ರ್ಯಾಗಿಂಗ್: ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ

ಬಾಗಲಕೋಟೆ: ಜೊತೆಯಲ್ಲಿ ಓದುವ ವಿದ್ಯಾರ್ಥಿಗಳ ರ್ಯಾಗಿಂಗ್‌ಗೆ ಬೇಸತ್ತ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಗುಳೇದಗುಡ್ಡ‌ದಲ್ಲಿ ‌ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಅಂತಿಮ ಬಿ.ಎ. ವಿದ್ಯಾರ್ಥಿನಿ ಅಂಜಲಿ ಮುಂಡಾಲಸ(21) ಎಂದು ಗುರುತಿಸಲಾಗಿದೆ. ಅಂಜಲಿಗೆ ಶುಕ್ರವಾರ ಸಹಪಾಠಿಗಳು ರ್ಯಾಗಿಂಗ್ ಮಾಡಿದ್ದರು. ಈ ವಿಷಯದಿಂದ ಅಂಜಲಿ ಬಹಳಷ್ಟು ನೊಂದಿದ್ದರು. ಮಾನಸಿಕ ಕಿರುಕುಳ ಅನುಭವಿಲಿದ್ದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗುಳೇದಗುಡ್ಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರ್ಯಾಗಿಂಗ್: ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ Read More »

ಅಪಘಾತದಲ್ಲಿ ಮೃತಪಟ್ಟ ಅಗ್ನಿವೀರ ಯೋಧ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಸಾಗರ: ಮೈಸೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಉಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಿಗಳೆಮನೆ ನಿವಾಸಿ ಅಗ್ನಿವೀರ ಯೋಧ ಮೃತಪಟ್ಟಿದ್ದಾರೆ. ಯೋಧ ಪ್ರಜ್ವಲ್ (21) ಮೃತ ದುರ್ದೈವಿ. ಕಳೆದ ಎರಡು ವರ್ಷಗಳಿಂದ ಇವರು ಅಗ್ನಿವೀರ್ ನೇಮಕಾತಿಯಡಿ ‌ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಿಕ್ಕಿಂ‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ವಾರವಷ್ಚೇ ರಜೆಯ ಕಾರಣಕ್ಕೆ ಊರಿಗೆ ಬಂದಿದ್ದರು. ಖಾಸಗಿ ಕೆಲಸದ ಕಾರಣದಿಂದ ಮೈಸೂರಿಗೆ ತೆರಳಿದ್ದ ಅವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪ್ರಜ್ವಲ್ ಮೃತದೇಹವನ್ನು ‌ಸ್ವಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಸಲಾಯಿತು. ಸಕಲ ಸರ್ಕಾರಿ ಗೌರವಗಳ ಜೊತೆಗೆ

ಅಪಘಾತದಲ್ಲಿ ಮೃತಪಟ್ಟ ಅಗ್ನಿವೀರ ಯೋಧ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ Read More »

ಧರ್ಮಸ್ಥಳ ಪ್ರಕರಣ: ಬಾಹುಬಲಿ ಬೆಟ್ಟದ ಕೆಳಭಾಗದ ಕಾಡಿನಲ್ಲಿ SIT ಕಾರ್ಯಾಚರಣೆ

ಧರ್ಮಸ್ಥಳ: ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣದಲ್ಲಿ SIT ಅಧಿಕಾರಿಗಳು ದೂರುದಾರ ಅನಾಮಿಕ ಗುರುತಿಸಿದ ಹೊಸ ಸ್ಥಳದಲ್ಲಿ ಶನಿವಾರ ಶೋಧ ಕಾರ್ಯ ನಡೆಸಿದ್ದಾರೆ. ಧರ್ಮಸ್ಥಳದ ಮುಖ್ಯದ್ವಾರದ ಹತ್ತಿರವಿರುವ ಬಾಹುಬಲಿ ಬೆಟ್ಟದ ಕೆಳಭಾಗದ ಅರಣ್ಯದಲ್ಲಿ ಶೋಧ ಕಾರ್ಯ ಆರಂಭ ಮಾಡಿದೆ. SIT ಅಧಿಕಾರಿಗಳು ಜೊತೆಗೆ ಅರಣ್ಯ ಇಲಾಖಾ ಅಧಿಕಾರಿಗಳು, ಎ.ಸಿ., ತಹಶೀಲ್ದಾರ್ ಮೊದಲಾದವರು ಸ್ಥಳದಲ್ಲಿ ಹಾಜರಿದ್ದಾರೆ. ಈಗಾಗಲೇ ಆರಂಭದಲ್ಲಿ ಗುರುತಿಸಿದ 13 ಸ್ಥಳಗಳ ಪೈಕಿ 12 ರಲ್ಲಿ ಮತ್ತು ಹೊಸ ಸ್ಥಳಗಳಲ್ಲಿ SIT ಅಧಿಕಾರಿಗಳು ಶವ ಹೂತಿಡಲಾಗಿದೆ ಎಂದು

