ಸುದ್ದಿ

ಅಬ್ದುಲ್‌ ರಹಿಮಾನ್‌ ಕೊಲೆ ಆರೋಪಿಗಳ ವಿರುದ್ಧ ಕೋಕಾ ಅನ್ವಯ

ಸೆರೆಯಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ವಿರುದ್ಧ ಕೋಕಾ ಕೇಸ್‌ ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳತ್ತಮಜಲು ಎಂಬಲ್ಲಿ ಕಳೆದ ಮೇ 27ರಂದು ನಡೆದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ ತಡೆ ಕಾಯ್ದೆ (ಕೋಕಾ) ಅಡಿ ಕೇಸ್‌ ದಾಖಲಿಸಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಡಾ.ಅರುಣ್‌ ಕೆ. ತಿಳಿಸಿದ್ದಾರೆ. ದೀಪಕ್, ಚಿಂತನ್, ಪೃಥ್ವಿರಾಜ್ ಜೋಗಿ, ಸುಮಿತ್ ಬಿ.ಆಚಾರ್ಯ, ವಿ.ರವಿರಾಜ ಮೂಲ್ಯ, ಅಭಿನ್ ರೈ, ತೇಜಾಕ್ಷ, ರವಿಸಂಜಯ್ ಜಿ.ಎಸ್, ಶಿವಪ್ರಸಾದ್ ತುಂಬೆ, […]

ಅಬ್ದುಲ್‌ ರಹಿಮಾನ್‌ ಕೊಲೆ ಆರೋಪಿಗಳ ವಿರುದ್ಧ ಕೋಕಾ ಅನ್ವಯ Read More »

ಡಿಜಿಟಲ್‌ ಮೂಲಕ ಟೋಲ್‌ ಪಾವತಿಸಿದರೆ ಸಿಗಲಿದೆ ರಿಯಾಯಿತಿ

ನವಂಬರ್‌ 15ರಿಂದ ಹೊಸ ನಿಯಮ ಜಾರಿಗೆ ಮುಂದಾದ ಕೇಂದ್ರ ಸರ್ಕಾರ ನವದೆಹಲಿ: ರಸ್ತೆ ಟೋಲ್ ಪಾವತಿಗಳಿಗೆ ಸಂಬಂಧಿಸಿದಂತೆ ಡಿಜಿಟಲ್‌ ಪಾವತಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೊಂದು ಹೊಸ ನಿಯಮ ಪರಿಚಯಿಸಿದೆ. ಇದರಿಂದ ಫಾಸ್ಟ್‌ಟ್ಯಾಗ್‌ ಹೊಂದಿಲ್ಲದವರು ಯುಪಿಐ ಪಾವತಿ ಮೂಲಕವೂ ರಿಯಾಯಿತಿ ಗಳಿಸಬಹುದಾಗಿದೆ. ನವೆಂಬರ್‌ 15ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಫಾಸ್ಟ್‌ ಟ್ಯಾಗ್‌ ಇಲ್ಲದಿರುವ ವಾಹನಗಳು ನವೆಂಬರ್ 15ರಿಂದ ನಗದು ರೂಪದಲ್ಲಿ ಟೋಲ್ ಶುಲ್ಕ ಪಾವತಿಸಲು ಬಯಸಿದರೆ ಅವು ಎರಡು ಪಟ್ಟು ಹೆಚ್ಚು ಹಣ

ಡಿಜಿಟಲ್‌ ಮೂಲಕ ಟೋಲ್‌ ಪಾವತಿಸಿದರೆ ಸಿಗಲಿದೆ ರಿಯಾಯಿತಿ Read More »

