ಸುದ್ದಿ

ಅಶ್ಲೀಲವಾಗಿ ವರ್ತಿಸಿದ ಕಾಮುಕ ಬಶೀರ್ | ಆರೋಪಿ ಬಶೀರ್ ಅರೆಸ್ಟ್

ಪುತ್ತೂರು :  ಅಂಗನವಾಡಿಗೆ ಮಗುವನ್ನು ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಮಹಿಳೆಯೊಂದಿಗೆ ಕಾಮುಕ ವ್ಯಕ್ತಿಯೋರ್ವ ಆಶ್ಲೀಲವಾಗಿ ವರ್ತಿಸಿದ ಘಟನೆ ಪುತ್ತೂರಿನ ಕುಂಜುರುಪಂಜದಲ್ಲಿ ನಡೆದಿದೆ. ಅಸಭ್ಯ ವರ್ತನೆ ತೋರಿದ ವ್ಯಕ್ತಿ ಬಶೀರ್‍ ಎಂದು ಪತ್ತೆ ಹಚ್ಚಲಾಗಿದೆ. ಕಾಮುಕ ಬಶೀರ್  ಮಹಿಳೆಯನ್ನು ತಾಗಿಕೊಂಡು ಹೋಗಿದ್ದು, ನಂತರ ಆಕೆಯನ್ನು ಮನೆ ತನಕ ಹಿಂಬಾಲಿಸಿದ್ದಾನೆ. ಬಳಿಕ ಮನೆಯ ಎದುರು ಭಾಗದಲ್ಲೇ ಮರ್ಮಾಂಗವನ್ನು ತೋರಿಸಿ, ಆಶ್ಲೀಲವಾಗಿ ನಡೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ವೇಳೆ ಮಹಿಳೆಯು ಗಾಬರಿಗೊಂಡು ಜೋರಾಗಿ ಬೊಬ್ಬೆ ಹಾಕಿದ್ದಾಳೆ. ಕಿರುಚಿದ ಶಬ್ದಕ್ಕೆ […]

ಅಶ್ಲೀಲವಾಗಿ ವರ್ತಿಸಿದ ಕಾಮುಕ ಬಶೀರ್ | ಆರೋಪಿ ಬಶೀರ್ ಅರೆಸ್ಟ್ Read More »

ರಿವಾಲ್ವರ್ ಪರಿಶೀಲಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ತಗುಲಿದ ಗುಂಡು | ವ್ಯಕ್ತಿಯೋರ್ವರಿಗೆ ಗಾಯ

ಮಂಗಳೂರು : ವಾಮಂಜೂರಿನಲ್ಲಿ ವ್ಯಕ್ತಿಯೋರ್ವರಿಗೆ ಆಕಸ್ಮಿಕ ಗುಂಡು ತಗುಲಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಸಫ್ಘಾನ್ ಎಂಬುವರು ಗುಂಡು ತಗುಲಿ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾರೆ. ಸಫ್ಘಾನ್ ಎಂಬವರು ವಾಮಂಜೂರಿನ ಅಂಗಡಿಯೊಂದಕ್ಕೆ ಬಂದ ವೇಳೆ ಗ್ರಾಹಕರೊಬ್ಬರು ಇಟ್ಟಿದ್ದ ರಿವಾಲ್ವರ ನ್ನು ಪರಿಶೀಲಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದೆ. ಈ  ಪರಿಣಾಮ ಸಫ್ಘಾನ್ ಹೊಟ್ಟೆಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಇದನ್ನು ಆಕಸ್ಮಿಕ ಘಟನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.

