ಸಹಕಾರ ರತ್ನ ಬಿ. ನಿರಂಜನ ಬಾವಂತಬೆಟ್ಟು ನಿಧನ

ಬೆಳ್ತಂಗಡಿ: ಸಹಕಾರ ರತ್ನ ಬಿ. ನಿರಂಜನ ಬಾವಂತಬೆಟ್ಟು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಬಿ. ನಿರಂಜನ ಅವರು ತಣ್ಣೀರುಪಂಥ ಬಾವಂತಬೆಟ್ಟು ನಿವಾಸಿಯಾಗಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತಣ್ಣೀರುಪಂಥ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆಯಾದ ಆರಂಭದಲ್ಲಿ ಅಧ್ಯಕ್ಷರಾಗಿ ಸುದೀರ್ಘ 41 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ದ. ಕ. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸಿದ್ದರು.  ಮರಿಪಾದೆ ಬ್ರಹ್ಮ […]

ಸಹಕಾರ ರತ್ನ ಬಿ. ನಿರಂಜನ ಬಾವಂತಬೆಟ್ಟು ನಿಧನ Read More »

ಪುತ್ತೂರು ಕೋ ಓಪರೇಟಿವ್ ಟೌನ್‍ ಬ್ಯಾಂಕ್‍ ನಲ್ಲಿ ಗ್ರಾಹಕರ ಸಮಾವೇಶ | ನೂತನ ಬ್ಯಾಂಕಿಂಗ್ ತಂತ್ರಜ್ಞಾನ ಉದ್ಘಾಟನೆ

ಪುತ್ತೂರು: ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಲ್ಲಿ ಗ್ರಾಹಕ ಸಮಾವೇಶವನ್ನು ಸೋಮವಾರ ಬ್ಯಾಂಕ್‍ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಸಮಾವೇಶದಲ್ಲಿ ಗ್ರಾಹಕರ ಅವಶ್ಯಕತೆಗೆ ಪೂರಕವಾಗಿ ನೂತನ ಬ್ಯಾಂಕಿಂಗ್ ತಂತ್ರಜ್ಞಾನ ಮತ್ತು ನೇರ ಎನ್. ಇ. ಎಫ್.ಟಿ. , ಆರ್. ಟಿ. ಜಿ. ಎಸ್ ಹಾಗೂ ಕ್ಯೂ ಆರ್ ಕೋಡ್ ಸೌಲಭ್ಯಗಳ ಅನುಷ್ಠಾನ ಉದ್ಘಾಟಿಸಲಾಯಿತು ದ. ಕ. ಜಿಲ್ಲಾ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಚೇರ್ ಮ್ಯಾನ್ ಸಿ.ಎ ಶಾಂತರಾಮ ಶೆಟ್ಟಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಾಲಗಳ ವಿಳಂಬ ಆಗುವಾಗ

ಪುತ್ತೂರು ಕೋ ಓಪರೇಟಿವ್ ಟೌನ್‍ ಬ್ಯಾಂಕ್‍ ನಲ್ಲಿ ಗ್ರಾಹಕರ ಸಮಾವೇಶ | ನೂತನ ಬ್ಯಾಂಕಿಂಗ್ ತಂತ್ರಜ್ಞಾನ ಉದ್ಘಾಟನೆ Read More »

ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಪುತ್ತೂರಿನ ಅಬ್ದುಲ್ ಮನ್ನಾನ್ ನೇಮಕ

ಪುತ್ತೂರು: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಪುತ್ತೂರಿನ ಅಬ್ದುಲ್ ಮನ್ನಾನ್ ರನ್ನು ನೇಮಕ ಮಾಡಲಾಗಿದ್ದು, ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ – ಡಾ. ಅನಿಲ್ ಥಾಮಸ್ ಈ ನೇಮಕ ಮಾಡಿ ಆದೇಶಿಸಿದ್ದಾರೆ. ಅಬ್ದುಲ್ ಮನ್ನಾನ್ ಬಿ. ಎಸ್. ವಿಜಯೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಬಿ. ಎಸ್ ಯಡಿಯೂರಪ್ಪ ಈ ಹಿಂದೆ ಅಬ್ದುಲ್ ಮನ್ನಾನ್ ಗೆ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದರು. ಚುನಾವಣೆ ಸಂದರ್ಭ ಬೆಂಗಳೂರಿನಲ್ಲಿ ಪಕ್ಷದ ಪ್ರಚಾರದಲ್ಲಿ ಯುವಕರನ್ನ ಒಗ್ಗೂಡಿಸಿ ಕೆಲ ಬಿಜೆಪಿ ನಾಯಕರ

ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಪುತ್ತೂರಿನ ಅಬ್ದುಲ್ ಮನ್ನಾನ್ ನೇಮಕ Read More »

