ಅಪರಾಧ

ತಿಮರೋಡಿಗೆ ಮೂರನೇ ಬಾರಿ ಗಡಿಪಾರು ನೋಟಿಸ್‌

ಮಧ್ಯರಾತ್ರಿ ಹೋಗಿ ಮನೆಗೆ ನೋಟಿಸ್‌ ಅಂಟಿಸಿರುವ ಪೊಲೀಸರು ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಮೂರನೇ ಬಾರಿಗೆ ಗಡಿಪಾರು ಆದೇಶ ಹೊರಡಿಸಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿಯನ್ನು ಹೈಕೋರ್ಟ್ ಆದೇಶದಂತೆ ಮಾ.16ರಂದು (16-03-2026 ರಿಂದ 16-09-2026 ರವರೆಗೆ) ಪುತ್ತೂರು ಎಸಿ ಸ್ಟೆಲ್ಲಾ ವರ್ಗಿಸ್ ಆರು ತಿಂಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಪುತ್ತೂರು ಎಸಿ ಗಡಿಪಾರು ಆದೇಶದಂತೆ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ ಸಿ.ಕೆ. ನೇತೃತ್ವದಲ್ಲಿ […]

ತಿಮರೋಡಿಗೆ ಮೂರನೇ ಬಾರಿ ಗಡಿಪಾರು ನೋಟಿಸ್‌ Read More »

ಮಂಗಳೂರು : ಜೈಲು ಅಧೀಕ್ಷಕರ ಮೇಲೆ ಕೈದಿಗಳಿಂದ ಹಲ್ಲೆ

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಜೈಲು ಅಧೀಕ್ಷಕರು ಮತ್ತು ಸಿಬ್ಬಂದಿ ಮೇಲೆಯೇ ಕೈದಿಗಳು ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ. ಮೂವರು ವಿಚಾರಣಾಧೀನ ಕೈದಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣಾಧೀನ ಕೈದಿಗಳಾದ ಇಕ್ಬಾಲ್, ಶೆಹರಾಜ್ ಯಾನೆ ಶಾರೂಕ್, ಅಫ್ರೀದ್ ಹಲ್ಲೆಗೆ ಯತ್ನಿಸಿದ ಆರೋಪಿಗಳಾಗಿದ್ದಾರೆ. ಮಾ.13ರಂದು ರಾತ್ರಿ ವಿಚಾರಣಾ ಕೈದಿ ಇಕ್ಬಾಲ್ ಎಂಬಾತ ಕಚೇರಿಗೆ ಬಂದು ಕಾರಾಗೃಹಕ್ಕೆ ಹೊಸದಾಗಿ ದಾಖಲಾಗುವ ಕೈದಿಗಳನ್ನು ತನ್ನ ಕೊಠಡಿಗೆ ಸೇರಿಸಬೇಕು ಎಂದು ಜೋರಾಗಿ ಕೂಗಾಡಿ ಅವಾಚ್ಯವಾಗಿ

ಮಂಗಳೂರು : ಜೈಲು ಅಧೀಕ್ಷಕರ ಮೇಲೆ ಕೈದಿಗಳಿಂದ ಹಲ್ಲೆ Read More »

ಮೂಡುಬಿದಿರೆ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಮಹಿಳೆ

ಗಂಡನನ್ನು ಅರೆಸ್ಟ್‌ ಮಾಡಿ ಬಿಡುಗಡೆ ಮಾಡಲು ಲೈಂಗಿಕ ಪೀಡನೆ ಎಂದು ಗಂಭೀರ ಆರೋಪ ಮಂಗಳೂರು: ಮೂಡುಬಿದಿರೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಗೃಹಿಣಿಯೊಬ್ಬರು ಮಾಡಿರುವ ಲೈಂಗಿಕ ಕಿರುಕುಳ ಆರೋಪ ಭಾರಿ ಸಂಚಲನವುಂಟು ಮಾಡಿದೆ. ಮಹಿಳೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪೊಲೀಸ್‌ ಅಧಿಕಾರಿಯ ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಸಂದರ್ಶನದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸಾಮಾಜಿಕ ಕಾರ್ಯಕರ್ತರಾಗಿದ್ದ ತನ್ನ ಗಂಡನನ್ನು ಅರೆಸ್ಟ್‌ ಮಾಡಿ ಬಿಡುಗಡೆ ಮಾಡಬೇಕಿದ್ದರೆ ನನ್ನ ಜೊತೆ ಸಹಕರಿಸು ಎಂದು ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ.

