ಸುದ್ದಿ

ಮುಡಾ ಹಗರಣ : ನಾಳೆ ಲೋಕಾಯುಕ್ತ ಪೊಲೀಸರಿಂದ ಸಿದ್ದರಾಮಯ್ಯ ವಿಚಾರಣೆ

40 ವರ್ಷದ ರಾಜಕಾರಣದಲ್ಲಿ ಮೊದಲ ಸಲ ಹಗರಣದ ಕೇಸಿನಲ್ಲಿ ವಿಚಾರಣೆ ಎದುರಿಸಲಿರುವ ಸಿದ್ದರಾಮಯ್ಯ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) 14 ಸೈಟ್‌ಗಳನ್ನು ಅಕ್ರಮವಾಗಿ ಪಡೆದುಕೊಂಡ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ನ.6ರಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.ಮುಡಾ ಹಗರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರನ್ನು ಲೋಕಾಯುಕ್ತ ಪೊಲೀಸರು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ಆಗಲೇ ಸಿದ್ದರಾಮಯ್ಯನವರು ಲೋಕಾಯುಕ್ತ ವಿಚಾರಣೆ ಎದುರಿಸಲಿರುವುದು ಖಾತ್ರಿಯಾಗಿತ್ತು.ಸಿದ್ದರಾಮಯ್ಯನವರ 40 […]

ಮುಡಾ ಹಗರಣ : ನಾಳೆ ಲೋಕಾಯುಕ್ತ ಪೊಲೀಸರಿಂದ ಸಿದ್ದರಾಮಯ್ಯ ವಿಚಾರಣೆ Read More »

ಈ ಸೀಸನ್‌ನಲ್ಲಿ ನಡೆಯಲಿವೆ 40 ಲಕ್ಷ ಮದುವೆಗಳು!

ಮದುವೆಯೊಂದರಿಂದಲೇ 6 ಲಕ್ಷ ಕೋಟಿ ರೂ. ವಹಿವಾಟು ಬೆಂಗಳೂರು : ಮಳೆಗಾಲ ಮುಗಿದದ್ದೇ ತಡ ಮದುವೆ ಸೀಸನ್‌ ಶುರುವಾಗಿದೆ. ಈಗ ಮದುವೆ ಕೂಡ ಪ್ರತಿಷ್ಠೆಯ ಸಂಕೇತವಾಗಿದೆ. ಎಷ್ಟು ದುಡ್ಡು ಇದ್ದರೂ ಮದುವೆ ಖರ್ಚಿಗೆ ಸಾಕಾಗುವುದಿಲ್ಲ ಎಂಬ ಪರಿಸ್ಥಿತಿಯಿದೆ. ಸಾಲಸೋಲ ಮಾಡಿಯಾದರೂ ಅದ್ದೂರಿಯಾಗಿ ಮದುವೆಯಾಗುವ ಶೋಕಿ ಎಲ್ಲೆಡೆ ಕಾಣಿಸುತ್ತದೆ. ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ನಡೆಯುತ್ತಿದ್ದ ಮದುವೆಗಳು ಈಗ ಈವೆಂಟ್‌ ಮ್ಯಾನೇಜ್‌ಮೆಂಟ್‌ ಬದಲಾಗಿವೆ. ಎಂಗೇಜ್‌ಮೆಂಟ್‌ನಿಂದ ಹಿಡಿದು ಮೊದಲ ರಾತ್ರಿಯ ತನಕದ ಮದುವೆಗೆ ಸಂಬಂಧಪಟ್ಟ ಎಲ್ಲ ವಿಚಾರಗಳನ್ನು ನಿರ್ವಹಿಸುವ ಈವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳು

ಈ ಸೀಸನ್‌ನಲ್ಲಿ ನಡೆಯಲಿವೆ 40 ಲಕ್ಷ ಮದುವೆಗಳು! Read More »

ಲಷ್ಕರ್‌ ಕಮಾಂಡರ್‌ ಹತ್ಯೆಗೆ ಯೋಧರು ಬಳಸಿದ್ದು ಬಿಸ್ಕಿಟ್‌!

