ದೇಶ

ರಾಷ್ಟ್ರೀಯ ಟೆನಿಸ್‌ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ ತಂದೆ

ಮಗಳ ದುಡಿಮೆಯಲ್ಲಿ ಬದುಕುತ್ತಿದ್ದಾನೆ ಎಂಬ ಕುಹಕಕ್ಕೆ ಬೇಸತ್ತು ಕೃತ್ಯ ನವದೆಹಲಿ: ರಾಷ್ಟ್ರೀಯ ಟೆನ್ನಿಸ್‌ ಆಟಗಾರ್ತಿಯನ್ನು ಅವರ ತಂದೆಯ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಗುರುಗಾಂವ್‌ನಲ್ಲಿ ಸಂಭವಿಸಿದೆ. ರಾಧಿಕಾ ಯಾದವ್‌ (25) ಅವರನ್ನು ತಂದೆ ದೀಪಕ್‌ ಯಾದವ್‌ ಗುಂಡಿಕ್ಕಿ ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಊರಿನ ಜನ ಮಗಳ ದುಡಿಮೆಯಲ್ಲಿ ಬದುಕುತ್ತಿದ್ದಾನೆ ಎಂದು ಜನರು ಕುಹಕವಾಡುತ್ತಿರುವುದರಿಂದ ಬೇಸತ್ತು ಆತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ರಾಧಿಕಾ ಯಾದವ್‌ ಟೆನ್ನಿಸ್‌ ಅಕಾಡೆಮಿಯೊಂದನ್ನು ನಡೆಸುತ್ತಿದ್ದು, ಊರವರ ಚುಚ್ಚುನುಡಿಗಳಿಂದ ಬೇಸತ್ತ ದೀಪಕ್‌ ಯಾದವ್‌ […]

ರಾಷ್ಟ್ರೀಯ ಟೆನಿಸ್‌ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ ತಂದೆ Read More »

ವೇದ, ಉಪನಿಷತ್‌ ಅಧ್ಯಯನ, ಸಾವಯವ ಕೃಷಿ… ದಿಢೀರ್‌ ನಿವೃತ್ತಿಯ ಮಾತನಾಡಿದ ಅಮಿತ್‌ ಶಾ

ರಾಜಕೀಯ ಚಾಣಕ್ಯನ ರಿಟೈರ್‌ಮೆಂಟ್‌ ಪ್ಲಾನ್‌ ಕೇಳಿ ದೇಶಾದ್ಯಂತ ಸಂಚಲನ ನವದೆಹಲಿ: ರಾಜಕಾರಣಿಗಳಿಗೆ ನಿವೃತ್ತಿಯಿಲ್ಲ ಎನ್ನುವುದು ಭಾರತದ ಮಟ್ಟಿಗೆ ಸತ್ಯವಾದ ಮಾತು. ಹಣ್ಣು ಹಣ್ಣು ಮುದುಕರಾಗಿ ಎದ್ದು ನಡೆಯಲು ಸಾಧ್ಯವಾಗದಿದ್ದರೂ ಅಧಿಕಾರಕ್ಕೆ ಅಂಟಿಕೂರುವವರು ನಮ್ಮ ದೇಶದ ರಾಜಕೀಯ ನಾಯಕರು. ಈ ಹಿನ್ನೆಲೆಯಲ್ಲಿ ಬಿಜೆಪಿ 75 ವರ್ಷ ದಾಟಿದವರಿಗೆ ನಿವೃತ್ತಿ ನೀಡುವ ಅಲಿಖಿತ ನಿಯಮವೊಂದನ್ನು ಪಾಲಿಸಿಕೊಂಡು ಬಂದಿದೆ. ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ ಎನ್ನುವುದು ಬೇರೆ ಮಾತು. ಪ್ರಧಾನಿ ನರೇಂದ್ರ ಮೋದಿಯವರೂ ಸದ್ಯದಲ್ಲೇ 75ರ ಹರೆಯಕ್ಕೆ ಪದಾರ್ಪಣೆ ಮಾಡಲಿದ್ದು, ಅವರು ನಿವೃತ್ತಿಯಾಗುತ್ತಾರೋ

