ಸುದ್ದಿ

ರಾಷ್ಟ್ರಪತಿಗೆ ಅವಮಾನ : ಸೋನಿಯಾ ಗಾಂಧಿ ವಿರುದ್ಧ ದೂರು

ಹೊಸದಿಲ್ಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಡಪಾಯಿ ಮಹಿಳೆ ಎಂದು ಕರೆದು ಹೀಯಾಳಿಸಿರುವ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿದೆ. ಬಿಹಾರದ ಮುಜಾಫರ್‌ನಗರದ ವಕೀಲ ಸುಧೀರ್‌ ಓಜಾ ಎಂಬವರು ದೇಶದ ಪರಮೋಚ್ಛ ಸ್ಥಾನದಲ್ಲಿರುವ ವ್ಯಕ್ತಿಯ ಬಗ್ಗೆ ಕೀಳು ಪದಗಳಲ್ಲಿ ಟೀಕೆ ಮಾಡಿದ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಬೇಕೆಂದು ಆಗ್ರಹಿಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ […]

ರಾಷ್ಟ್ರಪತಿಗೆ ಅವಮಾನ : ಸೋನಿಯಾ ಗಾಂಧಿ ವಿರುದ್ಧ ದೂರು Read More »

ಪ್ರಾಣಿಬಲಿ ಪ್ರಕರಣಕ್ಕೆ ಟ್ವಿಸ್ಟ್‌ : ನನ್ನ ಮೇಲೇಯೇ ವಾಮಾಚಾರ ಎಂದು ಆರೋಪಿಸಿದ ಸ್ನೇಹಮಯಿ ಕೃಷ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಬಲಿಗರ ವಿರುದ್ಧ ದೂರು ಮಂಗಳೂರು: ರಾಮ ಸೇನೆಯ ಸ್ಥಾಪಕ ಪ್ರಸಾದ್‌ ಅತ್ತಾವರ ಮುಡಾ ಕೇಸಿನ ದೂರುದಾರ ಸ್ನೇಹಮಯಿ ಕೃಷ್ಣ ಅವರ ಹೋರಾಟಕ್ಕೆ ಬಲ ತುಂಬಲು ಪ್ರಾಣಿಬಲಿ ಕೊಟ್ಟು ರಕ್ತಾಭಿಷೇಕ ಮಾಡಿಸಿದ್ದಾರೆ ಎಂಬ ಆರೋಪಕ್ಕೆ ಈಗ ಹೊಸದೊಂದು ಟ್ವಿಸ್ಟ್‌ ಸಿಕ್ಕಿದೆ. ಈಗ ಸ್ವತಹ ಸ್ನೇಹಮಯಿ ಕೃಷ್ಣ ಅವರೇ ನನ್ನ ಮೇಲೆ ವಾಮಾಚಾರ ಹಾಗೂ ವಶೀಕರಣ ಪ್ರಯೋಗ ನಡೆಯುತ್ತಿದೆ ಎಂದು ಆರೋಪಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದಾರೆ. ಮಂಗಳೂರಿನಲ್ಲಿ ಇತ್ತೀಚೆಗೆ

ಪ್ರಾಣಿಬಲಿ ಪ್ರಕರಣಕ್ಕೆ ಟ್ವಿಸ್ಟ್‌ : ನನ್ನ ಮೇಲೇಯೇ ವಾಮಾಚಾರ ಎಂದು ಆರೋಪಿಸಿದ ಸ್ನೇಹಮಯಿ ಕೃಷ್ಣ Read More »

18 ಪಾಕ್‌ ಸೈನಿಕರನ್ನು ಸಾಯಿಸಿದ ಬಂಡುಕೋರರು

ಕಾರ್ಯಾಚರಣೆಯಲ್ಲಿ 23 ಬಂಡುಕೋರರ ಹತ್ಯೆ ಇಸ್ಲಾಮಾಬಾದ್‌: ಬಲೂಚಿಸ್ಥಾನದ ವಾಯುವ್ಯ ಭಾಗದಲ್ಲಿ ಪ್ರತ್ಯೇಕತಾವಾದಿ ದಂಗೆಕೋರರೊಂದಿಗಿನ ಘರ್ಷಣೆಯಲ್ಲಿ ಪಾಕಿಸ್ಥಾನದ 18 ಸೈನಿಕರು ಸಾವಿಗೀಡಾಗಿದ್ದಾರೆ. ಇದೇ ವೇಳೆ 23 ಬಂಡುಕೋರರನ್ನು ಸೈನಿಕರು ಕೊಂದಿದ್ದಾರೆ. ಅಫ್ಘಾನಿಸ್ಥಾನದ ಗಡಿಯಲ್ಲಿರುವ ಕಲಾತ್‌ನಲ್ಲಿ ಪ್ರಮುಖ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ ದಂಗೆಕೋರರ ವಿರುದ್ಧ ನಡೆಸಿದ ಗುಂಡಿನ ದಾಳಿಯಲ್ಲಿ ಸೈನಿಕರು ಪಾಕ್‌ ಸೈನಿಕರು ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ. ಶನಿವಾರ ಬೆಳಗ್ಗಿನಿಂದ ತೊಡಗಿ ರಾತ್ರಿಯಿಡೀ ಬಂಡುಕೋರರ ವಿರುದ್ಧ ನಡೆದ ಹೋರಾಟದ ನಂತರ ಭದ್ರತಾ ಪಡೆಗಳು ರಸ್ತೆ ತಡೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿವೆ.

