ಗಾಜಾಗೆ ವಿಶ್ವಸಂಸ್ಥೆಯಿಂದ ರಾಕೆಟ್ ಪೂರೈಕೆ!!! | ಪರಿಹಾರದ ಬಾಕ್ಸ್’ನಲ್ಲಿ ಅಡಗಿಸಿಟ್ಟಿದ್ದ ರಾಕೆಟ್ ಪತ್ತೆ!!

ಗಾಜಾ: ಗಾಜಾಗೆ ವಿಶ್ವಸಂಸ್ಥೆಯ ಪರಿಹಾರ ಕಾರ್ಯಕ್ರಮ ಏಜೆನ್ಸಿಯಿಂದ ಪೂರೈಕೆಯಾಗುತ್ತಿದ್ದ ಬಾಕ್ಸ್ ಗಳಲ್ಲಿ ರಾಕೆಟ್ ಗಳನ್ನು ಅಡಗಿಸಿ ಇಡಲಾಗಿತ್ತು ಎಂದು ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಆರೋಪಿಸಿದೆ. ತನ್ನ 261ನೇ ಬ್ರಿಗೇಡ್‌ನ ಯುದ್ಧ ತಂಡದ 7007ನೇ ಬೆಟಾಲಿಯನ್‌ನ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ, ಡಜನ್‌ಗಟ್ಟಲೆ ರಾಕೆಟ್‌ಗಳನ್ನು UNRWA (ಗಾಜಾದಲ್ಲಿ ಯುಎನ್ ರಿಲೀಫ್ ವರ್ಕರ್ಸ್ ಏಜೆನ್ಸಿ) ಪೆಟ್ಟಿಗೆಗಳ ಅಡಿಯಲ್ಲಿ ಪತ್ತೆ ಮಾಡಿದೆ. ಪೆಟ್ಟಿಗೆಗಳ ಅಡಿಯಲ್ಲಿ ಸುಮಾರು 30 ಗ್ರಾಡ್ ಕ್ಷಿಪಣಿಗಳು (ರಷ್ಯನ್ ನಿರ್ಮಿತ ಸ್ವಯಂ ಚಾಲಿತ 122 ಎಂಎಂ ಮಲ್ಟಿಪಲ್ ರಾಕೆಟ್ ಲಾಂಚರ್) […]

ಗಾಜಾಗೆ ವಿಶ್ವಸಂಸ್ಥೆಯಿಂದ ರಾಕೆಟ್ ಪೂರೈಕೆ!!! | ಪರಿಹಾರದ ಬಾಕ್ಸ್’ನಲ್ಲಿ ಅಡಗಿಸಿಟ್ಟಿದ್ದ ರಾಕೆಟ್ ಪತ್ತೆ!! Read More »

ರಾಜಸ್ಥಾನ: ಮುಖ್ಯಮಂತ್ರಿ ಹುದ್ದೆ ರೇಸಿನಲ್ಲಿ ವಸುಂಧರಾ ರಾಜೇ ಸಹಿತ 6 ಆಕಾಂಕ್ಷಿಗಳು

ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿಯ ವಿಜಯದ ಬೆನ್ನಲ್ಲೇ ಅಲ್ಲಿ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಆರಂಭಗೊಂಡಿದೆ. ಬಿಜೆಪಿ ರಾಷ್ಟ್ರೀಯ ನಾಯಕತ್ವ ಹೊಸ ಮುಖ್ಯಮಂತ್ರಿ ಹೆಸರನ್ನು ಶೀಘ್ರ ಘೋಷಿಸುವ ಸಾಧ್ಯತೆಯಿದೆ. ಸಿಎಂ ಹುದ್ದೆಗೆ ಪ್ರಸಕ್ತ ಐದು ಪ್ರಮುಖ ಹೆಸರುಗಳು ಕೇಳಿ ಬಂದಿವೆ. ಒಟ್ಟು 199 ಸ್ಥಾನಗಳ ಪೈಕಿ 101 ಮ್ಯಾಜಿಕ್ ನಂಬರ್ ಆಗಿತ್ತು. ಇದರಲ್ಲಿ ಬಿಜೆಪಿ 115 ಸ್ಥಾನ, ಕಾಂಗ್ರೆಸ್ 68 ಸ್ಥಾನ, ಬಹುಜನ್ ಸಮಾಜ ಪಾರ್ಟಿ 2 ಸ್ಥಾನ, ಇತರೆ 13 ಸ್ಥಾನಗಳನ್ನು ಪಡೆದುಕೊಂಡಿದೆ. 2018ರ ಚುನಾವಣೆಯಲ್ಲಿ ಬಿಜೆಪಿ 73