ಹಲವು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದ ಉಗ್ರ ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಶ್ರೀನಗರದಲ್ಲಿ ಶನಿವಾರ ಪಾಕ್ ಮೂಲದ ಲಷ್ಕರ್ ಉಗ್ರ ಸಂಘಟನೆಯ ಕಮಾಂಡರ್ ಉಸ್ಮಾನ್ ಭಾಯಿಯನ್ನು ಸಾಯಿಸಲು ಯೋಧರು ಬಳಸಿದ್ದು ಬಿಸ್ಕಿಟ್‌ಗಳನ್ನು! ಇದು ಶ್ರೀನಗರದಲ್ಲಿ 2 ವರ್ಷದಲ್ಲಿ ನಡೆದ ಮೊದಲ ಉಗ್ರ ನಿಗ್ರಹ ಕಾರ್ಯಾಚರಣೆ ಆಗಿದೆ. ಉಸ್ಮಾನ್ ಹತ್ಯೆಯಲ್ಲಿ ‘ಬಿಸ್ಕೆಟ್’ ಮಹತ್ವದ ಪಾತ್ರ ವಹಿಸಿದೆ. ಆತ ವಾಸವಿದ್ದ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಬೀದಿ ನಾಯಿಗಳು ಇದ್ದು, ಅವುಗಳ ಬೊಗಳುವಿಕೆಯಿಂದ ಉಗ್ರ ಎಚ್ಚೆತ್ತುಕೊಂಡು ಪರಾರಿಯಾಗುವ ಸಾಧ್ಯತೆಯಿತ್ತು. ಹೀಗಾಗಿ ಯೋಧರು ಬಿಸ್ಕೆಟ್‌ ನೀಡಿ

ಲಷ್ಕರ್‌ ಕಮಾಂಡರ್‌ ಹತ್ಯೆಗೆ ಯೋಧರು ಬಳಸಿದ್ದು ಬಿಸ್ಕಿಟ್‌! Read More »

ವಕ್ಫ್‌ ನೋಟಿಸ್‌ ಭೀತಿ : ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ವಕ್ಫ್‌ ದಾಖಲೆ ತಿದ್ದುಪಡಿ ಕುರಿತು ಸಿಬಿಐ, ಇ.ಡಿ. ತನಿಖೆಗೆ ಒತ್ತಾಯ ಬೆಂಗಳೂರು: ರಾಜ್ಯದ ವಿವಿಧೆಡೆ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ನಮೂದಿಸಿ ನೋಟಿಸ್‌ ನೀಡಿರುವುದನ್ನು ಪ್ರತಿಭಟಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ವಕ್ಫ್ ಆಸ್ತಿ ಕುರಿತಾದ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆ ಕುರಿತು ಸಿಬಿಐ ತನಿಖೆ ನಡೆಸಬೇಕು ಮತ್ತು ವಿವಾದಕ್ಕೆ ಕಾರಣವಾದ ಸಚಿವ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಆಗ್ರಹಿಸಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಕಚೇರಿಗಳ ಎದುರು

ವಕ್ಫ್‌ ನೋಟಿಸ್‌ ಭೀತಿ : ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ Read More »

ಶಬರಿಮಲೆ ಯಾತ್ರಿಕರಿಗೆ 5 ಲ.ರೂ. ಉಚಿತ ವಿಮೆ

ಎರಡು ತಿಂಗಳ ಯಾತ್ರೆಗಾಗಿ ನಡೆದಿದೆ ಭರದ ಸಿದ್ಧತೆ ಶಬರಿಮಲೆ : ಶಬರಿಮಲೆ ಯಾತ್ರಿಕರಿಗೆ ಈ ವರ್ಷ ಕೇರಳ ಸರಕಾರ 5 ಲ.ರೂ. ಉಚಿತ ವಿಮೆಯ ಸೌಲಭ್ಯ ನೀಡಲಿದೆ. ಈ ತಿಂಗಳಾಂತ್ಯದಲ್ಲಿ ಮಂಡಲ ಮತ್ತು ಮಕರವಿಳಕ್ಕು ಯಾತ್ರಾ ಋತು ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಕೋಟಿಗಟ್ಟಲೆ ಭಕ್ತರು ಅಯ್ಯಪ್ಪ ಸನ್ನಿಧಾನಕ್ಕೆ ಆಗಮಿಸುತ್ತಾರೆ. ಇವರೆಲ್ಲ ಕೇರಳ ಸರಕಾರದ ವಿಮಾ ವ್ಯಾಪ್ತಿಯಲ್ಲಿರುತ್ತಾರೆ.ಶಬರಿಮಲೆ ದೇವಸ್ಥಾನದ ಆಡಳಿತ ನಿರ್ವಹಿಸುತ್ತಿರುವ ತಿರುವಾಂಕೂರು ದೇವಸ್ವಂ ಬೋರ್ಡ್‌ ಭಕ್ತರಿಗೆ ವಿಮಾ ಸೌಲಭ್ಯ ಒದಗಿಸಲಿದೆ. ಯಾತ್ರಿಕರು ದುರ್ಮರಣವನ್ನಪ್ಪಿದರೆ ಕುಟುಂಬಕ್ಕೆ 5 ಲ.ರೂ.

