ಸುದ್ದಿ

ಆರನೇ ವಾರಕ್ಕೆ ಕಾಲಿಟ್ಟ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.1 ಮಂಗಳವಾರದಂದು ಸಂಜೆ 4:30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಆರನೇ ವಾರಕ್ಕೆ ಕಾಲಿಟ್ಟ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ Read More »

ನಿಯಂತ್ರಣ ತಪ್ಪಿ ಮಹಡಿಯ ಮೇಲೆ ಬಿದ್ದ ಕಾರು | ಕಾರು ಮತ್ತು ಮನೆ ಜಖಂ

ಸುಳ್ಯ: ನಿಯಂತ್ರಣ ತಪ್ಪಿ ಕಾರೊಂದು ಮನೆಯ ಮಹಡಿಯ ಮೇಲೆ ಬಿದ್ದಿರುವ ಘಟನೆ ನಡೆದಿದೆ. ಸಹಕಾರಿ ಧುರೀಣ ನಿತ್ಯಾನಂದ ಮುಂಡೋಡಿಯವರ ಸೊಸೆ, ಮಾವನ ಕಾರನ್ನು ಚಲಾಯಿಸಿಕೊಂಡು ಗುತ್ತಿಗಾರು ಕಡೆಗೆ ಹೊರಟಿದ್ದರು ಎನ್ನಲಾಗಿದೆ. ಚಿರೆಕಲ್ ನ ಮನೆಯಿಂದ ಮುಖ್ಯರಸ್ತೆಗೆ ಬಂದು ಸ್ವಲ್ಪ ಮುಂದಕ್ಕೆ ಹೋದಾಗ ಕಾರಿಗೆ ಬ್ರೇಕ್ ಹಾಕಿದಾಗ ಬ್ರೇಕ್ ನ ಅಡಿಗೆ ನೀರಿನ ಬಾಟಲ್ ಸಿಲುಕಿ ಬ್ರೇಕ್ ಸಿಗದ ಕಾರಣ ನಿಯಂತ್ರಣ ತಪ್ಪಿ ರಸ್ತೆಯ ಕೆಳಭಾಗದಲ್ಲಿದ್ದ ಸೀತಮ್ಮ ಚಿರೆಕಲ್ಲು ಎಂಬವರ ಮನೆಯ ಮಹಡಿಯ ಮೇಲೆ ಕಾರು ಬಿದ್ದಿದೆ ಎನ್ನಲಾಗಿದೆ.

ನಿಯಂತ್ರಣ ತಪ್ಪಿ ಮಹಡಿಯ ಮೇಲೆ ಬಿದ್ದ ಕಾರು | ಕಾರು ಮತ್ತು ಮನೆ ಜಖಂ Read More »

ವಕ್ಫ್‌ ಮಸೂದೆಗೆ ವಿರೋಧ : ಮುಸ್ಲಿಮರಿಂದ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ

ದೇಶಾದ್ಯಂತ ಮಸೀದಿಗಳಲ್ಲಿ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಈದ್‌ ನಮಾಜು ಮಾಡಿದ ಮುಸ್ಲಿಮರು ಬೆಂಗಳೂರು : ದೇಶಾದ್ಯಂತ ಮುಸ್ಲಿಮರು ಕೇಂದ್ರದ ವಕ್ಫ್‌ ತಿದ್ದುಪಡಿ ಮಸೂದೆ ವಿರೋಧಿಸಿ ಈದ್-ಉಲ್-ಫಿತ್ ವಿಶೇಷ ಪ್ರಾರ್ಥನೆ ಸಂದರ್ಭ ಕೈಗಳಿಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ಮಾಡಿದ್ದಾರೆ. ಕೈಗೆ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ ಮಾಡುವಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮನವಿ ಮಾಡಿತ್ತು. ಈ ಹಿನ್ನೆಲೆ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ವಕ್ಫ್‌ ತಿದ್ದುಪಡಿ ಮಸೂದೆ ವಿರೋಧಿಸಿ ಮುಸ್ಲಿಮರು ಪ್ರಾರ್ಥನೆ ವೇಳೆ ಕೈಗೆ

ವಕ್ಫ್‌ ಮಸೂದೆಗೆ ವಿರೋಧ : ಮುಸ್ಲಿಮರಿಂದ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ Read More »