ರಾಜಸ್ಥಾನ: ಮುಖ್ಯಮಂತ್ರಿ ಹುದ್ದೆ ರೇಸಿನಲ್ಲಿ ವಸುಂಧರಾ ರಾಜೇ ಸಹಿತ 6 ಆಕಾಂಕ್ಷಿಗಳು Read More »

ಅತಂತ್ರ ಮುನ್ಸೂಚನೆಯಲ್ಲೂ ಮಿಜೋರಾಂ ಬಿಜೆಪಿ ಮುಖ್ಯಸ್ಥನ ವಿಶ್ವಾಸದ ಮಾತು!

ಮಿಜೋರಾಂನ 40 ವಿಧಾನಸಭಾ ಸ್ಥಾನಗಳ ಮತ ಎಣಿಕೆ ನಡೆಯುತ್ತಿದ್ದು, ಮುಂದಿನ ಸರ್ಕಾರದ ಭಾಗವಾಗಿ ತಮ್ಮ ಪಕ್ಷ ಇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವನ್‌ಲಾಲ್‌ಮುಕಾ ಸೋಮವಾರ ಹೇಳಿದ್ದಾರೆ. ತಮ್ಮ ಪಕ್ಷ ಕನಿಷ್ಠ ಮೂರು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ. ನಾವು ಮೂರು ಸ್ಥಾನ ಗೆಲ್ಲುವುದು ಖಚಿತ, ಐದಕ್ಕಿಂತ ಹೆಚ್ಚು ಸ್ಥಾನಗಳ ನಿರೀಕ್ಷೆಯಲ್ಲಿದ್ದೇವೆ. ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಸದ್ಯದಲ್ಲೇ ರಚನೆಯಾಗಲಿರುವ ಹೊಸ ಸರ್ಕಾರದಲ್ಲಿ ಬಿಜೆಪಿ ಭಾಗವಹಿಸಲಿದೆ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕಳೆದ 2018ರಲ್ಲಿ ನಡೆದ ವಿಧಾನಸಭಾ

ಅತಂತ್ರ ಮುನ್ಸೂಚನೆಯಲ್ಲೂ ಮಿಜೋರಾಂ ಬಿಜೆಪಿ ಮುಖ್ಯಸ್ಥನ ವಿಶ್ವಾಸದ ಮಾತು! Read More »

ತೆಲಂಗಾಣ ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್ | 119ರಲ್ಲಿ 64 ಸ್ಥಾನ ಗೆದ್ದು, ಸರ್ಕಾರ ರಚನೆಗೆ ಹಕ್ಕು ಮಂಡನೆ

ಹೈದರಾಬಾದ್: ತೆಲಂಗಾಣದ 119 ಸ್ಥಾನಗಳ ಪೈಕಿ 64 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ರೇವಂತ್ ರೆಡ್ಡಿ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವಿವಾರ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಶನಿವಾರ, ಶಿವಕುಮಾರ್ ಅವರನ್ನು ತೆಲಂಗಾಣ ರಾಜ್ಯ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರನ್ನಾಗಿ ನೇಮಿಸಲಾಗಿತ್ತು. ಮತ ಎಣಿಕೆಗೆ ಮುಂಚಿತವಾಗಿ ತನ್ನ ಶಾಸಕರನ್ನು ಒಟ್ಟಾಗಿ ಇರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿತ್ತು. ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರನ್ನು ಭೇಟಿ ಮಾಡಿದ