18 ಪಾಕ್‌ ಸೈನಿಕರನ್ನು ಸಾಯಿಸಿದ ಬಂಡುಕೋರರು Read More »

ಮಹಾಕುಂಭಮೇಳದಲ್ಲಿ ಇಷ್ಟರ ತನಕ 30 ಕೋಟಿ ಜನರಿಂದ ಪುಣ್ಯಸ್ನಾನ

ಅಯೋಧ್ಯೆ, ಕಾಶಿಗೆ ಭೇಟಿ ನೀಡುವವರ ಸಂಖ್ಯೆ ಏರಿಕೆ ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಇಷ್ಟರತನಕ 30 ಕೋಟಿಗೂ ಅಧಿಕ ಮಂದಿ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರ ಮಾಹಿತಿ ನೀಡಿದೆ.ಜಗತ್ತಿನ ಎಲ್ಲೆಡೆಯಿಂದ ಜನರು ಕುಂಭಮೇಳ ನೋಡಲು ಮತ್ತು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಆಗಮಿಸುತ್ತಿದ್ದಾರೆ. ಶನಿವಾರ 77 ದೇಶಗಳ ರಾಜತಾಂತ್ರಿಕರು ಪುಣ್ಯಸ್ನಾನ ಮಾಡಿದ್ದಾರೆ ಎಂದು ತಿಳಿಸಿದೆ. ಕುಂಭಮೇಳದಲ್ಲಿ ಈವರೆಗೂ 30 ಕೋಟಿಗೂ ಅಧಿಕ ಭಕ್ತರು ಪವಿತ್ರಸ್ನಾನ ಮಾಡಿದ್ದಾರೆ. ಕಾಲ್ತುಳಿತ ಸಂಭವಿಸಿದ ಮೌನಿ ಅಮವಾಸ್ಯೆಯ ಒಂದೇ

ಮಹಾಕುಂಭಮೇಳದಲ್ಲಿ ಇಷ್ಟರ ತನಕ 30 ಕೋಟಿ ಜನರಿಂದ ಪುಣ್ಯಸ್ನಾನ Read More »

ಇಂದು ಉಡುಪಿಯಲ್ಲಿ ಮತ್ತೋರ್ವ ನಕ್ಸಲ್‌ ಶರಣಾಗತಿ ಪ್ರಕ್ರಿಯೆ

ಒಂದೂವರೆ ದಶಕದಿಂದ ಆಂಧ್ರದಲ್ಲಿರುವ ನಕ್ಸಲ್‌ ಮಹಿಳೆ ಲಕ್ಷ್ಮೀ ತೊಂಬಟ್ಟು ಶರಣಾಗತಿಗೆ ಸಿದ್ಧತೆ ಉಡುಪಿ : ಕಳೆದ ಸುಮಾರು ಎರಡು ದಶಕದಿಂದ ನಕ್ಸಲ್‌ ಚಟುವಟಿಕೆಯಿಂದ ದೂರವಾಗಿ ನಾಗರಿಕ ಜೀವನ ನಡೆಸುತ್ತಿದ್ದ ಲಕ್ಷ್ಮೀ ತೊಂಬಟ್ಟು ಇಂದು ಉಡುಪಿಯಲ್ಲಿ ಪೊಲೀಸರಿಗೆ ಶರಣಾಗಲಿದ್ದಾಳೆ. ಮೋಸ್ಟ್ ವಾಂಟೆಡ್ ಆರು ನಕ್ಸಲರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿದ್ದರು. ಇದೀಗ ಮತ್ತೋರ್ವ ನಕ್ಸಲ್ ಮಹಿಳೆ ಶರಣಾಗತಿಗೆ ಮುಂದಾಗಿದ್ದಾರೆ. ಇಂದು ಉಡುಪಿ ಎಸ್‌ಪಿ ಕಚೇರಿಯಲ್ಲಿ ಬೆಳಗ್ಗೆ 10.30ಕ್ಕೆ ನಕ್ಸಲ್​ ಮಹಿಳೆ ಲಕ್ಷ್ಮೀ ತೊಂಬಟ್ಟು ಶರಣಾಗುತ್ತಿದ್ದಾಳೆ ಎಂದು ಮೂಲಗಳು

