ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಮುಡ್ನೂರು ಆದಿಲಕ್ಷ್ಮೀ ಸಂಘ ಉದ್ಘಾಟನೆ
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರೇಸ್ಟ್ ಪುತ್ತೂರು.ಚಿಕ್ಕಮುಡ್ನೂರು ಕಾರ್ಯಕ್ಷೇತ್ರದ ಆದಿಲಕ್ಷ್ಮೀ ಸಂಘವನ್ನು ಶನಿವಾರ ಉದ್ಘಾಟಿಸಲಾಯಿತು. ಯೋಜನೆಯ ಪುತ್ತೂರು ಯೋಜನಾಧಿಕಾರಿ ಆನಂದ ಕೆ. ಸಂಘ ಉದ್ಘಾಟಿಸಿ ಶುಭ ಹಾರೈಸಿದರು. ಸಂಘದ ಪ್ರಬಂಧಕರಾಗಿ ಗೀತಾ, ಸಂಯೋಜಕರಾಗಿ ಮಾಲಿನಿ, ಕೋಶಾಧಿಕಾರಿಯಾಗಿ ಯಶೋದಾ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಚಿಕ್ಕಮುಡ್ನೂರು ಒಕ್ಕೂಟದ ಉಪಾಧ್ಯಕ್ಷೆ ಪೂರ್ಣಿಮಾ, ಚಿಕ್ಕಮುಡ್ನೂರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಚಂದ್ರಿಕಾ, ಕೇಪುಲು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ವೀಣಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಮುಡ್ನೂರು ಆದಿಲಕ್ಷ್ಮೀ ಸಂಘ ಉದ್ಘಾಟನೆ Read More »