ವೇದ, ಉಪನಿಷತ್‌ ಅಧ್ಯಯನ, ಸಾವಯವ ಕೃಷಿ… ದಿಢೀರ್‌ ನಿವೃತ್ತಿಯ ಮಾತನಾಡಿದ ಅಮಿತ್‌ ಶಾ Read More »

ಹೆಣ್ಣು ಮಕ್ಕಳನ್ನು ಶಾಲೆಯಲ್ಲೇ ವಿವಸ್ತ್ರಗೊಳಿಸಿದ ಮುಖ್ಯಶಿಕ್ಷಕ

ಹೆಡ್‌ಮೇಷ್ಟ್ರು ಸೇರಿ ಆರು ಮಂದಿ ವಿರುದ್ಧ ಪೋಕ್ಸೊ ಕೇಸ್‌ ಪುಣೆ : ಶಾಲೆಯ ಮುಖ್ಯಶಿಕ್ಷಕನೇ ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿದೆ. ಶೌಚಾಲಯದಲ್ಲಿ ರಕ್ತದ ಕಲೆ ಕಂಡ ಹಿನ್ನೆಲೆಯಲ್ಲಿ ಮುಟ್ಟಾದವರು ಯಾರು ಎಂದು ತಿಳಿಯಲು ಮುಖ್ಯಶಿಕ್ಷಕ ಎಲ್ಲ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಶಿಕ್ಷಕ ಹಾಗೂ ಓರ್ವ ಸಹಾಯಕ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಶಾಲೆಯಲ್ಲಿ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮಂಗಳವಾರ ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು.

ಹೆಣ್ಣು ಮಕ್ಕಳನ್ನು ಶಾಲೆಯಲ್ಲೇ ವಿವಸ್ತ್ರಗೊಳಿಸಿದ ಮುಖ್ಯಶಿಕ್ಷಕ Read More »

ಭಾರತೀಯ ವಾಯುಪಡೆ ಯುದ್ಧ ವಿಮಾನ ಪತನ

ರಾಜಸ್ಥಾನ: ಭಾರತೀಯ ವಾಯುಪಡೆಯ ಯುದ್ಧ ವಿಮಾನವೊಂದು ರಾಜಸ್ಥಾನದ ಚುರುವಿನ ಬನೋಡಾ ಗ್ರಾಮದ ಬಳಿ ಪತನಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ವಿಮಾನದ ಅವಶೇಷಗಳಡಿಯಿಂದ ಪೈಲಟ್ ಮೃತದೇಹ ಹೊರತೆಗೆಯಲಾಗಿದೆ. ಜಿಲ್ಲಾಧಿಕಾರಿ ಅಭಿಷೇಕ್ ಸುರಾನ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಅಪಘಾತದ ಪರಿಣಾಮ ಹೊಲದಲ್ಲಿ ಬೆಂಕಿ ಕಾಣಿಸಿಕೊಂಡಿತು. ಅದನ್ನು ತಾವೇ ನಂದಿಸಲು ಪ್ರಯತ್ನಿಸಿದೆವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಭಾರತೀಯ ವಾಯುಪಡೆ ಯುದ್ಧ ವಿಮಾನ ಪತನ Read More »

ಭಾರತ ರಫೇಲ್‌ಗೆ ಸಂಬಂಧಿಸಿದಂತೆ ಸುಳ್ಳು ಹೇಳಿದ ಪಾಕಿಸ್ತಾನಕ್ಕೆ ಮುಖಭಂಗ | ಆಪರೇಷನ್ ಸಿಂಧೂರ್ ವೇಳೆ ಭಾರತದ ರಫೇಲ್ ಅನ್ನು ನಾಶ ಮಾಡಿದ್ದಾಗಿ ‌ಸುಳ್ಳು ಹೇಳಿದ್ದ ಪಾಕಿಸ್ತಾನ

