ದೇಶ

ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ : ಮೃತರ ಸಂಖ್ಯೆ 38ಕ್ಕೇರಿಕೆ

ನೂಕು ನುಗ್ಗಲು ಸಂಭವಿಸಲು ಕಾರಣ ಬಹಿರಂಗಪಡಿಸಿದ ಪ್ರಾಥಮಿಕ ತನಿಖೆ ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ಶನಿವಾರ ನಡೆದ ತಮಿಳು ನಟ-ರಾಜಕಾರಣಿ ವಿಜಯ್ ದಳಪತಿಯ ರ‍್ಯಾಲಿಯಲ್ಲಿ ಭೀಕರ ಕಾಲ್ತುಳೀತ ಸಂಭವಿಸಲು ಮಿತಿಗಿಂತ ಹಲವು ಪಟ್ಟು ಜನರು ಸೇರಿದ್ದೇ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸುಮಾರು 10 ಸಾವಿರ ಜನರು ಸೇರಿಸಲು ಅನುಮತಿ ಪಡೆಯಲಾಗಿತ್ತು. ಮೈದಾನದಲ್ಲಿ ಗರಿಷ್ಠ ಎಂದರೆ 50 ಸಾವಿರ ಜನರು ಹಿಡಿಸಬಹುದು. ಆದರೆ ಗಾಗಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮಂದಿ ಅಲ್ಲಿ ಸೇರಿದ್ದರು ಹಾಗೂ ಅವರೆಲ್ಲ […]

ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ : ಮೃತರ ಸಂಖ್ಯೆ 38ಕ್ಕೇರಿಕೆ Read More »

ಭಾರತದ ಮೇಲೆ ಟ್ರಂಪ್‌ ಇನ್ನೊಂದು ಸುಂಕ ಪ್ರಹಾರ

ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಮೇಲೆ ಶೇ.100 ಸುಂಕ ವಾಷಿಂಗ್ಟನ್ : ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತೊಂದು ಸುಂಕ ದಾಳಿ ನಡೆಸಿದ್ದಾರೆ. ಅಮೆರಿಕಕ್ಕೆ ಪ್ರವೇಶಿಸುವ ಭಾರತದ ಎಲ್ಲ ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳು ಶೇ.100 ಸುಂಕಕ್ಕೆ ಒಳಪಡುತ್ತವೆ ಎಂದು ಟ್ರಂಪ್ ಘೋಷಿಸಿದ್ದಾರೆ. ಈ ಸುಂಕ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಆದರೆ ಔಷಧ ಕಂಪನಿಗಳು ಅಮೆರಿಕದಲ್ಲಿ ಔಷಧ ಉತ್ಪಾದನಾ ಘಟಕ ಸ್ಥಾಪಿಸಿದರೆ ಸುಂಕ ಅನ್ವಯಿಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್

ಭಾರತದ ಮೇಲೆ ಟ್ರಂಪ್‌ ಇನ್ನೊಂದು ಸುಂಕ ಪ್ರಹಾರ Read More »

ಏಷ್ಯಾಕಪ್‌ : ಭಾನುವಾರ ನಡೆಯಲಿದೆ ಭಾರತ-ಪಾಕಿಸ್ತಾನ ನಡುವೆ ಹೈ ವೋಲ್ಟೇಜ್‌ ಫೈನಲ್‌

ಬದ್ಧ ಎದುರಾಳಿಗಳ ಇನ್ನೊಂದು ಮುಖಾಮುಖಿಯತ್ತ ಎಲ್ಲರ ಚಿತ್ತ ದುಬೈ: ಮುಂದಿನ ಭಾನುವಾರ ಇನ್ನೊಮ್ಮೆ ಭಾರತ ಮತ್ತು ಪಾಕಿಸ್ತಾನದ ನಡುವೆ ಇನ್ನೊಂದು ಹೈವೋಲ್ಟೇಜ್‌ ಪಂದ್ಯ ನಡೆಯಲು ವೇದಿಕೆ ಸಿದ್ಧವಾಗಿದೆ. ನಿರ್ಣಾಯಕ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ ಪಾಕಿಸ್ತಾನ 11 ರನ್‌ಗಳ ಸೋಲುಣಿಸಿ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಹೀಗಾಗಿ ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್‌ ನಡೆಯುವುದು ಪಕ್ಕಾ ಆಗಿದೆ. ಇದೇ ಮೊದಲ ಬಾರಿಗೆ ಏಷ್ಯಾ ಕಪ್‌ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌

ಏಷ್ಯಾಕಪ್‌ : ಭಾನುವಾರ ನಡೆಯಲಿದೆ ಭಾರತ-ಪಾಕಿಸ್ತಾನ ನಡುವೆ ಹೈ ವೋಲ್ಟೇಜ್‌ ಫೈನಲ್‌ Read More »

ಮಂಗಳೂರಿನ ಉಪ್ಪಿನಂಗಡಿ ಮೂಲದ ವಿದ್ಯಾರ್ಥಿನಿ ದುಬೈ U.A.E ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ

ದುಬೈ : ಮಂಗಳೂರು ಜಿಲ್ಲೆಯ ಉಪ್ಪಿನಂಗಡಿಯ ಸಮೀಪದ ವಳಾಲ್, ಬಜತೂರು ಗ್ರಾಮದ ಪಟ್ಟೆ ಮನೆ ಅಮಿಷ ಆನಂದ್ ರವರು ಇದೇ ಬರುವ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 4 ರ ವರೆಗೆ ಶ್ರೀಲಂಕಾದ ಕೊಲಂಬೋ ದಲ್ಲಿ ನಡೆಯಲಿರುವ ಅಂಡರ್ 22 ವಯೋ ವಿಭಾಗದ ಹುಡಿಗಿಯರ ಇಂಡೋರ್ ವಿಶ್ವಕಪ್ ಕ್ರಿಕೆಟ್ ಕೂಟಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ . ಈ ಕ್ರಿಕೆಟ್ ಪಂದ್ಯ ಕೂಟದಲ್ಲಿ U.A.E ಸೇರಿದಂತೆ ಆಸ್ಟ್ರೇಲಿಯಾ ,ನ್ಯೂಜಿಲ್ಯಾಂಡ್

ಮಂಗಳೂರಿನ ಉಪ್ಪಿನಂಗಡಿ ಮೂಲದ ವಿದ್ಯಾರ್ಥಿನಿ ದುಬೈ U.A.E ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ Read More »

ಸೇನೆಯ ಬತ್ತಳಿಕೆಗೆ ರೈಲಿನಿಂದಲೂ ಉಡಾಯಿಸಬಹುದಾದ ಕ್ಷಿಪಣಿ ಸೇರ್ಪಡೆ

2,000 ಕಿ.ಮೀ. ವ್ಯಾಪ್ತಿಯ ಕ್ಷಿಪಣಿಯ ಪರೀಕ್ಷೆ ಯಶಸ್ವಿ ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಬುಧವಾರ ರಾತ್ರಿ ರೈಲು-ಆಧಾರಿತ ಮೊಬೈಲ್ ಲಾಂಚರ್‌ನಿಂದ ಹೊಸ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿಯಾದ ಅಗ್ನಿ ಪ್ರೈಮ್‌ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಒಡಿಶಾದ ಬಾಲಾಸೋರ್‌ನಲ್ಲಿರುವ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಪರೀಕ್ಷೆ ನಡೆಸಲಾಗಿದೆ. ಅಗ್ನಿ-ಪ್ರೈಮ್ ಕ್ಷಿಪಣಿಯು ರೈಲು-ಆಧಾರಿತ ಮೊಬೈಲ್ ಲಾಂಚರ್‌ನಿಂದ ಯಶಸ್ವಿಯಾಗಿ ಉಡಾವಣೆಗೊಂಡಿದ್ದು, ತನ್ನ ಗುರಿ ನಿಖರವಾಗಿ ತಲುಪಿದೆ. ಈ ಕ್ಷಿಪಣಿಯು 2,000 ಕಿಲೋ ಮೀಟರ್‌ವರೆಗಿನ ಗುರಿಗಳನ್ನು ತಲುಪುವ ಸಾಮರ್ಥ್ಯ ಹೊಂದಿದೆ. ವಿಶೇಷವಾಗಿ

ಸೇನೆಯ ಬತ್ತಳಿಕೆಗೆ ರೈಲಿನಿಂದಲೂ ಉಡಾಯಿಸಬಹುದಾದ ಕ್ಷಿಪಣಿ ಸೇರ್ಪಡೆ Read More »

