ಅಪರಾಧ

ವಿಚ್ಚೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ಆರೋಪಿಗಳು ಪೋಲಿಸರ ಕೈ ವಶ

ಮಂಗಳೂರು : ಕೌಟುಂಬಿಕ ಜೀವನದಲ್ಲಿ ಬಿರುಕು ಮೂಡಿದ ಪ್ರಕರಣದ ವಿಚ್ಚೆದನಕ್ಕೆ ಸಂಬಂದಿಸಿದಂತೆ ನ್ಯಾಯಲಯಕ್ಕೆ ಹಾಜರಾಗಿದ್ದ ಮಹಿಳೆಯನ್ನು ಹಿಂಬಾಲಿಸಿ ಬೆದರಿಸಿರುವ ಘಟನೆ ನಡೆದಿದೆ. ಮಹಿಳೆಯನ್ನು ಹಿಂಬಾಲಿ ಬೆದರಿಸಿದ ಆರೋಪಿಯರಾದ ಯೋಗೀಶ್ ಮತ್ತು ಸಿಂಚನ್ ಕುಂದ‌ರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಮೊಬೈಲನ್ನು ಪರಿಶೀಲಿಸಿದಾಗ,  ಮಹಿಳೆ ಹೋಗಿದ್ದ ಆಟೋವನ್ನು ಹಿಂಬಾಲಿಸಿ ತೆಗೆದ ಫೋಟೋಗಳು, ಮಹಿಳೆ ಕೋರ್ಟ್‌ನಲ್ಲಿ ಇದ್ದಾಗ ತೆಗೆದ ಫೋಟೋಗಳು, ಆಕೆಗೆ ಸಂಬಂಧಿಸಿದ ಇತರ ಫೋಟೋ ಹಾಗೂ ವೀಡಿಯೋಗಳು ಪತ್ತೆಯಾಗಿದೆ. ಈ ವೇಳೆ ವಾಟ್ಸಾಪನ್ನು ಪರಿಶೀಲಿಸಿದಾಗ ಮಹಿಳೆಯ […]

ವಿಚ್ಚೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ಆರೋಪಿಗಳು ಪೋಲಿಸರ ಕೈ ವಶ Read More »

ಜೈನ ಧರ್ಮ ಅವಹೇಳನ : ನಾರಾವಿಯ ಮಹಿಳೆ ವಿರುದ್ಧ ಕೇಸ್‌

ಬಾಹುಬಲಿ ಫೋಟೊ ವಿಕೃತಗೊಳಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟ ಮಹಿಳೆ ನಾರಾವಿ : ಬಾಹುಬಲಿ ಮೂರ್ತಿಯ ಫೋಟೊ ವಿಕೃತಗೊಳಿಸಿ ಜೈನಧರ್ಮವನ್ನು ಅವಹೇಳನ ಮಾಡಿರುವ ನಾರಾವಿಯ ಮಹಿಳೆಯ ವಿರುದ್ಧ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ. ನಾರಾವಿ ಗ್ರಾಮದ ವಿಜಯಾ ನಾರಾವಿ ಎಂಬಾಕೆ ಡಿ.20ರಂದು ತನ್ನ ಫೇಸ್‌ಬುಕ್‌ ಮತ್ತು ವಾಟ್ಸಪ್‌ನಲ್ಲಿ ಬಾಹುಬಲಿಯ ವಿಕೃತ ಚಿತ್ರಗಳನ್ನು ಹಂಚಿಕೊಂಡಿದ್ದಳು. ಭಗವಾನ್‌ ಬಾಹುಬಲಿ ಸ್ವಾಮಿಯ ಮೂರ್ತಿಯ ಭಾವಚಿತ್ರವನ್ನು ವಿರೂಪಗೊಳಿಸಿ, ಫೇಸ್‌ಬುಕ್‌ ಖಾತೆ ಹಾಗೂ ವಾಟ್ಸಪ್‌ ಮೂಲಕ ಹರಿಯಬಿಟ್ಟು ಜೈನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ

ಜೈನ ಧರ್ಮ ಅವಹೇಳನ : ನಾರಾವಿಯ ಮಹಿಳೆ ವಿರುದ್ಧ ಕೇಸ್‌ Read More »