ರಿವಾಲ್ವರ್ ಪರಿಶೀಲಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ತಗುಲಿದ ಗುಂಡು | ವ್ಯಕ್ತಿಯೋರ್ವರಿಗೆ ಗಾಯ Read More »

ಪುತ್ತೂರಿನ ಪ್ರತಿಷ್ಠಿತ ಭೂ ಅಭಿವೃದ್ಧಿ ಬ್ಯಾಂಕಿನ ಚುನಾವಣೆಗೆ ನಾಮಪತ್ರ ಸಲ್ಲಿಕೆ | ಸಹಕಾರ ಭಾರತೀಯ ಅಭ್ಯರ್ಥಿ  ಬಾಬು ಮುಗೇರ ಬಾವಿಕಟ್ಟೆ ನಾಮಪತ್ರ ಸಲ್ಲಿಕೆ

ಪುತ್ತೂರು : ಪುತ್ತೂರಿನ ಪ್ರತಿಷ್ಠಿತ ಭೂ ಅಭಿವೃದ್ಧಿ ಬ್ಯಾಂಕಿನ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲಾಯಿತು. ಪುತ್ತೂರಿನ ಪ್ರತಿಷ್ಠಿತ ಭೂ ಅಭಿವೃದ್ಧಿ ಬ್ಯಾಂಕಿಗೆ ನಡೆಯುವ ಚುನಾವಣೆಗೆ ನರಿಮೊಗರು ವಲಯದಿಂದ ಅನುಸೂಚಿತ ಜಾತಿಯ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಯಾಗಿ  ಬಾಬು ಮುಗೇರ ಬಾವಿಕಟ್ಟೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಎಸ್. ಟಿ ಮೋರ್ಚ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ನಗರ ಮಂಡಲ ಉಪಾಧ್ಯಕ್ಷ ಯುವರಾಜ್ ಪೆರಿಯತ್ತೋಡಿ, ಗ್ರಾಮಾಂತರ ಮಂಡಲ ಉಪಾಧ್ಯಕ್ಷರುಗಳಾದ ಹರಿಪ್ರಸಾದ್ ಯಾದವ್, ಯತೀಂದ್ರ ಕೊಚ್ಚಿ,

ಪುತ್ತೂರಿನ ಪ್ರತಿಷ್ಠಿತ ಭೂ ಅಭಿವೃದ್ಧಿ ಬ್ಯಾಂಕಿನ ಚುನಾವಣೆಗೆ ನಾಮಪತ್ರ ಸಲ್ಲಿಕೆ | ಸಹಕಾರ ಭಾರತೀಯ ಅಭ್ಯರ್ಥಿ  ಬಾಬು ಮುಗೇರ ಬಾವಿಕಟ್ಟೆ ನಾಮಪತ್ರ ಸಲ್ಲಿಕೆ Read More »

ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ಡಾಮರು ಕಾಮಗಾರಿ ಆರಂಭ | ನಾಳೆ ನಡೆಯಲಿದ್ದ ಪ್ರತಿಭಟನೆ ರದ್ದು

ಉಪ್ಪಿನಂಗಡಿ : 34 ನೆಕ್ಕಿಲಾಡಿಯ ಬಿಜೆಪಿ ಶಕ್ತಿ ಕೇಂದ್ರವು ಶೀಘ್ರ ಡಾಮರು ಕಾಮಗಾರಿಗೆ ಒತ್ತಾಯಿಸಿ ಜ.8ರಂದು ಹಮ್ಮಿಕೊಂಡಿದ್ದ ರಸ್ತೆ ತಡೆಯನ್ನು ರದ್ದುಗೊಳಿಸಲಾಗಿದೆ. 31ನೇ ನೆಕ್ಕಿಲಾಡಿ ಬೊಳುವಾರು ರಾಜ್ಯ ಹೆದ್ದಾರಿಯ 31 ನೆಕ್ಕಿಲಾಡಿಯಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣದ ಡಾಮರು ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ 34 ನೆಕ್ಕಿಲಾಡಿಯ ಬಿಜೆಪಿ ಶಕ್ತಿ ಕೇಂದ್ರವು ಶೀಘ್ರ ಡಾಮರು ಕಾಮಗಾರಿಗೆ ಒತ್ತಾಯಿಸಿದೆ ಇದರಿಂದ ಜ.8 ರಂದು ನಡೆಯಬೇಕಾದ ರಸ್ತೆ ತಡೆಯನ್ನು ರದ್ದುಗೊಳಿಸಲಾಗಿದೆ. ಕಳೆದ ಡಿ.2ರಂದು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಹೆದ್ದಾರಿ ಕಾಮಗಾರಿಯ ವಿಳಂಬವನ್ನು

ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ಡಾಮರು ಕಾಮಗಾರಿ ಆರಂಭ | ನಾಳೆ ನಡೆಯಲಿದ್ದ ಪ್ರತಿಭಟನೆ ರದ್ದು Read More »

 ಆರ್ಯಾಪು ಪ್ರೀಮಿಯರ್ ಲೀಗ್ 2025 ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು  : ಹೊಸ ಮನೆ ಕ್ರಿಕೆಟರ್ಸ್ (ರಿ)ಪುತ್ತೂರು ಪ್ರಸ್ತುತಪಡಿಸುವ ಅರ್ಯಾಪು ಪ್ರೀಮಿಯರ್ ಲೀಗ್ 2025 ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಎಪಿಎಲ್ ಪ್ಲೇಯರ್ ಆಕ್ಷನ್ 2025 ಜ. 5ರಂದು ಮಹಾವೀರ ಹೋಟೆಲ್ ಆ್ಯಂಡ್ ರೆಸಾರ್ಟ್ ಪುತ್ತೂರಿನಲ್ಲಿ ನಡೆಯಿತು. ಪುತ್ತೂರಿನ ವಾಣಿಜ್ಯೋದ್ಯಮಿ ಸಹಜ ರೈ ಬಳಜ್ಜ, ವಿಟಿವಿ ವಿಟ್ಲ ಆಡಳಿತ ನಿರ್ದೇಶಕರಾಗಿರುವ ರಾಮದಾಸ್ ಶೆಟ್ಟಿ ಹಾಗೂ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡಂಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು ಮತ್ತು ಆಮಂತ್ರಣ ಪತ್ರಿಕೆ ಯನ್ನು ಬಿಡುಗಡೆ

 ಆರ್ಯಾಪು ಪ್ರೀಮಿಯರ್ ಲೀಗ್ 2025 ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಬೀಡಿ ಉದ್ಯಮಿ ಮನೆಯಲ್ಲಿ ದರೋಡೆ : ವದಂತಿಗಳದ್ದೇ ಕಾರುಬಾರು

ಸುಳಿವಿಗಾಗಿ ತಡಕಾಡುತ್ತಿರುವ ಪೊಲೀಸರು ವಿಟ್ಲ: ಇಲ್ಲಿಗೆ ಸಮೀಪದ ಬೋಳಂತೂರು ನಾರ್ಶದ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಅವರ ಮನೆಯಿಂದ ಸಿನಿಮೀಯ ರೀತಿಯಲ್ಲಿ ನಡೆದ ದರೋಡೆ ಪ್ರಕರಣದ ಸುಳಿವಿಗಾಗಿ ಪೊಲೀಸರು ಇನ್ನೂ ತಡಕಾಡುತ್ತಿದ್ದಾರೆ. ಬಾಲಿವುಡ್‌ನ ಸ್ಪೆಷಲ್‌ 26 ಸಿನೆಮಾ ಮಾದರಿಯಲ್ಲಿ ಕಳೆದ ಶುಕ್ರವಾರ ರಾತ್ರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗು ಹಾಕಿಕೊಂಡು ಬಂದ ಆರು ಮಂದಿ ಚಾಲಾಕಿ ದರೋಡೆಕೋರರು ಸುಮಾರು ಎರಡೂವರೆ ತಾಸು ಇಡೀ ಮನೆಯನ್ನು ಜಾಲಾಡಿ ನಗದು ಹಣವನ್ನು ಮೂಟೆಕಟ್ಟಿ ಕಾರಿಗೆ ತುಂಬಿಸಿಕೊಂಡು ಹೋಗಿದ್ದಾರೆ. ಈ ದರೋಡೆ

ಬೀಡಿ ಉದ್ಯಮಿ ಮನೆಯಲ್ಲಿ ದರೋಡೆ : ವದಂತಿಗಳದ್ದೇ ಕಾರುಬಾರು Read More »

