ನಿಧನ

ಎಂ‌ಬಿ‌ಎ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ನಗರದ ಹೊರವಲಯದ ಹೆಸರುಘಟ್ಟ ರಸ್ತೆಯ ಶಾಂತಿನಗರ ಎಂಬಲ್ಲಿ ಎಂಬಿಎ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತನನ್ನು ಕೇರಳ ಮೂಲಕ ಜಗನ್ ಮೋಹನ್(25) ಎಂದು ಗುರುತಿಸಲಾಗಿದೆ. ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಜಗನ್ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಡೆತ್‌ನೋಟ್‌ನಲ್ಲಿ ವಿಡಿಯೋ ಕಾಲ್ ಮೂಲಕ ಟಾರ್ಚರ್ ನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದು, ಮೂರು ನಂಬರ್‌ಗಳನ್ನು ‌ಸಹ ಬರೆದಿಟ್ಟಿದ್ದಾನೆ. ಫೇಕ್ ‌ವಿಡಿಯೋ‌ ಕಾಲ್‌ನಲ್ಲಿ ಹಣ ಕಳಕೊಂಡಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ದೊರೆತಿದೆ. 25 ಸಾವಿರ ರೂ. […]

ಎಂ‌ಬಿ‌ಎ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು Read More »

ಕೇಂದ್ರದ ಮಾಜಿ ಸಚಿವ, ಸ್ಪೀಕರ್‌ ಶಿವರಾಜ್‌ ಪಾಟೀಲ್‌ ನಿಧನ

ಗೃಹ ಸಚಿವ, ರಕ್ಷಣಾ ಸಚಿವ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಪಾಟೀಲ್‌ ಮುಂಬಯಿ: ಕೇಂಧ್ರದ ಮಾಜಿ ಕೇಂದ್ರ ಗೃಹ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ನಿಧನರಾದರು. ಅವರಿಗೆ 91 ವರ್ಷವಾಗಿತ್ತು. ವಯೋಸಹಜ ಕಾಯಿಲೆಗಳಿಂದ ಉಂಟಾದ ದೀರ್ಘಕಾಲದ ಅನಾರೋಗ್ಯದಿಂದಾಗಿ ಪಾಟೀಲ್ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಸೇರಿ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶಿವರಾಜ್ ಪಾಟೀಲ್ 1980, 1984, 1989, 1991,

ಕೇಂದ್ರದ ಮಾಜಿ ಸಚಿವ, ಸ್ಪೀಕರ್‌ ಶಿವರಾಜ್‌ ಪಾಟೀಲ್‌ ನಿಧನ Read More »

ಗ್ಯಾಸ್ ಗೀಸರ್ ‌ಸೋರಿಕೆ: ತಾಯಿ ಮತ್ತು ಮಗು ಸಾವು

ಬೆಂಗಳೂರು: ಬಾತ್‌ರೂಮ್‌ನಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಗೀಸರ್‌ನಿಂದ ವಿಷಾನಿಲ ‌ಸೋರಿಕೆಯಾಗಿ ತಾಯಿ ಮತ್ತು ನಾಲ್ಕು ವರ್ಷದ ಮಗು ಉಸಿರುಗಟ್ಟಿ ಮೃತಪಟ್ಟ ಘಟನೆ ಗೋವಿಂದರಾಜ‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಂದಿನಿ(30) ಮತ್ತು ಪುತ್ರಿ ಯುವಿ ಕಿರಣ್ ಮೃತ ದುರ್ದೈವಿಗಳು. ಪತಿ ಕೆಲಸಕ್ಕೆ ಹೋಗಿದ್ದು, ಹಿರಿಯ ಪುತ್ರಿ ಶಾಲೆಗೆ ಹೋಗಿದ್ದ ಸಮಯದಲ್ಲಿ ಈ ದುರಂತ ನಡೆದಿದೆ. ಪತಿಯ ಸಹೋದರ ಮಧ್ಯಾಹ್ನ ವೇಳೆ ಶಾಲೆಗೆ ಹೋಗಿದ್ದ ಪುತ್ರಿಯನ್ನು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಬಾಗಿಲು ಬಡಿದರೂ ಯಾವುದೇ

ಗ್ಯಾಸ್ ಗೀಸರ್ ‌ಸೋರಿಕೆ: ತಾಯಿ ಮತ್ತು ಮಗು ಸಾವು Read More »