ಮಹಿಳಾ ವಿಶ್ವಕಪ್‌ನಲ್ಲೂ ಪಾಕಿಸ್ತಾನ ಜೊತೆ ನೋ ಹ್ಯಾಂಡ್‌ ಶೇಕ್‌

ಇಂದಿನ ಮುಖಾಮುಖಿಯಲ್ಲಿ ಹ್ಯಾಂಡ್‌ಶೇಕ್‌ ಮಾಡದಂತೆ ಬಿಸಿಸಿಐ ಸೂಚನೆ ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳ ನಡುವಿನ ನೋ ಹ್ಯಾಂಡ್‌ಶೇಕ್‌ ನಿಲುವು ಪ್ರಸ್ತುತ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಕೂಟಕ್ಕೂ ಮುಂದುವರಿದಿದೆ. ಭಾರತದ ಮಹಿಳಾ ತಂಡ 2025ರ ವಿಶ್ವಕಪ್‌ನಲ್ಲಿ ಈಗಾಗಲೇ ಸೆಪ್ಟೆಂಬರ್ 30 ರಂದು ನಡೆದಿದ್ದ ಶ್ರೀಲಂಕಾ ವಿರುದ್ಧ ಗೆಲುವಿನ ಆರಂಭ ಪಡೆದಿದೆ. ಇಂದು ಪಾಕಿಸ್ತಾನದ ವಿರುದ್ಧ ಎರಡನೇ ಪಂದ್ಯವಾಡಲಿದೆ. ಈ ಪಂದ್ಯಕ್ಕೂ ಮುನ್ನ ಬಿಸಿಸಿಐ ಭಾರತೀಯ ಆಟಗಾರ್ತಿಯರು ಪಾಕಿಸ್ತಾನಿ ಆಟಗಾರ್ತಿಯರೊಂದಿಗೆ ಕೈಕುಲುಕದಂತೆ ಸ್ಪಷ್ಟ ಆದೇಶ ನೀಡಿದೆ.

ಮಹಿಳಾ ವಿಶ್ವಕಪ್‌ನಲ್ಲೂ ಪಾಕಿಸ್ತಾನ ಜೊತೆ ನೋ ಹ್ಯಾಂಡ್‌ ಶೇಕ್‌ Read More »

ರೋಟರಿ ಕ್ಲಬ್ ಪುತ್ತೂರು: ಗಾಂಧಿ ಜಯಂತಿ ಪ್ರಯುಕ್ತ ‘ಗಾಂಧಿ ಎದುರಿನ ಪ್ರಶ್ನೆಗಳು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ

ಪುತ್ತೂರು: ಗಾಂಧೀಜಿಯನ್ನು ವೈಚಾರಿಕವಾಗಿ ಕನೆಕ್ಟ್ ಮಾಡುವ ಕೆಲಸವಿನ್ನೂ ಮಾಡಿಲ್ಲ. ಗಾಂಧಿಯನ್ನು ನೋಡಬೇಕಾದದು ಒಬ್ಬ ರಾಜಕಾರಣಿಯಾಗಿಯಲ್ಲ, ತತ್ವವನ್ನೇ ತಂತ್ರವಾಗಿ ಸ್ವೀಕರಿಸಿದ ವ್ಯಕ್ತಿಯಾಗಿ ಎಂದು ಅರವಿಂದ ಚೊಕ್ಕಾಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಗಾಂಧೀಜಿ ಆರಂಭಿಸಿದ ಚರಕ ಚಳುವಳಿ, ಬ್ರಿಟಿಷರ ಆರ್ಥಿಕತೆಯನ್ನ ಬುಡ ಮೇಲು ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಗಾಂಧಿ ಕಲ್ಪಿಸಿಕೊಂಡ ಸ್ವಾತಂತ್ರ್ಯ ಇನ್ನೂ ಬಂದಿಲ್ಲ. ಗಾಂಧಿಯ ಅಹಿಂಸಾ ಚಳುವಳಿ ಆ ಕಾಲಕ್ಕೆ ಅಗತ್ಯವಿತ್ತು. ನಿಮ್ಮ ಹಿಂಸೆಗೆ ನನ್ನ ಅಹಿಂಸೆಯೇ ಉತ್ತರ ಎಂದು ಬ್ರಿಟಿಷರನ್ನು ದಿಟ್ಟವಾಗಿ ಎದುರಿಸಿದ ಗಾಂಧಿ, ಬ್ರಿಟಿಷರ ನಾಗರಿಕ ಪ್ರಜ್ಞೆಯನ್ನು

ರೋಟರಿ ಕ್ಲಬ್ ಪುತ್ತೂರು: ಗಾಂಧಿ ಜಯಂತಿ ಪ್ರಯುಕ್ತ ‘ಗಾಂಧಿ ಎದುರಿನ ಪ್ರಶ್ನೆಗಳು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ Read More »