ಮೂಡುಬಿದಿರೆ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಮಹಿಳೆ Read More »

ಕಬ್ಬಿನ ತೋಟದಲ್ಲಿ ಮಹಿಳೆಯ ಹತ್ಯೆ: ಆರೋಪಿ ಪೊಲೀಸ್ ವಶಕ್ಕೆ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕಬ್ಬಿನ ತೋಟವೊಂದರಲ್ಲಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತರನ್ನು ‌ಸುಜಾತಾ ಪವಾರ(34) ಎಂದು ಗುರುತಿಸಲಾಗಿದೆ. ಸುಜಾತಾರನ್ನು ಮಾ. 5 ರಂದು ಅಥಣಿ ಪಟ್ಟಣದ ಪ್ರದೀಪ್ ಗುಂಡ ಎಂಬವರ ಕಬ್ಬಿನ ತೋಟದಲ್ಲಿ ಹತ್ಯೆ ಮಾಡಲಾಗಿದೆ. ಸುಜಾತಾ ತನ್ನ ಗಂಡನ ಜೊತೆಗೆ ಸಂಬಂಧ ಮುರಿದುಕೊಂಡು ‌ಅಥಣಿಯ ತನ್ನ ತವರಿನಲ್ಲಿ ಜೀವನ ನಡೆಸುತ್ತಿದ್ದರು. ಈ‌ ಸಂದರ್ಭದಲ್ಲಿ ಕುಮಾರ್ ಹವಾಲ್ದಾರ್ ಎಂಬಾತನ ಜೊತೆಗೆ ಆಕೆಗೆ ನಂಟು ಬೆಳೆದಿತ್ತು. ಮಹಿಳೆಯ ಆಸ್ತಿ ಕಬಳಿಸಿ ಕುಮಾರ್

ಕಬ್ಬಿನ ತೋಟದಲ್ಲಿ ಮಹಿಳೆಯ ಹತ್ಯೆ: ಆರೋಪಿ ಪೊಲೀಸ್ ವಶಕ್ಕೆ Read More »

ಐರ್ಲೆಂಡಿನಲ್ಲಿ ಕಡಬದ ಯುವಕನ ಸಾವು: ಸಮಗ್ರ ತನಿಖೆಗೆ ಆಗ್ರಹಿಸಿ ಹುಟ್ಟೂರಿನಲ್ಲಿ ಕ್ಯಾಂಡಲ್ ಹಿಡಿದು ಪ್ರತಿಭಟನೆ

ಕಡಬ: ತಾಲೂಕಿನ ಕುಟ್ರುಪ್ಪಾಡಿಯ ಯುವಕ ಸ್ಯಾಂಜೋ ಸುನಿಲ್ ಕೆಲ ದಿನಗಳ ಹಿಂದಷ್ಟೇ ಐರ್ಲೆಂಡಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಅವರ ಸಾವಿಗೆ ಸಂಬಂಧಿಸಿದ ಹಾಗೆ ಸಮಗ್ರ ರೀತಿಯಲ್ಲಿ ತನಿಖೆ ನಡೆಯಬೇಕು ಎಂದು ಕಡಬದಲ್ಲಿ ‌ನಿನ್ನೆ ನೂರಾರು ಮಂದಿ ಕ್ಯಾಂಡಲ್ ಹಿಡಿದು ಪ್ರತಿಭಟನೆ ನಡೆಸಿದರು. ಕಡಬದ ‌ಕ್ರಿಶ್ಚಿಯನ್ ಲೈಟ್ನಿಂಗ್ ಕ್ಲಬ್ ಮತ್ತು ಮಲಯಾಳಿ ಸಂಘಟನೆಗಳ ನೇತೃತ್ವದಲ್ಲಿ ಅನುಗ್ರಹ ಸಭಾಭವನದಿಂದ ‌ಸೈಂಟ್ ಜೋಕಿಮ್ಸ್ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾ ನಿರತರು, ಈ ಸಾವಿನ ಹಿಂದಿನ ಸತ್ಯಗಳು ಅನಾವರಣವಾಗಬೇಕು ಎಂದು ಆಗ್ರಹಿಸಿದರು. ಸಾಂಜೋ

