ಅಕ್ಷಯ ಕಾಲೇಜಿನಲ್ಲಿ “ಸೈಬರ್ ಸೆಕ್ಯುರಿಟಿ” ಕಾರ್ಯಾಗಾರ

ಪುತ್ತೂರು : ಅಕ್ಷಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಬಿ. ಸಿ.ಎ. ವಿಭಾಗ ಮತ್ತುಆಂತರಿಕ ಗುಣಮಟ್ಟದ ಭರವಸೆ ಕೋಶ ಹಾಗೂ ನಿಯೋಇನ್ನೋವೇಶನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಸೈಬರ್‌ ಸೆಕ್ಯುರಿಟಿ ಎಂಬ ವಿಷಯಗಳಲ್ಲಿ ಕಾರ್ಯಾಗಾರ ನಡೆಯಿತು. ಇನ್ನೋವೇಶನ್ ಸಂಸ್ಥೆಯ ವಸುಮತಿ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿ, ಸೈಬರ್ ಸೆಕ್ಯುರಿಟಿ ಎನ್ನುವುದು ಡಿಜಿಟಲ್ ದಾಳಿಯಿಂದ ಸಿಸ್ಟಮ್‌ಗಳು, ನೆಟ್‌ವರ್ಕ್‌ಗಳು ಮತ್ತು ಪ್ರೋಗ್ರಾಂಗಳನ್ನು ರಕ್ಷಿಸಲು ಪರಿಣಾಮಕಾರಿಯಾಗಿದ್ದು,  ಸೈಬರ್‌ ಸುರಕ್ಷತಾ ಕ್ರಮಗಳನ್ನು ಕಾರ್ಯಗತಗೊಳಿಸುವುದಾಗಿದೆ. ಪ್ರಬಲವಾದ ಪಾಸ್‌ ವರ್ಡ್‌ ಗಳನ್ನು […]

ಅಕ್ಷಯ ಕಾಲೇಜಿನಲ್ಲಿ “ಸೈಬರ್ ಸೆಕ್ಯುರಿಟಿ” ಕಾರ್ಯಾಗಾರ Read More »

ಕುರಿಯದಲ್ಲಿ ಅಶೋಕ ಜನ-ಮನ ಪ್ರಚಾರ ಸಭೆ

ಪುತ್ತೂರು: ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.2 ರಂದು ನಡೆಯುವ ಅಶೋಕ ಜನ-ಮನ ಕಾರ್ಯಕ್ರಮಕ್ಕೆ ಗ್ರಾಮದ ಪ್ರತೀಯೊಬ್ಬರೂ ಬಂದು ನಮ್ಮ ಆಶೀರ್ವಾದ ಮಾಡಬೇಕು ನಿಮ್ಮ ಆಗಮನವೇ ನಮಗೆ ದೊಡ್ಡ ಆಶೀರ್ವಾದ ಎಂದು ಟ್ರಸ್ಟ್‌ನ ಪ್ರಮುಖ ನಿಹಾಲ್ ಪಿ. ಶೆಟ್ಟಿ ಹೇಳಿದರು. ಅವರು ಕುರಿಯ ಗ್ರಾಮದಲ್ಲಿ ನಡೆದ ಅಶೋಕ ಜನ ಮನ ಕಾರ್ಯಕ್ರಮದ ಪ್ರಚಾರ ಸಭೆ ಹಾಗೂ ಆಹ್ವಾನ ಸಮಾರಂಭದಲ್ಲಿ ಮಾತನಾಡಿದರು. ಕಳೆದ

ಕುರಿಯದಲ್ಲಿ ಅಶೋಕ ಜನ-ಮನ ಪ್ರಚಾರ ಸಭೆ Read More »

ಭೀಕರ ಅಪಘಾತ : 12 ಮಂದಿ ಸಾವು

ಜೈಪುರ : ರಾಜಸ್ಥಾನದ ಧೋಲ್ಪುರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕರೌಲಿ-ಧೋಲ್ಪುರ್ ಹೆದ್ದಾರಿಯಲ್ಲಿ ಸುನಿಪುರ್ ಎಂಬ ಗ್ರಾಮದ ಬಳಿ ನಿನ್ನೆ ತಡರಾತ್ರಿ ಆಟೋರಿಕ್ಷಾ ಮತ್ತು ಬಸ್ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ.ಮೃತರಲ್ಲಿ ಐವರು ಮಕ್ಕಳು, ಮೂವರು ಬಾಲಕಿಯರು, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.ಬರೌಲಿ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಆಟೋರಿಕ್ಷಾದಲ್ಲಿ ಹಿಂತಿರುಗುತ್ತಿದ್ದಾಗ