ಇಲಿಪಾಷಾಣ ಸೇವಿಸಿದ್ದ ಯುವತಿ ಚಿಕಿತ್ಸೆ ಫಲಿಸದೆ ಸಾವು

ಸುಳ್ಯ: ಗುತ್ತಿಗಾರಿನ ಯುವತಿಯೊಬ್ಬಳು ಕಳೆದ ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವನೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಚಿಕ್ಕುಳಿ ನಿವಾಸಿ ಶೇಷಪ್ಪ ಗೌಡ ಎಂಬವರ ಪುತ್ರಿ ಪೂಜಾ ಎಂಬಾಕೆಯೇ ಮೃತಪಟ್ಟ ಯುವತಿ. ಈಕೆ ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವನೆ ಮಾಡಿ ಅಸ್ವಸ್ಥಳಾಗಿದ್ದಳು. ಆ ಬಳಿಕ ವಿಷಯ ತಿಳಿದು ಅವಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ. ಮೃತ ಪೂಜಾಳು ತಂದೆ, ತಾಯಿ, ಸಹೋದರ, ಸಹೋದರಿ,

ಇಲಿಪಾಷಾಣ ಸೇವಿಸಿದ್ದ ಯುವತಿ ಚಿಕಿತ್ಸೆ ಫಲಿಸದೆ ಸಾವು Read More »

ಬಾಲಕಿ ನೇಣು ಬಿಗಿದು ಆತ್ಮಹತ್ಯೆ

ಉಳ್ಳಾಲ: ಹದಿನಾರು ವರ್ಷದ ಹುಡುಗಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾವೂರು ಇನೋಳಿ ಎಂಬಲ್ಲಿ ನಡೆದಿದೆ. ಮೃತಳನ್ನು ಇನೋಳಿ ಕಾನ ನಿವಾಸಿ ಝೈನಾಜ್ ಎಂದು ಗುರುತಿಸಲಾಗಿದೆ. ಮೃತ ಬಾಲಕಿ SSLC ಓದಿನ ಬಳಿಕ ಬ್ಯೂಟಿಷಿಯನ್ ಕೋರ್ಸ್‌ಗೆ ‌ಸೇರಿಕೊಂಡಿದ್ದಳು. ಆದರೆ ಗುರುವಾರ ಅನಾರೋಗ್ಯದ ಕಾರಣ ಹೇಳಿ ಮನೆಯಲ್ಲೇ ಉಳಿದುಕೊಂಡಿದ್ದಳು. ತನ್ನ ಅಜ್ಜಿ ಹಾಗೂ ತಾಯಿ ಮನೆಯಲ್ಲಿಲ್ಲದ ‌ಸಮಯ ನೋಡಿ ಈಕೆ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಲಕಿ ನೇಣು ಬಿಗಿದು ಆತ್ಮಹತ್ಯೆ Read More »

ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

ಬೆಂಗಳೂರು: ಹಗ್ಗವನ್ನು ಪತ್ನಿಯ ಕತ್ತಿಗೆ ‌ಸುತ್ತಿ ಕೊಲೆಗೈದು, ಬಳಿಕ ತಾನೂ ಅದೇ ಹಗ್ಗದಿಂದ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೇಬಿ (60) ಎಂಬವರೇ ಕೊಲೆಯಾದ ದುರ್ದೈವಿ. ಇವರ ಪತಿ ವೆಂಕಟೇಶನ್ (65) ಎಂಬವರೇ ಕೊಲೆ ನಡೆಸಿದ್ದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೆಂಕಟೇಶನ್ ಅವರು ಬಿಎಂ‌ಟಿಸಿ ಚಾಲಕನಾಗಿ ಕೆಲಸ ಮಾಡಿದ್ದು, ಸದ್ಯ ನಿವೃತ್ತಿ ಹೊಂದಿದ್ದರು. ಪತ್ನಿ ಸ್ಟ್ರೋಕ್ ಕಾರಣದಿಂದ ಹಾಸಿಗೆ ಹಿಡಿದಿದ್ದರು. ಈ ದಂಪತಿಯ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇವರಿಗೆ

ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ Read More »

ಪಾಳು ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಳ್ತಂಗಡಿ: ಅಪರಿಚಿತ ವ್ಯಕ್ತಿಯ ಶವವೊಂದು ಪಾಳು ಬಾವಿಯಲ್ಲಿ ಪತ್ತೆಯಾದ ಘಟನೆ ವಾಮದಪದವಿನಲ್ಲಿ ನಡೆದಿದೆ. ಜನವಸತಿ ಇಲ್ಲದ ಪ್ರದೇಶದಲ್ಲಿ ಈ ಪಾಳು ಬಾವಿ ಇದ್ದು, ಇದರಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿರುವುದಾಗಿದೆ. ಕಾಪಿಕಾಡ್ ‌ನಿವಾಸಿ ಮನ್ವಿತ್ ಎಂಬವರ ತಂದೆಗೆ ಸೇರಿದ ನಿವೇಶನ ಇದಾಗಿದ್ದು, ಇಲ್ಲಿ ಅಳತೆ ನಡೆಸುವ ಹಿನ್ನೆಲೆಯಲ್ಲಿ ಸ್ವಚ್ಛತಾ ‌ಕಾರ್ಯವನ್ನು ಕೆಲಸದಾಳುಗಳಿಂದ ಮಾಡಿಸುತ್ತಿದ್ದರು. ಈ ಸಂದರ್ಭದಲ್ಲಿ ಮೃತದೇಹ ಪತ್ತೆಯಾಗಿರುವುದಾಗಿದೆ. ಸುಮಾರು 50 – 60 ವರ್ಷದ ವ್ಯಕ್ತಿಯ ಮೃತದೇಹ ಇದಾಗಿದ್ದು, ಪುಂಜಾಲಕಟ್ಟೆ ಠಾಣೆಯಲ್ಲಿ ಈ ಸಂಬಂಧ