ಐರ್ಲೆಂಡಿನಲ್ಲಿ ಕಡಬದ ಯುವಕನ ಸಾವು: ಸಮಗ್ರ ತನಿಖೆಗೆ ಆಗ್ರಹಿಸಿ ಹುಟ್ಟೂರಿನಲ್ಲಿ ಕ್ಯಾಂಡಲ್ ಹಿಡಿದು ಪ್ರತಿಭಟನೆ Read More »

ಮಗನ ಸಾವಿನ ನೋವಿನಲ್ಲಿ ‌ದಂಪತಿ ಆತ್ಮಹತ್ಯೆ

ಪೊಯಿನಾಚಿ: ಮಗನ ಸಾವಿನ ನೋವಿನಿಂದ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಮೇಲ್ಪರಂಬ ಠಾಣಾ ‌ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಪೊಯಿನಾಚಿ ಪರಂಬದ ‌ವೇಣುಗೋಪಾಲನ್(55) ಮತ್ತು ಅವರ ಹೆಂಡತಿ ಸ್ಮಿತಾ(45) ಎಂದು ಗುರುತಿಸಲಾಗಿದೆ. ದಂಪತಿಯ ಪುತ್ರ ಶಿವಾನಂದ್(19) ಎಂಬಾತ ಕಳೆದ ಡಿ. 29 ರಂದು ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದರು. ಆ ಬಳಿಕ ದಂಪತಿ ಖಿನ್ನತೆಗೊಳಗಾಗಿದ್ದರು ಎಂದು ತಿಳಿದು ಬಂದಿದೆ. ಶುಕ್ರವಾರ ಬೆಳಗ್ಗೆ ಎಷ್ಟೇ ಹೊತ್ತಾದರೂ ವೇಣುಗೋಪಾಲನ್ ಅವರ ಮನೆಯ ಬಾಗಿಲು ತೆರೆಯದೇ ಇದ್ದು, ಸಂದೇಹದಿಂದ ನೆರೆಹೊರೆಯವರು ಇಣುಕಿ ನೋಡಿದ್ದು,

ಮಗನ ಸಾವಿನ ನೋವಿನಲ್ಲಿ ‌ದಂಪತಿ ಆತ್ಮಹತ್ಯೆ Read More »

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬಂಟ್ವಾಳ ಪೊಲೀಸರು

ಬಂಟ್ವಾಳ: ವಂಚನೆ, ನಕಲಿ ದಾಖಲೆ ಸೃಷ್ಟಿ ಸೇರಿದಂತೆ ಇನ್ನೂ ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಕೇರಳದಲ್ಲಿ ವಶಕ್ಕೆ ಪಡೆದಿದ್ದಾರೆ. ಕೇರಳದ ಎರ್ನಾಕುಲಂ‌ನ ಕುಟ್ಟಿಂಚಾಲ್ ತರಂಪಳ್ಳಿ ನಿವಾಸಿ ಪ್ರಿನ್ಸ್ ಟಿ. ಜೆ. ಜೋಶ್ ಬಂಧಿತ ಆರೋಪಿ‌‌. ಈತನ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರ.90/2016ರಲ್ಲಿ ಐಪಿಸಿ ៩០ 465, 468, 471, 420, 379 8 3408 ದಾಖಲಾಗಿದ್ದು, ನಂತರ ನ್ಯಾಯಾಲಯದಲ್ಲಿ 2.2. ನಂ.1060/2019

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬಂಟ್ವಾಳ ಪೊಲೀಸರು Read More »

