ಸೆ. 17ರಂದು ಪುತ್ತೂರಿನಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ, ಮೆರವಣಿಗೆ | ಎಲ್ಲಿಂದ – ಎಲ್ಲಿಯವರೆಗೆ ವಿಶ್ವಕರ್ಮ ದೇವರ ಅಲಂಕೃತ ವಾಹನ ಮೆರವಣಿಗೆ ಸಾಗಲಿದೆ ಗೊತ್ತೇ?

ಪುತ್ತೂರು: ಬೊಳುವಾರು ವಿಶ್ವಕರ್ಮ ಯುವ ಸಮಾಜ ಹಾಗೂ ವಿಶ್ವ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ನಡೆಯುವ ವಿಶ್ವಕರ್ಮ ಪೂಜಾ ಮಹೋತ್ಸವದಂದು ವಿಶ್ವಕರ್ಮ ದೇವರ ಅಲಂಕೃತ ವಾಹನ ಮೆರವಣಿಗೆ ಸೆ. 17ರಂದು ನಡೆಯಲಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಬೊಳುವಾರು ವಿಶ್ವಕರ್ಮ ಸಭಾಭವನದವರೆಗೆ ಮೆರವಣಿಗೆ ನಡೆಯಲಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮೆರವಣಿಗೆಗೆ ಬೆಳಿಗ್ಗೆ 9 ಗಂಟೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಭಾಗವಹಿಸುವ ವಿಶ್ವಕರ್ಮ ಸಮಾಜ ಬಾಂಧವರು ಬೆಳಿಗ್ಗೆ 8 ಗಂಟೆಗೆ ಶ್ರೀ […]

ಸೆ. 17ರಂದು ಪುತ್ತೂರಿನಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ, ಮೆರವಣಿಗೆ | ಎಲ್ಲಿಂದ – ಎಲ್ಲಿಯವರೆಗೆ ವಿಶ್ವಕರ್ಮ ದೇವರ ಅಲಂಕೃತ ವಾಹನ ಮೆರವಣಿಗೆ ಸಾಗಲಿದೆ ಗೊತ್ತೇ? Read More »

ಕರಾವಳಿ ಸೇರಿದಂತೆ ಇಡೀ ರಾಜ್ಯಕ್ಕೆ ಬರ ಘೋಷಿಸಲು ನಳಿನ್ ಒತ್ತಾಯ | ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ ರಾಜ್ಯಾಧ್ಯಕ್ಷ

ಪುತ್ತೂರು: ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಭ್ರಷ್ಟರ ಕೂಟದ ಸರಕಾರವಾಗಿದ್ದು, ಸರಕಾರದ ಭ್ರಷ್ಟಾಚಾರದ ಬಗ್ಗೆ ದೂರು ನೀಡಿದವರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಗುರುವಾರ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸರಕಾರದ ವಿರುದ್ಧ ಬರೆದ ಮಾಧ್ಯಮಗಳು, ಸಾಮಾಜಿಕ ಜಾಲತಾಣದ ಮೇಲೂ ದಬ್ಬಾಳಿಕೆ ನಡೆಸುತ್ತಿದೆ. ಭ್ರಷ್ಟಾಚಾರದ ಒಂದು ಭಾಗವಾಗಿ ಪರಿಶಿಷ್ಟ ಜಾತಿ, ಪಂಗಡದವರ ಜಾಗ ಕಬಳಿಸಿದ ಸಚಿವ ಸುಧಾಕರ್ ಅವರನ್ನು ರಕ್ಷಿಸುವ

ಕರಾವಳಿ ಸೇರಿದಂತೆ ಇಡೀ ರಾಜ್ಯಕ್ಕೆ ಬರ ಘೋಷಿಸಲು ನಳಿನ್ ಒತ್ತಾಯ | ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ ರಾಜ್ಯಾಧ್ಯಕ್ಷ Read More »

ಸೆ. 17: ಮಾಣಿಲ ಮುರವ ಶಾಲೆಯಲ್ಲಿ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ

ವಿಟ್ಲ: ಮಾಣಿಲ ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗದ ಆಶ್ರಯದಲ್ಲಿ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ಸೆ. 17ರಂದು ಮಾಣಿಲ ಮುರವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಮಾಣಿಲ ಹಾಗೂ ಪೆರುವಾಯಿ ಗ್ರಾಮದ ವ್ಯಾಪ್ತಿಗೆ ಒಳಪಡುವ ಮುರವ, ತಾರೀಧಳ, ಪಕಳಕುಂಜ, ಪೆರುವಾಯಿ, ಶಿರಾಂಕಲ್ಲು ಭಾಗದ ಆಟಗಾರರಿಗೆ ಈ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ತಂಡವನ್ನು ಸ್ಥಳದಲ್ಲೇ ರಚಿಸಲಾಗುವುದು ಎಂದು ಗೆಳೆಯರ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.