ನವದೆಹಲಿ: ಪಾಕಿಸ್ತಾನವು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಭಾರತದ ರಫೇಲ್ ಯುದ್ಧ ವಿಮಾನವನ್ನು ಹೊಡೆದು ಹಾಕಿದ್ದೇವೆ ಎಂದು ಹೇಳಿರುವುದು ‌ಸತ್ಯಕ್ಕೆ ದೂರವಾದ ಸಂಗತಿ ಎಂದು ಫ್ರಾನ್ಸ್‌‌‌ನ ಡಸಾಲ್ಟ್ ಏವಿಯೇಷನ್ ಕಂಪನಿ ಬಹಿರಂಗಪಡಿಸಿದೆ. ಭಾರತವು ಒಂದು ರಫೇಲ್ ವಿಮಾನವನ್ನು ಕಳೆದುಕೊಂಡಿರುವುದು ‌ಸತ್ಯ. ಆದರೆ ಅದು ತಾಂತ್ರಿಕ ಕಾರಣಗಳಿಂದಾಗಿ ಸಂಭವಿಸಿದ ಘಟನೆ. ಹೊರತಾಗಿ ಪಾಕಿಸ್ತಾನ ಹೊಡೆದುರುಳಿಸಿರುವುದಲ್ಲ ಎನ್ನುವ ಮೂಲಕ ಪಾಕಿಸ್ತಾನಕ್ಕೆ ಛಾಟಿಯೇಟು ನೀಡಿದೆ. ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತಕ್ಕೆ ಸೇರಿದ ಮೂರು ರಫೇಲ್‌ಗಳನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಸುಳ್ಳು ಹೇಳಿಕೆ ನೀಡಿತ್ತು.

ಭಾರತ ರಫೇಲ್‌ಗೆ ಸಂಬಂಧಿಸಿದಂತೆ ಸುಳ್ಳು ಹೇಳಿದ ಪಾಕಿಸ್ತಾನಕ್ಕೆ ಮುಖಭಂಗ | ಆಪರೇಷನ್ ಸಿಂಧೂರ್ ವೇಳೆ ಭಾರತದ ರಫೇಲ್ ಅನ್ನು ನಾಶ ಮಾಡಿದ್ದಾಗಿ ‌ಸುಳ್ಳು ಹೇಳಿದ್ದ ಪಾಕಿಸ್ತಾನ Read More »

ಭಯೋತ್ಪಾದನೆಯ ಬಗ್ಗೆ ಬ್ರೆಜಿಲ್‌ನಲ್ಲಿ ಪ್ರಧಾನಿ ಮೋದಿ ಏನಂದ್ರು ಗೊತ್ತಾ?

ರಿಡೋ ಡಿ ಜನೈರೋ: ಬ್ರೆಜಿಲ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಭಯೋತ್ಪಾದನೆಗೆ ಸಂಬಂಧಿಸಿದ ಹಾಗೆ ದ್ವಂದ್ವ ನಿಲುವುಗಳಿಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಉಗ್ರವಾದಕ್ಕೆ ‌ಸಂಬಂಧಿಸಿದ ಹಾಗೆ ದ್ವಿಮುಖ ನೀತಿಗಳಿಗೆ ಯಾವುದೇ ಅವಕಾಶ ಇಲ್ಲ. ಭಾರತ ಮತ್ತು ಬ್ರೆಜಿಲ್ ಈ ಎರಡೂ ರಾಷ್ಟ್ರಗಳು ಉಗ್ರವಾದವನ್ನು ಮತ್ತು ಅದಕ್ಕೆ ಬೆಂಬಲ ನೀಡುವವರನ್ನು ಬಲವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧವನ್ನು ಪ್ರಸ್ತುತ ಇರುವ 13 ಶತಕೋಟಿ ಡಾಲರ್‌ಗಳಿಂದ 20 ಶತಕೋಟಿ ಡಾಲರ್‌ಗಳಿಗೆ ಮುಂದಿನ ಐದು