ತೆಲಂಗಾಣ ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್ | 119ರಲ್ಲಿ 64 ಸ್ಥಾನ ಗೆದ್ದು, ಸರ್ಕಾರ ರಚನೆಗೆ ಹಕ್ಕು ಮಂಡನೆ Read More »

ಬಂಟ್ವಾಳ ತಾಲೂಕು ಗೌಡರ ಕ್ರೀಡೋತ್ಸವ | ಬೆಂಗಳೂರು ಕಂಬಳದಲ್ಲಿ ಕೋಣ ಓಡಿಸಿದ ವಿಜೇತರಿಗೆ, ಕ್ರೀಡಾ ಸಾಧಕರಿಗೆ ಸನ್ಮಾನ

ವಿಟ್ಲ: ಇಲ್ಲಿನ ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ, ಬಂಟ್ವಾಳ ತಾಲೂಕು ಗೌಡರ ಮಹಿಳಾ ಘಟಕದ ಸಹಕಾರದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಗೌಡರ ಕ್ರೀಡೋತ್ಸವ ಡಿ. 3ರಂದು ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ರಾಷ್ಟ್ರಧ್ವಜವನ್ನು ವಿಶ್ವ ಮಟ್ಟಕ್ಕೆ ಎತ್ತಿ ತೋರಿಸಲು ಇರುವ ಏಕೈಕ ಕ್ಷೇತ್ರ ಕ್ರೀಡೆ. ಒಲಿಂಪಿಕ್ ಕ್ರೀಡಾಕೂಟದಲ್ಲೂ ಭಾರತದ ತ್ರಿವರ್ಣ ಧ್ವಜವನ್ನು

ಬಂಟ್ವಾಳ ತಾಲೂಕು ಗೌಡರ ಕ್ರೀಡೋತ್ಸವ | ಬೆಂಗಳೂರು ಕಂಬಳದಲ್ಲಿ ಕೋಣ ಓಡಿಸಿದ ವಿಜೇತರಿಗೆ, ಕ್ರೀಡಾ ಸಾಧಕರಿಗೆ ಸನ್ಮಾನ Read More »

ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾಟ : ಲಿಟ್ಲ್ ಫ್ಲವರ್ ಶಾಲಾ ಬಾಲಕಿಯರ ತಂಡ ಪ್ರಥಮ

ಸುಳ್ಯ: ಗುತ್ತಿಗಾರು ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ದರ್ಬೆ ಲಿಟ್ಲ್ ಫ್ಲವರ್ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ತಂಡದ ಜುವೆನ್ನಾ ಡ್ಯಾಝಲ್ ಕುಟಿನ್ಹಾ ಸವ್ಯಾಸಾಚಿ ಆಟಗಾರ್ತಿ, ಜೆನಿಟಾ ಸಿಂಧು ಪಸನ್ನ ಅತ್ತ್ಯುತಮ ಹಿಡಿತಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು. ತಂಡವನ್ನು ಸನ್ನಿಧಿ, ಜಸ್ಮಿತಾ, ಫಾತಿಮತ್ ಶೈಮಾ, ಹಾರ್ದಿಕ, ನಿಶ್ಮಿತಾ, ದೃಶಾ,ಫಾತಿಮತ್ ಅಫ್ರ ಹಾಗೂ ಸುಶ್ರಾವ್ಯ ಪ್ರತಿನಿಧಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ವೆನಿಶಾ ಬಿ ಎಸ್

ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾಟ : ಲಿಟ್ಲ್ ಫ್ಲವರ್ ಶಾಲಾ ಬಾಲಕಿಯರ ತಂಡ ಪ್ರಥಮ Read More »

ಲವ್ ಜಿಹಾದ್ ಗೆ ಒಳಗಾಗುವ ಮಹಿಳೆಯರು ತಮ್ಮ ಭವಿಷ್ಯದ ಕುರಿತು ಗಂಭೀರ ಚಿಂತನೆ ನಡೆಸಬೇಕಾಗಿದೆ : ‘ನಾರೀ ಶಕ್ತಿ ಸಂಗಮ’ ಮಹಿಳಾ ಸಮಾವೇಶದಲ್ಲಿ ಮಾಳವಿಕ ಅವಿನಾಶ್