ಸೆ. 17: ಮಾಣಿಲ ಮುರವ ಶಾಲೆಯಲ್ಲಿ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ Read More »

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಚೈತ್ರಾ ಕುಂದಾಪುರ ಪ್ರಕರಣ | ಕುತೂಹಲ ಮೂಡಿಸಿದ ಮಾಜಿ ಸಿಎಂ, ಗೃಹ ಮಂತ್ರಿಯಾದಿಯಾಗಿ ಹೇಳಿಕೆಗಳ ಸಾಲು | ಅಷ್ಟಕ್ಕೂ ಯಾರೀ ಚೈತ್ರಾ ಕುಂದಾಪುರ? ಹಿನ್ನೆಲೆ ಗೊತ್ತಾ?

ಬೆಂಗಳೂರು: ಚೈತ್ರಾ ಕುಂದಾಪುರ ಬಂಧನ ರಾಜ್ಯ ರಾಜಕೀಯದ ಹಲವು ವಿಚಾರಗಳತ್ತ ಕೈತೋರಿಸುವಂತಿದೆ. ರಾಜ್ಯದ ಸುದ್ದಿ ವಾಹಿನಿಗಳು ಇಡೀ ದಿನ ಚೈತ್ರಾ ಪ್ರಕರಣದ ಬೆನ್ನಿಗೆ ಬಿದ್ದಿದ್ದು, ಹೊಸ ಹೊಸ ವಿಚಾರಗಳು ಹೊರ ಬರತೊಡಗಿವೆ. ಇದೆಲ್ಲದರ ನಡುವೆ ಚೈತ್ರಾ ಕುಂದಾಪುರ ಅವರ ಕೌಟುಂಭಿಕ ಹಿನ್ನೆಲೆಯೂ ಕುತೂಹಲದ ಕೇಂದ್ರ ಬಿಂದುವಾಗಿದೆ. ಬಡತನದ ಕುಟುಂಬದ ಹಿನ್ನೆಲೆಯಿರುವ ಚೈತ್ರಾ ಅವರ ತಂದೆ ಹಾಗೂ ತಾಯಿ, ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹೈನುಗಾರಿಕೆ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಈ ಬಡತನದಿಂದ ಹೊರಬಂದು, ಕೋಟ್ಯಧಿಪತಿಯಾಗುವ ಕನಸು ಕಂಡರೇ

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಚೈತ್ರಾ ಕುಂದಾಪುರ ಪ್ರಕರಣ | ಕುತೂಹಲ ಮೂಡಿಸಿದ ಮಾಜಿ ಸಿಎಂ, ಗೃಹ ಮಂತ್ರಿಯಾದಿಯಾಗಿ ಹೇಳಿಕೆಗಳ ಸಾಲು | ಅಷ್ಟಕ್ಕೂ ಯಾರೀ ಚೈತ್ರಾ ಕುಂದಾಪುರ? ಹಿನ್ನೆಲೆ ಗೊತ್ತಾ? Read More »

