ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ನಿಂದ ಬೀರಮಲೆ ಪ್ರಜ್ಞಾಶ್ರಮದಲ್ಲಿ ರಕ್ಷಾಬಂಧನ

ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ವತಿಯಿಂದ ಬೀರಮಲೆ ಪ್ರಜ್ಞಾಶ್ರಮದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನೆರವೇರಿತು. ಅಧ್ಯಕ್ಷೆ ಮಲ್ಲಿಕಾ ಜೆ ರೈ, ಕಾರ್ಯದರ್ಶಿ ರೋಹಿಣಿ ಆಚಾರ್ಯ, ಕೋಶಾಧಿಕಾರಿ ಸುಮಂಗಲಾ ಶೆಣೈ, ಸದಸ್ಯರಾದ ಉಷಾ ಆಚಾರ್, ವೀಣಾ ಬಿಕೆ, ಲಲಿತ, ಮಹಾಲಿಂಗ ನಾಯ್ಕ, ಅನ್ನಪೂರ್ಣಿಮಾ ಆರ್ ರೈ, ಪುರುಷೋತ್ತಮ್ ಶೆಟ್ಟಿ, ಶೋಭಾ ರೈ ಚಂದ್ರಕಾಂತ್, ಪ್ರಹ್ಲಾದ್, ಹರಿಣಾಕ್ಷಿ ಜೆ ಶೆಟ್ಟಿ, ಗಂಗಾಧರ ಆಚಾರ್ಯ, ಪ್ರಹ್ಲಾದ್, ಆಶಾಲತಾ ಎ ಕೆ. ಮತ್ತು ಇತರರು ಪಾಲ್ಗೊಂಡು ಪ್ರಜ್ಞಾಶ್ರಮದಲ್ಲಿ ಮಕ್ಕಳಿಗೆ ದೀಪದಾರತಿ ಎತ್ತಿ, […]

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ನಿಂದ ಬೀರಮಲೆ ಪ್ರಜ್ಞಾಶ್ರಮದಲ್ಲಿ ರಕ್ಷಾಬಂಧನ Read More »

ಅಕ್ಷಯ ಕಾಲೇಜಿನಲ್ಲಿ  ಗ್ರಂಥ ಪಾಲಕರ  ದಿನಾಚರಣೆ

ಪುತ್ತೂರು:  ಅಕ್ಷಯ  ಸಮೂಹ ಶಿಕ್ಷಣ ಸಂಸ್ಥೆಗಳ  ಪದವಿ ಕಾಲೇಜಿನಲ್ಲಿ   ರಾಷ್ಟ್ರೀಯ  ಗ್ರಂಥಪಾಲಕರ  ದಿನಾಚರಣೆ ಯನ್ನು  ಕಾಲೇಜಿನ  ಗ್ರಂಥಾಲಯ ಮತ್ತು  ಮಾಹಿತಿ ವಿಜ್ಞಾನ ಕೇಂದ್ರ  ಹಾಗೂ ಆಂತರಿಕ  ಗುಣಮಟ್ಟದ ಭರವಸೆಯ ಕೋಶದ  ಸಹಭಾಗಿತ್ವದಲ್ಲಿ   ಆಚರಿಸಲಾಯಿತು.  ಕಾರ್ಯಕ್ರಮದ  ಅಧ್ಯಕ್ಷತೆ ಯನ್ನು  ಕಾಲೇಜಿನ  ಉಪ ಪ್ರಾಂಶುಪಾಲರಾದ    ರಕ್ಷಣ್  ಟಿ ಆರ್  ದೀಪ  ಬೆಳಗಿಸಿ  ಉದ್ಘಾಟಿಸಿದರು. ಭಾರತದ ರಾಷ್ಟ್ರೀಯ ಗ್ರಂಥಾಲಯ  ಪಿತಾಮಹ  ಎನ್ನಿಸಿಕೊಂಡ  ಡಾ  ಎಸ್ ಆರ್  ರಂಗನಾಥನ್ ಅವರ  ಜನ್ಮದಿನ ವನ್ನು  ಗ್ರಂಥಪಾಲಕರ ದಿನವನ್ನಾಗಿ ಆಚರಿಸಲಾಗುತ್ತದೆ  ಕಾರ್ಯಕ್ರಮದಲ್ಲಿ    ಅವರ ಭಾವಚಿತ್ರಕ್ಕೆ  ಪುಷ್ಪಾರ್ಚನೆ 

ಅಕ್ಷಯ ಕಾಲೇಜಿನಲ್ಲಿ  ಗ್ರಂಥ ಪಾಲಕರ  ದಿನಾಚರಣೆ Read More »

ಅಂಬಿಕಾದಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ

ಪುತ್ತೂರು: ಕಠಿಣ ಪರಿಶ್ರಮವಿಲ್ಲದೆ ಸಫಲತೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿರಬೇಕು. ಸಮಯ ವ್ಯರ್ಥ ಮಾಡದೆ ಅಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ವಿದ್ಯಾರ್ಥಿಗಳ ಹೆತ್ತವರು ಮಕ್ಕಳನ್ನು ಗಮನಿಸುತ್ತಿರಬೇಕು. ಅಂಬಿಕಾ ವಿದ್ಯಾಲಯ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳಿಗೆ ಪ್ರೋತ್ಸಾಹ ಕೊಡುತ್ತಿದೆ. ನೈತಿಕ ತರಗತಿ, ಮಾರ್ಗದರ್ಶನ ತರಬೇತಿಗಳು ನಡೆಯುತ್ತ ಇವೆ. ದೇಶಭಕ್ತಿಯನ್ನು ಮೂಡಿಸುವ ಕಾರ್ಯಕ್ರಮಗಳು , ಇಂಡಸ್ಟ್ರಿಯಲ್ ವಿಸಿಟ್, ಸಿ ಎ ಕೋಚಿಂಗ್ ತರಗತಿಗಳು, ಮೆಂಟರಿಂಗ್ ಸಿಸ್ಟಮ್ ಮುಂತಾದವುಗಳಿಂದ ವಿದ್ಯಾರ್ಥಿಗಳ ಸಮಸ್ಯೆಗಳ ನಿವಾರಣೆ, ಸರ್ವಾಂಗೀಣ ಬೆಳವಣಿಗೆಗೆ ಬೇಕಾದ ವ್ಯವಸ್ಥೆಗಳೆಲ್ಲವೂ ಇವೆ ಎಂದು

ಅಂಬಿಕಾದಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ Read More »

ಅಕ್ಷಯ ಕಾಲೇಜಿನ ಪದವಿ ಫಲಿತಾಂಶ | ಫ್ಯಾಶನ್ ಡಿಸೈನ್ ವಿಭಾಗ 100%, ಇಂಟೀರಿಯರ್ ಡಿಸೈನ್ ವಿಭಾಗ 100%, ವಾಣಿಜ್ಯ ವಿಭಾಗ 92%

ಪುತ್ತೂರು: ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ಜೂನ್-ಜುಲೈ 2025ರಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪದವಿ ಪರೀಕ್ಷೆಯಲ್ಲಿ ಬಿ.ಎಸ್ಸಿ. ಫ್ಯಾಶನ್ ಡಿಸೈನ್ ವಿಭಾಗವು ಶೇ.100% ಫಲಿತಾಂಶ ದಾಖಲಾಗಿದೆ. 22 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ 10 ವಿದ್ಯಾರ್ಥಿಗಳು ಶೇ.80ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದು, ಮಧುರ (92%) ಪ್ರಥಮ, ಭಾರ್ಗವಿ (91%) ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೆಯೇ ಬಿ.ಎಸ್ಸಿ. ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳು ಕೂಡಾ ಶೇ.100 ಫಲಿತಾಂಶ ಗಳಿಸಿದ್ದು, 10 ವಿದ್ಯಾರ್ಥಿಗಳು ಉನ್ನತ ಶ್ರೇಣಿ

ಅಕ್ಷಯ ಕಾಲೇಜಿನ ಪದವಿ ಫಲಿತಾಂಶ | ಫ್ಯಾಶನ್ ಡಿಸೈನ್ ವಿಭಾಗ 100%, ಇಂಟೀರಿಯರ್ ಡಿಸೈನ್ ವಿಭಾಗ 100%, ವಾಣಿಜ್ಯ ವಿಭಾಗ 92% Read More »

ನಾಳೆಯಿಂದ ದೇವಸ್ಥಾನಗಳ ಸುತ್ತಮುತ್ತ ಪ್ಲಾಸ್ಟಿಕ್‌ ಬಳಸುವಂತಿಲ್ಲ

ಮುಜರಾಯಿ ವ್ಯಾಪ್ತಿಗೊಳಪಡುವ ದೇಗುಲಗಳಲ್ಲಿ ಪ್ಲಾಸ್ಟಿಕ್‌ ನಿಷೇಧ ಕಟ್ಟುನಿಟ್ಟಿನ ಜಾರಿಗೆ ಆದೇಶ ಬೆಂಗಳೂರು: ಆಗಸ್ಟ್ 15ರಿಂದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿಯವರು ಹೇಳಿದ್ದಾರೆ. ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರು ಪ್ರಶೋತ್ತರ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇವಾಲಯದ ಆವರಣ ಸ್ವಚ್ಛತೆ ಕಾಪಾಡಲು ಹಾಗೂ ಪರಿಣಾಮಕಾರಿಯಾಗಿ ಪ್ಲಾಸ್ಟಿಕ್ ನಿಷೇಧಿಸುವಂತೆ ಸೂಚಿಸಲಾಗಿದೆ‌.‌ ಆ.15ರಿಂದ ಆದೇಶ ಜಾರಿಗೆ ಬರಲಿದೆ ಎಂದರು. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ

ನಾಳೆಯಿಂದ ದೇವಸ್ಥಾನಗಳ ಸುತ್ತಮುತ್ತ ಪ್ಲಾಸ್ಟಿಕ್‌ ಬಳಸುವಂತಿಲ್ಲ Read More »

13ನೇ ಸ್ಥಳದಲ್ಲಿ ಗುಂಡಿ ಅಗೆಯುವ ಕಾರ್ಯಾಚರಣೆಯೂ ಮುಗಿಯಿತು, ಮುಂದೇನು?

ಎಷ್ಟು ಅಗೆದರೂ ಶವದ ಕುರುಹು ಸಿಗದಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ನಡೆ ಬಗ್ಗೆ ಕುತೂಹಲ ಧರ್ಮಸ್ಥಳ : ಮುಸುಕುಧಾರಿ ಅನಾಮಿಕನ ಹೇಳಿಕೆ ನಂಬಿ ಮಾಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸತತ 14 ದಿನ ಭೂಮಿ ಅಗೆದರೂ ಶವ ಹೂತಿರುವ ಯಾವುದೇ ಕುರುಹು ಪತ್ತೆಯಾಗಿಲ್ಲ. ಹೀಗಾಗಿ ಎಸ್‌ಐಟಿಯ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಮೂಡಿದೆ. ಮುಸುಕುಧಾರಿ ಇನ್ನೂ ಅನೇಕ ಜಾಗಗಳನ್ನು ತೋರಿಸಲು ಮುಂದಾಗಿದ್ದಾನೆ. ಆದರೆ ಇಷ್ಟರ ತನಕ ಅವನು ತೋರಿಸಿದ ಯಾವ ಜಾಗದಲ್ಲೂ ಯಾವುದೇ ಕುರುಹು ಸಿಗದಿರುವಾಗ

13ನೇ ಸ್ಥಳದಲ್ಲಿ ಗುಂಡಿ ಅಗೆಯುವ ಕಾರ್ಯಾಚರಣೆಯೂ ಮುಗಿಯಿತು, ಮುಂದೇನು? Read More »

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ

ಪುತ್ತೂರು: ತಿಥಿಗಳಿಗೆ ಅನುಸಾರವಾಗಿ ಹಬ್ಬಗಳನ್ನು ಆಚರಿಸುವುದು ನಮ್ಮ ದೇಶದ ಸಂಸ್ಕೃತಿ. ಶ್ರಾವಣ ಹುಣ್ಣಿಮೆಯ ಪುಣ್ಯ ದಿನದಂದು ನಾವು ರಕ್ಷಾ ಬಂಧನವನ್ನು ಆಚರಿಸುತ್ತೇವೆ. ವಿವೇಕಾನಂದ ರಂತಹ ಶ್ರೇಷ್ಠ ವ್ಯಕ್ತಿಗಳ ಹೆಸರಲ್ಲಿ ನಡೆಯುತ್ತಿರುವ ಈ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ನಿಮ್ಮಂತ ವಿದ್ಯಾರ್ಥಿಗಳು ನಿಜಕ್ಕೂ ಪುಣ್ಯವಂತರು. ರಕ್ಷೆಯಲ್ಲಿ ಕೇಸರಿ ಬಣ್ಣವನ್ನು ಯಾಕೆ ಬಳಸುತ್ತೇವೆ ಎಂದರೆ ಕೇಸರಿ ತ್ಯಾಗದ ಸಂಕೇತವಾಗಿದೆ. ತ್ಯಾಗ ಮತ್ತು ಸೇವೆ ನಮ್ಮ ದೇಶದ ಆತ್ಮವಿದ್ದಂತೆ ಅದನ್ನು ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಮಂಗಳೂರು ವಿಭಾಗ ಸಹ ಕಾರ್ಯವಾಹರಾದ ಸುಭಾಶ್ಚಂದ್ರ ಕಳಂಜ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ Read More »

