ತಾಲೂಕಿನ 14 ಮಂದಿಗೆ ಎಂಡೋ ಮಾಸಾಶನ : ಶಾಸಕ ಅಶೋಕ್ ರೈ ಶಿಫಾರಸ್ಸು

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಶಿಫಾರಸ್ಸಿನಂತೆ ಪುತ್ತೂರು ತಾಲೂಕಿನ 14 ಮಂದಿಗೆ ಎಂಡೋ ಮಾಸಾಶನಕ್ಕೆ ವಿತರಣೆಗೆ ಆದೇಶವಾಗಿದೆ. ಕಳೆದ ಹಲವು ವರ್ಷಗಳ ಹಿಂದೆ ಮಾಸಾಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಮಾಸಾಶನ ಬಂದಿರಲಿಲ್ಲ. ಇಲಾಖೆಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕಳೆದ ಎರಡು ತಿಂಗಳ ಹಿಂದೆ ಈ ಬಗ್ಗೆ ಎಂಡೋ ಪೀಡಿತ ಮಕ್ಕಳ ಪೋಷಕರು ಶಾಸಕರಲ್ಲಿ ಈ ವಿಚಾರವನ್ನು ತಿಳಿಸಿದ್ದರು. ಎಂಡೋ ಮಾಸಾಶನಕ್ಕಾಗಿ ಅರ್ಜಿ ಹಾಕಿದ ಎಲ್ಲಾ ಫಲಾನುಭವಿಗಳ ಮಾಹಿತಿಯನ್ನು ಪಡೆದುಕೊಂಡ ಶಾಸಕರು ಅರ್ಹತೆ ಹೊಂದಿರುವ ಎಲ್ಲರಿಗೂ ತಕ್ಷಣವೇ ಮಾಸಾಶನವನ್ನು […]

ತಾಲೂಕಿನ 14 ಮಂದಿಗೆ ಎಂಡೋ ಮಾಸಾಶನ : ಶಾಸಕ ಅಶೋಕ್ ರೈ ಶಿಫಾರಸ್ಸು Read More »

ಕಡಬ ಗೌಡ ಸಮುದಾಯ ಭವನ ಶಿಲಾನ್ಯಾಸದ ಪೂರ್ವಭಾವಿ ಸಭೆ | ಡಿ. 26ರಂದು ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ದಚಿತ್ರ ಸಹಿತ ಭವ್ಯ ವಾಹನ ಜಾಥಾ, ಹೊರೆಕಾಣಿಕೆ

ಪುತ್ತೂರು: ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಳಕೆಗೆ ಸಿಗುವಂತಹ ಭವನವನ್ನು ನಿರ್ಮಾಣ ಮಾಡುವ ಕನಸು ನನಸಾಗುತ್ತಿದೆ. ಇಂತಹ ಭವನದ ಶಂಕುಸ್ಥಾಪನೆಗೆ ಇನ್ನು ಕೇವಲ 1 ತಿಂಗಳು ಮಾತ್ರ ಇರುವುದು. ಈ ಸಣ್ಣ ಅವಧಿಯಲ್ಲಿ ಸೂಕ್ತ ಕಾರ್ಯಯೋಜನೆ ಸಿದ್ಧಪಡಿಸಿ, ಎಲ್ಲರೂ ಒಂದಾಗಿ ಜಾರಿಗೊಳಿಸಿದರೆ ಯಶಸ್ಸು ಖಂಡಿತಾ ಎಂದು ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಹೇಳಿದರು. ಕಡಬ ವಲಯ ಸಮುದಾಯ ಭವನದಲ್ಲಿ ಶನಿವಾರ ನಡೆದ ಸುಸಜ್ಜಿತ ನೂತನ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭ, ಕಡಬ ತಾಲೂಕು

