ತ್ರಿನೇತ್ರದತ್ತ ಸೌಹಾರ್ದ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ನಿತಿನ್‍ ಪಕ್ಕಳ, ಉಪಾಧ್ಯಕ್ಷರಾಗಿ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಆಯ್ಕೆ

ಪುತ್ತೂರು: ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ತ್ರೀನೇತ್ರದತ್ತ ಸೌಹಾರ್ದ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ನಿತೀನ್‍ ಪಕ್ಕಳ, ಉಪಾಧ್ಯಕ್ಷರಾಗಿ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷತೆಗಾಗಿ ನಿತಿನ್ ಪಕ್ಕಳ ಅವರನ್ನು ಸದಸ್ಯ ನಿತಿನ್ ಮಂಗಳ ಸೂಚಿಸಿದರು. ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಅನುಮೋದಿಸಿದರು. ಉಪಾಧ್ಯಕ್ಷತೆಗಾಗಿ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಅವರನ್ನು ನಿತಿನ್ ಮಂಗಳ ಸೂಚಿಸಿದರು. ಪ್ರಜ್ವಲ್ ಕೆ.ಆರ್. ಅನುಮೋದಿಸಿದರು.

ತ್ರಿನೇತ್ರದತ್ತ ಸೌಹಾರ್ದ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ನಿತಿನ್‍ ಪಕ್ಕಳ, ಉಪಾಧ್ಯಕ್ಷರಾಗಿ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಆಯ್ಕೆ Read More »

ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ | 1 ಹಾಗೂ 2ನೇ ಆರೋಪಿ ಜಾಮೀನು ಅರ್ಜಿ ತಿರಸ್ಕೃತ

ಪುತ್ತೂರು : ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 1 ಮತ್ತು 2ನೇ ಆರೋಪಿಗಳಾದ ಚೇತನ್ ಹಾಗೂ ಮನೀಷ್ ಅವರ ಅರ್ಜಿಯನ್ನು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದೆ. ಜಾಮೀನಿಗೆ ಅರ್ಜಿ ಸಲ್ಲಿಸಿದ್ದರಿಂದ ಸುದೀರ್ಘ ಪ್ರತಿವಾದ ನಡೆದು ಇದೀಗ ಮಾನ್ಯ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿ ಅರ್ಜಿಯನ್ನು ತಿರಸ್ಕೃತಗೊಳಿಸಿದೆ. ನ. 6ರಂದು ತಡರಾತ್ರಿ ಪುತ್ತೂರಿನ ನೆಹರೂನಗರದಲ್ಲಿ ಅಕ್ಷಯ್ ಕಲ್ಲೇಗ ಅವರ ಹತ್ಯೆಯಾಗಿತ್ತು. ದೂರುದಾರರ ಪರ ವಿಶೇಷ ಸರ್ಕಾರಿ

ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ | 1 ಹಾಗೂ 2ನೇ ಆರೋಪಿ ಜಾಮೀನು ಅರ್ಜಿ ತಿರಸ್ಕೃತ Read More »

ಹವ್ಯಕ ಕೃಷಿರತ್ನ ಪ್ರಶಸ್ತಿಗೆ ಡಾ.ವಿಘ್ನೇಶ್ವರ ವರ್ಮುಡಿ ಆಯ್ಕೆ | ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ

ಪುತ್ತೂರು: ಬೆಂಗಳೂರು ಅರಮನೆ ಮೈದಾನದಲ್ಲಿ ಡಿ.27 ಹಾಗೂ 29 ರಂದು ನಡೆಯುವ ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಕೃಷಿ ರತ್ನ ಪ್ರಶಸ್ತಿಗೆ ವಿಶ್ರಾಂತ ಪ್ರಾದ್ಯಾಪಕ ಡಾ. ವಿಘ್ನೇಶ್ವರ ವರ್ಮುಡಿ ಆಯ್ಕೆಯಾಗಿದ್ದಾರೆ. 1986 ರಿಂದ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬಗ್ಗೆ ಬರೆದ ಸಾವಿರಕ್ಕೂ ಮಿಕ್ಕಿದ ಸಂಶೋಧನಾತ್ಮಕ ಲೇಖನಗಳು ಮತ್ತು ಆಂಗ್ಲ ಹಾಗೂ ಕನ್ನಡ ಭಾಷೆಗಳಲ್ಲಿ ಬರೆದ 50 ಕ್ಕೂ ಅಧಿಕ ಪುಸ್ತಕಗಳು ಮತ್ತು ಅಡಕೆ ಮಾರುಕಟ್ಟೆ ಬಗ್ಗೆ ನಡೆಸಿದ ಸಂಶೋಧನೆಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಡಿ.27ರಂದು ನಡೆಯುವ

ಹವ್ಯಕ ಕೃಷಿರತ್ನ ಪ್ರಶಸ್ತಿಗೆ ಡಾ.ವಿಘ್ನೇಶ್ವರ ವರ್ಮುಡಿ ಆಯ್ಕೆ | ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ Read More »

ಎಲೆ ಚುಕ್ಕೆ ಆತಂಕ ಪಡುವ ರೋಗವಲ್ಲ | ಸಮಗ್ರ ಕೃಷಿ ಮಾಡಿದರೆ ರೋಗ ನಿವಾರಣೆ : ಡಾ. ಬಿ.ಕೆ.ವಿಶುಕುಮಾ‌ರ್

ಪುತ್ತೂರು: ಎಲೆ ಚುಕ್ಕಿ ರೋಗವು ತೀವ್ರವಾದ ಶಿಲೀಂಧ್ರ ರೋಗವಾಗಿದ್ದು, ಇದು ಅಡಿಕೆ ಎಲೆಗಳ ಮತ್ತು ಅಡಿಕೆಗಳ ಮೇಲೆ ಪರಿಣಾಮ ಬೀರುತ್ತದೆ  ಹಾಗೂ ಇಳುವರಿಯನ್ನು ನಷ್ಟ ಮಾಡುತ್ತದೆ. ಆದರೆ ಇದು ಆತಂಕ ಪಡುವ ರೋಗವಲ್ಲ. ಸಮಗ್ರ ಕೃಷಿ ಮಾಡಿದರೆ ರೋಗ ನಿವಾರಣೆ ಮಾಡಬಹುದು ಎಂದು ವಿಜ್ಞಾನಿ ಡಾ.ಬಿ.ಕೆ.ವಿಶುಕುಮಾರ್ ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಅಡಿಕೆ ಗಿಡಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಆಗ ರೋಗ ಸಂಪೂರ್ಣ ನಿವಾರಣೆಯಾಗುತ್ತದೆ ಎಂದು ತಿಳಿಸಿದರು. ಗೊಬ್ಬರ, ಪೋಷಕಾಂಶಗಳು ಮತ್ತು ನೀರಿನ

ಎಲೆ ಚುಕ್ಕೆ ಆತಂಕ ಪಡುವ ರೋಗವಲ್ಲ | ಸಮಗ್ರ ಕೃಷಿ ಮಾಡಿದರೆ ರೋಗ ನಿವಾರಣೆ : ಡಾ. ಬಿ.ಕೆ.ವಿಶುಕುಮಾ‌ರ್ Read More »

ಕಾಣಿಯೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ 3ನೇ ವರ್ಷಕ್ಕೆ ಪಾದಾರ್ಪಣೆ | ಸಂಘದ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ

ಕಾಣಿಯೂರು: ಕಾಣಿಯೂರು ರಾಶಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಇಂದು 3ನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು. ಪಾದಾರ್ಪಣೆ ಅಂಗವಾಗಿ ಸಂಘದ ಕಚೇರಿಯಲ್ಲಿ ಇಂದು ಬೆಳಿಗ್ಗೆ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಚಿದಾನಂದ ಬೈಲಾಡಿ, ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಜಿನ್ನಪ್ಪ ಗೌಡ ಮಳುವೇಲು, ಪ್ರವೀಣ್‍ ಕುಂಟ್ಯಾನ, ಸತೀಶ್ ಪಾಂಬಾರು, ತೇಜಸ್ವಿನಿ ಶೇಖರ ಗೌಡ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಪುತ್ತೂರು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ

ಕಾಣಿಯೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ 3ನೇ ವರ್ಷಕ್ಕೆ ಪಾದಾರ್ಪಣೆ | ಸಂಘದ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ Read More »

ಮಂಗಳೂರು ಗಣಪತಿ ಹೈಸ್ಕೂಲ್ ಬಳಿಯ ಶ್ರೀ ಅಯ್ಯಪ್ಪ ಮಿತ್ರ ವೃಂದದವರಿಂದ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ

ಮಂಗಳೂರು : ಶ್ರೀ ಅಯ್ಯಪ್ಪ ಮಿತ್ರ ವೃಂದದವರಿಂದ ಜ.9 ಗುರುವಾರದಂದು ಮಹಾಪೂಜೆ , ಅನ್ನ ಸಂತರ್ಪಣೆ ಗಣಪತಿ ಹೈಸ್ಕೂಲ್ನಯಲ್ಲಿ ನಡೆಯಲಿದೆ. ಬೆಳಗ್ಗೆ 6 ಗಂಟೆಗೆ ಗಣಹೋಮ , ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಇರುಮುಡಿ ಕಟ್ಟುವುದು, ಮಹಾಪೂಜೆ, ಮಹಾ ಅನ್ನ ಸಂತರ್ಪಣೆ ಜರುಗಲಿದೆ. ರಾತ್ರಿ 7 ಗಂಟೆಯಿಂದ 8 ಗಂಟೆಯ ವರೆಗೆ ಸ್ವಾಮಿ ಭಕ್ತರಿಂದ ಭಜನೆ ನಡೆಯಲಿದ್ದು, ಬಳಿಕ ಪ್ರಸಾದ ವಿತರಿಸಲಾಗುತ್ತದೆ. ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಸರಪಾಡಿ, ಬಂಟ್ವಾಳ ಇವರಿಂದ ಎಸ್.ಎ. ವರ್ಕಾಡಿ

ಮಂಗಳೂರು ಗಣಪತಿ ಹೈಸ್ಕೂಲ್ ಬಳಿಯ ಶ್ರೀ ಅಯ್ಯಪ್ಪ ಮಿತ್ರ ವೃಂದದವರಿಂದ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ Read More »

ಸರಕಾರಿ ಆಸ್ಪತ್ರೆ ವೈದ್ಯೆಯ ವೀಡಿಯೋ ವೈರಲ್ | ಹಿರಿಯ ವೈದ್ಯಾಧಿಕಾರಿಯಿಂದ ಠಾಣೆಗೆ ದೂರು

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯೆಯೊಬ್ಬರ ಕರ್ತವ್ಯಕ್ಕೆ ತೊಂದರೆ ನೀಡಿ ವಿಡಿಯೋ ಮಾಡಿ ಶೇರ್ ಮಾಡಿದ ವ್ಯಕ್ತಿಗಳ ವಿರುದ್ಧ ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಗೆ ಬಂದಿದ್ದ ಮೃತದೇಹ ವನ್ನು ವಿಳಂಭವಾಗಿ ಮರಣೋತ್ತರ ಪರೀಕ್ಷೆಗೆ ವೈದ್ಯರು ಬಂದಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯೆಯೋರ್ವರನ್ನು ತರಾಟೆಗೆ ತಗೆದು ಅದನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು ಈ ಬಗ್ಗೆ

ಸರಕಾರಿ ಆಸ್ಪತ್ರೆ ವೈದ್ಯೆಯ ವೀಡಿಯೋ ವೈರಲ್ | ಹಿರಿಯ ವೈದ್ಯಾಧಿಕಾರಿಯಿಂದ ಠಾಣೆಗೆ ದೂರು Read More »

error: Content is protected !!
Scroll to Top