ದುಗಲಡ್ಕ- ನೀರಬಿದಿರೆ ರಸ್ತೆಯ ಅಭಿವೃದ್ಧಿಗೆ ಗುದ್ದಲಿಪೂಜೆ

ಸುಳ್ಯ ನಗರ ಪಂಚಾಯ್ ವ್ಯಾಪ್ತಿಯ  ಬಹುಬೇಡಿಕೆಯ ರಸ್ತೆ  ಕೊಡಿಯಾಲಬೈಲು- ನೀರಬಿದಿರೆ- ದುಗಲಡ್ಕ- ರಸ್ತೆಯು  45ಲಕ್ಷದ  ವೆಚ್ಚದಲ್ಲಿ ಅಭಿವೃದ್ಧಿಯಾಗಲಿದ್ದು ಇದರ ಗುದ್ದಲಿಪೂಜೆ ನಡೆಯಿತು.  ದುಗಲಡ್ಕ- ನೀರಬಿದಿರೆ ರಸ್ತೆಯ ಅಭಿವೃದ್ಧಿಗೆ ಗುದ್ದಲಿಪೂಜೆಯನ್ನು ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯ ನೆರವೆರಿಸಿದರು. ಈ ಸಂದರ್ಭದಲ್ಲಿ ಸುಳ್ಯ ನಗರಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ದನಾಯ್ಕ, ಸದಸ್ಯರಾದ ಕಿಶೋರಿ ಶೇಟ್, ಬಾಲಕೃಷ್ಣ ರೈ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಭಾಜಪ ಮಂಡಲ ಅಧ್ಯಕ್ಷ  ವೆಂಕಟ ವಳಲಂಬೆ, ನಗರ ಮಹಾಶಕ್ತಿ ಕೇಂದ್ರ ಪ್ರಮುಖರಾದ A.T ಕುಸುಮಾಧರ

ದುಗಲಡ್ಕ- ನೀರಬಿದಿರೆ ರಸ್ತೆಯ ಅಭಿವೃದ್ಧಿಗೆ ಗುದ್ದಲಿಪೂಜೆ Read More »

ಮನೆಯ ಆವರಣದೊಳಗೆ ಲಕೋಟೆಯಲ್ಲಿತ್ತು ಮಾನವನ ಅಸ್ಥಿ

ಪೊಲೀಸರ ತನಿಖೆಯಿಂದ ಬಯಲಾಯಿತು ಅಸಲಿ ವಿಷಯ ಮಂಗಳೂರು: ಉಳ್ಳಾಲದ ಮನೆಯ ಆವರಣವೊಂದರಲ್ಲಿ ಲಕೋಟೆಯಲ್ಲಿ ರಕ್ಷಿಸಿಟ್ಟ ಮಾನವ ಅಸ್ಥಿಗಳು ಪತ್ತೆಯಾಗಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಪೊಲೀಸರ ತನಿಖೆ ಬಳಿಕ ಇದು ಯಾವುದೇ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಅಸ್ಥಿ ಅಲ್ಲ ಎಂದು ತಿಳಿದುಬಂದಿದೆ.ಕುಂಪಲದ ಚಿತ್ರಾಂಜಲಿ ನಗರದ ಮನೆಯೊಂದರ ಆವರಣದಲ್ಲಿ ಶನಿವಾರ ರಾತ್ರಿ ಸಂಸ್ಕರಿಸಿಟ್ಟ ಮಾನವ ಅಸ್ಥಿಗಳು ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಅಸ್ಥಿಗಳ ಹಿಂದಿನ ಅಸಲಿಯತ್ತನ್ನು ಪತ್ತೆ

ಮನೆಯ ಆವರಣದೊಳಗೆ ಲಕೋಟೆಯಲ್ಲಿತ್ತು ಮಾನವನ ಅಸ್ಥಿ Read More »

ಮಗಳ ಬರ್ತ್‌ಡೇ ದಿನವೇ ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಪ್ಲ್ಯಾನ್‌