ಕಡಬ ಗೌಡ ಸಮುದಾಯ ಭವನ ಶಿಲಾನ್ಯಾಸದ ಪೂರ್ವಭಾವಿ ಸಭೆ | ಡಿ. 26ರಂದು ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ದಚಿತ್ರ ಸಹಿತ ಭವ್ಯ ವಾಹನ ಜಾಥಾ, ಹೊರೆಕಾಣಿಕೆ Read More »

ನಾಪತ್ತೆಯಾಗಿದ್ದ ಅಬೂಬಕ್ಕರ್ ಅಬೀಲ್‍ ಮೈಸೂರಿನಲ್ಲಿ ಪತ್ತೆ

ಬೆಳ್ಳಾರೆ: ನ.9 ರಂದು ಕಾಣೆಯಾಗಿದ್ದ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ಹನೀಪ್ ಇಂದ್ರಾಜೆ ಅವರ ಪುತ್ರ, ತಲಪಾಡಿ ಬಿಲಾಲ್ ಮಸೀದಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಮೈಸೂರಿನಲ್ಲಿ ಪತ್ತೆಯಾಗಿದ್ದಾನೆ. ನ.9 ರಂದು ಸಂಜೆಯಿಂದ ಈತ ಕಾಣೆಯಾಗಿದ್ದು, ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ಮದ್ರಸ ಶಿಕ್ಷಣದ ಜತೆಗೆ ಶಾಲಾ ಶಿಕ್ಷಣ ಪಡೆಯುತಿದ್ದ. ಎಂಟನೇ ತರಗತಿಯ ವಿದ್ಯಾರ್ಥಿ ಆಗಿರುವ ಈತ ಗುರುವಾರ ಸಂಜೆ ಶಾಲೆಯಿಂದ ಮಸೀದಿಗೆ ಬಂದಿದ್ದು, ಅಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲ. ಪೋಷಕರು ಉಳ್ಳಾಲ

ನಾಪತ್ತೆಯಾಗಿದ್ದ ಅಬೂಬಕ್ಕರ್ ಅಬೀಲ್‍ ಮೈಸೂರಿನಲ್ಲಿ ಪತ್ತೆ Read More »

ಎನ್‍ ಕೌಂಟರ್ ಗೆ ರಶೀದ್ ಕಾಲಿಯಾ ಬಲಿ

ಉತ್ತರಪ್ರದೇಶ: 40 ಕೊಲೆ ಪ್ರಕರಣ ಆರೋಪ ಎದುರಿಸುತ್ತಿದ್ದ ರಶೀದ್ ಕಾಲಿಯಾನನ್ನು  ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಶನಿವಾರ ಹತ್ಯೆ ಮಾಡಿದೆ. ಝಾನ್ಸಿ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ರಶೀದ್‌ ಕಾಲಿಯಾನನ್ನು ಹತ್ಯೆ ಮಾಡಲಾಗಿದೆ. ಪೊಲೀಸರು ಆತನ ತಲೆಗೆ 1.25 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಉತ್ತರ ಪ್ರದೇಶ ಪೊಲೀಸ್ ಮೂಲಗಳ ಪ್ರಕಾರ, ಕಾಲಿಯಾ ಝಾನ್ಸಿ ಜಿಲ್ಲೆಯ ಮೌರಾನಿಪುರದಲ್ಲಿ ಸುಪಾರಿ ಹತ್ಯೆಗಾಗಿ ಆಗಮಿಸಿದ್ದ ವೇಳೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಮೌರಾನಿಪುರದಲ್ಲಿ ಕಾಲಿಯಾ ಇರುವಿಕೆಯ ಬಗ್ಗೆ ಮಾಹಿತಿ

ಎನ್‍ ಕೌಂಟರ್ ಗೆ ರಶೀದ್ ಕಾಲಿಯಾ ಬಲಿ Read More »