ಧರ್ಮಸ್ಥಳ ಪ್ರಕರಣ: ಬಾಹುಬಲಿ ಬೆಟ್ಟದ ಕೆಳಭಾಗದ ಕಾಡಿನಲ್ಲಿ SIT ಕಾರ್ಯಾಚರಣೆ Read More »

ಭಾರತ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಬೇಕು: ಶಶಿ ತರೂರ್

ನವದೆಹಲಿ: ಅಮೆರಿಕಾವು ಭಾರತೀಯ ಸರಕುಗಳ ಮೇಲೆ ಸುಂಕ ಹೇರಿರುವ ಕ್ರಮಕ್ಕೆ ಸಂಬಂದಿಸಿದ ಹಾಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮಾತನಾಡಿದ್ದು, ಭಾರತ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ನಮ್ಮ ನಿಕಟವರ್ತಿ ‌ಮತ್ತು ಕಾರ್ಯತಂತ್ರದ ಪಾಲುದಾರನಾಗಿ ‌ಕಾರ್ಯ ನಿರ್ವಹಿಸುತ್ತಿದ್ದ ಅಮೆರಿಕಾ ಇಂದು ತನ್ನ ನಡವಳಿಕೆ ಬದಲಾಯಿಸಿದೆ ಎಂದರೆ ಭಾರತ ಹಲವಾರು ವಿಷಯಗಳ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಮುಂದಿನ ಎರಡು ಮೂರು ವಾರಗಳಲ್ಲಿ ನಾವು ಮಾತುಕತೆ ಮೂಲಕ ದಾರಿ ಕಂಡುಕೊಳ್ಳಬಹುದು. ಆದರೆ ನಾವು ಹಲವು ವಿಷಯಗಳ ಬಗ್ಗೆ ಆಲೋಚಿಸಬೇಕಾಗುತ್ತದೆ,

ಭಾರತ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಬೇಕು: ಶಶಿ ತರೂರ್ Read More »

ಯುನಿಸೆಕ್ಸ್ ‌ಸಲೂನ್ ಮಾಲಕರಿಂದ ಹಲ್ಲೆ, ಅರೆಬೆತ್ತಲೆ ಫೋಟೋ ತೆಗೆದು ಹಿಂಸೆ: ದೂರು ದಾಖಲಿಸಿದ ಸಂತ್ರಸ್ತೆ

ಮಂಗಳೂರು: ಹಂಪನಕಟ್ಟೆಯ ಯೂನಿಸೆಕ್ಸ್ ಸಲೂನ್ ಒಂದರ ಮಾಲಕಿ ಅದೇ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್ ಒಬ್ಬರನ್ನು ಬೆದರಿಸಿ, ಅರೆ ಬೆತ್ತಲೆ ಫೋಟೋ ತೆಗೆಸಿ ಚಿತ್ರಹಿಂಸೆ ನೀಡಿದ್ದಾಗಿ ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಸುಮಾರು ಒಂದೂವರೆ ತಿಂಗಳ ಹಿಂದೆ ಮಹಿಳೆ ಆ ಪಾರ್ಲರ್‌ನಲ್ಲಿ ಕೆಲಸಕ್ಕೆ ಸೇರಿದ್ದು, ಅಲ್ಲಿಗೆ ಬರುವ ಗ್ರಾಹಕರ ಜೊತೆಗೆ ಸಲುಗೆಯಿಂದ ‌ವರ್ತಿಸಿ ಅವರಿಂದ 500, 1000 ರೂ. ಪಡೆಯುವಂತೆ ತಿಳಿಸಿದ್ದರು. ಅಂತೆಯೇ ಅಲ್ಲಿಗೆ ಮಾಲಕರ ಪರಿಚಯದ ವ್ಯಕ್ತಿಯೊಬ್ಬ ಬಂದು ಮಸಾಜ್ ಮಾಡಿಸಿಕೊಂಡಿದ್ದು ಮಾತ್ರವಲ್ಲದೆ ಮಾತವಾಡಿರುವುದನ್ನು ರೆಕಾರ್ಡ್ ಮಾಡಿಕೊಂಡು