ಭಯೋತ್ಪಾದನೆಯ ಬಗ್ಗೆ ಬ್ರೆಜಿಲ್‌ನಲ್ಲಿ ಪ್ರಧಾನಿ ಮೋದಿ ಏನಂದ್ರು ಗೊತ್ತಾ? Read More »

ಸೇತುವೆ ಕುಸಿದು ನದಿಗೆ ಬಿದ್ದ ನಾಲ್ಕು ವಾಹನಗಳು : ಮೂರು ಮಂದಿ ಸಾವು

ಅಂಚಿನ ತನಕ ಬಂದು ಪವಾಡಸದೃಶವಾಗಿ ಪಾರಾದ ಬೃಹತ್‌ ಟ್ಯಾಂಕರ್‌ ಅಹಮದಾಬಾದ್: ಗುಜರಾತ್‌ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಹಳೇ ಸೇತುವೆ ಕುಸಿದ ಪರಿಣಾಮ ಅದರ ಮೇಲೆ ಸಂಚರಿಸುತ್ತಿದ್ದ ನಾಲ್ಕು ವಾಹನಗಳು ನದಿಗೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 7.45ರ ಸುಮಾರಿಗೆ ಸೇತುವೆ ಕುಸಿದಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ಎರಡು ಟ್ರಕ್‌ಗಳು, ಒಂದು ಪಿಕಪ್ ವ್ಯಾನ್ ಮತ್ತು ಇನ್ನೊಂದು ವಾಹನ ಕೆಳಗೆ ಬಿದ್ದಿದೆ. ವಾಹನಗಳಿಂದ ಮೂವರನ್ನು

ಸೇತುವೆ ಕುಸಿದು ನದಿಗೆ ಬಿದ್ದ ನಾಲ್ಕು ವಾಹನಗಳು : ಮೂರು ಮಂದಿ ಸಾವು Read More »

ನಿಮ್ಮಲ್ಲಿ ಕ್ಷಿಪಣಿಗಳಿದ್ದರೆ, ನಮ್ಮಲ್ಲಿ ಆತ್ಮಾಹುತಿ ಬಾಂಬರ್‌ಗಳಿದ್ದಾರೆ: ಉಗ್ರ ಮಸೂದ್ ಅಜರ್ ಹೇಳಿಕೆ

ಪಾಕ್ ಮಸೀದಿಗಳಲ್ಲಿ ಪ್ರಸಾರವಾಯ್ತು ಜೈಶ್ -ಎ- ಮೊಹಮ್ಮದ್ ಉಗ್ರ ಸಂಘಟನೆಯ ನಾಯಕನ ಬೆದರಿಕೆ ನವದೆಹಲಿ: ನಿಮ್ಮಲ್ಲಿ ಕ್ಷಿಪಣಿಗಳಿವೆ, ಆದರೆ ನಮ್ಮ ಜೈಶ್ ಸಂಘಟನೆಯ ಬಳಿ ಆತ್ಮಾಹುತಿ ಬಾಂಬರ್‌ಗಳು ಇದ್ದಾರೆ ಎಂದು ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿ ಮಸೂದ್ ಅಜರ್ ಬೆದರಿಕೆ ಹಾಕಿರುವ ‌ಭಾಷಣವನ್ನು ಪಾಕಿಸ್ತಾನದ ಮಸೀದಿಗಳಲ್ಲಿ ಪ್ರಸರಿಸಲಾಗಿದ್ದು, ಆತ ಈ ಹೇಳಿಕೆಯನ್ನು ಭಾರತವನ್ನುದ್ದೇಶಿಸಿಯೇ ಆತ ಹೇಳಿದ್ದಾನೆ ಎನ್ನಲಾಗಿದೆ. ಖಾಸಗಿ ಆಂಗ್ಲ ಮಾಧ್ಯಮವೊಂದು ಈ ಸುದ್ದಿಯನ್ನು ಬಿತ್ತರಿಸಿದೆ. ಪ್ರಪಂಚದ ಬೇರೆ ಬೇರೆ ದೇಶಗಳ ಬಳಿ ಎಲ್ಲವೂ ಇರಬಹುದು. ಆದರೆ ನಮ್ಮಲ್ಲಿ