ವಿಶ್ವಕಪ್ : ನಾಳೆ ನಡೆಯಲಿದೆ ಭಾರತ-ಆಸ್ಟ್ರೇಲಿಯಾ ನಡುವೆ ಜಿದ್ದಾಜಿದ್ದಿನ ಸೆಣಸಾಟ | ಭಾರತದ ಗೆಲುವಿಗಾಗಿ ಪೂಜೆ-ಪುನಸ್ಕಾರಗಳು, ಶುಭ ಹಾರೈಕೆಗಳು

ಬೆಂಗಳೂರು: ಭಾನುವಾರ ವಿಶ್ವದ ಅತೀ ದೊಡ್ಡ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾಟ ಭಾರತ ಹಾಗೂ ಆಸ್ಟ್ರೇಲಿಯ ತಂಡಗಳ ನಡುವೆ ನಡೆಯಲಿದ್ದು, ಒಂದೆಡೆ ಭಾರತದ ಆಟಗಾರರು ಸತತ ಅಭ್ಯಾಸದಲ್ಲಿ ತೊಡಗಿಕೊಂಡಿದ್ದರೆ, ಇನ್ನೊಂದೆಡೆ ಭಾರತ ತಂಡದ ಗೆಲುವಿಗಾಗಿ ದೇವಸ್ಥಾನಗಳಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಬೆಂಗಳೂರಿನ ನಿಮಿಷಾಂಭ ದೇವಾಲಯದಲ್ಲಿ ಭಾರತ ಗೆಲುವಿಗಾಗಿ ವಿಶೇಷ ಹೋಮ ಹವನಗಳನ್ನು ನಡೆಸಲಾಗುತ್ತಿದೆ. ಮತ್ತೊಂದೆಡೆ ಕಾಪು ಕಡಲ ಕಿನಾರೆಗಳಲ್ಲಿ ಭಾರತ ಗೆಲುವಿಗಾಗಿ ಮರಳಿನಲ್ಲಿ ವಿಶ್ವಕಪ್ ಹೋಲುವ ಶಿಲ್ಪಗಳನ್ನು ರಚಿಸಿ ಶುಭ ಹಾರೈಸುವ

ವಿಶ್ವಕಪ್ : ನಾಳೆ ನಡೆಯಲಿದೆ ಭಾರತ-ಆಸ್ಟ್ರೇಲಿಯಾ ನಡುವೆ ಜಿದ್ದಾಜಿದ್ದಿನ ಸೆಣಸಾಟ | ಭಾರತದ ಗೆಲುವಿಗಾಗಿ ಪೂಜೆ-ಪುನಸ್ಕಾರಗಳು, ಶುಭ ಹಾರೈಕೆಗಳು Read More »

ಪಿಸ್ತುಲ್ ತೋರಿಸಿ ಶೋ ಮಾಡಿದ ಭೂಪ : ಮುಂದೆ ಏನಾಯ್ತು ನೋಡಿ! !

ಉತ್ತರ ಪ್ರದೇಶ, ಘಝಿಯಾಬಾದ್: ವ್ಯಕ್ತಿ ಒಬ್ಬರು ತನ್ನ ಕಾರಿನ ಕಿಟಕಿ ಮೂಲಕ ನಗರದಲ್ಲಿ ಪಿಸ್ತುಲ್ ತೋರಿಸಿ ರೋಡ್ ಶೋ ಮಾಡಿರುವ ದೃಶ್ಯ ವೈರಲ್ ಆಗಿದೆ. ಉತ್ತರಪ್ರದೇಶದ NH 24 ಸಿದ್ದಾರ್ಥ್ ವಿಹಾರ ಪ್ರದೇಶದಲ್ಲಿ ಶುಕ್ರವಾರದಂದು ಟಾಟಾ ಪಂಚ್ ಕಾರ್ ನಲ್ಲಿ ಡ್ರೈವರ್ ಪಕ್ಕದ ಸೀಟ್ ನಲ್ಲಿ ಕೂತಿದ್ದ ವ್ಯಕ್ತಿ ಒಬ್ಬರು ಪಿಸ್ತುಲ್ ತೋರಿಸುವುದರ ಮೂಲಕ ತನ್ನ ಹುಚ್ಚಾಟವನ್ನು ಪ್ರದರ್ಶಿಸಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವೀಡಿಯೋ ತಿಳಿದ ಪೊಲೀಸರು ಕೃತ್ಯ ಎಸಗಿದ ಟಾಟಾ ಪಂಚ್ ಕಾರನ್ನು ವಶಕ್ಕೆ