ಯುನಿಸೆಕ್ಸ್ ‌ಸಲೂನ್ ಮಾಲಕರಿಂದ ಹಲ್ಲೆ, ಅರೆಬೆತ್ತಲೆ ಫೋಟೋ ತೆಗೆದು ಹಿಂಸೆ: ದೂರು ದಾಖಲಿಸಿದ ಸಂತ್ರಸ್ತೆ Read More »

ಪೇಟೆಗೆ ಹೋಗುವುದಾಗಿ ಹೇಳಿ ಹೋದ ಯುವತಿ ನಾಪತ್ತೆ

ಮಂಗಳೂರು: ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದ ಹೊಯ್ಗೆ ಬಜಾರ್ ನಿವಾಸಿ ಯುವತಿ ಮನೆಗೆ ಹಿಂದಿರುಗದೆ ‌ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದ ಯುವತಿಯನ್ನು ಶಾಹಿನಾ ಬಾನು (23) ಎಂದು ಗುರುತಿಸಲಾಗಿದೆ. ಸ್ನೇಹಿತರ ಜೊತೆಗೆ ಪೇಟೆಗೆ ಹೋಗಿ ಸುತ್ತಾಡಿ ಬರುವುದಾಗಿ ‌ತಿಳಿಸಿ ಮನೆಯಿಂದ ಹೋಗಿದ್ದು, ಮನೆಗೆ ವಾಪಸ್ಸು ಹಿಂದಿರುಗಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಮಾಡಲಾಗಿತ್ತು. ಆಕೆಯ ಸ್ನೇಹಿತೆಯ ಬಳಿ ವಿಚಾರಿಸಿದಾಗ ನಾಪತ್ತೆಯಾದ ಯುವತಿಯ ಜೊತೆ ಆಕೆ ಎಲ್ಲೂ ಹೋಗಿಲ್ಲ ಎಂಬುದು ಗೊತ್ತಾಗಿದೆ. ಯುವತಿ ಗೋಧಿ ಮೈಬಣ್ಣ,

ಪೇಟೆಗೆ ಹೋಗುವುದಾಗಿ ಹೇಳಿ ಹೋದ ಯುವತಿ ನಾಪತ್ತೆ Read More »

ರಕ್ಷಾ ಬಂಧನ: ದೇಶವಾಸಿಗಳಿಗೆ ಶುಭ ಕೋರಿದ ‌ಪ್ರಧಾನಿ ಮೋದಿ, ಅಮಿತ್ ಶಾ

ನವದೆಹಲಿ: ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶವಾಸಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಶುಭಾಶಯ ಕೋರಿ ಪೋಸ್ಟ್ ಮಾಡಿರುವ ಅವರು, ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಬಲಪಡಿಸುವಲ್ಲಿ ‌ಮಹತ್ವ ಪಡೆದಿದೆ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಹ ಹಬ್ಬದ ಹಿನ್ನೆಲೆ ದೇಶದ ಜನರಿಗೆ ಶುಭಾಶಯಗಳನ್ನು ಕೋರಿದ್ದು, ಸಹೋದರ ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ರಕ್ಷಣೆಯ ಬದ್ಧತೆಗೆ ಪವಿತ್ರವಾದ ದಿನ. ಈ ಸಂದರ್ಭದಲ್ಲಿ ಎಲ್ಲರ ಬದುಕು ಸಂತೋಷ,

ರಕ್ಷಾ ಬಂಧನ: ದೇಶವಾಸಿಗಳಿಗೆ ಶುಭ ಕೋರಿದ ‌ಪ್ರಧಾನಿ ಮೋದಿ, ಅಮಿತ್ ಶಾ Read More »