ನಟಿ ಶಿಲ್ಪಾ ಶೆಟ್ಟಿ-ರಾಜ್‌ ಕುಂದ್ರಾ ವಿರುದ್ಧ 60 ಕೋ. ರೂ. ವಂಚನೆ ದೂರು

ಸಾಲ ಪಡೆದು ಹಿಂದಿರುಗಿಸದ ಕುರಿತು ಕೇಸ್‌ ದಾಖಲಿಸಿದ ಉದ್ಯಮಿ ಮುಂಬೈ : ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ 60 ಕೋ. ರೂ. ವಂಚಿಸಿದ ಕುರಿತು ಎಫ್‌ಐಆರ್‌ ದಾಖಲಾಗಿದೆ. ಮುಂಬೈ ಮೂಲದ ಉದ್ಯಮಿಯೊಬ್ಬರು ದಂಪತಿ ವಿರುದ್ಧ ದೂರು ನೀಡಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚನೆ ಮೊತ್ತ 10 ಕೋಟಿ ರೂ.ಗಳಿಗಿಂತ ಹೆಚ್ಚಿರುವುದರಿಂದ ಪೊಲೀಸರು ಪ್ರಕರಣವನ್ನು ಆರ್ಥಿಕ ಅಪರಾಧಗಳ ವಿಭಾಗಕ್ಕೆ

ನಟಿ ಶಿಲ್ಪಾ ಶೆಟ್ಟಿ-ರಾಜ್‌ ಕುಂದ್ರಾ ವಿರುದ್ಧ 60 ಕೋ. ರೂ. ವಂಚನೆ ದೂರು Read More »

ಮಂಗಳೂರು: ನೈತಿಕ ಪೊಲೀಸ್‌ಗಿರಿ ಮಾಡಿದ 6 ಮಂದಿ ಬಂಧನ

ಅನ್ಯಕೋಮಿನ ಯುವಕನ ಜೊತೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಪ್ರಶ್ನಿಸಿದ್ದಕ್ಕೆ ಕೇಸ್‌ ಮಂಗಳೂರು: ನಗರದಲ್ಲಿ ನೈತಿಕ ಪೊಲೀಸ್‌ಗಿರಿ ಮಾಡಿದ ಆರೋಪದ ಮೇಲೆ ಪಾಂಡೇಶ್ವರ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಗಣೇಶ್, ಶ್ರೇಯಸ್, ಚಿಂಚು, ಚಂದನ್, ನಾಗರಾಜ್ ಹಾಗು ರಾಮಚಂದ್ರ ಎಂದು ಗುರುತಿಸಲಾಗಿದೆ. ಆ.11ರಂದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಅನ್ಯಕೋಮಿನ ಯುವಕ ಜೊತೆ ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಸರ್ವಿಸ್ ಬಸ್ ನಿಲ್ದಾಣ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ತಡೆದು ಅಡ್ಡಿಪಡಿಸಿ ಜೀವಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಪ.ಪೂ. ಕಾಲೇಜೊಂದರ

ಮಂಗಳೂರು: ನೈತಿಕ ಪೊಲೀಸ್‌ಗಿರಿ ಮಾಡಿದ 6 ಮಂದಿ ಬಂಧನ Read More »

ಎಲ್ಲರ ಅಭಿಪ್ರಾಯ ಪಡೆದು ದ.ಕ.ಜಿಲ್ಲೆ ಹೆಸರು ಬದಲಾವಣೆ ತೀರ್ಮಾನ : ಕೃಷ್ಣ ಬೈರೇಗೌಡ ಭರವಸೆ

ಸದನದಲ್ಲಿ ಮಂಗಳೂರು ಎಂದು ನಾಮಕರಣ ಮಾಡುವುದಕ್ಕೆ ಒತ್ತಾಯಿಸಿದ ಶಾಸಕ ಹರೀಶ್‌ ಪೂಂಜ ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಮರುನಾಮಕರಣ ಮಾಡುವ ಸಂಬಂಧ ಪರ-ವಿರೋಧ ಮನವಿಗಳು ಸ್ವೀಕೃತವಾಗಿವೆ. ಜಿಲ್ಲಾಧಿಕಾರಿಯಿಂದ ವರದಿ ಬರುವುದು ಬಾಕಿಯಿದೆ. ಎಲ್ಲರ ಅಭಿಪ್ರಾಯ ಪಡೆದು ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಹರೀಶ್ ಪೂಂಜ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಮರುನಾಮಕರಣ ಮಾಡುವ ಬಗ್ಗೆ ಗಮನ

ಎಲ್ಲರ ಅಭಿಪ್ರಾಯ ಪಡೆದು ದ.ಕ.ಜಿಲ್ಲೆ ಹೆಸರು ಬದಲಾವಣೆ ತೀರ್ಮಾನ : ಕೃಷ್ಣ ಬೈರೇಗೌಡ ಭರವಸೆ Read More »

error: Content is protected !!
Scroll to Top