ಪುತ್ತೂರು: ಪುತ್ತೂರು ಜಿಲ್ಲಾ ಮಹಿಳಾ ಸಮನ್ವಯ ಹಾಗೂ ಕೇಶವ ಸ್ಮೃತಿ ಸಂವರ್ಧನ ಸಮಿತಿ ಜಂಟಿ ಆಶ್ರಯದಲ್ಲಿ ಮಹಿಳೆ ಇಂದು ಮತ್ತು ನಾಳೆ ಕುರಿತು ‘ನಾರಿ ಶಕ್ತಿ ಸಂಗಮ’ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ನಡೆಯಿತು. 2025ನೇ ಇಸವಿಗೆ ಆರ್‌ಎಸ್‌ಎಸ್ ಗೆ 100 ವರ್ಷ ತುಂಬಲಿದ್ದು, ಈ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದಲ್ಲಿ ವೈದ್ಯರು, ವಕೀಲರು, ಅಧ್ಯಾಪಕಿಯರು, ಸ್ವಯಂ ಸೇವಾ ಸಂಸ್ಥೆಯವರು, ಮಹಿಳಾ ಸಂಘಗಳು, ಉದ್ಯೋಗಸ್ಥ ಮಹಿಳೆಯರು, ಗೃಹಿಣಿಯರು, ವಿದ್ಯಾರ್ಥಿನಿಯರು, ಹೋರಾಟಗಾರ್ತಿಯರು ಹೀಗೆ ಸಮಾಜದ ಬೇರೆ

ಲವ್ ಜಿಹಾದ್ ಗೆ ಒಳಗಾಗುವ ಮಹಿಳೆಯರು ತಮ್ಮ ಭವಿಷ್ಯದ ಕುರಿತು ಗಂಭೀರ ಚಿಂತನೆ ನಡೆಸಬೇಕಾಗಿದೆ : ‘ನಾರೀ ಶಕ್ತಿ ಸಂಗಮ’ ಮಹಿಳಾ ಸಮಾವೇಶದಲ್ಲಿ ಮಾಳವಿಕ ಅವಿನಾಶ್ Read More »

ಡಿ.21-24: ಪುತ್ತೂರಿನಲ್ಲಿ ಸಿಪಿಐ(ಎಂ) ರಾಜ್ಯ ಮಟ್ಟದ ಸೈದ್ದಾಂತಿಕ ಅಧ್ಯಯನ ಶಿಬಿರ

ಪುತ್ತೂರು: ಸಿಪಿಐ(ಎಂ) ಪಕ್ಷದ ರಾಜ್ಯ ಮಟ್ಟದ ಸೈದ್ದಾಂತಿಕ ಅದ್ಯಯನ ಶಿಬಿರವು ಡಿ.21 ರಿಂದ 24ರ ತನಕ ಪುತ್ತೂರಿನಲ್ಲಿ ನಡೆಯಲಿದೆ ಎಂದು ಸಿಪಿಐ(ಎಂ) ಪುತ್ತೂರು ತಾಲೂಕು ಕಾರ್ಯದರ್ಶಿ ಪಿ.ಕೆ.ಸತೀಶನ್ ತಿಳಿಸಿದ್ದಾರೆ. ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದ್ದು, ರಾಜ್ಯ ಮಟ್ಟದ ರೈತ, ಕಾರ್ಮಿಕ, ದಲಿತ, ಯುವಜನ ನಾಯಕರುಗಳಿಗೆ ನೀಡುವ ಈ ಸೈದ್ದಾಂತಿಕ ಅದ್ಯಯನ ಶಿಬಿರ ನಡೆಸಲಾಗುವುದು ಎಂದು ತಿಳಿಸಿದರು. ಸ್ವಾಗತ ಸಮಿತಿ ಅದ್ಯಕ್ಷರಾಗಿ ಪುತ್ತೂರು ಪಿಕೆ ಸತೀಶನ್, ಕಾರ್ಯದರ್ಶಿಯಾಗಿ ಬಿ.ಎಂ.ಭಟ್ ಖಜಾಂಜಿಯಾಗಿ ಈಶ್ವರಿ ಮುಂಡೂರು

