ಶಿಲಾನ್ಯಾಸ ಸಂದರ್ಭ ಕೂರ್ಮಾವತಾರಿಯಾಗಿ ಪ್ರತ್ಯಕ್ಷನಾದ ಹರಿ! | ಹರನ ಶಿಲಾನ್ಯಾಸಕ್ಕೆ ಹರಿಯೇ ತಾ ಬಂದ…| ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ, ಶ್ರೀ ಕೇಪಳೇಶ್ವರ ದೇವಳದಲ್ಲಿ ಹೀಗೊಂದು ವಿಸ್ಮಯ
ಸವಣೂರು: ಪ್ರಾಚೀನ ದೇವಸ್ಥಾನವಾದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಳದ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ವಿಜೃಂಭಣೆಯಿಂದ ನಡೆಯಿತು. ಇದೇ ಸಂದರ್ಭ ಶಿವನ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶುಭಕೋರುವಂತೆ ವಿಷ್ಣುವಿನ ಅವತಾರವಾದ ಕೂರ್ಮ (ಆಮೆ) ಪ್ರತ್ಯಕ್ಷವಾದ ಘಟನೆಗೆ ಬರೆಪ್ಪಾಡಿ ದೇವಳ ಸಾಕ್ಷಿಯಾಯಿತು. ದೇವಸ್ಥಾನ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಶಿಲಾನ್ಯಾಸ ನಡೆಯುತ್ತಿದೆ. ಹೀಗೆ ನಡೆಯುವ ಶಿಲಾನ್ಯಾಸಕ್ಕೆ ಒಂದು ಹೊಂಡವನ್ನು ನಿರ್ಮಿಸಲಾಗಿತ್ತು. ಶನಿವಾರ ಮುಂಜಾನೆ ಬಂದು ಶಿಲಾನ್ಯಾಸದ ಹೊಂಡ ನೋಡಿದರೆ, ಅಲ್ಲೊಂದು ಆಮೆ ಕಾರ್ಯಕ್ರಮಕ್ಕೆ ಶುಭಕೋರುವಂತೆ ಕುಳಿತಿತ್ತು. ನೆರೆದಿದ್ದ ಭಕ್ತ ಸಮೂಹಕ್ಕೆ ಆಶ್ಚರ್ಯವೋ ಆಶ್ಚರ್ಯ. […]










