ಮನರಂಜನೆ

ಪುತ್ತೂರಿನಲ್ಲಿ ಮೇಳೈಸಿದ “ತುಳುನಾಡ ಬಂಟೆರೆ ಪರ್ಬ-2023” | ಅನಾವರಣಗೊಂಡ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು

ಪುತ್ತೂರು:.ಯುವ ಬಂಟರು ಸಮಾಜದಲ್ಲಿ ಶಕ್ತಿಯಾಗಿ ಬೆಳೆಯಬೇಕು. ಇದಕ್ಕೆ ಪುತ್ತೂರು ಯುವ ಬಂಟರ ನೇತೃತ್ವದಲ್ಲಿ ಜರಗಿದ ಅದ್ದೂರಿ  ಕಾರ್ಯಕ್ರಮ ಬಂಟೆರೆ ಪರ್ಬ ಮಾದರಿಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಭಾನುವಾರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್‌ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿದ ‘ತುಳುನಾಡ ಬಂಟೆರೆ ಪರ್ಬ-2023 ‘ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಬಂಟರ ಪರವಾಗಿ ಯಾವುದೇ ಸರಕಾರ ಈತನಕ ಬೆಂಬಲ ನೀಡಿಲ್ಲ.ರಾಜ್ಯದ ಈಗಿನ ಸರಕಾರ […]

ಪುತ್ತೂರಿನಲ್ಲಿ ಮೇಳೈಸಿದ “ತುಳುನಾಡ ಬಂಟೆರೆ ಪರ್ಬ-2023” | ಅನಾವರಣಗೊಂಡ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು Read More »

ಜು.23 : ಯುವ ಬಂಟರ ಸಂಘದ ವತಿಯಿಂದ “ತುಳುನಾಡ ಬಂಟೆರೆ ಪರ್ಬ-2023” ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ಪುತ್ತೂರು ಯುವ ಬಂಟರ ಸಂಘದ ಆಶ್ರಯದಲ್ಲಿ ಬಂಟ ದಿನಾಚರಣೆ ಪ್ರಯುಕ್ತ “ತುಳುನಾಡ ಬಂಟೆರೆ ಪರ್ಬ-2023” ಸಾಂಸ್ಕೃತಿಕ ಕಾರ್ಯಕ್ರಮ ಜು.23 ಭಾನುವಾರ ಬಂಟರ ಭವನದಲ್ಲಿ ನಡೆಯಲಿದೆ ಎಂದು ಯುವ ಬಂಟರ ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಆಯ್ದ 8 ತಂಡಗಳಿಗೆ ಪಾಲ್ಗೊಳ್ಳಲು ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರದ ಅಂಗವಾಗಿ ಮಹಿಳಾ ಮತ್ತು ಮಕ್ಕಳ

ಜು.23 : ಯುವ ಬಂಟರ ಸಂಘದ ವತಿಯಿಂದ “ತುಳುನಾಡ ಬಂಟೆರೆ ಪರ್ಬ-2023” ಸಾಂಸ್ಕೃತಿಕ ಕಾರ್ಯಕ್ರಮ Read More »

ಝೀ ಕನ್ನಡ ವಾಹಿನಿ ಛೋಟಾ ಚಾಂಪಿಯನ್ ಗೇಮ್ ಶೋನಲ್ಲಿ ಪ್ರಥಮ ಸ್ಥಾನ ಪಡೆದ ಪುಟಾಣಿ ಆತ್ಮಿ ಗೌಡರಿಗೆ ಸನ್ಮಾನ | ಸನ್ಮಾನಿಸಿದ ಅಲಂಕಾರು ಒಕ್ಕಲಿಗ ಗೌಡ ಸೇವಾ ಸಂಘ

ಪುತ್ತೂರು: ಝೀ ಕನ್ನಡ ವಾಹಿನಿಯ ಛೋಟಾ ಚಾಂಪಿಯನ್ ಗೇಮ್ ಶೋ ದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ರಾಮಕುಂಜ ಗ್ರಾಮದ ಸಂಪ್ಯಾಡಿ ನಿವಾಸಿ ಸುಜಿತ್ ಹಾಗೂ ಉಮಾಶ್ರೀ ದಂಪತಿ ಪುತ್ರಿ ಮೂರುವರೆ ವರ್ಷದ ಪುಟಾಣಿ ಆತ್ಮಿ ಗೌಡರನ್ನು ಅಲಂಕಾರು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸಂಪ್ಯಾಡಿಯ ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಲಿಂಗಪ್ಪ ಗೌಡ ಕಡೆಂಬ್ಯಾಲ್, ಒಕ್ಕಲಿಗ ಗೌಡ ಸಂಘದ ಆಲಂಕಾರು ವಲಯ ಅಧ್ಯಕ್ಷ ರಾಮಣ್ಣ