ರೈತರ ಬಾಳಿಗೆ ಕಾಂಗ್ರೆಸ್ ಸರ್ಕಾರ ಬೆಂಕಿ ಹಚ್ಚುತ್ತಿದೆ: R. ಅಶೋಕ್ ಆಕ್ರೋಶ

ಬೆಂಗಳೂರು: ರೈತರಿಗೆ ಭೂಮಿ ತೋರಿಸುವ ಸರ್ಕಾರವಲ್ಲ ರಾಜ್ಯದ ಕಾಂಗ್ರೆಸ್ ಸರ್ಕಾರ ಬದಲಾಗಿ ಆಕಾಶ ತೋರಿಸುವ ಸರ್ಕಾರ. ರೈತರ ಬಾಳಿಗೆ ಬೆಂಕಿ ಇಡುವ ಸರ್ಕಾರ ಎಂದು ವಿರೋಧ ಪಕ್ಷ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ. ಭೀಮಾನದಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ರೈತರಿಗೆ ಕಾಂಗ್ರೆಸ್ ಸರ್ಕಾರ ಈ ವರೆಗೂ ಬೆಳೆಹಾನಿ ಪರಿಹಾರ ನೀಡಿಲ್ಲ.‌ ಕಾಂಗ್ರೆಸ್ ಸರ್ಕಾರ ತೆರೆದಂತಹ ಗಂಜಿ ಕೇಂದ್ರಗಳು ಮುಚ್ಚಿಕೊಂಡು ಹೋಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರಿಗೆ ಸರಿಯಾದ

ರೈತರ ಬಾಳಿಗೆ ಕಾಂಗ್ರೆಸ್ ಸರ್ಕಾರ ಬೆಂಕಿ ಹಚ್ಚುತ್ತಿದೆ: R. ಅಶೋಕ್ ಆಕ್ರೋಶ Read More »

ಕಾಂಗ್ರೆಸ್, RJD ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ಬಿಹಾರದಲ್ಲಿ ಶಿಕ್ಷಣ ಪದ್ಧತಿ ವಿನಾಶಕಾರಿಯಾಗಲು ಕಾಂಗ್ರೆಸ್ ಮತ್ತು RJD ಪಕ್ಷಗಳೇ ಕಾರಣ. ಇದರಿಂದಾಗಿಯೇ ಇಲ್ಲಿನ ಜನತೆ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮತ್ತು RJD ಆಡಳಿತದಲ್ಲಿ ಬಿಹಾರದಲ್ಲಿ ಶಾಲೆಗಳನ್ನು ತೆರೆಯಲಾಗಿಲ್ಲ. ಜೊತೆಗೆ ಯಾವುದೇ ನೇಮಕಾತಿ ಪ್ರಕ್ರಿಯೆಗಳು ನಡೆದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡೂವರೆ ದಶಕಗಳ ಹಿಂದೆ ಬಿಹಾರದಲ್ಲಿ ಶಿಕ್ಷಣದ ಗುಣಮಟ್ಟ ಹೇಗಿತ್ತು ಎನ್ನುವುದರ ಅರಿವು ಈ ಪೀಳಿಗೆಗೆ ಇಲ್ಲದೇ ಇರಬಹುದು. ನೇಮಕಾತಿಗಳು ನಡೆಯುತ್ತಿರಲಿಲ್ಲ.

ಕಾಂಗ್ರೆಸ್, RJD ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ Read More »

ಪಿಒಕೆಯ ಪ್ರಕ್ಷುಬ್ಧ ಸ್ಥಿತಿಗೆ ಪಾಕಿಸ್ತಾನವೇ ಕಾರಣ: ಭಾರತ ಆಕ್ರೋಶ

ನವದೆಹಲಿ: ಪಾಕಿಸ್ತಾನದ ದಶಕಗಳ ಶೋಷಣೆ, ದಬ್ಬಾಳಿಕೆಯ ಅನಿವಾರ್ಯ ಪರಿಣಾಮವೇ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಯಾಗಿದೆ. ಪಿಒಕೆ ಎಂದಿಗೂ ಭಾರತದ ಅವಿಭಾಜ್ಯ ಅಂಗವೇ ಆಗಿರುತ್ತದೆ ಎಂದು ಭಾರತ ತಿಳಿಸಿದೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಪಿಒಕೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಇದಕ್ಕೆ ಕಾರಣ ಪಾಕಿಸ್ತಾನ. ಪಿಒಕೆಯಲ್ಲಿ ನಡೆದ ಹಲವು ಪ್ರತಿಭಟನೆಗಳ ವರದಿಯನ್ನು ನೋಡಿದ್ದೇವೆ. ಪಾಕಿಸ್ತಾನ ಅಲ್ಲಿನ ಅಮಾಯಕ ನಾಗರಿಕರ ಮೇಲೆ ನಡೆಸಿದ ದೌರ್ಜನ್ಯವನ್ನು ಗಮನಿಸಿದ್ದೇವೆ. ಇವೆಲ್ಲದರ ಹೊಣೆಯನ್ನು ಪಾಕಿಸ್ತಾನ