ಭೀಕರ ಅಪಘಾತ : 12 ಮಂದಿ ಸಾವು Read More »

ವಿದ್ಯಾಭಾರತಿ ಸಂಯೋಜಿ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ವಾಲಿಬಾಲ್‍ಪಂದ್ಯಾಟ ಸಮಾರೋಪ | ತರುಣ ವಿಭಾಗದಲ್ಲಿ ಹುಡುಗ-ಹುಡುಗಿಯರ ಎರಡೂ ವಿಭಾಗದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ ಚಾಂಪಿಯನ್

ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್, ವಿದ್ಯಾಭಾರತಿ ಕರ್ನಾಟಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ವಾಲಿಬಾಲ್‍ಪಂದ್ಯಾಟದಲ್ಲಿ ಪ್ರಥಮ, ದ್ವಿತೀಯ ಪಿಯುಸಿ ತರುಣ ವರ್ಗದ ಹುಡುಗರ ವಿಭಾಗದಲ್ಲಿ ದಕ್ಷಿಣ ಮಧ್ಯ ಕ್ಷೇತ್ರದ ಕೈಂರಂಗಳ ಶಾರದಾ ಗಣಪತಿ ವಿದ್ಯಾಸಂಸ್ಥೆ ಹಾಗೂ ಹುಡುಗಿಯರ ವಿಭಾಗದಲ್ಲಿ ದಕ್ಷಿಣ ಮಧ್ಯ ಕ್ಷೇತ್ರದ ಮಡಂತ್ಯಾರು ಪದವಿಪೂರ್ವ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿತು. ತರುಣ ವರ್ಗದ

ವಿದ್ಯಾಭಾರತಿ ಸಂಯೋಜಿ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ವಾಲಿಬಾಲ್‍ಪಂದ್ಯಾಟ ಸಮಾರೋಪ | ತರುಣ ವಿಭಾಗದಲ್ಲಿ ಹುಡುಗ-ಹುಡುಗಿಯರ ಎರಡೂ ವಿಭಾಗದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ ಚಾಂಪಿಯನ್ Read More »

ಗರಿಷ್ಠ ಭದ್ರತೆಯ ಅನಂತಪದ್ಮನಾಭ ದೇವಳದಲ್ಲಿ ಕಳ್ಳತನ

ಐದು ಹಂತದ ಭದ್ರತೆ ದಾಟಿ ಹೋಗಿ ಕದ್ದ ಮೂವರು ಮಹಿಳೆಯರು ತಿರುವನಂತಪುರ : ಕೋಟಿಗಟ್ಟಲೆ ಸಂಪತ್ತು ಇರುವ, ಬಿಗು ಭದ್ರತೆಯ ತಿರುವಂತಪುರದ ಶ್ರೀ ಅನಂತಪದ್ಮನಾಭ ದೇವಳದಲ್ಲಿ ಕಳೆದ ವಾರ ಸಂಭವಿಸಿದ ಕಳ್ಳತನ ಬೆಚ್ಚಿಬೀಳಿಸಿದೆ. ದೇವಳದ ಸಂಪತ್ತಿಗೆ ಐದು ಹಂತಗಳ ಸರ್ಪಗಾವಲು ಇದೆ. ಇದನ್ನು ಬೇಧಿಸಿ ಕಳ್ಳರು ಒಳ ನುಗ್ಗಿರುವುದು ಆಶ್ಚರ್ಯವುಂಟು ಮಾಡಿದೆ. ಪೂಜೆಗೆ ಬಳಸುವ ಒಂದು ಕಂಚಿನ ಉರುಳಿ (ಪಾತ್ರೆ) ಬಿಟ್ಟರೆ ಬೇರೇನನ್ನೂ ಒಯ್ಯಲು ಕಳ್ಳರಿಂದ ಸಾಧ್ಯವಾಗಿಲ್ಲ.ಈ ಕಳ್ಳರನ್ನು ಕೇರಳ ಪೊಲೀಸರು ಹರ್ಯಾಣದಿಂದ ಬಂಧಿಸಿದ್ದಾರೆ. ಕಳ್ಳರ ಪೈಕಿ