ಸಹಾಯಕ ಆಯುಕ್ತೆಗೆ ಜೈಲು ವಿಧಿಸಿದ ಲೋಕಾಯುಕ್ತ ನ್ಯಾಯಾಲಯ | ಉಪತಹಸೀಲ್ದಾರ್ ಶಬ್ಬೀರಿಗೂ ಜೈಲು

ಬೆಂಗಳೂರು: ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ತಬಸ್ಸುಮ್ ಜಹೇರಾ ಹಾಗೂ ಬೆಳ್ಳಾವಿ ಉಪ ತಹಸೀಲ್ದಾರ್ ಶಬ್ಬೀರ್ ಅಹಮದ್ ಅವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ವಿಶೇಷ ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿದೆ. ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಲಂಚ ಕೇಳಿದ ಹಾಗೂ ಸ್ವೀಕರಿಸಿದ ಪ್ರಕರಣದಲ್ಲಿ ತಬಸ್ಸುಮ್ ಜಹೇರಾ ಹಾಗೂ ಶಬ್ಬೀರ್ ಅಹಮದ್ ಅವರನ್ನು ದೋಷಿ ಎಂದು ನ್ಯಾಯಾಲಯ ಆದೇಶ ನೀಡಿತ್ತು. ಇದೀಗ ಶಿಕ್ಷೆಯ ಪ್ರಮಾಣವನ್ನು ಪ್ರಕಟ ಮಾಡಿದೆ. ಇಬ್ಬರಿಗೂ 4 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿ

ಸಹಾಯಕ ಆಯುಕ್ತೆಗೆ ಜೈಲು ವಿಧಿಸಿದ ಲೋಕಾಯುಕ್ತ ನ್ಯಾಯಾಲಯ | ಉಪತಹಸೀಲ್ದಾರ್ ಶಬ್ಬೀರಿಗೂ ಜೈಲು Read More »

ಕಾಡಿಗಟ್ಟಿದ್ದ ಕಾಡಾನೆಗಳ ಮುಗಿಯದ ಕಾಟ! | ಬುಧವಾರ ರಾತ್ರಿ ಅರಣ್ಯ ಇಲಾಖೆ ಕಾರ್ಯಾಚರಣೆ, ಗುರುವಾರ ಬೆಳಿಗ್ಗೆ ನಾಡಿನಲ್ಲಿ ಆನೆಗಳ ಕಾರ್ಯಾಚರಣೆ!!

ಬೆಳ್ತಂಗಡಿ: ಕಾಡಿಗಟ್ಟಿದ್ದಷ್ಟು ನಾಡಿಗೆ ದಾಳಿ ಇಡುವ ಆನೆಗಳ ಪರಾಕ್ರಮ ಮತ್ತೆ ಮುಂದುವರಿದಿದೆ. ಧರ್ಮಸ್ಥಳದ ಕಾಡಂಚಿನ ನಾಡಿಗೆ ಆನೆಗಳ ದಾಳಿ ಹೆಚ್ಚಾದಾಗ, ಅರಣ್ಯ ಇಲಾಖೆ ಆನೆಗಳನ್ನು ಕಾಡಿಗಟ್ಟುವ ಕೆಲಸ ನಿರ್ವಹಿಸಿದ್ದವು. ಆದರೆ ಹೀಗೆ ಅಟ್ಟಿದ ಕಾಡಾನೆಗಳು ಗುರುವಾರ ಬೆಳಿಗ್ಗೆ ಧರ್ಮಸ್ಥಳ ಆಸುಪಾಸಿನಲ್ಲಿ ಪ್ರತ್ಯಕ್ಷವಾಗಿವೆ. ಮಂಗಳವಾರ ರಾತ್ರಿ ಕಾಡಾನೆಗಳ ಹಿಂಡು ಧರ್ಮಸ್ಥಳದ ಕೆಲ ತೋಟಗಳಿಗೆ ನುಗ್ಗಿ, ಹಾಳು ಗೆಡವಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ, ಅರಣ್ಯ ಇಲಾಖೆ ಡಿಆರ್ ಎಫ್ಒ ಹರಿಪ್ರಸಾದ್, ರಾಜೇಶ್, ಗಸ್ತು ಪಾಲಕರಾದ ಸಂತೋಷ,

ಕಾಡಿಗಟ್ಟಿದ್ದ ಕಾಡಾನೆಗಳ ಮುಗಿಯದ ಕಾಟ! | ಬುಧವಾರ ರಾತ್ರಿ ಅರಣ್ಯ ಇಲಾಖೆ ಕಾರ್ಯಾಚರಣೆ, ಗುರುವಾರ ಬೆಳಿಗ್ಗೆ ನಾಡಿನಲ್ಲಿ ಆನೆಗಳ ಕಾರ್ಯಾಚರಣೆ!! Read More »