ಝೀ ಕನ್ನಡ ವಾಹಿನಿ ಛೋಟಾ ಚಾಂಪಿಯನ್ ಗೇಮ್ ಶೋನಲ್ಲಿ ಪ್ರಥಮ ಸ್ಥಾನ ಪಡೆದ ಪುಟಾಣಿ ಆತ್ಮಿ ಗೌಡರಿಗೆ ಸನ್ಮಾನ | ಸನ್ಮಾನಿಸಿದ ಅಲಂಕಾರು ಒಕ್ಕಲಿಗ ಗೌಡ ಸೇವಾ ಸಂಘ Read More »

ಜು.1 : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ “ನೃತ್ಯಾಂತರಂಗ-101”

ಪುತ್ತೂರು: ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ ನೃತ್ಯಾಂತರಂಗ-101 ಜು.1 ಶನಿವಾರ ದರ್ಬೆ ಶಶಿಶಂಕರ ಸಭಾಂಗಣದಲ್ಲಿ ನಡೆಯಲಿದೆ. ಸಂಜೆ 5.45 ರಿಂದ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ವಿದುಷಿ ಮಾನಸ ಪುನೀತ್ ರೈ ಕಡಬ ಅವರ ಶಿಷ್ಯೆಯರಾದ ಪ್ರಣಮ್ಯ ಪಿ.ರಾವ್ ಮತ್ತು ಸ್ನೇಹ ಪಿ.ರಾವ್ ಅವರಿಂದ ನೃತ್ಯಾಂತರಂಗ ಪ್ರಸ್ತುತಿಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜು.1 : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ “ನೃತ್ಯಾಂತರಂಗ-101” Read More »

ಝೀ ಕನ್ನಡ ವಾಹಿನಿಯ ಛೋಟಾ ಚಾಂಪಿಯನ್ ಗೇಮ್ ಶೋಗೆ ರಾಮಕುಂಜದ ಆತ್ಮಿ ಗೌಡ ಆಯ್ಕೆ | ನಾಳೆ ಎಪಿಸೋಡ್ ಪ್ರಸಾರ

ರಾಮಕುಂಜ : ಝೀ ಕನ್ನಡ ವಾಹಿನಿಯಲ್ಲಿ ಹತ್ತು ವರ್ಷಗಳ ಬಳಿಕ ಪ್ರಾರಂಭಗೊಂಡ ಮಕ್ಕಳ ನಂ.1 ಗೇಮ್ ಶೋ ಛೋಟಾ ಚಾಂಪಿಯನ್ ನಲ್ಲಿ ರಾಮಕುಂಜ ಗ್ರಾಮದ ಸುಜಿತ್ ಎಸ್ ಇವರ ಪುತ್ರಿ ಆತ್ಮಿ ಗೌಡ ಎಸ್ ಆಯ್ಕೆಯಾಗಿದ್ದು ಶನಿವಾರ ಭಾನುವಾರದಂದು ಸಂಜೆ 6 ಗಂಟೆಗೆ ಎಪಿಸೋಡ್ ಪ್ರಸಾರಗೊಳ್ಳಲಿದೆ. ಹತ್ತು ವರ್ಷಗಳ ಹಿಂದೆ ಸೃಜನ್ ಲೋಕೇಶ್ ನಿರ್ವಹಿಸುತ್ತಿದ್ದ ಮಕ್ಕಳ ಗೇಮ್‌ಶೋ ಕಾರ್ಯಕ್ರಮದ ನಿರೂಪಣೆಯನ್ನು ಈ ಬಾರಿ ಶ್ವೇತಾ ಚಂಗಪ್ಪ ಮತ್ತು ಕುರಿ ಪ್ರತಾಪ್ ನಡೆಸಿಕೊಡುತ್ತಿದ್ದು ಇದರಲ್ಲಿ ೨ ರಿಂದ ೬