ಗರಿಷ್ಠ ಭದ್ರತೆಯ ಅನಂತಪದ್ಮನಾಭ ದೇವಳದಲ್ಲಿ ಕಳ್ಳತನ Read More »

ವಯನಾಡಿನಲ್ಲಿ ಪ್ರಿಯಾಂಕ ವಾಡ್ರಾ V/S ನವ್ಯಾ ಹರಿದಾಸ್‌

ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ತಿರುವನಂತಪುರ: ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌-ಮುಸ್ಲಿಂ ಲೀಗ್‌ ಅಭ್ಯರ್ಥಿ ಪ್ರಿಯಾಂಕ ಗಾಂಧಿ ವಾಡ್ರಾ ವಿರುದ್ಧ ಬಿಜೆಪಿ ತನ್ನ ಫಯರ್‌ ಬ್ರಾಂಡ್‌ ನಾಯಕಿ ನವ್ಯಾ ಹರಿದಾಸ್‌ ಅವರನ್ನು ಕಣಕ್ಕಿಳಿಸಿದೆ.ರಾಯ್​ಬರೇಲಿ ಮತ್ತು ವಯನಾಡು ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿ ವಯನಾಡಿನ ಬದಲು ರಾಯ್​ಬರೇಲಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಕಾರಣದಿಂದ ತೆರವಾಗಿದ್ದ ಕೇರಳದ ವಯನಾಡು ಕ್ಷೇತ್ರದ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಗೆ ಭಾರತೀಯ

ವಯನಾಡಿನಲ್ಲಿ ಪ್ರಿಯಾಂಕ ವಾಡ್ರಾ V/S ನವ್ಯಾ ಹರಿದಾಸ್‌ Read More »

ಕ್ರಿಕೆಟಿನ ಡಾನ್ – ಬ್ರಾಡ್ಮನ್

ಯಾರೂ ಬ್ರೇಕ್ ಮಾಡಲು ಆಗದ ಅಪೂರ್ವ ದಾಖಲೆಗಳ ಸರದಾರ ಆಗಸ್ಟ್ 14, 1948. ಇಂಗ್ಲೆಂಡಿನ ಮಹೋನ್ನತ ಓವಲ್ ಕ್ರಿಕೆಟ್ ಗ್ರೌಂಡ್, ಅದು ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಗಳ ಮುಖಾಮುಖಿ.ಆಶಸ್ ಸರಣಿಯ ಕೊನೆಯ ಪಂದ್ಯ ಅನ್ನುವುದಕ್ಕಿಂತ ಆ ಲೆಜೆಂಡ್ ಕ್ರಿಕೆಟರ್‌ನ ಕೊನೆಯ ಟೆಸ್ಟ್ ಪಂದ್ಯ ಅನ್ನೋದು ಹೆಚ್ಚು ಸರಿ. ಆತ ಬ್ಯಾಟಿಂಗ್ ಮಾಡಲು ಬ್ಯಾಟ್ ಹಿಡಿದು ಬರುವಾಗ ಇನ್ನೊಂದು ಕುತೂಹಲ ಇತ್ತು.ಆತ ಅಂದು ಕೇವಲ ನಾಲ್ಕು ರನ್ ಮಾಡಿದ್ದರೆ ಆತನ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಸರಾಸರಿ 100 ಆಗುತ್ತಿತ್ತು. ಅದು

ಕ್ರಿಕೆಟಿನ ಡಾನ್ – ಬ್ರಾಡ್ಮನ್ Read More »

ಸರಣಿ ಅಪಘಾತ : ಟ್ರಾಫಿಕ್ ಜಾಮ್‍

ಪುತ್ತೂರು: ಸರಣಿ ಅಪಘಾತ ಸಂಭವಿಸಿದ ಘಟನೆ ದರ್ಬೆ ನಿರೀಕ್ಷಣಾ ಮಂದಿರದ ಎದುರು ಇಂದು ಸಂಜೆ ನಡೆದಿದೆ. ಆಟೋ ರಿಕ್ಷಾ ಮತ್ತು ಎರಡು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಕಾರು ಚಾಲಕ ಆಟೋ ರಿಕ್ಷಾ ಹಾಗೂ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಮೂರು ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಘಟನೆಯಿಂದಾಗಿ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಸಂಚಾರಿ ಠಾಣಾ ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸರಣಿ ಅಪಘಾತ : ಟ್ರಾಫಿಕ್ ಜಾಮ್‍ Read More »