ಪಿಒಕೆಯ ಪ್ರಕ್ಷುಬ್ಧ ಸ್ಥಿತಿಗೆ ಪಾಕಿಸ್ತಾನವೇ ಕಾರಣ: ಭಾರತ ಆಕ್ರೋಶ Read More »

ಶ್ಯಾಮ್‌ಜಿ ‌ಕೃಷ್ಣ ವರ್ಮಾ ಜನ್ಮದಿನ: ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ

ನವದೆಹಲಿ: ಭಾರತದ ಕ್ರಾಂತಿಕಾರಿ, ವಕೀಲ ಮತ್ತು ಪತ್ರಕರ್ತ ಶ್ಯಾಮ್‌ಜಿ ಕೃಷ್ಣ ವರ್ಮಾ ಅವರ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತಾಂಬೆಯ ಶ್ರದ್ಧಾವಂತ ಪುತ್ರ ಶ್ಯಾಮ್ಜಿ ಕೃಷ್ಣ ವರ್ಮಾ ಅವರ ಜನ್ಮ ದಿನದಂದು ದೇಶದ ಎಲ್ಲಾ ಜನರ ಪರವಾಗಿ ಗೌರವಯುತ ನಮನಗಳು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಅವರ ಸೇವೆ, ಸಮರ್ಪಣೆ, ಧೈರ್ಯವನ್ನು ಸದಾ ಭಕ್ತಿಯಿಂದ ಸ್ಮರಣೆ ಮಾಡಲಾಗುತ್ತದೆ. ಅಭಿವೃದ್ಧಿ ಹೊಂದಿದ ಭಾರತ

ಶ್ಯಾಮ್‌ಜಿ ‌ಕೃಷ್ಣ ವರ್ಮಾ ಜನ್ಮದಿನ: ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ Read More »

ಉಡುಪಿ ಘನತ್ಯಾಜ್ಯ ಘಟಕದಲ್ಲಿ ಭಾರಿ ಬೆಂಕಿ ಅವಘಡ

ಉಡುಪಿ : ಉಡುಪಿ ನಗರಸಭೆಗೆ ಸಂಬಂಧಿಸಿದ ಅಲೆವೂರು ಗ್ರಾಪಂ ವ್ಯಾಪ್ತಿಯ ಕರ್ವಾಲುವಿನಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೆಂಕಿ ಭಾರಿ ಅನಾಹುತ ಸಂಭವಿಸಿದ್ದು, ಕೋಟ್ಯಂತರ ರೂ. ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ಶನಿವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಘಟಕವನ್ನು ಆವರಿಸಿತು. ಇದರಿಂದ ಕಟ್ಟಡ, ಶೆಡ್‌ನಲ್ಲಿರುವ ಹಲವು ಯಂತ್ರೋಪಕಣಗಳು, ತ್ಯಾಜ್ಯಗಳು ಸಂಪೂರ್ಣವಾಗಿ ಸುಟ್ಟು ಹೋಗಿರುವುದಾಗಿ ತಿಳಿದುಬಂದಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ

ಉಡುಪಿ ಘನತ್ಯಾಜ್ಯ ಘಟಕದಲ್ಲಿ ಭಾರಿ ಬೆಂಕಿ ಅವಘಡ Read More »

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್‌ ನೀಡದಂತೆ ಕೇಂದ್ರ ಸೂಚನೆ

ಕಫ್‌ ಸಿರಪ್‌ ಸೇವಿಸಿ 13 ಮಕ್ಕಳು ಸಾವಿಗೀಡಾದ ಬಳಿಕ ಆತಂಕ ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿದ 12 ಮಕ್ಕಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಸಂಭವಿಸಿದ ಬಳಿಕ ಕಫ್‌ ಸಿರಫ್‌ ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್‌ ನೀಡದಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ. ಮಧ್ಯಪ್ರದೇಶದ ಛಿಂದ್‌ವಾರಾ ಜಿಲ್ಲೆಯಲ್ಲಿ 9 ಮಕ್ಕಳು ಮತ್ತು ರಾಜಸ್ಥಾನದ ಭರತ್ ಹಾಗೂ ಸಿಕರ್‌ನಲ್ಲಿ 3 ಮಕ್ಕಳು ಸೇರಿ ಒಟ್ಟು 12 ಕಂದಮ್ಮಗಳು

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್‌ ನೀಡದಂತೆ ಕೇಂದ್ರ ಸೂಚನೆ Read More »

error: Content is protected !!
Scroll to Top