ಟ್ಯಾಕ್ಟರಿಗೆ ಡಿಕ್ಕಿ ಹೊಡೆದ ಬೈಕ್‍ | ಸ್ಥಳದಲ್ಲೇ ಮೂವರ ಮೃತ್ಯು

ತುಮಕೂರು : ಬೈಕೊಂದು ಮುಂದೆ ಸಾಗುತ್ತಿದ್ದ ಟ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಘಟನೆ ತುಮಕೂರು ತಾಲೂಕಿನ ಓಬಳಾಪುರ ಗೇಟ್ ಬಳಿ ನಡೆದಿದೆ. ಡಿಕ್ಕಿ ಹೊಡೆದ  ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಹಾಗೂ ಇಬ್ಬರು ಪುತ್ರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಮಧುಗಿರಿ ತಾಲೂಕಿನ ಪುರವರ ಹೋಬಳಿ ಗೊಂದಿಹಳ್ಳಿ ಗ್ರಾಮದ ನಿವಾಸಿ ಮುತ್ತಾಝ್ (38), ಅವರ ಪುತ್ರರಾದ ಮುಹಮ್ಮದ್ ಆಸಿಫ್(12) ಹಾಗೂ ಶಾಕಿರ್ ಹುಸೇನ್ (22) ಎಂದು ಗುರುತಿಸಲಾಗಿದೆ. ಈ ಮೂವರು ಇಂದು ಮುಂಜಾನೆ ಬೈಕ್‌ನಲ್ಲಿ ತುಮಕೂರಿನಿಂದ ತಮ್ಮ ಊರಿಗೆ ತೆರಳುತ್ತಿದ್ದು, ಮುಂಜಾನೆ

ಟ್ಯಾಕ್ಟರಿಗೆ ಡಿಕ್ಕಿ ಹೊಡೆದ ಬೈಕ್‍ | ಸ್ಥಳದಲ್ಲೇ ಮೂವರ ಮೃತ್ಯು Read More »

ದ್ವಿ ಚಕ್ರ ವಾಹನ – ರಿಕ್ಷಾ ಡಿಕ್ಕಿ

ವಿಟ್ಲ: ಸುಬ್ರಹ್ಮಣ್ಯ ಮಂಜೇಶ್ವರ ಹೆದ್ದಾರಿಯ ಪುಣಚದಲ್ಲಿ ರಿಕ್ಷಾವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂದಕಕ್ಕೆ ಬಿದ್ದ ಘಟನೆ ಸೋಮವಾರ ನಡೆದಿದೆ. ಪುಣಚ ಪೇಟೆಯಿಂದ ಗರಡಿ ಕಡೆಗೆ ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಬುಳೇರಿಕಟ್ಟೆ ಕಡೆಯಿಂದ ಬಂದ ರಿಕ್ಷಾ ಗುದ್ದಿದೆ. ಗುದ್ದಿದ ಪರಿಣಾಮ ರಿಕ್ಷಾ ಚಾಲಕ ನಿಯಂತ್ರಣ ಕಳೆದುಕೊಂಡು ಬಲ ಬದಿಗೆ ಹೋಗಿ ಚರಂಡಿಗೆ ಬಿದ್ದಿದೆ. ರಿಕ್ಷಾ ಹಾಗೂ ದ್ವಿಚಕ್ರವಾಹನ ಜಖಂಗೊಂಡಿದೆ. ಅಪಘಾತದ ತೀವ್ರತೆಗೆ ದ್ವಿಚಕ್ರವಾಹನದಿಂದ ಬಾಲಕ ರಸ್ತೆಗೆ ಎಸೆಯಲ್ಪಟ್ಟಿದ್ದು. ಕೆಲ ಕಾಲ ಆತಂಕ ಮೂಡಿಸಿತ್ತು. ರಿಕ್ಷಾ ಚಾಲಕ ಅತಿಯಾದ

ದ್ವಿ ಚಕ್ರ ವಾಹನ – ರಿಕ್ಷಾ ಡಿಕ್ಕಿ Read More »