ಝೀ ಕನ್ನಡ ವಾಹಿನಿಯ ಛೋಟಾ ಚಾಂಪಿಯನ್ ಗೇಮ್ ಶೋಗೆ ರಾಮಕುಂಜದ ಆತ್ಮಿ ಗೌಡ ಆಯ್ಕೆ | ನಾಳೆ ಎಪಿಸೋಡ್ ಪ್ರಸಾರ Read More »

ಜೂ.17-18 : ಪುತ್ತೂರಿನಲ್ಲಿ ಹಲಸು ಹಣ್ಣು ಮೇಳ – 2023

ಪುತ್ತೂರು: ನವತೇಜ ಪುತ್ತೂರು ಹಾಗೂ ಜೆಸಿಐ ಪ್ರಸ್ತುತಪಡಿಸುವ “ಹಲಸು ಹಣ್ಣು ಮೇಳ-2023 ಜೂ.17 ಹಾಗೂ 18 ರಂದು ಇಲ್ಲಿಯ ಜೈನ ಭವನದಲ್ಲಿ ನಡೆಯಲಿದೆ. ಮೇಳದ ಅಂಗವಾಗಿ ರೈತರಿಂದ ತಾಜಾ ಹಣ್ಣುಗಳ ಪ್ರದರ್ಶನ, ಮಾರಾಟ ನಡೆಯಲಿದ್ದು, ಮೇಳದಲ್ಲಿ ಆಹಾರ ಮಳಿಗೆಗಳು, ಹಣ್ಣಿನ ಗಿಡಗಳು ಮತ್ತು ಬೀಜಗಳು, ಸಂಸ್ಕರಣೆ, ಮೌಲ್ಯವರ್ಧನೆ ಉತ್ಪನ್ನಗಳು, ಕೃಷಿ ಉದ್ಯಮ ಮಳಿಗೆಗಳು ಸಹಿತ ರೈತರ ಸಂಪರ್ಕ, ಸಮಾಲೋಚನೆ, ವಿವಿಧ ಮನೋರಂಜನಾ ಕಾರ್ಯಕ್ರಮ, ಹವಿಶೇಷ ಸ್ಪರ್ಧೆಗಳು ನಡೆಯಲಿವೆ. ಹಲಸಿನ ಹಣ್ಣಿನ ಹೋಳಿಗೆ, ಹಪ್ಪಳ, ದೋಸೆ, ಸಂಡಿಗೆ, ಪಾನಿಪೂರಿ,

ಜೂ.17-18 : ಪುತ್ತೂರಿನಲ್ಲಿ ಹಲಸು ಹಣ್ಣು ಮೇಳ – 2023 Read More »

ಮೇ 26 : ಪಿರ್ಕಿಲು ತುಳು ಸಿನಿಮಾ ತೆರೆಗೆ

ಪುತ್ತೂರು: ಕರಾವಳಿ ಸಿನಿಮಾಸ್ ಲಾಂಛನದಲ್ಲಿ -ಸತೀಶ್ ಪೆರ್ನೆ, ಶಿವಪ್ರಸಾದ್ ಇಜ್ಜಾವು, ನಿರ್ಮಾಣದಲ್ಲಿ, ಹೆಚ್.ಡಿ.ಆರ್ಯ ನಿರ್ದೇಶನದಲ್ಲಿ  ತಯಾರಾದ “ಪಿರ್ಕಿಲು” ತುಳು ಸಿನಿಮಾ ಮೇ 26 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಹೆಚ್.ಡಿ.ಆರ್ಯ ತಿಳಿಸಿದ್ದಾರೆ. ಬುಧವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ರೂಪವಾಣಿ, ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್,  ಉಡುಪಿಯಲಿ, ಕಲ್ಪನ, ಮಣಿಪಾಲದಲ್ಲಿ ಭಾರತ್ ಸಿನಿಮಾ, ಐಸಾಕ್ಸ್ ಪಡುಬಿದ್ರೆಯಲ್ಲಿ ಭಾರತ್ ಸಿನಿಮಾ, ಸುರತ್ಕಲ್‌ ನಲ್ಲಿ ನಟರಾಜ್ ಸಿನಿ ಗ್ಯಾಲಕ್ಷ್ಮಿ ಪುತ್ತೂರಿನಲ್ಲಿ ಭಾರತ್ ಸಿನಿಮಾ ಮೂಡಲಿದೆ