ಆಡಿಯೊ ಕ್ಲಿಪ್ಪಿಂಗ್‌ನಿಂದ ಬಯಲಾಯಿತು ಸುಪಾರಿ ಹಿಂದಿನ ಮರ್ಮ ಬೆಂಗಳೂರು: ಸಚಿವ ಕೆ.ಎನ್‌ ರಾಜಣ್ಣ ಅವರ ಪುತ್ರ, ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಅವರ ಮಗಳ ಬರ್ತ್‌ಡೇ ದಿನವೇ ಯತ್ನಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ತನ್ನ ಹತ್ಯಾಯತ್ನದ ಬಗ್ಗೆ ರಾಜೇಂದ್ರ ಅವರೇ ದೂರಿನ ಜೊತೆಗೆ ನೀಡಿದ್ದ ಆಡಿಯೊ ಕ್ಲಿಪ್ಪಿಂಗ್‌ ಈಗ ಬಯಲಾಗಿದ್ದು, ಇದರಲ್ಲಿ ಪುಷ್ಪಾ ಎಂದು ಹೇಳಿಕೊಂಡಿರುವ ಮಹಿಳೆ ರಾಕಿ ಎಂಬಾತನಿಗೆ ರಾಜೇಂದ್ರ ಅವರ ಹತ್ಯೆಯ ಪ್ಲ್ಯಾನ್‌ ವಿವರಿಸಿದ ಸಂಭಾಷಣೆಯಿದೆ. ರಾಜೇಂದ್ರ ತುಮಕೂರು ಎಸ್ಪಿಗೆ ನೀಡಿದ ಆಡಿಯೋದಲ್ಲಿ ಸುಪಾರಿ

ಮಗಳ ಬರ್ತ್‌ಡೇ ದಿನವೇ ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಪ್ಲ್ಯಾನ್‌ Read More »

ಬಾರ್ಯ ದೇವಸ್ಥಾನದ ಆಡಳಿತ ಟ್ರಸ್ಟ್ ಸಭೆ

ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಟ್ರಸ್ಟ್ ಸಭೆಯ ಅಧ್ಯಕ್ಷರಾದ ಭಾಸ್ಕರ ಬಾರ್ಯ ನೇತ್ರತ್ವದಲ್ಲಿ ದೇವಳದ ಪ್ರಾಂಗಣದಲ್ಲಿ ನಡೆಯಿತು.  2025 ಫೆಬ್ರವರಿಯಲ್ಲಿ ಜರಗಿದ ಜಾತ್ರೆಯ ಆಯವ್ಯಯವನ್ನು  ಮಂಡಿಸಲಾಯಿತು. ಏಪ್ರಿಲ್ 13 ರಂದು ಲೋಕಕಲ್ಯಾಣಕ್ಕಾಗಿ  ದೇವಾಲಯದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಹೋಮ ಮತ್ತು ಧಾರ್ಮಿಕ ಸಭೆ ನಡೆಸುವುದೆಂದು ನಿರ್ಧರಿಸಲಾಯಿತು. ದೇವಳ ಆಡಳಿತ ಟ್ರಸ್ಟ್  ಕಾರ್ಯದರ್ಶಿ ಪ್ರಶಾಂತ್ ಪೈ , ಉಪಾಧ್ಯಕ್ಷ ನಾರಾಯಣ ಗೌಡ ಮೂರುಗೋಳಿ , ಕೋಶಾಧಿಕಾರಿ ಸೇಸಪ್ಪ ಸಾಲಿಯಾನ್ , ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ

ಬಾರ್ಯ ದೇವಸ್ಥಾನದ ಆಡಳಿತ ಟ್ರಸ್ಟ್ ಸಭೆ Read More »

ಬೈಕ್ ಅಪಘಾತ : ಭಾಗವತ ಸತೀಶ್ ಆಚಾರ್ಯ ಮೃತ್ಯು

ವೇಣೂರು : ಇಂದು ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಮಂಗಳಾದೇವಿ ಯಕ್ಷಗಾನ ಮೇಳದ ಭಾಗವತ ಸತೀಶ್ ಆಚಾರ್ಯ ಅಂಡಿಂಜೆ (40) ಮೃತಪಟ್ಟ ಘಟನೆ ಅಂಡಿಂಜೆಯ ಕಿಲಾರ ಮಾರಿಕಾಂಭ ದೇವಸ್ಥಾನದ ತಿರುವು ರಸ್ತೆಯಲ್ಲಿ ಸಂಭವಿಸಿದೆ. ಅಂಡಿಂಜೆ ಗ್ರಾಮದ ಪಿಯೂಲಿರು ಮನೆ ನಿವಾಸಿ ದಿ| ಅಣ್ಣಿ ಆಚಾರ್ಯ ಮತ್ತು ವಿನೋದ ಆಚಾರ್ಯ ದಂಪತಿ ಪುತ್ರ,ರಾಗಿರುವ ಸತೀಶ್ ಆಚಾರ್ಯ ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಮುಗಿಸಿ ಮುಂಜಾನೆ 4 ಗಂಟೆಗೆ ಸತೀಶ್ ಆಚಾರ್ಯ ಅವರು ತಮ್ಮ ಬೈಕ್‍ ನಲ್ಲಿ ನಾರಾವಿಯಿಂದ ಅಂಡಿಂಜೆಗೆ