ಪಿಸ್ತುಲ್ ತೋರಿಸಿ ಶೋ ಮಾಡಿದ ಭೂಪ : ಮುಂದೆ ಏನಾಯ್ತು ನೋಡಿ! ! Read More »

ತಾಳೆ ಮರದಿಂದ ಬಿದ್ದು ಮೃತ್ಯು

ಕೊಳ್ತಿಗೆ: ತಾಳೆ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೊಳ್ತಿಗೆಯಲ್ಲಿ ನಡೆದಿದೆ. ಕೊಳ್ತಿಗೆ ಗ್ರಾಮದ ಪಾಂಬಾರು ನಿವಾಸಿ ಜಯಂತ ಪೂಜಾರಿ ಮೃತಪಟ್ಟವರು. ತಾಳೆ ಮರಕ್ಕೆ ಏರಿ ಮೂರ್ತೆ ಮಾಡುವ ಸಂದರ್ಭದಲ್ಲಿ ಆಯತಪ್ಪಿ ಕೆಳಕ್ಕೆ ಬಿದ್ದ ಜಯಂತ ಪೂಜಾರಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.  ಮೃತರು ಪತ್ನಿ,ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ತಾಳೆ ಮರದಿಂದ ಬಿದ್ದು ಮೃತ್ಯು Read More »

ತೆಂಗಿನ ಮರವನ್ನು ಪೋಷಿಸಿದರೆ ಭವಿಷ್ಯದ ಪೀಳಿಗೆ ಉಳಿಸಲು ಸಾಧ್ಯ | ಸೌತ್ ಕೆನರಾ ತೆಂಗು ರೈತರ ಉತ್ಪಾದಕ ಕಂಪೆನಿ ಲಿಮಿಟೆಡ್ ನ ಪ್ರಾದೇಶಿಕ ಕಚೇರಿ ಉದ್ಘಾಟಿಸಿ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ

ಮಂಗಳೂರು: : ಸೌತ್ ಕೆನರಾ ತೆಂಗು ರೈತರ ಉತ್ಪಾದಕ ಕಂಪೆನಿ ಲಿಮಿಟೆಡ್ ನ ಪ್ರಾದೇಶಿಕ ಕಚೇರಿ ಉದ್ಘಾಟನಾ ಸಮಾರಂಭ ಗುರುವಾರ ಮರೋಳಿಯಲ್ಲಿ ನಡೆಯಿತು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠ ಡಾ.ಧರ್ಮಪಾಲನಾಥ ಸ್ವಾಮೀಜಿ ಪ್ರಾದೇಶಿಕ ಕಚೇರಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ತೆಂಗಿನ ಮರಗಳು ದೈವಿಕ ಸೃಷ್ಟಿಯಾಗಿದ್ದು, ಮಾಹಿತಿಯ ಕೊರತೆಯಿಂದ ನಾವು ಆಗಾಗ್ಗೆ ಅವುಗಳ ಮೌಲ್ಯವನ್ನು ಕಡಿಮೆ ಮಾಡುತ್ತೇವೆ. ತೆಂಗಿನಕಾಯಿಯು ಹಲವಾರು ಉಪ ಉತ್ಪನ್ನಗಳನ್ನು ನೀಡುತ್ತದೆ. ಯಾವುದೇ ತ್ಯಾಜ್ಯವನ್ನು ಬಿಡುವುದಿಲ್ಲ. ನಾವು ಐದು ವರ್ಷಗಳ ಕಾಲ ತೆಂಗಿನ ಮರಗಳನ್ನು