ಮೇ 26 : ಪಿರ್ಕಿಲು ತುಳು ಸಿನಿಮಾ ತೆರೆಗೆ Read More »

3ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ, ನೋಟಾ ಪರವಾಗಿ 111 ಮತಗಳು | ಫುಲ್ ಡೀಟೈಲ್ ಇಲ್ಲಿದೆ

ಪುತ್ತೂರು: ಮತ ಎಣಿಕೆಯ 3ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು 12541 ಮತಗಳನ್ನು ಪಡೆದುಕೊಂಡು ಮುನ್ನಡೆ ಸಾಧಿಸಿದ್ದಾರೆ. ಎಲ್ಲಾ ಅಭ್ಯರ್ಥಿಗಳು 3ನೇ ಸುತ್ತಿನಲ್ಲಿ ಖಾತೆ ತೆರೆದಿದ್ದು, ನೋಟಾಕ್ಕೆ 111 ಮತ ಚಲಾವಣೆಯಾಗಿದೆ. ಒಟ್ಟು 30332 ಮತಗಳ ಎಣಿಕೆ ನಡೆದಿದ್ದು, ಇದರಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು 10223 ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು 6452 ಮತ ಪಡೆದಿದ್ದು, ಜೆಡಿಎಸ್ ನ ದಿವ್ಯಪ್ರಭಾ ಚಿಲ್ತಡ್ಕ

3ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ, ನೋಟಾ ಪರವಾಗಿ 111 ಮತಗಳು | ಫುಲ್ ಡೀಟೈಲ್ ಇಲ್ಲಿದೆ Read More »

ಇಂದು : ಶ್ರೀ ಮೂಕಾಂಬಿಕಾ ಕಲ್ಚರಲ್ ಅರ್ಪಿಸುವ ನೃತ್ಯಾಂತರಂಗ-97

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ ನೃತ್ಯಾಂತರಂಗ-97 ಏ.21 ಶುಕ್ರವಾರ ಸಂಜೆ 5.45 ಕ್ಕೆ ದರ್ಬೆ ಶಶಿಶಂಕರ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಪಾಲ್ಗೊಳ್ಳಲಿದ್ದಾರೆ. ವಿದ್ವಾನ್ ದೀನಪ್ ಕುಮಾರ್, ವಿದುಷಿ ಪ್ರೀತಿಕಲಾ, ಅಪೂರ್ವಗೌರಿ ದೇವಸ್ಯ, ಶುಭಾ ಅಚಳ್ಳಿ, ವಿಂಧ್ಯಾ ಕಾರಂತ, ವಿಭಾಶ್ರೀ ಗೌಡ, ಪ್ರಣಮ್ಯ ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇಂದು : ಶ್ರೀ ಮೂಕಾಂಬಿಕಾ ಕಲ್ಚರಲ್ ಅರ್ಪಿಸುವ ನೃತ್ಯಾಂತರಂಗ-97 Read More »

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪೂಜನ ಜೆ ಎಸ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ.

ಪುತ್ತೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2022-23ನೇ ಸಾಲಿನ  ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಪೂಜನ ಜೆ. ಎಸ್  ರವರು ಶೇ 90% ಅಂಕ ಪಡೆದು ಡಿಸ್ಟ್ರಿಕ್ಸಣ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. .ಪುತ್ತೂರಿನ ಭಾರತೀಯ ನೃತ್ಯ ಶಾಲೆಯಲ್ಲಿ ಶ್ರುತಿರೋಶನ್ ಬೆಳ್ಳೂರು ಶಿಷ್ಯೆಯಾಗಿರುವ ಅವರು ಪ್ರಸ್ತುತ ನರಿಮೊಗರು ಪುರುಷರಕಟ್ಟೆಯ ಸರಸ್ವತಿ ವಿದ್ಯಾಮಂದಿರದ 6 ನೇ ತರಗತಿಯ ವಿದ್ಯಾರ್ಥಿನಿ. ಒತ್ತೆಮುಂಡೂರು ಜಯರಾಮ ಪೂಜಾರಿ ಮತ್ತು ಶಾಲಿನಿ ದಂಪತಿ ಪುತ್ರಿ.

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪೂಜನ ಜೆ ಎಸ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ. Read More »

error: Content is protected !!
Scroll to Top