ದೇಶ

ಸಂವಿಧಾನ ಬಲವಾದ ಪ್ರಜಾಪ್ರಭುತ್ವದ ಅಡಿಪಾಯ : ಮೋದಿ

ಸಂವಿಧಾನ ದಿನಾಚರಣೆ ಸಂದರ್ಭದಲ್ಲಿ ದೇಶದ ಜನರಿಗೆ ಪತ್ರದ ಮೂಲಕ ಕರ್ತವ್ಯದ ಕರೆ ನವದೆಹಲಿ: ಭಾರತ ಇಂದು ಸಂವಿಧಾನ ದಿನವನ್ನು ಆಚರಿಸುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಪತ್ರ ಬರೆದು, ಸಂವಿಧಾನ ಬಲವಾದ ಪ್ರಜಾಪ್ರಭುತ್ವದ ಅಡಿಪಾಯವಾಗಿರುವುದರಿಂದ ನಾಗರಿಕರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಪೂರೈಸಬೇಕೆಂದು ಕರೆಕೊಟ್ಟಿದ್ದಾರೆ. ಈ ಪತ್ರದಲ್ಲಿ ಪ್ರಧಾನಿ ಮೋದಿ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ಜವಾಬ್ದಾರಿಯನ್ನು ಹೇಳಿದ್ದಾರೆ. 18 ವರ್ಷ ತುಂಬಿದ ಮತ್ತು ಮೊದಲ ಬಾರಿಗೆ ಮತದಾರರಾಗುವ ಯುವಕರನ್ನು […]

ಸಂವಿಧಾನ ಬಲವಾದ ಪ್ರಜಾಪ್ರಭುತ್ವದ ಅಡಿಪಾಯ : ಮೋದಿ Read More »

ರಾತ್ರಿ ಬೆಳಗಾಗುವುದರೊಳಗೆ ಕಾಳಿ ದೇವಿಗೆ ಮಾತೆ ಮೇರಿಯ ಅಲಂಕಾರ

ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಅರ್ಚಕನ ಬಂಧನ ಮುಂಬೈ : ಮುಂಬೈಯ ಚೆಂಬೂರಿನಲ್ಲಿರುವ ಸಣ್ಣ ದೇವಸ್ಥಾನವೊಂದರಲ್ಲಿ ಕಾಳಿದೇವಿಯ ಪ್ರತಿಮೆಯನ್ನು ಮಾತೆ ಮೇರಿಯಂತೆ ಅಲಂಕರಿಸಿ ಭಕ್ತರ ಭಾವನೆಗೆ ಧಕ್ಕೆಯುಂಟುಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಈ ದೇವಸ್ಥಾನದ ಅರ್ಚಕನನ್ನು ಬಂದಿಸಿದ್ದಾರೆ. ಚೆಂಬೂರಿನ ಅನಿಕ್‌ ಎಂಬಲ್ಲಿರುವ ಸ್ಮಶಾನದೊಳಗಿರುವ ಕಾಳಿಕಾ ಮಾತೆಯ ಗುಡಿಯ ವಿಗ್ರಹವನ್ನು ರಾತ್ರೋರಾತ್ರಿ ಕ್ರೈಸ್ತರ ಮಾತೆಮೇರಿಯಂತೆ ಅಲಂಕರಿಸಲಾಗಿತ್ತು. ವಿಗ್ರಹಕ್ಕೆ ಹೊಂಬಣ್ಣದ ಸೀರೆ ಉಡಿಸಿ, ಶಿರದ ಬಳಿ ಶಿಲುಬೆ ಇರಿಸಿ ತೋಳಿನಲ್ಲಿ ಚಿಕ್ಕ ಮಗುವೊಂದನ್ನು ಇರಿಸಲಾಗಿತ್ತು. ಇಷ್ಟು ಮಾತ್ರವಲ್ಲದೆ

ರಾತ್ರಿ ಬೆಳಗಾಗುವುದರೊಳಗೆ ಕಾಳಿ ದೇವಿಗೆ ಮಾತೆ ಮೇರಿಯ ಅಲಂಕಾರ Read More »

ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ ಸಂಪನ್ನ

ಸಾವಿರಾರು ಪ್ರಮುಖ ಗಣ್ಯರ ಸಮ್ಮುಖ ಧ್ವಜಾರೋಹಣ ನೆರವೇರಿಸಿದ ಮೋದಿ ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಧರ್ಮ ಧ್ವಜಾರೋಹಣ ಕಾರ್ಯ ನೆರವೇರಿಸಿದ್ದಾರೆ. ಇದು ಭಕ್ತರಿಗೆ ದೇವಾಲಯಕ್ಕೆ ಆಗಮಿಸಲು ಮುಕ್ತ ಆಹ್ವಾನ ನೀಡಿದಂತಾಗಿದೆ. ಶ್ರೀರಾಮ ಮತ್ತು ಸೀತಾಮಾತೆಯ ದೈವಿಕ ವಿವಾಹವನ್ನು ಆಚರಿಸುವ ವಿವಾಹ ಪಂಚಮಿಯ ಸಂದರ್ಭದಲ್ಲಿ ಅಯೋಧ್ಯೆ ಪೂರ್ಣ ವೈಭವದಿಂದ ಹೊಳೆಯುತ್ತಿದೆ. ತ್ರೇತಾಯುಗದಲ್ಲಿ ರಾಮ ಮತ್ತು ಜಾನಕಿಯ ವಿವಾಹವು ಮಾರ್ಗಶಿರ ಮಾಸದ ಹದಿನೈದು ದಿನಗಳ ಐದನೇ ದಿನದಂದು

ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ ಸಂಪನ್ನ Read More »

ಇಂದು ಅಯೋಧ್ಯೆ ರಾಮ ಮಂದಿರಲ್ಲಿ ಪ್ರಧಾನಿಯಿಂದ ಧ್ವಜಾರೋಹಣ

ರಾಮ ಮಂದಿರ ಪೂರ್ಣಗೊಂಡ ಸಂಕೇತವಾಗಿ 22 ಅಡಿ ಎತ್ತರದ ಭಗವಾ ಧ್ವಜ ಹಾರಿಸಲಿರುವ ಮೋದಿ ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಇಂದು ಅಯೋಧ್ಯೆಯ ರಾಮಮಂದಿರದ ಮೇಲೆ ಕೇಸರಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಐದು ವರ್ಷದ ಬಳಿಕ ಅಯೋಧ್ಯೆ ರಾಮಮಂದಿರ ನಿರ್ಮಾಣ ಪೂರ್ಣಗೊಂಡಿದೆ. ಇದರ ಸಂಕೇತವಾಗಿ ಇಂದು ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ ನೀಡಿ, ರಾಮಮಂದಿರ ಗೋಪುರ ಮೇಲೆ 22 ಅಡಿ ಎತ್ತರದ ಭಗವಾ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪ್ರಧಾನಿ ಮೋದಿ ಅವರು 22 ಅಡಿ ಎತ್ತರದ ಧಾರ್ಮಿಕ ಧ್ವಜಾರೋಹಣ ಮಾಡಿ,

ಇಂದು ಅಯೋಧ್ಯೆ ರಾಮ ಮಂದಿರಲ್ಲಿ ಪ್ರಧಾನಿಯಿಂದ ಧ್ವಜಾರೋಹಣ Read More »

ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟ : ದೆಹಲಿ ತಲುಪಿದ ಬೂದಿ

12 ಸಾವಿರ ವರ್ಷಗಳ ಬಳಿಕ ಸ್ಫೊಟಿಸಿದ ಜ್ವಾಲಾಮುಖಿ ನವದೆಹಲಿ : ಇಥಿಯೋಪಿಯಾದ ಹೈಲಿ ಗುಬ್ಬಿ ಜ್ವಾಲಾಮುಖಿ 12 ಸಾವಿರ ವರ್ಷಗಳ ಬಳಿಕ ಸ್ಫೋಟಗೊಂಡಿದ್ದು, ಇದರ ಬೂದಿ ಸೋಮವಾರ ರಾತ್ರಿ ದೆಹಲಿ ತಲುಪಿದೆ. ಹವಾಮಾನ ಇಲಾಖೆ ಈವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೊದಲೇ ದೆಹಲಿ ವಾಯುಮಾಲಿನ್ಯ ಸಮಸ್ಯೆಯಿಂದ ಬಳಲುತ್ತಿದೆ. ಇದರೊಂದಿಗೆ ಜ್ವಾಲಾಮುಖಿಯ ಬೂದಿಯೂ ಸೇರಿಕೊಂಡರೆ ಪರಿಸ್ಥಿತಿ ಬಿಗಡಾಯಿಸುವ ಆತಂಕವಿದೆ. ಮೋಡದಂತಿರುವ ಬೂದಿ ವಾಯುವ್ಯ ಭಾರತದ ಕಡೆಗೆ ಗಂಟೆಗೆ ಸುಮಾರು 130 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಚಲಿಸುತ್ತಿದೆ. ಭಾನುವಾರ ಜ್ವಾಲಾಮುಖಿ ಸ್ಫೋಟಗೊಂಡ

ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟ : ದೆಹಲಿ ತಲುಪಿದ ಬೂದಿ Read More »

ಸಂಗೀತ ರಸಮಂಜರಿಯಲ್ಲಿ ನೂಕುನುಗ್ಗಲು : 30ಕ್ಕೂ ಹೆಚ್ಚು ಮಂದಿಗೆ ಗಾಯ

ಜನಪ್ರಿಯ ಗಾಯಕನ ಕಾರ್ಯಕ್ರಮಕ್ಕೆ ಮಿತಿಮೀರಿ ಬಂದ ಜನರಿಂದಾಗಿ ದುರ್ಘಟ ನೆ ಕಾಸರಗೋಡು: ನಗರ ಹೊರವಲಯದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದ ವೇಳೆ ನಿರೀಕ್ಷೆಗೂ ಮೀರಿ ಸೇರಿದ್ದ ಜನಸಂದಣಿಯಿಂದ ನೂಕುನುಗ್ಗಲು ಸಂಭವಿಸಿ, ಕನಿಷ್ಠ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಗಾಯಗೊಂಡವರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕಾಸರಗೋಡು ನಗರದ ಹಲವು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕಾರ್ಯಕ್ರಮ ಆಯೋಜಿಸಿದ ಐವರ ವಿರುದ್ಧ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಫ್ಲೀ ಯುವಜನ

ಸಂಗೀತ ರಸಮಂಜರಿಯಲ್ಲಿ ನೂಕುನುಗ್ಗಲು : 30ಕ್ಕೂ ಹೆಚ್ಚು ಮಂದಿಗೆ ಗಾಯ Read More »

ಉಡುಪಿಯಲ್ಲಿ ಮೋದಿಯ ರೋಡ್‌ ಶೋ ರದ್ದು

ನ.28ಕ್ಕೆ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಲಿರುವ ಪ್ರಧಾನಿ ಉಡುಪಿ: ನವೆಂಬರ್ 28ರಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸರುವುದನ್ನು ಪ್ರಧಾನಮಂತ್ರಿಗಳ ಕಚೇರಿ (ಪಿಎಂಒ) ದೃಢಪಡಿಸಿದೆ. ನವೆಂಬರ್ 28ರಂದು ಪ್ರಧಾನಿ ಮೋದಿ ಉಡುಪಿಗೆ ಭೇಟಿ ನೀಡುವ ಬಗ್ಗೆ ಪ್ರಧಾನಿ ಕಚೇರಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಆ ವೇಳಾಪಟ್ಟಿಯ ಪ್ರಕಾರ ಪ್ರಧಾನಿ ಮೋದಿ ನವೆಂಬರ್ 28ರಂದು ಬೆಳಿಗ್ಗೆ 11.05ಕ್ಕೆ ದೆಹಲಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ

ಉಡುಪಿಯಲ್ಲಿ ಮೋದಿಯ ರೋಡ್‌ ಶೋ ರದ್ದು Read More »

ಒಳನುಸುಳುಕೋರರನ್ನು ಹುಡುಕಿ – ಹುಡುಕಿ ಹೊರಗಟ್ಟಲಾಗುವುದು: ಅಮಿತ್ ಶಾ

ಗಾಂಧಿನಗರ: ಭಾರತದೊಳಗೆ ಸೇರಿಕೊಂಡಿರುವ ‌ಪ್ರತಿಯೊಬ್ಬ ಒಳನುಸುಳುಕೋರನನ್ನು ಸಹ ಹುಡುಕಿ – ಹುಡುಕಿ ಹೊರಕ್ಕಟ್ಟುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಡುಗಿದ್ದಾರೆ. ಗುಜರಾತ್‌‌ ಭುಜ್‌ನಲ್ಲಿ ನಡೆದ ಬಿ‌ಎಸ್‌ಎಫ್ ವಜ್ರ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಎಂದು ಹೇಳಿದ್ದಾರೆ. ಎಸ್‌ಐಆ‌ರ್ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದ ಬೆನ್ನಲ್ಲೇ ಅಮಿತ್ ಶಾ ಈ ಹೇಳಿಕೆ ನೀಡಿದ್ದು,