ಆಟೋಗೆ ಗೋವನ್ನು ಕಟ್ಟಿ ಎಳೆದೊಯಿದ ಚಾಲಕ

ಪುತ್ತೂರು : ಆಟೋಗೆ ಗೋವನ್ನು ಕಟ್ಟಿ ಎಳೆದೊಯ್ಯುವ ಘಟನೆ ಕೃತ್ಯ  ಡಿ.26ರಂದು ಸವಣೂರಿನಲ್ಲಿ ನಡೆದಿದೆ. ಆಟೋಗೆ ಗೋವನ್ನು ಕಟ್ಟಿ ಎಳೆದೊಯ್ಯುದ ಚಾಲಕನ ದುಷ್ಟ ಬುದ್ದಿಯ ವಿಡಿಯೋ ವೈರಲ್ ಆಗಿದೆ. ಪುತ್ತೂರು ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರಿನಲ್ಲಿ KA21 B 4123 ನಂಬರಿನ ಆಟೋ ಎಂದು ತಿಳಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ, ರಾತ್ರಿ ಹೊತ್ತು ಈ ಘಟನೆ ನಡೆದಿದ್ದು ಕಾರಣ ಇನ್ನು ತಿಳಿದುಬಂದಿಲ್ಲ,

ಆಟೋಗೆ ಗೋವನ್ನು ಕಟ್ಟಿ ಎಳೆದೊಯಿದ ಚಾಲಕ Read More »

ವಸತಿ ಶಾಲೆಯೊಂದರಲ್ಲಿ ಅಡುಗೆ ಸಹಾಯಕನಿಂದ ಮಕ್ಕಳಿಗೆ ಲೈಂಗಿಕ ಕಿರುಕುಳ | ಸಿಬ್ಬಂದಿಯ ವಿರುದ್ಧ ದೂರು

ಕೊಪ್ಪಳ : ವಸತಿ ಶಾಲೆಯೊಂದರಲ್ಲಿ ಅಡುಗೆ ಸಹಾಯಕನೋರ್ವ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಆತನ ವಿರುದ್ಧ  ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಡುಗೆ ಸಹಾಯಕನಾಗಿದ್ದ ವ್ಯಕ್ತಿಯೋರ್ವ ಮಕ್ಕಳಿಗೆ  ಕಿರುಕುಳ ನೀಡುವುದಲ್ಲದೆ  ‘ಬ್ಯಾಡ್ ಟಚ್’ ಮಾಡುತ್ತಾನೆ ಎಂದು ವಿದ್ಯಾರ್ಥಿಗಳು ಮಕ್ಕಳ ಸಲಹಾ ಪೆಟ್ಟಿಗೆಯಲ್ಲಿ ದೂರಿದ್ದಾರೆ.  ಸಲಹಾ ಪೆಟ್ಟಿಗೆಯನ್ನು ಪರಿಶೀಲಿಸುವ ವೇಳೆ ಶಾಲಾ ಮುಖ್ಯೋಪಾಧ್ಯಾಯರಿಗೆ ವಿಷಯ ಬೆಳಕಿಗೆ ಬಂದಿದೆ. ಈ ಆರೋಪದ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಅಡುಗೆ ಸಹಾಯಕನ ವಿರುದ್ಧ ಡಿ.23ರಂದು ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ವಸತಿ ಶಾಲೆಯೊಂದರಲ್ಲಿ ಅಡುಗೆ ಸಹಾಯಕನಿಂದ ಮಕ್ಕಳಿಗೆ ಲೈಂಗಿಕ ಕಿರುಕುಳ | ಸಿಬ್ಬಂದಿಯ ವಿರುದ್ಧ ದೂರು Read More »

500 ನಕಲಿ ಚಿನ್ನದ ಬಳೆ ಅಡವಿಟ್ಟು ಬ್ಯಾಂಕಿಗೆ 2 ಕೋಟಿ ರೂ. ವಂಚನೆ

ಮಂಗಳೂರಿನ ಬ್ಯಾಂಕಿಗೆ ಪಂಗನಾಮ ಹಾಕಿದ ಖದೀಮ ಮಂಗಳೂರು : ಒಂದೆರಡಲ್ಲ ಬರೋಬ್ಬರಿ 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಬ್ಯಾಂಕಿಗೆ 2 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದ ಪ್ರಕರಣವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.ಮಂಗಳೂರಿನ ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚನೆ ಎಸಗಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಗ್ರಾಮದ ಅಬೂಬಕ್ಕರ್ ಸಿದ್ದಿಕ್ ವಂಚಿಸಿದ ಆರೋಪಿ. 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಅಬೂಬಕ್ಕರ್ ಸಿದ್ದಿಕ್ 2,11,89,800 ರೂ. ಸಾಲ ಪಡೆದು ಮೋಸ ಮಾಡಿದ್ದಾನೆ.