ನಿಮ್ಮಲ್ಲಿ ಕ್ಷಿಪಣಿಗಳಿದ್ದರೆ, ನಮ್ಮಲ್ಲಿ ಆತ್ಮಾಹುತಿ ಬಾಂಬರ್‌ಗಳಿದ್ದಾರೆ: ಉಗ್ರ ಮಸೂದ್ ಅಜರ್ ಹೇಳಿಕೆ Read More »

ಪ್ರಧಾನಿ ಮೋದಿ ಅವರಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪುರಸ್ಕಾರ ಪ್ರದಾನ

ಬ್ರೆಜಿಲ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪುರಸ್ಕಾರ ‘ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಪ್ರದಾನಿಸಿ ಗೌರವಿಸಲಾಗಿದೆ. ಬ್ರೆಜಿಲ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸಲು ಮತ್ತು ವಿಶ್ವ ವೇದಿಕೆಯಲ್ಲಿ ಉಭಯ ರಾಷ್ಟ್ರಗಳ ಸಹಕಾರ ಸಂಬಂಧವನ್ನು ಮತ್ತಷ್ಟು ಭದ್ರಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಗಮನಾರ್ಹ ಕೊಡುಗೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಈ ಪುರಸ್ಕಾರವನ್ನು ಅವರಿಗೆ ನೀಡಿ ಗೌರವಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಪ್ರಧಾನಿ

ಪ್ರಧಾನಿ ಮೋದಿ ಅವರಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪುರಸ್ಕಾರ ಪ್ರದಾನ Read More »

ವಂಚನೆ : ನಟಿ ಅಲಿಯಾ ಭಟ್‌ ಮಾಜಿ ಸಹಾಯಕಿ ಬೆಂಗಳೂರಿನಲ್ಲಿ ಸೆರೆ

ನಟಿಯ ಸಿನಿಮಾ ನಿರ್ಮಾಣ ಸಂಸ್ಥೆಗೆ 77 ಲ.ರೂ. ವಂಚಿಸಿದ್ದ ವೇದಿಕಾ ಪ್ರಕಾಶ್‌ ಶೆಟ್ಟಿ ಮುಂಬೈ: ಸಿನಿಮಾ ನಿರ್ಮಾಣ ಸಂಸ್ಥೆಗೆ 77 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಆಲಿಯಾ ಭಟ್‌ ಅವರ ಮಾಜಿ ಆಪ್ತ ಸಹಾಯಕಿ ವೇದಿಕಾ ಪ್ರಕಾಶ್‌ ಶೆಟ್ಟಿ (32) ಎಂಬಾಕೆಯನ್ನು ಮುಂಬೈಯ ಜುಹು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಭಟ್‌ ನಿರ್ಮಾಣ ಸಂಸ್ಥೆ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ ಖಾತೆ ಹಾಗೂ ನಟಿಯ ಖಾತೆಯಿಂದ ಸುಮಾರು 76.9 ಲಕ್ಷ ರೂ. ಹಣ

ವಂಚನೆ : ನಟಿ ಅಲಿಯಾ ಭಟ್‌ ಮಾಜಿ ಸಹಾಯಕಿ ಬೆಂಗಳೂರಿನಲ್ಲಿ ಸೆರೆ Read More »

error: Content is protected !!
Scroll to Top