ವಿಕ್ರಂ ಗೌಡ ಎನ್‌ಕೌಂಟರ್‌ನ ನ್ಯಾಯಾಂಗ ತನಿಖೆ, ಗೌರವಯುತವಾದ ಬದುಕಿಗೆ ವ್ಯವಸ್ಥೆ…

ಶರಣಾಗಲು ನಕ್ಸಲರು ಇಟ್ಟಿದ್ದಾರೆ ಬೇಡಿಕೆಗಳ ದೀರ್ಘ ಪಟ್ಟಿ ಬೆಂಗಳೂರು: ನಿರುದ್ಯೋಗಿಗಳಿಗೆ ಉದ್ಯೋಗ, ತಮ್ಮ ಮೇಲಿನ ಸುಳ್ಳು ಕೇಸ್​ಗಳನ್ನು ಖುಲಾಸೆಗೊಳಿಸುವುದು ಮತ್ತು ವಿಕ್ರಂ ಗೌಡ ಎನ್​​ಕೌಂಟರ್​​ ಪ್ರಕರಣವನ್ನು ನ್ಯಾಯಾಂಗ ತನಿಖೆ…ಹೀಗೆ ಶರಣಾಗಲು ಬಯಸಿರುವ ನಕ್ಸಲರು ಸರಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ಘನತೆಯಿಂದ ನಡೆಯಬೇಕು. ನಮ್ಮ ಆತ್ಮಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಆಗುವ ಯಾವುದೇ ರೀತಿಯ ಒತ್ತಡ ಹೇರಬಾರದು. ಕೇಸ್‌ಗಳ ನೆಪದಲ್ಲಿ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಸಬಾರದು, ಸಮಾಜದಲ್ಲಿ ಗೌರವಯುತವಾದ ಜೀವನ ನಡೆಸಲು ವ್ಯವಸ್ಥೆ ಕಲ್ಪಿಸಬೇಕೆಂಬ

ವಿಕ್ರಂ ಗೌಡ ಎನ್‌ಕೌಂಟರ್‌ನ ನ್ಯಾಯಾಂಗ ತನಿಖೆ, ಗೌರವಯುತವಾದ ಬದುಕಿಗೆ ವ್ಯವಸ್ಥೆ… Read More »

ಟಿಬೆಟ್‌ನಲ್ಲಿ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ : ಕನಿಷ್ಠ 36 ಮಂದಿ ಸಾವು

ಉತ್ತರ ಭಾರತ, ನೇಪಾಳ, ಚೀನದಲ್ಲೂ ಕಂಪನದ ಅನುಭವ ಹೊಸದಿಲ್ಲಿ : ಟಿಬೆಟ್‌ನಲ್ಲಿ ಇಂದು ಬೆಳಗ್ಗೆ ಒಂದು ತಾಸಿನೊಳಗೆ ಬೆನ್ನುಬಿನ್ನಿಗೆ 6 ಭೂಕಂಪಗಳು ಸಂಭವಿಸಿ ಅಪಾರ ಹಾನಿ ಉಂಟಾಗಿದೆ. ಈ ಪೈಕಿ ಮೊದಲ ಭೂಕಂಪ 7.1 ತೀವ್ರತೆ ಹೊಂದಿತ್ತು. ನಂತರ ಐದು ಪಶ್ಚಾತ್‌ ಕಂಪನಗಳು ಸಂಭವಿಸಿವೆ. ಭಾರತ, ನೇಪಾಳ, ಭೂತಾನ್‌ ಮತ್ತು ಚೀನದಲ್ಲೂ ಬೆಳಗ್ಗೆ ಕಂಪನದ ಅನುಭವ ಆಗಿದೆ. ಭೂಕಂಪದಿಂದಾಗಿ ಟಿಬೆಟ್‌ನಲ್ಲಿ ಅನೇಕ ಕಟ್ಟಡಗಳು ಉರುಳಿದ್ದು, ಕನಿಷ್ಠ 36 ಜನರು ಸಾವಿಗೀಡಾಗಿದ್ದಾರೆ. ಪರಿಹಾರ ಕಾರ್ಯಾಚರಣೆ ಶುರುವಾಗಿದ್ದು, ಅವಶೇಷಗಳನ್ನು ಎತ್ತಿದಾಗ

ಟಿಬೆಟ್‌ನಲ್ಲಿ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ : ಕನಿಷ್ಠ 36 ಮಂದಿ ಸಾವು Read More »

error: Content is protected !!
Scroll to Top