ನಟ ಧ್ರುವ ಸರ್ಜಾ ವಿರುದ್ಧ 3.15 ಕೋ. ರೂ. ವಂಚನೆ ಆರೋಪ

ನಿರ್ಮಾಪಕರಿಂದ ಮುಂಬೈಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಬೆಂಗಳೂರು: ಕನ್ನಡ ನಟ ಧ್ರುವ ಸರ್ಜಾ ವಿರುದ್ಧ ಜಗ್ಗು ದಾದ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗ್ಡೆ 9.58 ಕೋ. ರೂ. ವಂಚಿಸಿದ ಕುರಿತು ದೂರು ನೀಡಿದ್ದಾರೆ. ಮುಂಬೈಯ ಅಂಬೋಲಿ ಪೊಲೀಸ್​ ಠಾಣೆಯಲ್ಲಿ ರಾಘವೇಂದ್ರ ಹೆಗ್ಡೆ ದೂರು ದಾಖಲಿಸಿದ್ದಾರೆ. 3.15 ಕೋಟಿ ರೂಪಾಯಿ ವಂಚನೆ ಕೇಸ್ ಇದಾಗಿದ್ದು, ಬಡ್ಡಿ ಸೇರಿ ಆ ಹಣ ಈಗ 9 ಕೋಟಿ ರೂಪಾಯಿ ಆಗಿದೆ ಎಂದು ನಿರ್ಮಾಪಕ ಆರೋಪಿಸಿದ್ದಾರೆ. 2016ರಲ್ಲಿ ನನ್ನ

ನಟ ಧ್ರುವ ಸರ್ಜಾ ವಿರುದ್ಧ 3.15 ಕೋ. ರೂ. ವಂಚನೆ ಆರೋಪ Read More »

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ‘ಡಿಕ್ಷನ್’ ಲೋಕಾರ್ಪಣೆ

ಪುತ್ತೂರು: ಶಾಲಾ ಮಕ್ಕಳ ಪ್ರತಿಭಾ ದರ್ಪಣವಾದ ಭಿತ್ತಿಪತ್ರ ‘ಡಿಕ್ಷನ್’ಇದನ್ನು ಪುತ್ತೂರಿನ ಹಿರಿಯ ಪತ್ರಕರ್ತ ಲೋಕೇಶ್ ಬನ್ನೂರು ಅವರು ಲೋಕಾರ್ಪಣೆಗೊಳಿಸಿದರು. ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳು ಗೋಡೆಯಲ್ಲಿ ಗೀಚಿದ್ದಕ್ಕೆ ಅವರಿಗೆ ಗದರಿಸಬಾರದು, ಬದಲಾಗಿ ಗೀಚುವಿಕೆಯನ್ನು ಪುಸ್ತಕಕ್ಕೆ ವರ್ಗಾಯಿಸಬೇಕು ಎಂದರು. ಇದು ಪೋಷಕರ ಜವಾಬ್ದಾರಿಯಾಗಬೇಕು ಎಂದು ಕಿವಿಮಾತು ಹೇಳಿದರು. ‘ಡಿಕ್ಷನ್’ ಎಂಬ ಹೆಸರು ಸೂಚಿಸಿದ ಶಾಲಾಡಳಿತ ಮಂಡಳಿಯ ನಿರ್ದೇಶಕ ಸೀತಾರಾಮ ಕೇವಳ ಅವರು ಮಾತನಾಡಿ ಸರಳ ಬರವಣಿಗೆಯ ಕುರಿತು ಮಕ್ಕಳಿಗೆ ಸಲಹೆ

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ‘ಡಿಕ್ಷನ್’ ಲೋಕಾರ್ಪಣೆ Read More »

ಆಪರೇಷನ್‌ ಅಖಾಲ್‌ : ಇಬ್ಬರು ಸೈನಿಕರು ಹುತಾತ್ಮ

ಒಂಬತ್ತನೆ ದಿನಕ್ಕೆ ಪ್ರವೇಶಿಸಿದ ಉಗ್ರ ನಿಗ್ರಹ ಕಾರ್ಯಾಚರಣೆ ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಿನ್ನೆ ರಾತ್ರಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಮೂವರು ಸೈನಿಕರು ಗಾಯಗೊಂಡಿದ್ದು, ಇದರೊಂದಿಗೆ ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿರುವ ಆಪರೇಷನ್‌ನಲ್ಲಿ ಗಾಯಗೊಂಡ ಸೈನಿಕರ ಸಂಖ್ಯೆ ಹತ್ತಕ್ಕೇರಿದೆ. ಶುಕ್ರವಾರ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಮಡಿದ ವೀರ ಯೋಧರನ್ನು ಕೆ.ಪ್ರೀತ್‌ಪಾಲ್ ಸಿಂಗ್ ಮತ್ತು ಹರ್ಮಿಂದರ್‌ ಸಿಂಗ್ ಎಂದು

ಆಪರೇಷನ್‌ ಅಖಾಲ್‌ : ಇಬ್ಬರು ಸೈನಿಕರು ಹುತಾತ್ಮ Read More »

error: Content is protected !!
Scroll to Top