ಡಿ.21-24: ಪುತ್ತೂರಿನಲ್ಲಿ ಸಿಪಿಐ(ಎಂ) ರಾಜ್ಯ ಮಟ್ಟದ ಸೈದ್ದಾಂತಿಕ ಅಧ್ಯಯನ ಶಿಬಿರ Read More »

ಮೇರ್ಲ ನಿವಾಸಿ ಪ್ರಕಾಶ್ ಶೆಟ್ಟಿ ಆತ್ಮಹತ್ಯೆ

ಪುತ್ತೂರು: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಪ್ಯದಲ್ಲಿ ನಡೆದಿದೆ. ಸಂಪ್ಯ ಮೇರ್ಲ ನಿವಾಸಿ ಪ್ರಕಾಶ್ ಶೆಟ್ಟಿ (46) ಮೃತರು. ಪ್ರಕಾಶ್ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆಯವರು ಬೇರೆ ಕಡೆ ತೆರಳಿದ್ದ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಂಡು ಎರಡು, ಮೂರು ದಿನ ಕಳೆದಿದೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಮಗ ಹಾಗೂ ಮನೆಯವರನ್ನು ಅಗಲಿದ್ದಾರೆ. ಸಂಪ್ಯ ಠಾಣಾ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೇರ್ಲ ನಿವಾಸಿ ಪ್ರಕಾಶ್ ಶೆಟ್ಟಿ ಆತ್ಮಹತ್ಯೆ Read More »

ಸಮಾಜದ ನಿರ್ಮಾಣಕ್ಕೆ ಶಿಕ್ಷಣವೇ ಅಡಿಪಾಯ | ಬೊಳುವಾರಿನಲ್ಲಿ ನಡೆದ ಗುರುಪಾದ ಪೂಜೆಯಲ್ಲಿ ಆನೆಗುಂದಿ ಶ್ರೀ

ಪುತ್ತೂರು: ಶಿಕ್ಷಣ ಎಲ್ಲಾ ವಿಚಾರಗಳಿಗೂ ಮೂಲ. ಆದ್ದರಿಂದ ಸಮುದಾಯ, ಸಮಾಜವನ್ನು ಕಟ್ಟಲು ಶಿಕ್ಷಣವನ್ನೇ ಅಡಿಪಾಯವಾಗಿ ಬಳಸಿಕೊಳ್ಳಬೇಕು ಎಂದು ಆನೆಗುಂದಿ ಸರಸ್ವತೀ ಪೀಠಾಧೀಶ್ವರ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು. ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಭಾನುವಾರ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿದ ಸಾಮೂಹಿಕ ಶ್ರೀ ಗುರುಪಾದ ಪೂಜೆಯಲ್ಲಿ ಅವರು ಆಶೀರ್ವಚನ ನೀಡಿದರು. ಶಿಕ್ಷಣದ ಜೊತೆಗೆ ಸಂಯಮವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಸಂಯಮ ಇದ್ದಾಗ ಮಾತ್ರ ಎಲ್ಲಾ ವ್ಯವಸ್ಥೆಗಳು ನಮ್ಮ ಜೊತೆಗಿರುತ್ತವೆ. ಸಂಯಮದಿಂದ ಯಶಸ್ಸು

ಸಮಾಜದ ನಿರ್ಮಾಣಕ್ಕೆ ಶಿಕ್ಷಣವೇ ಅಡಿಪಾಯ | ಬೊಳುವಾರಿನಲ್ಲಿ ನಡೆದ ಗುರುಪಾದ ಪೂಜೆಯಲ್ಲಿ ಆನೆಗುಂದಿ ಶ್ರೀ Read More »

error: Content is protected !!
Scroll to Top