500 ನಕಲಿ ಚಿನ್ನದ ಬಳೆ ಅಡವಿಟ್ಟು ಬ್ಯಾಂಕಿಗೆ 2 ಕೋಟಿ ರೂ. ವಂಚನೆ Read More »

ಖತರ್‌ನಾಕ್‌ ಸೀರಿಯಲ್‌ ಕಿಲ್ಲರ್‌ ಕೊನೆಗೂ ಸೆರೆ

18 ತಿಂಗಳಲ್ಲಿ 11 ಪುರುಷರನ್ನು ಕೊಂದಿದ್ದ ಸರಣಿ ಹಂತಕ ಹೊಸದಿಲ್ಲಿ : 18 ತಿಂಗಳಲ್ಲಿ 11 ಪುರುಷರನ್ನು ಹತ್ಯೆ ಮಾಡಿದ್ದ ಸೀರಿಯಲ್ ಕಿಲ್ಲರ್​ನನ್ನು ಕೊನೆಗೂ ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಹಂತಕ ಸಲಿಂಗಕಾಮಿಯಾಗಿದ್ದು, ಪುರುಷರೇ ಅವನ ಟಾರ್ಗೆಟ್‌ ಆಗಿದ್ದರು. ಕಳೆದ 18 ತಿಂಗಳಲ್ಲಿ ಬೆನ್ನುಬೆನ್ನಿಗೆ ನಡೆದ 11 ಪುರುಷರ ಹತ್ಯೆ ಪಂಜಾಬ್‌ ಪೊಲೀಸರಿಗೆ ಸವಾಲಾಗಿತ್ತು. ಪುರುಷರನ್ನು ಹತ್ಯೆ ಮಾಡುವ ಮುನ್ನ ಅವರ ಜತೆ ದೈಹಿಕ ಸಂಬಂಧ ಹೊಂದುತ್ತಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. 11 ಕೊಲೆ ಲೆಕ್ಕಕ್ಕೆ ಸಿಕ್ಕಿದ್ದರೂ ಕೆಲವು

ಖತರ್‌ನಾಕ್‌ ಸೀರಿಯಲ್‌ ಕಿಲ್ಲರ್‌ ಕೊನೆಗೂ ಸೆರೆ Read More »

ದನದ ಕಾಲು ಕಡಿದ ಅನ್ಯಕೋಮಿನ ವ್ಯಕ್ತಿ | ಆರೋಪಿ ವಿರುದ್ಧ ಪ್ರಕರಣ ದಾಖಲು

ರಾಮಕುಂಜ: ಮೇಯಲು ಬಿಟ್ಟಿದ್ದ ದನದ ಕಾಲಿಗೆ ಪಕ್ಕದ ಮನೆಯ ವ್ಯಕ್ತಿಯೋರ್ವರು ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆ ರಾಮಕುಂಜ ಗ್ರಾಮದ ಕೊಂಡ್ಯಾಡಿ ಎಂಬಲ್ಲಿ ನಡೆದಿದೆ. ಕೊಂಡ್ಯಾಡಿ ನಿವಾಸಿ ದನ ಮಾಲಕಿ, ರಾಜೀವಿ ಎಂಬವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಅಬ್ಬಾಸ್ ಎಂದು ತಿಳಿದು ಬಂದಿದೆ. ಡಿ.22ರಂದು ಮಧ್ಯಾಹ್ನ 2 ಗಂಟೆಗೆ ಕೊಟ್ಟಿಗೆಯಿಂದ ದನವನ್ನು ತೋಟಕ್ಕೆ ಮೇಯಲು ಬಿಟ್ಟಿದ್ದು, ದನ ಸಂಜೆಯಾದರೂ ಮರಳಿ ಮನೆಗೆ ಬಾರದೇ ಇದ್ದದನ್ನು ಕಂಡು ದನವನ್ನು ಹುಡುಕಾಡಿದಾಗ ಪಕ್ಕದ ಮನೆಯ ಅಬ್ಬಾಸ್ ಎಂಬವರ

ದನದ ಕಾಲು ಕಡಿದ ಅನ್ಯಕೋಮಿನ ವ್ಯಕ್ತಿ | ಆರೋಪಿ ವಿರುದ್ಧ ಪ್ರಕರಣ ದಾಖಲು Read More »