ಪಹಲ್ಗಾಮ್‌ ಉಗ್ರ ದಾಳಿಗೆ ಸಹಕಾರ ನೀಡಿದ್ದ ಶಿಕ್ಷಕನ ಬಂಧನ

ಭಯೋತ್ಪಾದಕರಿಗೆ ಸಾರಿಗೆ, ವಸತಿ ಸಹಿತ ಸಕಲ ಸೌಲಭ್ಯ ಏರ್ಪಾಡು ಮಾಡಿದ್ದ ಉಗ್ರ ಶ್ರೀನಗರ: ಏಪ್ರಿಲ್ 22ರಂದು ನಡೆದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಗುಂಡು ಹಾರಿಸಿ ಕೊಂದು ಹಾಕಿದ ಭಯೋತ್ಪಾದಕ ದಾಳಿಯ ಉಗ್ರರಿಗೆ ಸಹಾಯ ಮಾಡಿದ್ದ ಜಮ್ಮು ಮತ್ತು ಕಾಶ್ಮೀರದ‌ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು 26 ವರ್ಷದ ಮೊಹಮ್ಮದ್ ಯೂಸುಫ್ ಕಟಾರಿ ಎಂದು ಗುರುತಿಸಲಾಗಿದೆ. ಗುಪ್ತಚರ ಮಾಹಿತಿ ಮೇರೆಗೆ ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಕಟಾರಿಯನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಜಮ್ಮು-ಕಾಶ್ಮೀರ ಪೊಲೀಸರು ಕಟಾರಿ ಬಗ್ಗೆ ಹಲವು

ಪಹಲ್ಗಾಮ್‌ ಉಗ್ರ ದಾಳಿಗೆ ಸಹಕಾರ ನೀಡಿದ್ದ ಶಿಕ್ಷಕನ ಬಂಧನ Read More »

ವಿಮಾನದ ಚಕ್ರದ ನಡುವೆ ಅಡಗಿಕೊಂಡು ಅಫಘಾನಿಸ್ತಾನದಿಂದ ದಿಲ್ಲಿ ಗೆ ಬಂದ ಬಾಲಕ

13 ವರ್ಷದ ಬಾಲಕನ ಅಪಾಯಕಾರಿ ಸಾಹಸ ನೋಡಿ ಜಗತ್ತು ನಿಬ್ಬೆರಗು ನವದೆಹಲಿ : 13 ವರ್ಷದ ಬಾಲಕನೊಬ್ಬ ಅಫ್ಘಾನಿಸ್ತಾನದ ಕಾಬೂಲ್‌ನಿಂದ ದೆಹಲಿ ತನಕ ವಿಮಾನದ ಚಕ್ರದ ಎಡೆಯಲ್ಲಿ ಕುಳಿತು ಬಂದಿರುವುದು ಅಚ್ಚರಿ ಹುಟ್ಟಿಸಿದೆ. ಬಾಲಕ ತನ್ನ ಜೀವವನ್ನೇ ಪಣಕ್ಕೊಡ್ಡಿ ವಿಮಾನದ ಹಿಂಬದಿ ಚಕ್ರದ ಭಾಗದಲ್ಲಿ 94 ನಿಮಿಷಗಳ ಕಾಲ ಪ್ರಯಾಣ ಮಾಡಿ ದಿಲ್ಲಿ ತಲುಪಿದ್ದಾನೆ. ಅಷ್ಟು ಎತ್ತರದಲ್ಲಿ ವಿಮಾನ ಹಾರುತ್ತಿರುವಾಗಲೂ ಈ ಬಾಲಕ ಯಾವುದೇ ಹಾನಿಯಾಗದೆ ಸುರಕ್ಷಿತವಾಗಿ ತಲುಪಿರುವುದು ಹೇಗೆ ಎಂಬುದು ಅಚ್ಚರಿ ಹುಟ್ಟಿಸಿದೆ. ಬಾಲಕ ಇರಾನ್‌ಗೆ

ವಿಮಾನದ ಚಕ್ರದ ನಡುವೆ ಅಡಗಿಕೊಂಡು ಅಫಘಾನಿಸ್ತಾನದಿಂದ ದಿಲ್ಲಿ ಗೆ ಬಂದ ಬಾಲಕ Read More »

ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮೋದಿ ಭಾಷಣ

ಜಿಎಸ್‌ಟಿ ಕಡಿತ, ಅಮೆರಿಕ ವಿಸಾ ವಿಚಾರ ಪ್ರಸ್ತಾವ ಸಾಧ್ಯತೆ ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರಧಾನಿಯವರ ಭಾಷಣವು ಜಿಎಸ್ಟಿ ಸುಧಾರಣೆಯ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಹೊಸ ಜಿಎಸ್​ಟಿ 2.0 ದರಗಳು ನಾಳೆಯಿಂದ ದೇಶದಲ್ಲಿ ಜಾರಿಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಮೋದಿ ಮಹತ್ವದ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಳ್ಳುಜವ ನಿರೀಕ್ಷೆಯಿದೆ. H1 B ವೀಸಾ ಹೊಂದಿರುವವರ ಮೇಲೆ ಅಮೆರಿಕ ಕೈಗೊಂಡಿರುವ ಕಠಿಣ ಕ್ರಮದ

ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮೋದಿ ಭಾಷಣ Read More »

ಉಗ್ರ ಹಾಫಿಜ್‌ ಸಯೀದ್‌ನನ್ನು ಭೇಟಿಯಾದದ್ದಕ್ಕೆ ಧನ್ಯವಾದ ಹೇಳಿದ್ದ ಮನಮೋಹನ್‌ ಸಿಂಗ್‌

ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ ಭಯೋತ್ಪಾದಕ ಯಾಸಿನ್‌ ಮಲಿಕ್‌ ಹೇಳಿಕೆ ನವದೆಹಲಿ: ಜಾಗತಿಕ ಭಯೋತ್ಪಾದಕ ಲಷ್ಕರ್-ಎ-ತೈಬಾ ಸ್ಥಾಪಕ ಹಾಫಿದ್‌ ಸಯೀದ್‌ನನ್ನು ಪಾಕಿಸ್ತಾನದಲ್ಲಿ ಭೇಟಿ ಮಾಡಿ ಬಂದದ್ದಕ್ಕೆ ಅಂದಿನ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ತನಗೆ ಧನ್ಯವಾದ ಹೇಳಿದ್ದರು ಎಂಬುದಾಗಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಹಾಗೂ ಉಗ್ರ ಯಾಸಿನ್‌ ಮಲಿಕ್‌ ಹೇಳಿರುವುದು ದೇಶದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. 26/11 ದಾಳಿ ಸೇರಿದಂತೆ ಭಾರತದಲ್ಲಿ ಸಂಭವಿಸಿದ ಹಲವು ಭೀಕರ ಭಯೋತ್ಪಾದಕ ಕೃತ್ಯಗಳ ಮಾಸ್ಟರ್‌ಮೈಂಡ್ ಆಗಿರುವ ಹಾಫೀಜ್ ಸಯೀದ್‌ನನ್ನು ಭೇಟಿಯಾದ ನಂತರ ಅಂದಿನ ಪ್ರಧಾನಿ ಮನಮೋಹನ

ಉಗ್ರ ಹಾಫಿಜ್‌ ಸಯೀದ್‌ನನ್ನು ಭೇಟಿಯಾದದ್ದಕ್ಕೆ ಧನ್ಯವಾದ ಹೇಳಿದ್ದ ಮನಮೋಹನ್‌ ಸಿಂಗ್‌ Read More »

ಆರು ಸಾವಿರ ಮತದಾರರನ್ನು ಡಿಲೀಟ್‌ ಮಾಡಿಲ್ಲ, ಅರ್ಜಿ ತಿರಸ್ಕರಿಸಲಾಗಿದೆ : ರಾಹುಲ್‌ ಗಾಂಧಿ ಆರೋಪಕ್ಕೆ ಸ್ಪಷ್ಟನೆ

ಆನ್‌ಲೈನ್‌ ಮೂಲಕ ಮತದಾರರ ಹೆಸರು ಅಳಿಸುವುದು ಅಸಾಧ್ಯ ಎಂದ ಚುನಾವಣಾ ಆಯೋಗ ಬೆಂಗಳೂರು: ಕರ್ನಾಟಕದ ಆಳಂದದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಕುರಿತು ರಾಹುಲ್‌ ಗಾಂಧಿ ಮಾಡಿರುವ ಆರೋಪಗಳಿಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ನಿನ್ನೆ ದೆಹಲಿಯಲ್ಲಿ ರಾಹುಲ್‌ ಗಾಂಧಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಆರು ಸಾವಿರಕ್ಕೂ ಅಧಿಕ ಮತಕಳ್ಳತನವಾಗಿದೆ. ಮತದಾರರ ಹೆಸರುಗಳನ್ನು ಆನ್‌ಲೈನ್‌ ಮೂಲಕ ಅಳಿಸಿ ಹಾಕಲಾಗಿದೆ ಎಂದು ಆರೋಪಿಸಿ ಇದಕ್ಕೆ ಇಬ್ಬರು ಸಾಕ್ಷಿಧಾರರನ್ನೂ ಹಾಜರುಪಡಿಸಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ

ಆರು ಸಾವಿರ ಮತದಾರರನ್ನು ಡಿಲೀಟ್‌ ಮಾಡಿಲ್ಲ, ಅರ್ಜಿ ತಿರಸ್ಕರಿಸಲಾಗಿದೆ : ರಾಹುಲ್‌ ಗಾಂಧಿ ಆರೋಪಕ್ಕೆ ಸ್ಪಷ್ಟನೆ Read More »

error: Content is protected !!
Scroll to Top