ಶಬರಿಮಲೆ ಯಾತ್ರಿಕರಿಗೆ 5 ಲ.ರೂ. ಉಚಿತ ವಿಮೆ Read More »

ಗ್ಯಾಸ್‌ ಸಿಲಿಂಡರ್‌ ಬೆಲೆ ಸದ್ದಿಲ್ಲದೆ 62 ರೂ. ಏರಿಕೆ

ಹೊಸದಿಲ್ಲಿ : ದೀಪಾವಳಿ ಹಬ್ಬದ ಸಂದರ್ಭದಲ್ಲೇ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು ಸದ್ದಿಲ್ಲದೆ ಏರಿಸಿವೆ. ನಿನ್ನೆ ವಾಣಿಜ್ಯ ಸಿಲಿಂಡರ್‌ ಬೆಲೆ 62 ರೂ. ಏರಿಕೆಯಾಗಿದೆ. ಇದರೊಂದಿಗೆ ಸತತ 3ನೇ ತಿಂಗಳು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾದಂತಾಗಿದೆ. ಆದರೆ 14 ಕೆಜಿಯ ಗೃಹ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 48 ರೂಪಾಯಿ ಏರಿಕೆಯಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 19

ಗ್ಯಾಸ್‌ ಸಿಲಿಂಡರ್‌ ಬೆಲೆ ಸದ್ದಿಲ್ಲದೆ 62 ರೂ. ಏರಿಕೆ Read More »

ಗೋಲ್‌ ಗುಂಬಜ್‌ ಸಹಿತ ಐತಿಹಾಸಿಕ ಸ್ಮಾರಕಗಳೂ ವಕ್ಫ್‌ ಆಸ್ತಿ!

53 ಐತಿಹಾಸಿಕ ಸ್ಥಳಗಳ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ಬೆಂಗಳೂರು : ರಾಜ್ಯದಲ್ಲಿರುವ ಹಲವು ಐತಿಹಾಸಿಕ ಸ್ಮಾರಕಗಳನ್ನೂ ವಕ್ಫ್‌ ಬೋರ್ಡ್‌ ತನ್ನದು ಎಂದು ಘೋಷಿಸಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ. ವಿಜಯಪುರದ ಪ್ರಸಿದ್ಧ ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಬಾರಾ ಕಮಾನ್, ಬೀದರ್ ಮತ್ತು ಕಲಬುರಗಿಯ ಕೋಟೆಗಳು ಸೇರಿದಂತೆ ಕರ್ನಾಟಕದಾದ್ಯಂತ ಕನಿಷ್ಠ 53 ಐತಿಹಾಸಿಕ ಸ್ಮಾರಕಗಳನ್ನು ವಕ್ಫ್ ಮಂಡಳಿ ತನ್ನದು ಎಂದು ಪ್ರತಿಪಾದಿಸುತ್ತಿದೆ. ಇವುಗಳಲ್ಲಿ ಆದಿಲ್ ಶಾಹಿಗಳ ಹಿಂದಿನ ರಾಜಧಾನಿ ವಿಜಯಪುರದಲ್ಲಿರುವ 43 ಆಸ್ತಿಗಳನ್ನು 2005ರಲ್ಲೇ ವಕ್ಫ್ ಬೋರ್ಡ್

ಗೋಲ್‌ ಗುಂಬಜ್‌ ಸಹಿತ ಐತಿಹಾಸಿಕ ಸ್ಮಾರಕಗಳೂ ವಕ್ಫ್‌ ಆಸ್ತಿ! Read More »

ಕಿರುಕುಳ ನೀಡುತ್ತಿದ್ದ ಚಿಕ್ಕಪ್ಪನ ಮಗನನ್ನು ಕೇಬಲ್‌ನಿಂದ ಕತ್ತು ಬಿಗಿದು ಕೊಂದ ಮಹಿಳೆ

ಕಟೀಲು : ಕಳೆದ ಭಾನುವಾರ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿ ಕಟೀಲು ಸಮೀಪದ ಗಿಡಿಗೆರೆ ನಿವಾಸಿ ತಾರನಾಥ ಮುಗೇರ ಎಂಬವರ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂಬುದು ಪತ್ತೆಯಾಗಿದೆ. ತಾರನಾಥ ಮುಗೇರ ಮೃತದೇಹ ಸಾರ್ವಜನಿಕ ಸ್ಥಳದಲ್ಲಿ ಕುತ್ತಿಗೆಗೆ ಕೇಬಲ್‌ನಿಂದ ಬಿಗಿದು ಮೃತಪಟ್ಟ ರೀತಿಯಲ್ಲಿ ಸಿಕ್ಕಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸುವ ವೇಳೆ ಸಂಶಯ ದೃಢಪಟ್ಟ ಹಿನ್ನೆಲೆಯಲ್ಲಿ ಗುರುವಾರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಮನೆಯಿಂದ ಸುಮಾರು 100 ಮೀ. ದೂರದಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಅಕ್ಟೋಬರ್‌ 27ರಂದು ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸುತ್ತ