ಮುಡಾ, ವಾಲ್ಮೀಕಿ ಹಗರಣದ ಮೂಲಕ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಆಡಳಿತ ನಡೆಸಲಾಗದೆ ಆಕ್ಸಿಜನ್ ಒಳಗೆ ಸೇರಿಕೊಂಡಿದೆ | ಪತ್ರಿಕಾಗೋಷ್ಠಿಯಲ್ಲಿ ನಳಿನ್ ಕುಮಾರ್ ಕಟೀಲ್

ಪುತ್ತೂರು: ಮುಡಾ, ವಾಲ್ಮೀಕಿ ಸೇರಿದಂತೆ ಹಲವಾರು ಹಗರಣದ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತ ನಡೆಸಲಾಗದೆ ಆಕ್ಸಿಜನ್ ಒಳಗೆ ಸೇರಿಕೊಂಡಿದೆ ಎಂದು ದ.ಕ.ಜಿಲ್ಲಾ ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ ಲೇವಡಿ ಮಾಡಿದ್ದಾರೆ. ಶನಿವಾರ ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‍ ಸರಕಾರ ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಭ್ರಷ್ಟಾಚಾರದಲ್ಲೇ ನಿರತರಾಗಿದ್ದಾರೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಜತೆಗೆ ಗಲಭೆಗಳನ್ನು ನಡೆಸುತ್ತಾ ಶಾಂತಿ

ಮುಡಾ, ವಾಲ್ಮೀಕಿ ಹಗರಣದ ಮೂಲಕ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಆಡಳಿತ ನಡೆಸಲಾಗದೆ ಆಕ್ಸಿಜನ್ ಒಳಗೆ ಸೇರಿಕೊಂಡಿದೆ | ಪತ್ರಿಕಾಗೋಷ್ಠಿಯಲ್ಲಿ ನಳಿನ್ ಕುಮಾರ್ ಕಟೀಲ್ Read More »

ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದಿಂದ ಐದು ಕುಟುಂಬಗಳಿಗೆ ಧನ ಸಹಾಯ ಹಸ್ತಾಂತರ

ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದ ವತಿಯಿಂದ ನವರಾತ್ರಿ ಸಂದರ್ಭದಲ್ಲಿ ನಡೆದ ಮೂರನೇ ವರುಷದ ಭವತಿ ಭೀಕ್ಷಂದೆಹಿ ಮೂಲಕ ಸಂಗ್ರಹಿಸಿದ 124,149 ರೂಪಾಯಿ ಒಟ್ಟು 5 ಕುಟುಂಬಗಳಿಗೆ ಕುಪ್ಪೆಪದವು ದುರ್ಗೆಶ್ವರಿ ದೇವಸ್ಥಾನದಲ್ಲಿ ಹಸ್ತಾಂತರ ಮಾಡಲಾಯಿತು ಬಂಟ್ವಾಳ ಪಿಲತ್ತಬೆಟ್ಟು ಗ್ರಾಮದ ವಸಂತಿ ಮತ್ತು ದತ್ತು ಪುತ್ರಿ ಉಮಾವತಿ ಅವರ ಚಿಕಿತ್ಸೆ ಹಾಗೂ ಜೀವನ ನಿರ್ವಹಣೆಗೆ 70,149 ನೀಡಲಾಯಿತು. ಬಂಟ್ವಾಳ ಬಿಳಿಯೂರು ಗ್ರಾಮದ ಯೋಗೀಶ್ ಚಿಕಿತ್ಸೆಗೆ 22,500, ಕುಪ್ಪೆಪದವು ನಿವಾಸಿ ವಸಂತಿ ಅವರಿಗೆ 10500, ಮುತ್ತೂರು ನಿವಾಸಿ ಸುನಂದಾ ಅವರ

ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದಿಂದ ಐದು ಕುಟುಂಬಗಳಿಗೆ ಧನ ಸಹಾಯ ಹಸ್ತಾಂತರ Read More »

error: Content is protected !!
Scroll to Top