ಬೈಕ್ ಅಪಘಾತ : ಭಾಗವತ ಸತೀಶ್ ಆಚಾರ್ಯ ಮೃತ್ಯು Read More »

ಜೋಕೆ…ಐಸ್‌ಕ್ರೀಂನಲ್ಲೂ ಇದೆ ರಾಸಾಯನಿಕ ಅಂಶ

ಅನಾರೋಗ್ಯಕರ ಪರಿಸರದಲ್ಲಿ ಐಸ್‌ಕ್ರೀಂ ತಯಾರಿ ಪತ್ತೆ ಬೆಂಗಳೂರು: ಬಿರುಬಿಸಿಲಿದೆ, ಸೆಖೆಯಾಗುತ್ತಿದೆ ಎಂದು ಐಸ್‌ಕ್ರೀಂ ತಿನ್ನಲು ಹೋದಿರಾ ಜೋಕೆ! ಐಸ್‌ಕ್ರೀಂನಲ್ಲೂ ಇದೆ ವಿಷಕಾರಿ ಅಂಶ. ಇದಕ್ಕೂ ಮಿಗಿಲಾಗಿ ಐಸ್‌ಕ್ರೀಂ ತಯಾರಿ ಮತ್ತು ಸಂಗ್ರಹ ಅನಾರೋಗ್ಯಕಾರಿ ಪರಿಸರದಲ್ಲಿ ನಡೆಯುತ್ತಿರುವುದನ್ನು ಆರೋಗ್ಯ ಇಲಾಖೆ ಪತ್ತೆಹಚ್ಚಿದೆ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಐಸ್‌ಕ್ರೀಂಗಳನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ರವಾನೆ ಮಾಡಿದ್ದಾರೆ. ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಆಹಾರ

ಜೋಕೆ…ಐಸ್‌ಕ್ರೀಂನಲ್ಲೂ ಇದೆ ರಾಸಾಯನಿಕ ಅಂಶ Read More »

ಎಟಿಎಂ ವಿದ್‌ಡ್ರಾ ಶುಲ್ಕ ಹೆಚ್ಚಳ, ಎಸ್‌ಬಿ ಖಾತೆಯಲ್ಲಿರುವ ಹಣದ ಬಡ್ಡಿದರ ಏರಿಕೆ

ಹೊಸ ಹಣಕಾಸು ವರ್ಷದಿಂದ ಬ್ಯಾಂಕಿಂಗ್‌ ನಿಯಮಗಳಲ್ಲಿ ಹಲವು ಬದಲಾವಣೆ ನವದೆಹಲಿ: ಏಪ್ರಿಲ್ 1ರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ತರ ಬದಲಾವಣೆ ತಂದಿದ್ದು, ಎಟಿಎಂ ಕ್ಯಾಷ್ ವಿತ್​ಡ್ರಾ ಶುಲ್ಕ ಹೆಚ್ಚಳ, ಎಸ್‌ಬಿ ಖಾತೆ ಹಣಕ್ಕೆ ಹೆಚ್ಚು ಬಡ್ಡಿ ಸೇರಿದಂತೆ ಹಲವು ನಿಯಮಗಳಲ್ಲಿ ಪರಿಷ್ಕರಣೆ ತಂದಿದೆ.ಏಪ್ರಿಲ್ 1ರಿಂದ ಹೊಸ ಬ್ಯಾಂಕಿಂಗ್ ನಿಯಮಗಳು ಜಾರಿಗೆ ಬರುತ್ತಿದ್ದು, ಎಟಿಎಂ ಹಣ ಹಿಂಪಡೆಯುವಿಕೆ, ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮಗಳಲ್ಲಿ ಆರ್‌ಬಿಐ ಸಾಕಷ್ಟು ಬದಲಾವಣೆ ಮಾಡಿದೆ. ಎಟಿಎಂ ಹಣ ವಿತ್‌ಡ್ರಾಗೆ ಸಂಬಂಧಿಸಿದಂತೆ ವಿಧಿಸುತ್ತಿದ್ದ

ಎಟಿಎಂ ವಿದ್‌ಡ್ರಾ ಶುಲ್ಕ ಹೆಚ್ಚಳ, ಎಸ್‌ಬಿ ಖಾತೆಯಲ್ಲಿರುವ ಹಣದ ಬಡ್ಡಿದರ ಏರಿಕೆ Read More »

error: Content is protected !!
Scroll to Top