ಇಂದು ಉಡುಪಿಯಲ್ಲಿ ಮತ್ತೋರ್ವ ನಕ್ಸಲ್‌ ಶರಣಾಗತಿ ಪ್ರಕ್ರಿಯೆ Read More »

ಮುಂಡೂರು  ಶಾಲಾ ರಸ್ತೆಗೆ ಹಾಕಿದ ಸ್ಪೀಡ್ ಬ್ರೇಕರ್ ವೈಟ್ ರೆಡಿಯಂ ಹಂಪ್ಸ್ 

ಪುತ್ತೂರು : ಮುಂಡೂರು  ಶಾಲಾ  ಬಳಿ ಅತೀ ಹೆಚ್ಚು ಅಪಘಾತ ವಾಗುತ್ತಿರುವುದರಿಂದ ಶಾಲಾ ಎಸ್  ಡಿ ಎಂ ಅಧ್ಯಕ್ಷ ರಮೇಶ್ ಪಜಿಮನ್ನು ಇವರು ಮುಂಡೂರು ಕಾಂಗ್ರೆಸ್ ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಇವರಿಗೆ ಸ್ಪೀಡ್ ಬ್ರೇಕರ್ ವೈಟ್ ರೆಡಿಯಂ ಹಂಪ್ಸ್  ಹಾಕಲು ಮನವಿಯನ್ನು ನೀಡಿದ್ದರು.  ಈ ಬಗ್ಗೆ ಪ್ರವೀಣ್ ಆಚಾರ್ಯ ನರಿಮೊಗರು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ರವರಿಗೆ ಮನವಿ ಮಾಡಲಾಯಿತು. ಶಾಸಕರ  ಸೂಚನೆಯಂತೆ  ವಾಹನ ಸವಾರರ  ಮತ್ತು ಶಾಲಾ ಮಕ್ಕಳ ಹಿತ ದೃಷ್ಟಿ

ಮುಂಡೂರು  ಶಾಲಾ ರಸ್ತೆಗೆ ಹಾಕಿದ ಸ್ಪೀಡ್ ಬ್ರೇಕರ್ ವೈಟ್ ರೆಡಿಯಂ ಹಂಪ್ಸ್  Read More »

ಭಾರತದ ಭವಿಷ್ಯವನ್ನು ಆಕರ್ಷಕಗೊಳಿಸುವ 2025ರ ಬಜೆಟ್ : ಕಿಶೋರ್ ಕುಮಾರ್  ಪುತ್ತೂರು

ಪುತ್ತೂರು : ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ದೃಢನಿಶ್ಚಯ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಭಾವಿ ಆರ್ಥಿಕ ನೀತಿಯ ಫಲವಾಗಿ, 2025ರ ಕೇಂದ್ರ ಬಜೆಟ್ ದೇಶದ ಪ್ರಗತಿಗೆ ಶಕ್ತಿಯುತ ಒತ್ತುವರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ  ಕಿಶೋರ್ ಕುಮಾರ್  ಪುತ್ತೂರು ತಿಳಿಸಿದರು. ಈ ಬಾರಿಯ ಜನಪರ ಬಜೆಟ್ ಮಧ್ಯಮವರ್ಗಕ್ಕೆ ದೊಡ್ಡ ಶ್ರಮಿಕ ಸಮ್ಮಾನ ನೀಡಿದ್ದು, ಆದಾಯ ತೆರಿಗೆ ಮನ್ನಾವನ್ನು ₹12 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಹಣಕಾಸು ಭದ್ರತೆಯನ್ನು ಒದಗಿಸಿದೆ. ರೈತರಿಗಾಗಿ

ಭಾರತದ ಭವಿಷ್ಯವನ್ನು ಆಕರ್ಷಕಗೊಳಿಸುವ 2025ರ ಬಜೆಟ್ : ಕಿಶೋರ್ ಕುಮಾರ್  ಪುತ್ತೂರು Read More »

ಬಾಲಕಿಗೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ | ಕಾಮುಕರಿಗೆ ದಂಡವಿಧಿಸಿ, 20ವರ್ಷ ಜೈಲು ಶಿಕ್ಷೆ