ಸೆ. 17ರಂದು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಪುತ್ತೂರು ಘಟಕದ ಉದ್ಘಾಟನೆ | ಮಾಸ್ಟರ್ ಪ್ಲಾನರಿಯ ಸ್ಟಾಪಕ ಎಸ್.ಕೆ. ಆನಂದ್ ಅವರಿಗೆ ಸನ್ಮಾನ

ಪುತ್ತೂರು: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಇದರ ಪುತ್ತೂರು ಘಟಕದ ಉದ್ಘಾಟನಾ ಸಮಾರಂಭ ಸೆ. 17ರಂದು ಪುತ್ತೂರಿನ ಪಡೀಲ್ ಟ್ರಿನಿಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಎಸಿಸಿಇ) ಪುತ್ತೂರು ಘಟಕದ ಚೆಯರ್ ಮ್ಯಾನ್ ಪ್ರಮೋದ್ ಕುಮಾರ್ ಕೆ.ಕೆ. ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸಿಸಿಇ ರಾಷ್ಟ್ರಮಟ್ಟದ ಸಂಸ್ಥೆಯಾಗಿದ್ದು, ಬೆಂಗಳೂರಿನಲ್ಲಿ 1985ರಲ್ಲಿ ಆರಂಭಗೊಂಡಿತು. ರಾಷ್ಟ್ರವ್ಯಾಪಿ ಸುಮಾರು 44 ಸೆಂಟರ್ ಕಾರ್ಯಾಚರಿಸುತ್ತಿದ್ದು, ಪುತ್ತೂರಿನಲ್ಲಿಯೂ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. ಇದು ಪುತ್ತೂರು, ಬೆಳ್ತಂಗಡಿ,

ಸೆ. 17ರಂದು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಪುತ್ತೂರು ಘಟಕದ ಉದ್ಘಾಟನೆ | ಮಾಸ್ಟರ್ ಪ್ಲಾನರಿಯ ಸ್ಟಾಪಕ ಎಸ್.ಕೆ. ಆನಂದ್ ಅವರಿಗೆ ಸನ್ಮಾನ Read More »

ನಾಪತ್ತೆಯಾಗಿದ್ದ ಗ್ರಾಪಂ ಕಾರ್ಯದರ್ಶಿ ಮನೆಗೆ ಆಗಮನ! | ಗ್ರೇಡ್ 1 ಕಾರ್ಯದರ್ಶಿಯ ನಾಪತ್ತೆಗೆ ಕಾರಣವೇನು?

ಬಂಟ್ವಾಳ: ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಮ ಪಂಚಾಯಿತಿ ಸಿಬ್ಬಂದಿಯೊಬ್ಬರು ವೇಣೂರಿನಲ್ಲಿ ಪತ್ತೆಯಾಗಿದ್ದು, ಇದೀಗ ಮನೆ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯಿತಿಯಲ್ಲಿ ಗ್ರೇಡ್ 1 ಕಾರ್ಯದರ್ಶಿಯಾಗಿದ್ದ ಬಂಟ್ವಾಳ ತಾಲೂಕಿನ ಲಕ್ಷ್ಮೀನಾರಾಯಣ ಆಚಾರ್ಯ ಎಂಬವರು ನಾಪತ್ತೆಯಾಗಿದ್ದು ಅವರ ಮೊಬೈಲ್ ವಾಲ್ಪಾಡಿಯ ಕೊಯಕ್ಕುಡೆ ಚಡಾವ್ ಎಂಬಲ್ಲಿ ಪತ್ತೆಯಾಗಿತ್ತು. ನಾಪತ್ತೆ ಕುರಿತು ಅವರ ಪತ್ನಿ ವಂದನಾ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹುಡುಕಾಟಕ್ಕಿಳಿದ ಪೊಲೀಸರು ಅವರ ಮೊಬೈಲ್ ಲೊಕೇಶನ್ ಹಾಕಿದಾಗ ವಾಲ್ಪಾಡಿ ಕೊಯಕುಡೆ ಚಡಾವ್ ತೋರಿಸುತ್ತಿತ್ತು.