ಪಾಳು ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ Read More »

ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ

ಮಲ್ಪೆ: ಕೊಡವೂರು ಗ್ರಾಮದ ಮೂಡಬೆಟ್ಟು ಸರ್ಕಾರಿ ಶಾಲೆಯ ಸಮೀಪ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದಿನೇಶ್ (37) ಎಂಬವರೇ ಮೃತ ದುರ್ದೈವಿ. ಮೃತ ದಿನೇಶ್ ಅವರು ಗರಡಿಮಜಲಿನ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಕೆಲಸವಿಲ್ಲದೆ ಇದ್ದರು ಎಂದು ತಿಳಿದು ಬಂದಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ Read More »

ಕಾರು ಢಿಕ್ಕಿ: ಮೂರೂವರೆ ವರ್ಷದ ಮಗು ಸಾವು

ಬೆಳ್ತಂಗಡಿ: ಕಾರು ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಮಗು ದುರಂತ ಅಂತ್ಯ ಕಂಡ ಘಟನೆ ಚಾರ್ಮಾಡಿಯಲ್ಲಿ ‌ನಡೆದಿದೆ. ಮೃತಪಟ್ಟ ಮಗುವನ್ನು ಮುಹಮ್ಮದ್ ಹಝೀರಿನ್ ಎಂದು ಗುರುತಿಸಲಾಗಿದೆ. ಹಝೀರಿನ್ ತನ್ನ ಅಜ್ಜನ ಜೊತೆಗೆ ತಿಂಡಿ ತರಲೆಂದು ತೆರಳಿದ್ದ. ಅಜ್ಜನ ಕೈ ತಪ್ಪಿಸಿ ಹಿಂದಕ್ಕೆ ತೆರಳಿದ್ದು ಈ ಸಂದರ್ಭದಲ್ಲಿ ಮಗುವಿಗೆ ಕಾರು ಢಿಕ್ಕಿ ಹೊಡೆದಿದೆ. ಈ ಅಪಘಾತದಿಂದ ಮಗು ದೂರಕ್ಕೆ ಎಸೆಯಲ್ಪಟ್ಟಿದ್ದು ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಗು

ಕಾರು ಢಿಕ್ಕಿ: ಮೂರೂವರೆ ವರ್ಷದ ಮಗು ಸಾವು Read More »

ದಂಪತಿ ಜಗಳ: ಗಂಡ ಆತ್ಮಹತ್ಯೆ

ಕಾರ್ಕಳ: ದಂಪತಿ ಮಧ್ಯೆ ನಡೆದ ಜಗಳ ಪತಿಯ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ನಿಟ್ಟೆಯಲ್ಲಿ ನಡೆದಿದೆ. ಪೋಸ್ಟ್‌ಮ್ಯಾನ್ ಒಬ್ಬರು ದಂಪತಿ ಮನೆಗೆ ಪತ್ರ ನೀಡಲು ಬಂದಿದ್ದಾಗ ಪತ್ನಿ ಶಕುಂತಲಾ ಅವರು ಗಾಯಗೊಂಡು ಕಂಡುಬಂದಿದೆ. ತಕ್ಷಣವೇ ಪೋಸ್ಟ್‌ಮ್ಯಾನ್ ಅವರು ಶಕುಂತಲಾ ಅವರ ಪುತ್ರ ಸಾಯಿಕಿರಣ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಪುತ್ರ ಮನೆಗೆ ಬಂದು ತಾಯಿಯನ್ನು ವಿಚಾರಿಸಿದಾಗ ತಂದೆ ಕೋಲಿನಿಂದ ಹಲ್ಲೆ ಮಾಡಿರುವುದು ತಿಳಿದು ಬಂದಿದೆ. ತಂದೆ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಬಾಗಿಲು ಬಡಿದರೂ ತೆರೆದಿಲ್ಲ. ಈ ವೇಳೆ

ದಂಪತಿ ಜಗಳ: ಗಂಡ ಆತ್ಮಹತ್ಯೆ Read More »

error: Content is protected !!
Scroll to Top