ತೆಂಗಿನ ಮರವನ್ನು ಪೋಷಿಸಿದರೆ ಭವಿಷ್ಯದ ಪೀಳಿಗೆ ಉಳಿಸಲು ಸಾಧ್ಯ | ಸೌತ್ ಕೆನರಾ ತೆಂಗು ರೈತರ ಉತ್ಪಾದಕ ಕಂಪೆನಿ ಲಿಮಿಟೆಡ್ ನ ಪ್ರಾದೇಶಿಕ ಕಚೇರಿ ಉದ್ಘಾಟಿಸಿ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ Read More »

ಗುರುಂಪುನಾರ್ ಕರಿಕಲ್ಲ ಮೂರ್ತಿ ಭಕ್ತಿಗೀತೆ ಬಿಡುಗಡೆ

ಪುತ್ತೂರು: ಪಡ್ನೂರಿನ ಗುರುಂಪುನಾರ್ ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವ ಸನ್ನಿಧಿ ಕುರಿತ ಕರಿಕಲ್ಲ ಮೂರ್ತಿ ಪ್ರಥಮ ಭಕ್ತಿಗೀತೆ ಬಿಡುಗಡೆ ದೈವ ಸನ್ನಿಧಿಯಲ್ಲಿ ನಡೆಯಿತು. ಯುವ ಸಾಹಿತಿ ಮೋಹನ್ ದರ್ಬೆತ್ತಡ್ಕ ಗೀತೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಗುರುಂಪುನಾರ್ ಪೂವಪ್ಪ ಮೇಸ್ತ್ರ ಅವರ ಶುಭ ಆಶೀರ್ವಾದದೊಂದಿಗೆ ಸ್ಥಳ ಸಾನಿಧ್ಯದ ಪ್ರಥಮ ಭಕ್ತಿಗೀತೆ ಪ್ರಶಾಂತ್ ಗುರುಂಪುನಾರ್ ಹಾಗೂ ಭರತ್ ಗುರುಂಪುನಾರ್ ಅವರ ನಿರ್ಮಾಣದಲ್ಲಿ, ಕೇಶವ ಗುರುಂಪುನಾರ್ ಅವರ ಮಾರ್ಗದರ್ಶನದಲ್ಲಿ ಭಕ್ತಿಗೀತೆ ಮೂಡಿ ಬಂದಿದೆ. ಸಾಹಿತ್ಯ – ನವೀನ್ ಎಂ, ಗಾಯನ –

ಗುರುಂಪುನಾರ್ ಕರಿಕಲ್ಲ ಮೂರ್ತಿ ಭಕ್ತಿಗೀತೆ ಬಿಡುಗಡೆ Read More »

ಬೆಂಕಿ ತಗುಲಿ ಹಿರಿಯ ನಾಗರಿಕೆ ಸಾವು!!

ಮಂಗಳೂರು: ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಹಿರಿಯ ನಾಗರಿಕರೋರ್ವರು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೂಳೂರು ಪೊಯ್ಯೇಲು ನಿವಾಸಿ ದಿ. ಮದನಪ್ಪ ಶೆಟ್ಟಿ ಅವರ ಪತ್ನಿ ಸುನೀತಾ ಎಂ. (84) ಮೃತಪಟ್ಟವರು. ನವಂಬರ್ 14ರಂದು ದೇವರ ಕೋಣೆಯಲ್ಲಿಟ್ಟಿದ್ದ ದೀಪದಿಂದ ಸೀರೆಗೆ ಬೆಂಕಿ ಹತ್ತಿಕೊಂಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬೆಂಕಿ ತಗುಲಿ ಹಿರಿಯ ನಾಗರಿಕೆ ಸಾವು!! Read More »

error: Content is protected !!
Scroll to Top