ಸುದ್ದಿ

ಹಿಂದು ಮುಖಂಡರ ಮನೆ ಮಧ್ಯರಾತ್ರಿ ತಪಾಸಣೆ : ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌

ಉಪ್ಪಿನಂಗಡಿಯ ಹಿರಿಯ ನಾಗರಿಕ ಯು.ಜಿ. ರಾಧಾ ಮನೆ ಶೋಧಿಸಿದ ಪ್ರಕರಣ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದ ದಿನಗಳಲ್ಲಿ ಮಧ್ಯರಾತ್ರಿ ಹಿಂದು ಮುಖಂಡರ ಮನೆಗಳಿಗೆ ಹೋಗಿ ತಪಾಸಣೆ ಮಾಡಿದ್ದ ಪೊಲೀಸರಿಗೆ ಹೈಕೋರ್ಟ್‌ ನೋಟಿಸ್‌ ನೀಡಿದೆ. ಯಾವುದೇ ಕಾರಣವಿಲ್ಲದೆ ಮಧ್ಯರಾತ್ರಿ ವೇಳೆ ಆರ್​ಎಸ್​​ಎಸ್ ನಾಯಕರೊಬ್ಬರ ಮನೆಗೆ ಪೊಲೀಸರು ಹೋಗಿ ಫೋಟೊ ತೆಗೆದು ಜಿಪಿಎಸ್ ಅಪ್‌ಲೋಡ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ಎಸ್​​ಪಿ ಅರುಣ್​ಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ನೀಡಿ ಸೂಕ್ತ ದಾಖಲೆ […]

ಹಿಂದು ಮುಖಂಡರ ಮನೆ ಮಧ್ಯರಾತ್ರಿ ತಪಾಸಣೆ : ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌ Read More »

ಅಹಮದಾಬಾದ್‌ ವಿಮಾನ ದುರಂತ : 215 ಮೃತದೇಹಗಳ ಗುರುತು ದೃಢ

ಡಿಎನ್‌ಎ ಪರೀಕ್ಷೆ ವರದಿ ಬಂದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಅಹಮದಾಬಾದ್‌: ಇಲ್ಲಿ ಕಳೆದ ಗುರುವಾರ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಪೈಕಿ ಈವರೆಗೆ 215 ಮಂದಿಯ ಗುರುತು ಪತ್ತೆಯಾಗಿದ್ದು, 198 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಹಮದಾಬಾದ್ ಸಿವಿಲ್ ಹಾಸ್ಪಿಟಲ್ ಅಧೀಕ್ಷಕ ರಾಕೇಶ್ ಜೋಶಿ ತಿಳಿಸಿದ್ದಾರೆ. ಒಟ್ಟು 215 ಡಿಎನ್‌ಎ ವರದಿಗಳು ಮ್ಯಾಚ್‌ ಆಗಿವೆ. 198 ಮೃತದೇಹಗಳನ್ನ ಹಸ್ತಾಂತರಿಸಲಾಗಿದೆ. ಈ ಪೈಕಿ 149 ಭಾರತೀಯರು, 7 ಪೋರ್ಚುಗೀಸ್‌, 32 ಬ್ರಿಟಿಷ್‌ ಮತ್ತು ಕೆನಡಿಯನ್‌ ಪ್ರಜೆಗಳ

ಅಹಮದಾಬಾದ್‌ ವಿಮಾನ ದುರಂತ : 215 ಮೃತದೇಹಗಳ ಗುರುತು ದೃಢ Read More »