ಕಿರುಕುಳ ನೀಡುತ್ತಿದ್ದ ಚಿಕ್ಕಪ್ಪನ ಮಗನನ್ನು ಕೇಬಲ್‌ನಿಂದ ಕತ್ತು ಬಿಗಿದು ಕೊಂದ ಮಹಿಳೆ Read More »

ಹತ್ತು ತಿಂಗಳಲ್ಲಿ 2,140 ಕೋ.ರೂ. ಸೈಬರ್‌ ಚೋರರ ಪಾಲು

ಡಿಜಿಟಲ್‌ ಅರೆಸ್ಟ್‌ ಮೂಲಕ ನಡೆಯುತ್ತಿದೆ ಆನ್‌ಲೈನ್‌ ದರೋಡೆ ಹೊಸದಿಲ್ಲಿ : ಸೈಬರ್‌ ಚೋರರು ಕಳೆದ ಹತ್ತು ತಿಂಗಳಲ್ಲಿ ದೋಚಿದ ಮೊತ್ತ ಬರೋಬ್ಬರಿ 2,140 ಕೋ. ರೂ. ಕೇಂದ್ರ ಗೃಹ ಸಚಿವಾಲಯದ ಸೈಬರ್‌ ವಿಭಾಗ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಆನ್‌ಲೈನ್‌ ವಂಚನೆ ಮತ್ತು ಸೈಬರ್‌ ಅರೆಸ್ಟ್‌ನಂತಹ ತಂತ್ರಗಳಿಂದ ಸೈಬರ್‌ ಚೋರರು ಈ ವರ್ಷದ ಹತ್ತು ತಿಂಗಳಲ್ಲೇ 2,140 ಕೋ. ರೂ. ಲಪಟಾಯಿಸಿದ್ದಾರೆ ಎಂದು ಸೈಬರ್‌ ವಿಭಾಗ ಮಾಹಿತಿ ನೀಡಿದೆ.ಪ್ರತಿ ತಿಂಗಳು ಸರಾಸರಿ 214 ಕೋ.ರೂ.ಯಂತೆ ದೇಶದ ಜನರು ಸೈಬರ್‌

ಹತ್ತು ತಿಂಗಳಲ್ಲಿ 2,140 ಕೋ.ರೂ. ಸೈಬರ್‌ ಚೋರರ ಪಾಲು Read More »

ಮಂಗಳೂರಿನ ಸಮಾಜ ಸೇವಕನನ್ನು ಬೆಂಗಳೂರು ತನಕ ಕರೆಸಿಕೊಂಡು ಪ್ರಶಸ್ತಿ ನೀಡದೆ ಅವಮಾನಿಸಿದ ಸರಕಾರ

ಕೊನೇ ಕ್ಷಣದಲ್ಲಿ ನೀವು ಅವರಲ್ಲ ಕ್ಷಮಿಸಿ ಎಂದು ಹೇಳಿ ವಾಪಸು ಕಳುಹಿಸಿದ ಅಧಿಕಾರಿಗಳು ಮಂಗಳೂರು: ಮಂಗಳೂರಿನ ಸಮಾಜ ಸೇವಕರೊಬ್ಬರನ್ನು ಪ್ರಶಸ್ತಿ ಕೊಡುತ್ತೇವೆ ಎಂದು ಬೆಂಗಳೂರಿಗೆ ಕರೆಸಿ ಕೊನೇ ಕ್ಷಣದಲ್ಲಿ ನಿಮಗೆ ಪ್ರಶಸ್ತಿ ಇಲ್ಲ ಎಂದು ಹೇಳಿ ಸರಕಾರ ಘೋರ ಅವಮಾನ ಮಾಡಿದೆ. ಕನ್ನಡ ಮತ್ತು ಸಂಸ್ಕತಿ ಇಲಾಖೆ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಎಂದು ಮಂಗಳೂರಿನ ಸಮಾಜ ಸೇವಕ ಸಮಾಜ ಸೇವಕ ಬಾಬು ಪಿಲಾರ್ ಎಂಬವರನ್ನು ಫೋನ್ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದೆ. ಇನ್ನೇನು ಪ್ರಶಸ್ತಿ ಸ್ವೀಕರಿಸಲು

ಮಂಗಳೂರಿನ ಸಮಾಜ ಸೇವಕನನ್ನು ಬೆಂಗಳೂರು ತನಕ ಕರೆಸಿಕೊಂಡು ಪ್ರಶಸ್ತಿ ನೀಡದೆ ಅವಮಾನಿಸಿದ ಸರಕಾರ Read More »

error: Content is protected !!
Scroll to Top