ರಾಜರು ಮಾಡುತ್ತಿದ್ದ ಧರ್ಮದ ಕಾರ್ಯ ಇಂದು ಪ್ರಜೆಗಳಿಂದ ನೆರವೇರುತ್ತಿದೆ | ಅಗಳಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶದ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು
ಪುತ್ತೂರು: ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಬಂದಿದ್ದೇವೆ. ಆದ್ದರಿಂದ ಅಂದು ರಾಜರು ಮಾಡುತ್ತಿದ್ದ ದೇವಸ್ಥಾನದ ಕೆಲಸವನ್ನು, ಇಂದು ಪ್ರಜೆಗಳೇ ಮಾಡುತ್ತಿದ್ದಾರೆ. ಈ ಮೂಲಕ ದೇವರ ಭಕ್ತಿ, ಧರ್ಮದ ಶ್ರದ್ಧೆ, ಜನರ ಸಮರ್ಪಣೆಯನ್ನು ಕಾಣಬಹುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಬೆಳಂದೂರು ಅಗಳಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜರ ಕಾಲದ ಶಿಲ್ಪಕಲೆ, ಅವರ ಶ್ರದ್ಧೆಯನ್ನು ಇಂದು ನಾವು ಮತ್ತೊಮ್ಮೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಅದರಲ್ಲೂ ಸರ್ವಧರ್ಮೀಯರು […]