ಮಂಗಳೂರು : ಅಪ್ರಾಪ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಆರೋಪವು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಫೋಕೋ ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಲು ನ್ಯಾಯಲವು  ತೀರ್ಪು ನೀಡಿದ್ದಾರೆ. ಮಂಗಳೂರಿನ ಮೂಳೂರು ಗ್ರಾಮ ನಿವಾಸಿ ಮೊಹಮ್ಮದ್ ಶಾಕೀರ್ (26) ಕಾರ್ಕಳ ತಾಲೂಕಿನ ಕುಕ್ಕುಂದೂರಿನ ಅಬ್ದುಲ್ ಸಮದ್ (32) ಬಂಟ್ವಾಳ ತಾಲೂಕಿನ ಅಭಿಜಿತ್ (27) ಶಿಕ್ಷೆಗೆ ಗುರಿಯಾದ ಅಪರಾಧಿಗಳು ಎಂದು ತಿಳಿದು ಬಂದಿದೆ. ತೊಕ್ಕೊಟ್ಟು ಬಸ್ಸು ತಂಗುದಾಣದ

ಬಾಲಕಿಗೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ | ಕಾಮುಕರಿಗೆ ದಂಡವಿಧಿಸಿ, 20ವರ್ಷ ಜೈಲು ಶಿಕ್ಷೆ Read More »

ಬಂಟ್ವಾಳ : ತರಕಾರಿ ಅಂಗಡಿಯಲ್ಲಿ ನಗದು ಕಳವು

ಬಂಟ್ವಾಳ : ತರಕಾರಿ ಅಂಗಡಿಗೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆ ಮೆಲ್ಕಾರ್ ನಲ್ಲಿ ನಡೆದಿದೆ. ಮಹಮ್ಮದ್ ಶರೀಫ್ ಎಂಬವರ ಮಾಲಕತ್ವದ ಅಂಗಡಿಯಲ್ಲಿ ಚಂದ್ರಿಕಾ ತರಕಾರಿ ಅಂಗಡಿಯ ಬೀಗ ಮುರಿದು ಹಣಕ್ಕಾಗಿ ಜಾಲಾಡಿದ್ದಾರೆ. ಶರೀಫ್ ಅವರು ಸಾಮಾಜಿಕ ಸೇವಾಕರ್ತರಾಗಿದ್ದು ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ತನ್ನ ಅಂಗಡಿಯಲ್ಲಿ ಇಟ್ಟಿದ್ದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳರು ದೋಚಿದ್ದಾರೆ. ಕಾಣಿಕೆ ಡಬ್ಬಿಯಲ್ಲಿ ಅಂದಾಜು 5 ಸಾವಿರಕ್ಕಿಂತಲೂ ಅಧಿಕ ಮೊತ್ತದ ಹಣ ತುಂಬಿತ್ತು ಎನ್ನಲಾಗಿದೆ. ಕಳವು ಮಾಡುತ್ತಿರುವ  ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ತಿಳಿದು

ಬಂಟ್ವಾಳ : ತರಕಾರಿ ಅಂಗಡಿಯಲ್ಲಿ ನಗದು ಕಳವು Read More »

ಶಿವಲಿಂಗದ ಮೇಲೆ ಕಾಲಿಟ್ಟು ರೀಲ್ಸ್ ಮಾಡಿದ ಯುವಕ | ಯುವಕ ಅರೆಸ್ಟ್

ಮಧ್ಯಪ್ರದೇಶ :  ಯುವಕನೋರ್ವ ಶಿವಲಿಂಗದ ಮೇಲೆ ಕಾಲು ಇರಿಸಿ ರೀಲ್ಸ್ ಮಾಡಿದ ಘಟನೆ ಮಧ್ಯಪ್ರದೇಶದ ರತ್ತಂ ಜಿಲ್ಲೆಯಲ್ಲಿ ನಡೆದಿದೆ. ಶಿವಲಿಂಗದ ಮೇಲೆ ಕಾಲಿಟ್ಟು ರೀಲ್ಸ್ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದ  ವಿಡಿಯೋ ವೈರಲ್ ಆಗಿದೆ. ಈ ಕುರಿತಾಗಿ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಆತನನ್ನು ಬಂಧಿಸಿದ ನಂತರ ಜಿಲ್ಲಾ ಆಸ್ಪತ್ರೆಯಲ್ಲಿದ್ದ  ಜನರು ಆತನ ಮೇಲೆ ಮುಗಿಬಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಆತನನ್ನು ಕರೆದೊಯ್ಯುತ್ತಿದ್ದಾಗ ಕೋಪಗೊಂಡ ಜನರ ಗುಂಪು ಆತನ ಮೇಲೆ ದಾಳಿ ಮಾಡಿದ್ದಾರೆ.

ಶಿವಲಿಂಗದ ಮೇಲೆ ಕಾಲಿಟ್ಟು ರೀಲ್ಸ್ ಮಾಡಿದ ಯುವಕ | ಯುವಕ ಅರೆಸ್ಟ್ Read More »

error: Content is protected !!
Scroll to Top