ಮಂಗಳೂರು : ಶರಾಬಿನ ಮತ್ತಿನಲ್ಲಿ ಅತಿವೇಗದ ಚಾಲನೆಯಿಂದ ಭೀಕರ ಅಪಘಾತ

ಡ್ರಿಂಕ್​ & ಡ್ರೈವ್ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಗಳೂರು: ಮಂಗಳೂರು ಹೊರವಲಯದ ಜಪ್ಪಿನಮೊಗರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ನಸುಕಿನ ಹೊತ್ತು ಸಂಭವಿಸಿದ ಭೀಕರ ಅಪಘಾತಕ್ಕೆ ಶರಾಬಿನ ಮತ್ತಿನಲ್ಲಿ ಕಾರನ್ನು ವಿಪರೀತ ವೇಗದಲ್ಲಿ ಚಲಾಯಿಸಿದ್ದೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ಭೀಕರ ಅಪಘಾತದಲ್ಲಿ ಎನ್ಎಸ್​ಯುಐ ಜಿಲ್ಲಾ ಉಪಾಧ್ಯಕ್ಷ ಓಂಶ್ರೀ ಪೂಜಾರಿ ಹಾಗೂ ಅವರ ಸ್ನೇಹಿತ ಕದ್ರಿ‌ ನಿವಾಸಿ ಅಮನ್ ರಾವ್​ ಮೃತಪಟ್ಟಿದ್ದಾರೆ. ಕಾರಿನಲ್ಲಿ ಓರ್ವ ಇಟಲಿ ಪ್ರಜೆಯ ಸಹಿತ ಇತರ ಮೂವರಿದ್ದರು. ಇಬ್ಬರಿಗೆ ಗಾಯಗಳಾಗಿವೆ.

ಮಂಗಳೂರು : ಶರಾಬಿನ ಮತ್ತಿನಲ್ಲಿ ಅತಿವೇಗದ ಚಾಲನೆಯಿಂದ ಭೀಕರ ಅಪಘಾತ Read More »

ಭಾನುವಾರವೂ ನಡೆಯುವುದಿಲ್ಲ ಶುಭಾಂಶು ಶುಕ್ಲ ಗಗನ ಯಾತ್ರೆ

ಆ್ಯಕ್ಸಿಯಂ–4 ಮಿಷನ್‌ ಉಡಾವಣೆ ಮತ್ತೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಕಳುಹಿಸುವ ಮಹತ್ವಾಕಾಂಕ್ಷೆಯ ಆ್ಯಕ್ಸಿಯಂ–4 ಮಿಷನ್ ಮತ್ತೆ ಮುಂದೂಡಿಕೆಯಾಗಿದೆ. ಜೂನ್ 22ರಂದು ನಡೆಯಬೇಕಿದ್ದ ಉಡಾವಣೆಯನ್ನು ಮುಂದೂಡಲು ನಾಸಾ ನಿರ್ಧರಿಸಿದ್ದು, ಹೊಸ ಉಡಾವಣಾ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ನಾಸಾ ಮೂಲಗಳು ತಿಳಿಸವೆ. ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆಗಳನ್ನು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸಲು ಬಾಹ್ಯಾಕಾಶ ಸಂಸ್ಥೆಗೆ ಹೆಚ್ಚುವರಿ ಸಮಯ ಬೇಕಾಗುತ್ತದೆ. ಬಾಹ್ಯಾಕಾಶ ನಿಲ್ದಾಣದ ಪರಸ್ಪರ ಸಂಪರ್ಕಿತ ಮತ್ತು ಪರಸ್ಪರ

ಭಾನುವಾರವೂ ನಡೆಯುವುದಿಲ್ಲ ಶುಭಾಂಶು ಶುಕ್ಲ ಗಗನ ಯಾತ್ರೆ Read More »

ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಮೇಲೆ ಇರಾನ್‌ ಖಂಡಾಂತರ ಕ್ಷಿಪಣಿ ದಾಳಿ