ಒಳನುಸುಳುಕೋರರನ್ನು ಹುಡುಕಿ – ಹುಡುಕಿ ಹೊರಗಟ್ಟಲಾಗುವುದು: ಅಮಿತ್ ಶಾ Read More »

ದುಬೈ ಏರ್‌ಶೋನಲ್ಲಿ ತೇಜಸ್‌ ಪತನ : 37 ವರ್ಷದ ಪೈಲಟ್‌ ದುರ್ಮರಣ

ಭಾರತಕ್ಕೆ ಆಘಾತ ನೀಡಿದ ಯುದ್ಧ ವಿಮಾನ ಪತನ; ತನಿಖೆಗೆ ಆದೇಶ ನವದೆಹಲಿ: ದುಬೈ ವೈಮಾನಿಕ ಪ್ರದರ್ಶನದ ವೇಳೆ ಎಚ್‌ಎಎಲ್‌ ನಿರ್ಮಿತ ತೇಜಸ್‌ ಯುದ್ಧ ವಿಮಾನ (ಎಲ್‌ಸಿಎ ಎಂಕೆ -1) ಪತನಗೊಂಡು, ಭಾರತೀಯ ವಾಯುಪಡೆಯ ಪೈಲಟ್‌ ವಿಂಗ್‌ ಕಮಾಂಡರ್‌ ನಮಾಂಶ್‌ ಸ್ಯಾಲ್ ಮೃತಪಟ್ಟಿದ್ದಾರೆಂದು ದೃಢಪಡಿಸಲಾಗಿದೆ. ಕಾರ್ಯಕ್ರಮದ ಕೊನೆಯ ದಿನದಂದು 37 ವರ್ಷದ ಪೈಲಟ್‌ ಕೆಳಮಟ್ಟದ ಏರೋಬ್ಯಾಟಿಕ್ ಕೌಶಲ ನಿರ್ವಹಿಸುತ್ತಿದ್ದಾಗ ಫೈಟರ್ ಜೆಟ್ ಪತನಗೊಂಡಿದೆ. ದುರದೃಷ್ಟಕರ ಘಟನೆಯಲ್ಲಿ ವಿಂಗ್‌ ಕಮಾಂಡರ್‌ ಸಾವಿಗೀಡಾಗಿದರು. ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಹಿಮಾಚಲ ಪ್ರದೇಶದ

ದುಬೈ ಏರ್‌ಶೋನಲ್ಲಿ ತೇಜಸ್‌ ಪತನ : 37 ವರ್ಷದ ಪೈಲಟ್‌ ದುರ್ಮರಣ Read More »

ಉಡುಪಿಯಲ್ಲೂ ಪತ್ತೆಯಾದರು ಪಾಕ್‌ ಬೇಹುಗಾರರು

ಮಲ್ಪೆ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಸೆರೆ ಹಡಗುಗಳಿಗೆ ಸಂಬಂಧಿಸಿದ ರಹಸ್ಯ ತಾಂತ್ರಿಕ ಮಾಹಿತಿ ಪಾಕ್‌ಗೆ ರವಾನೆ ಉಡುಪಿ : ಪಾಕಿಸ್ತಾನ ಪರ ಬೇಹುಗಾರಿಕೆ ಮಾಡುತ್ತಿದ್ದ ಇಬ್ಬರನ್ನು ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಬಂಧಿಸಲಾಗಿದೆ. ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಉಡುಪಿ ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎಂದು ಗುರುತಿಸಲಾಗಿದೆ. ಇವರು ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಯನ್ನು ರವಾನಿಸುತ್ತಿದ್ದರು ಎನ್ನಲಾಗಿದೆ. ಬಂಧಿತರಿಬ್ಬರೂ ಸುಷ್ಮಾ ಮೆರಿನ್ ಪ್ರೈವೇಟ್ ಲಿಮಿಟೆಡ್

ಉಡುಪಿಯಲ್ಲೂ ಪತ್ತೆಯಾದರು ಪಾಕ್‌ ಬೇಹುಗಾರರು Read More »

error: Content is protected !!
Scroll to Top