ನಾಪತ್ತೆಯಾಗಿದ್ದ ಗ್ರಾಪಂ ಕಾರ್ಯದರ್ಶಿ ಮನೆಗೆ ಆಗಮನ! | ಗ್ರೇಡ್ 1 ಕಾರ್ಯದರ್ಶಿಯ ನಾಪತ್ತೆಗೆ ಕಾರಣವೇನು? Read More »

KGF ಸ್ಟಾರ್ ಯಶ್ ಹೊಸ ಸಿನಿಮಾ! | ನಿಗದಿಯಾಗಿದೆ ಸಿನಿಮಾ ಹೆಸರು ಘೋಷಣೆಯ ದಿನಾಂಕ | ಐತಿಹಾಸಿಕ ಚಿತ್ರವೊಂದಕ್ಕೂ ಕಮಿಟ್ ಆಗಿದ್ದಾರೆಯೇ ಯಶ್?

ಬೆಂಗಳೂರು: ಕೆಜಿಎಫ್ ಸಿನಿಮಾದ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಸ್ಯಾಂಡಲ್’ವುಡ್ ಸ್ಟಾರ್ ನಟ ಯಶ್ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿರುವುದು ಪಕ್ಕಾ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಗಣೇಶೋತ್ಸವದಂದು ಯಶ್ ಅವರ ಹೊಸ ಸಿನಿಮಾದ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ. ಮಲಯಾಳಂ ಫಿಲ್ಮ್ ಮೇಕರ್ ಗೀತು ಮೋಹನ್’ದಾಸ್ ಹಾಗೂ ನಟ ಯಶ್ ಅವರ ಸಂಯೋಜನೆ ಸಿನಿಮಾದ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಮುಂದಿನ ವರ್ಷ ಅಥವಾ ಡಿಸೆಂಬರ್ ವೇಳೆಗೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಓಡಾಡುತ್ತಿವೆ.

KGF ಸ್ಟಾರ್ ಯಶ್ ಹೊಸ ಸಿನಿಮಾ! | ನಿಗದಿಯಾಗಿದೆ ಸಿನಿಮಾ ಹೆಸರು ಘೋಷಣೆಯ ದಿನಾಂಕ | ಐತಿಹಾಸಿಕ ಚಿತ್ರವೊಂದಕ್ಕೂ ಕಮಿಟ್ ಆಗಿದ್ದಾರೆಯೇ ಯಶ್? Read More »

ರೋಹಿಣೆ ಸಿಂಧೂರಿಗೆ ಕೊನೆಗೂ ಹುದ್ದೆ! | 6 ತಿಂಗಳ ಬಳಿಕ ನೀಡಿದ ಹುದ್ದೆಯಾದರೂ ಯಾವುದು?

ಬೆಂಗಳೂರು: ಬರೋಬ್ಬರಿ ಆರು ತಿಂಗಳ ಬಳಿಕ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸರಕಾರ ಹುದ್ದೆ ನಿಯೋಜನೆ ಮಾಡಿದೆ. ಬುಧವಾರ ರಾಜ್ಯದ ಹಲವು ಐಎಎಸ್‌ ಅಧಿಕಾರಿಗಳ ವರ್ಗಾವಣೆಯಾಗಿದೆ. ಈ ವೇಳೆ ಹಲವು ದಿನಗಳಿಂದ ಹುದ್ದೆಗಾಗಿ ಕಾದು ಕುಳಿತಿದ್ದ ರೋಹಿಣಿ ಸಿಂಧೂರಿ ಅವರಿಗೆ ಹುದ್ದೆ ನಿಯೋಜನೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಈಗಿನಿಂದ ಮುಂದಿನ ಆದೇಶದವರೆಗೂ ಅವರು ಕರ್ನಾಟಕ ಗೆಜೆಟಿಯರ್‌ ಇಲಾಖೆಯ ಮುಖ್ಯ ಸಂಪಾದಕರು ಹುದ್ದೆ ನಿರ್ವಹಿಸುವಂತೆ ಸೂಚಿಸಲಾಗಿದೆ. ಕಳೆದ ಕೆಲ ತಿಂಗಳ ಹಿಂದೆ ರೋಹಿಣಿ ಸಿಂಧೂರಿ ಹಾಗೂ

ರೋಹಿಣೆ ಸಿಂಧೂರಿಗೆ ಕೊನೆಗೂ ಹುದ್ದೆ! | 6 ತಿಂಗಳ ಬಳಿಕ ನೀಡಿದ ಹುದ್ದೆಯಾದರೂ ಯಾವುದು? Read More »

error: Content is protected !!
Scroll to Top