ಆಸ್ಪತ್ರೆ ಬಹುತೇಕ ಧ್ವಂಸ; ಅಪಾರ ಸಾವು-ನೋವು ಶಂಕೆ ಟೆಲ್‌ ಅವಿವ್‌ : ಇರಾನ್‌ ಗುರುವಾರ ನಸುಕಿನ ಹೊತ್ತು ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಯೊಂದು ತೀವ್ರವಾಗಿ ಹಾನಿಗೊಂಡಿದೆ. 7ನೇ ದಿನವೂ ಉಭಯ ರಾಷ್ಟ್ರಗಳ ನಡುವಿನ ಪರಸ್ಪರ ಮಿಸೈಲ್‌ ದಾಳಿ ಮುಂದುವರಿದಿದೆ. ಇರಾನಿನ ಅಣ್ವಸ್ತ್ರ ಘಟಕ ಪ್ರದೇಶದಲ್ಲಿರುವ ನೀರಿನ ಸೌಲಭ್ಯಗಳನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ನಡೆಸಿದ್ದು, ಇರಾನ್‌ ಇದಕ್ಕೆ ಪ್ರತಿಯಾಗಿ ಇಸ್ರೇಲಿನ ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ಈ ನಡುವೆ ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗಿದ್ದು, ಸಾರ್ವಜನಿಕರನ್ನು

ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಮೇಲೆ ಇರಾನ್‌ ಖಂಡಾಂತರ ಕ್ಷಿಪಣಿ ದಾಳಿ Read More »

ಮಂಗಳೂರು : ಹೆಡ್‌ಕಾನ್‌ಸ್ಟೆಬಲ್‌ ರಶೀದ್‌ ಸೇರಿ 56 ಪೊಲೀಸ್‌ ಸಿಬ್ಬಂದಿಯ ವರ್ಗಾವಣೆ

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರಿಂದ ಆರೋಪಕ್ಕೊಳಗಾಗಿದ್ದ ಹೆಡ್‌ಕಾನ್‌ಸ್ಟೆಬಲ್‌ ರಶೀದ್‌ ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಬಜ್ಪೆ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ರಶೀದ್ ಸೇರಿ ಹಲವು ಪೊಲೀಸರನ್ನು ಮಂಗಳೂರು ಕಮಿಷನರೇಟ್‌ ವಲಯ ವರ್ಗಾಯಿಸಿದೆ. ಬಜ್ಪೆ ಠಾಣೆ ಹೆಡ್‌ಕಾನ್ಸ್‌ಟೇಬಲ್ ರಶೀದ್​ರನ್ನು ಮಂಗಳೂರು ಮಹಿಳಾ ಠಾಣೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಸುಹಾಸ್‌ ಶೆಟ್ಟಿ ಹತ್ಯೆಗೆ ರಶೀದ್‌ ಪರೋಕ್ಷವಾಗಿ ನೆರವು ನೀಡಿದ್ದಾರೆಂದು ಕೆಲವು ಹಿಂದು ಮುಖಂಡರು ಮತ್ತು ಬಿಜೆಪಿ ನಾಯಕರು ನೇರವಾಗಿ

ಮಂಗಳೂರು : ಹೆಡ್‌ಕಾನ್‌ಸ್ಟೆಬಲ್‌ ರಶೀದ್‌ ಸೇರಿ 56 ಪೊಲೀಸ್‌ ಸಿಬ್ಬಂದಿಯ ವರ್ಗಾವಣೆ Read More »