ಸೇನಾ ವಾಹನ ಕಮರಿಗೆ ಉರುಳಿ ಐವರು ಯೋಧರು ಸಾವು

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ನಿನ್ನೆ ಸಂಜೆ ಸೇನಾ ವಾಹನ 300 ಅಡಿ ಆಳದ ಕಂದಕಕ್ಕೆ ಉರುಳಿ ಸಂಭವಿಸಿದ ಅಪಘಾತದಲ್ಲಿ ಐವರು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ. 18 ಯೋಧರು ವಾಹನದಲ್ಲಿದ್ದರು ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ. ಸೇನಾ ವಾಹನವು ಜಿಲ್ಲೆಯ ಬನೋಯ್‌ಗೆ ತೆರಳುತ್ತಿದ್ದಾಗ ಘರೋವಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. 11 ಮರಾಠಾ ಲೈಟ್ ಇನ್‌ಫೆಂಟ್ರಿಯ ಸೇನಾ ವಾಹನ ಇದು ಎಂದು ಪೊಲೀಸರು ತಿಳಿಸಿದ್ದಾರೆ. ಆ ವಾಹನವು ಸುಮಾರು

ಸೇನಾ ವಾಹನ ಕಮರಿಗೆ ಉರುಳಿ ಐವರು ಯೋಧರು ಸಾವು Read More »

ಬಾಸ್‌ ಜೊತೆ ಹೋಗಲೊಪ್ಪದ ಪತ್ನಿಗೆ ತಲಾಕ್‌ ಕೊಟ್ಟ ಗಂಡ

ಮುಂಬಯಿ : ತನ್ನ ಬಾಸ್ ಜತೆ ಮಲಗಲು ಒಪ್ಪದ ಎರಡನೇ ಹೆಂಡತಿಗೆ ಗಂಡ ತ್ರಿವಳಿ ತಲಾಕ್‌ ನೀಡಿದ ಘಟನೆ ಮುಂಬಯಿ ಸಮೀಪ ಕಲ್ಯಾಣ್‌ನಲ್ಲಿ ಸಂಭವಿಸಿದ್ದು, ಗಂಡನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿಸೆಂಬರ್ 19ರಂದು ಕಂಪನಿಯ ಪಾರ್ಟಿ ನಡೆದಿದ್ದು, ಇದಕ್ಕೆ ಆರೋಪಿ 45 ವರ್ಷದ ವ್ಯಕ್ತಿ ತನ್ನ 28 ವರ್ಷದ ಎರಡನೇ ಹೆಂಡತಿಯನ್ನು ಕರೆದುಕೊಂಡು ಹೋಗಿದ್ದ. ಪಾರ್ಟಿಯ ಮಧ್ಯೆ ಈತ ಬಾಸ್‌ ಜೊತೆಗೆ ಹೋಗುವಂತೆ ಹೆಂಡತಿಗೆ ಹೇಳಿದ್ದಾನೆ. ಇದಕ್ಕೆ ಆಕೆ ಒಪ್ಪಿರಲಿಲ್ಲ. ಮನೆಗೆ ಬಂದ ಕೂಡಲೇ ಈ

ಬಾಸ್‌ ಜೊತೆ ಹೋಗಲೊಪ್ಪದ ಪತ್ನಿಗೆ ತಲಾಕ್‌ ಕೊಟ್ಟ ಗಂಡ Read More »

ಸಿ.ಟಿ.ರವಿ-ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಕರಣದ ತನಿಖೆ ಸಿಐಡಿಗೆ: ಜಿ.ಪರಮೇಶ್ವರ್‌

ಅಶ್ಲೀಲ ಪದ ಹೇಳಿದ್ದಾರೆಯೇ ಎಂದು ತಿಳಿಯಲು ತನಿಖೆ ಬೆಂಗಳೂರು : ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನದ ಕೊನೆಯ ದಿನವಾದ ಡಿ.19ರಂದು ವಿಧಾನ ಪರಿಷತ್​ನಲ್ಲಿ ಎಂಎಲ್​​ಸಿ ಸಿ.ಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ನಡುವಿನ ರಾದ್ಧಾಂತದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣ ದೇಶಾದ್ಯಂತ ಸದ್ದು ಮಾಡಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ

ಸಿ.ಟಿ.ರವಿ-ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಕರಣದ ತನಿಖೆ ಸಿಐಡಿಗೆ: ಜಿ.ಪರಮೇಶ್ವರ್‌ Read More »

error: Content is protected !!
Scroll to Top