ರಿಕ್ಷಾದಲ್ಲಿ ಕುಳಿತು ಮಹಿಳೆ ಮೇಲೆ ಮೂತ್ರ ಮಾಡಿದ ಯುವಕ : ಥಳಿಸಿ ಕೊಂದ ಜನ

ಕುಡಿದ ಅಮಲಿನಲ್ಲಿ ಮಾಡಬಾರದ ಕೃತ್ಯ ಎಸಗಿದ ಯುವಕ ಚೆನ್ನೈ: ಕುಡಿದ ಮತ್ತಲ್ಲಿ ಆಟೋದಲ್ಲಿ ಕುಳಿತು ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಯುವಕನ್ನು ಜನರು ಥಳಿಸಿ ಕೊಂದ ಘಟನೆ ಘಟನೆ ಚೆನ್ನೈಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 30 ವರ್ಷದ ಕಲೈಸೆಲ್ವನ್ ಎಂದು ಗುರುತಿಸಲಾಗಿದ್ದು, ಸ್ನೇಹಿತನೊಂದಿಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಎಂದು ತಿಳಿದುಬಂದಿದೆ. ಬುಧವಾರ ಕಲೈಸೆಲ್ವನ್ ಕುಡಿದ ಮತ್ತಿನಲ್ಲಿ ಸ್ನೇಹಿತನೊಂದಿಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಆಟೋದಲ್ಲೇ ಕುಳಿತು ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದರಿಂದ ಕಲೈಸೆಲ್ವನ್ ಹಾಗೂ

ರಿಕ್ಷಾದಲ್ಲಿ ಕುಳಿತು ಮಹಿಳೆ ಮೇಲೆ ಮೂತ್ರ ಮಾಡಿದ ಯುವಕ : ಥಳಿಸಿ ಕೊಂದ ಜನ Read More »

ಕೆಲಸಕ್ಕೆಂದು ಮಹಿಳೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನ : ಆರೋಪಿ ಪಲಾಯನ

ಮಂಗಳೂರು: ಕೂಲಿ ಕೆಲಸಕ್ಕೆಂದು ಹೊರಜಿಲ್ಲೆಯ ಮಹಿಳೆಯನ್ನು ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಚಾರ ಮಾಡಲು ಯತ್ನಿಸಿದ ಘಟನೆ ಶುಕ್ರವಾರ ಮಂಗಳೂರಿನ ಲಾಲ್‌ಭಾಗ್‌ನಲ್ಲಿ ಸಂಭವಿಸಿದೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಪಲಾಯನ ಮಾಡಿದ್ದಾನೆ. ಉರ್ವಸ್ಟೋರ್‌ ಜಂಕ್ಷನ್‌ನಲ್ಲಿ ಎಂದಿನಂತೆ ಕೆಲಸ ಅರಸಿಕೊಂಡು ನಿಂತಿದ್ದ 35ರ ಹರೆಯದ ಮಹಿಳೆಯನ್ನು ಆರೋಪಿ ತನ್ನ ಮನೆಯಲ್ಲಿ ಕೆಲಸ ಇದೆ ಎಂದು ಹೇಳಿ ಲಾಲ್‌ಬಾಗ್‌ಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಲಾಲ್‌ಬಾಗ್‌ನ ಪಂಪ್‌ಹೌಸ್‌ನ ಜನವಸತಿಯಿಲ್ಲದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಮಹಿಳೆ ಬೊಬ್ಬೆ ಹಾಕಿದಾಗ ಜನ ಸೇರಿದ್ದು,

ಕೆಲಸಕ್ಕೆಂದು ಮಹಿಳೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನ : ಆರೋಪಿ ಪಲಾಯನ Read More »

ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆಗೆ ಶರಣು

ಶಿರ್ವ: ಡೆತ್ ನೋಟ್ ಬರೆದಿಟ್ಟು ಅಡುಗೆ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಂಕರಪುರದ ಸಾಲ್ಮರದ ಕ್ಯಾಟರಿಂಗ್ ಶೆಡ್ ಸಮೀಪ ನಡೆದಿದೆ. ಮೃತನನ್ನು ಗೌತಮ್ ಪೂಜಾರಿ ಎಂದು ಗುರುತಿಸಲಾಗಿದೆ. ಕ್ಯಾಟರಿಂಗ್ ಶೆಡ್ ಬಳಿಯ ರೂಮ್‌ನಲ್ಲಿ ಗೌತಮ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾದಿದೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಆದರೂ ಆತ್ಮಹತ್ಯೆಗೆ ನಿಖರ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಗೌತಮ್ ಬೈಂದೂರು ಮೂಲದವರಾಗಿದ್ದು, ಅವಿವಾಹಿತರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ. ವಿವಿಧ

ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆಗೆ ಶರಣು Read More »

error: Content is protected !!
Scroll to Top