ಇರಾನ್‌ ಮೆಲೆ ದಾಳಿಗೆ ಅಮೆರಿಕ ಸಿದ್ಧತೆ : ಫೈಟರ್‌ ಜೆಟ್‌, ಸಮರ ನೌಕೆ ರವಾನೆ

90 ಮೀಟರ್‌ ಆಳದಲ್ಲಿದೆ ಯುರೇನಿಯಂ ಸಂಗ್ರಹ; ಇಸ್ರೇಲ್‌ನ ಶಸ್ತ್ರ ಭಂಡಾರ ಖಾಲಿ? ಟೆಲ್‌ ಅವೀವ್‌: ಇಸ್ರೇಲ್‌-ಇರಾನ್‌ ಸಮರ 7ನೇ ದಿನ ಪ್ರವೇಶಿಸುತ್ತಿದ್ದಂತೆಯೇ ಇರಾನ್‌ ಮೇಲೆ ದಾಳಿ ಮಾಡಲು ಅಮೆರಿಕ ಸಜ್ಜಾಗುತ್ತಿದೆ. ಅಮೆರಿಕದ ಫೈಟರ್‌ ಜೆಟ್‌ಗಳು, ಯುದ್ಧ ನೌಕೆಗಳು, ಇಂಧನ ಮರುಪೂರಣ ಟ್ಯಾಂಕ್‌ಗಳು ಈಗಾಗಲೇ ಮಧ್ಯಪೂರ್ವದತ್ತ ತೆರಳಿದ್ದು, ದೀರ್ಘಕಾಲದ ಯುದ್ಧಕ್ಕೆ ಅಮೆರಿಕ ಸಜ್ಜಾಗುತ್ತಿರುವುದರ ಮುನ್ಸೂಚನೆ ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ ಶರಣಾಗತಿ ಎಚ್ಚರಿಕೆಗೆ ಇರಾನ್‌ನ ಪರಮೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಡೋಂಟ್‌ಕೇರ್‌ ಎಂದಿದ್ದು, ಇಸ್ರೇಲ್‌

ಇರಾನ್‌ ಮೆಲೆ ದಾಳಿಗೆ ಅಮೆರಿಕ ಸಿದ್ಧತೆ : ಫೈಟರ್‌ ಜೆಟ್‌, ಸಮರ ನೌಕೆ ರವಾನೆ Read More »

ಇರಾನ್‌ನಿಂದ ಸುರಕ್ಷಿತವಾಗಿ ದಿಲ್ಲಿ ತಲುಪಿದ 110 ವಿದ್ಯಾರ್ಥಿಗಳು

ಭಾರತೀಯರನ್ನು ಕರೆತರಲು ಆಪರೇಷನ್‌ ಸಿಂಧು ಕಾರ್ಯಾಚರಣೆ ನವದೆಹಲಿ: ಯುದ್ಧಪೀಡಿತ ಇರಾನ್‌ನಲ್ಲಿ ಸಿಲುಕಿಕೊಂಡಿದ್ದ 110 ಭಾರತೀಯ ವಿದ್ಯಾರ್ಥಿಗಳನ್ನು ಇಂದು ಭಾರತಕ್ಕೆ ಕರೆತರಲಾಗಿದೆ. ಇರಾನ್‌ನಿಂದ ಸ್ಥಳಾಂತರಿಸಲಾದ ಮೊದಲ ಗುಂಪಿನ ವಿದ್ಯಾರ್ಥಿಗಳು ತಡರಾತ್ರಿ ದೆಹಲಿಗೆ ವಿಮಾನ ಹತ್ತಿದ್ದು, ಇಂದು ಮುಂಜಾನೆ ಬಂದಿಳಿದಿದ್ದಾರೆ. ವಿಮಾನ ಮೂರು ಗಂಟೆಗಳ ಕಾಲ ವಿಳಂಬವಾಗಿ ಹೊರಟಿತ್ತು. ಈ ವಿದ್ಯಾರ್ಥಿಗಳನ್ನು ಮೊದಲ ಹಂತದಲ್ಲಿ ಇರಾನ್‌ನಿಂದ ಅರ್ಮೇನಿಯಾ ಮತ್ತು ದೋಹಾಗೆ ಸ್ಥಳಾಂತರಿಸಲಾಗಿತ್ತು. ಇಂದು ಅವರ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅವರಲ್ಲಿ ಹೆಚ್ಚಿನವರು (90)

ಇರಾನ್‌ನಿಂದ ಸುರಕ್ಷಿತವಾಗಿ ದಿಲ್ಲಿ ತಲುಪಿದ 110 ವಿದ್ಯಾರ್ಥಿಗಳು Read More »

ಜಮೀನಿನ ನಕ್ಷೆ ಮಾಡಿಕೊಡಲು ಲಂಚ ಸ್ವೀಕರಿಸಿದ ಸರ್ವೆಯರ್‌, ದಲ್ಲಾಳಿ ಲೋಕಾಯುಕ್ತ ಬಲೆಗೆ

ಎರಡು ತುಂಡು ಜಮೀನುಗಳ ನಕ್ಷೆ, ಪ್ರಾಪರ್ಟಿ ಕಾರ್ಡ್‌ಗೆ 41,500 ರೂ.ಲಂಚ ಪಡೆದಿದ್ದ ಸರ್ವೆಯರ್‌ ಮಂಗಳೂರು: ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಕೊಡಲು ಲಂಚ ಸ್ವೀಕರಿಸಿದ ಭೂಮಾಪನ ಇಲಾಖೆಯ ಸರ್ವೆಯರ್‌ ಮತ್ತು ಈತನಿಗೆ ಸಹಕರಿಸಿದ ದಲ್ಲಾಳಿಯನ್ನು ಲೋಕಾಯುಕ್ತ ಪೊಲೀಸರು ಲಂಚದ ಹಣ ಪಡೆಯುತ್ತಿರುವಾಗಲೇ ಬಲೆಬೀಸಿ ಬಂಧಿಸಿದ್ದಾರೆ. ವ್ಯಕ್ತಿಯೊಬ್ಬರು ತನ್ನ ಹಾಗೂ ತನ್ನ ತಾಯಿಯ ಹೆಸರಿನಲ್ಲಿರುವ ಕಂಕನಾಡಿ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸಲು ಕಳೆದ ಫೆಬ್ರವರಿಯಲ್ಲಿ

ಜಮೀನಿನ ನಕ್ಷೆ ಮಾಡಿಕೊಡಲು ಲಂಚ ಸ್ವೀಕರಿಸಿದ ಸರ್ವೆಯರ್‌, ದಲ್ಲಾಳಿ ಲೋಕಾಯುಕ್ತ ಬಲೆಗೆ Read More »

ಉಪ್ಪಿನಂಗಡಿ : ಕುಮಾರಧಾರಾ ನದಿ ದಡದಲ್ಲಿ ಕಂಡುಬಂದ ಭಾರಿ ಗಾತ್ರದ ಮೊಸಳೆ

ಸ್ಥಳೀಯ ಜನರಲ್ಲಿ ಆತಂಕ ಉಪ್ಪಿನಂಗಡಿ: ನೆಕ್ಕಿಲಾಡಿ ಸಮೀಪ ಕುಮಾರಧಾರಾ ನದಿ ದಡದಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಕಂಡು ಬಂದು ಈ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ. ನಿನ್ನೆ ಸಂಜೆ ಮೊಸಳೆ ಕಾಣಿಸಿಕೊಂಡಿದ್ದು, ಇದನ್ನು ಸಮೀಪದಿಂದ ನೋಡಲು ಹೋದವರನ್ನು ಮೊಸಳೆ ಬಾಯಿ ಅಗಲಿಸಿ ಆಕ್ರಮಣಕಾರಿಯಾಗಿ ವರ್ತಿಸಿ ಹೆದರಿಸಿದೆ. ೩೪ ನೆಕ್ಕಿಲಾಡಿಯ ಶೇಖಬ್ಬ ಹಾಜಿ ಎಂಬವರ ಮನೆ ಬಳಿ ಕುಮಾರಧಾರ ನದಿಗಿಳಿಯುವ ದಾರಿಯಲ್ಲಿ ನದಿ ದಡದಲ್ಲಿ ಮೊಸಳೆ ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಕಂಡಿದ್ದರು. ನದಿ ದಡದಲ್ಲಿ ಏನೋ ಮಲಗಿದೆ ಎಂದು

ಉಪ್ಪಿನಂಗಡಿ : ಕುಮಾರಧಾರಾ ನದಿ ದಡದಲ್ಲಿ ಕಂಡುಬಂದ ಭಾರಿ ಗಾತ್ರದ ಮೊಸಳೆ Read More »

error: Content is protected !!
Scroll to Top