ಸಾಕೇತನಗರ ಶ್ರೀರಾಮ ಭಜನಾ ಮಂದಿರದಲ್ಲಿ ಬಾಲಗೋಕುಲ ಉದ್ಘಾಟನೆ

ಕೆದಿಲ:  ಸಾಕೇತನಗರದ ಶ್ರೀರಾಮ ಭಜನಾ ಮಂದಿರದಲ್ಲಿ ‘ಬಾಲಗೋಕುಲ’ವನ್ನು ಉದ್ಘಾಟಿಸಲಾಯಿತು. ಮಕ್ಕಳಿಗೆ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ತೆರಯಲಾದ ಬಾಲಗೋಕುಲವನ್ನು ಭಾಗೀರಥಿ ಮಾತಾಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರತೀ ಭಾನುವಾರದಂದು 4 ರಿಂದ 5.30 ರ ವರೆಗೆ ಬಾಲಗೋಕುಲ ಕಾರ್ಯಾಚರಿಸಲಿದ್ದು, ಗಾಯತ್ರಿ ಮಾತಾಜಿ, ರಕ್ಷಿತಾ ಮಾತಾಜಿ, ರೇಖಾ ಮಾತಾಜಿ, ಆಶಾ ಮಾತಾಜಿ ಸಂಸ್ಕಾರ ಶಿಕ್ಷಣ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವಾರು ಮಕ್ಕಳು ಭಾಗವಹಿಸಿದ್ದರು.

ಸಾಕೇತನಗರ ಶ್ರೀರಾಮ ಭಜನಾ ಮಂದಿರದಲ್ಲಿ ಬಾಲಗೋಕುಲ ಉದ್ಘಾಟನೆ Read More »

ವಿಷ ಸೇವಿಸಿದ್ದ ವಿದ್ಯಾರ್ಥಿನಿ ತ್ರಿಶಾ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು !

ಬೆಳ್ತಂಗಡಿ: ವಿಷ ಸೇವಿಸಿದ್ದ ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಧರ್ಮಸ್ಥಳದ ಪಿಜತ್ತಡ್ಕ ನಿವಾಸಿ ಕಿಶೋರ್ ಹಾಗೂ ಸೌಮ್ಯ ದಂಪತಿ ಪುತ್ರಿ ತ್ರಿಶಾ (16) ಮೃತ ವಿದ್ಯಾರ್ಥಿನಿ. ಬೆಳ್ತಂಗಡಿಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ. ಫೆ.7 ರಂದು ವಿಷ ಸೇವಿಸಿದ್ದ ತ್ರಿಶಾಳನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ

ವಿಷ ಸೇವಿಸಿದ್ದ ವಿದ್ಯಾರ್ಥಿನಿ ತ್ರಿಶಾ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು ! Read More »

ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಗೋಡೆ ಬರಹ ಅಭಿಯಾನಕ್ಕೆ ಚಾಲನೆ

ವಿಟ್ಲ: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ವಿಟ್ಲ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ಗೋಡೆ ಬರಹ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಬಿಜೆಪಿ ಮುಖಂಡರು ಸಹಿತ ಕಾರ್ಯಕರ್ತರು ಕಮಲ ಚಿಹ್ನೆಯ ಸ್ಟಿಕ್ಕರನ್ನು ಗೋಡೆಗಳಿಗೆ ಅಂಟಿಸಿದರು. ಈ ಸಂದರ್ಭದಲ್ಲಿ ವಿಟ್ಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ, ಮಂಡಲ ಉಪಾಧ್ಯಕ್ಷ ಅರುಣ್ ವಿಟ್ಲ, ವಿಟ್ಲ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಕರುಣಾಕರ ನಾಯ್ತೋಟ್ಟು, ಮೋಹನ್ ದಾಸ್ ಉಕ್ಕುಡ, ಪಕ್ಷದ ಪದಾಧಿಕಾರಿಗಳು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರು, ಪಕ್ಷದ ಹಿರಿಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಗೋಡೆ ಬರಹ ಅಭಿಯಾನಕ್ಕೆ ಚಾಲನೆ Read More »

ನಿವೃತ್ತ ಯೋಧನ ಪತ್ನಿಗೆ ಹಲ್ಲೆ | ಗ್ರಾಮಾಂತರ ಮಂಡಲ ಅಧ್ಯಕ್ಷರ ಭೇಟಿ

ಕೆದಿಲ: ಕೆದಿಲ ಗ್ರಾಮದ ನಿವೃತ್ತ ಯೋಧ ಶಿವರಾಮ್ ಭಟ್ ಮತ್ತು ಅವರ ಪತ್ನಿ ಸವಿತಾ ಭಟ್ ರಿಗೆ  ಜಾಗದ ವಿಚಾರವಾಗಿ ಅನ್ಯಕೋಮಿನ ತಂಡವೊಂದು ಹಲ್ಲೆ ನಡೆಸಿದ್ದು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಶಾಮೀಲಾಗಿರುವುದು ಖೇದಕರ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವಾ ಹೇಳಿದ್ದಾರೆ. ಅವರು ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ನಿವೃತ್ತ ಯೋಧರ ಪತ್ನಿ ಅವರ ಬಳಿ ತೆರಳಿ ಮನೆಯವರಿಗೆ ಧೈರ್ಯ ತುಂಬಿದರು. ಕೃಷಿ ಕೆಲಸ ಮಾಡಿಕೊಂಡು, ಅನೇಕ ವರ್ಷದಿಂದ ವಾಸ ಮಾಡುತ್ತಾ ಬಂದಿರುವ

ನಿವೃತ್ತ ಯೋಧನ ಪತ್ನಿಗೆ ಹಲ್ಲೆ | ಗ್ರಾಮಾಂತರ ಮಂಡಲ ಅಧ್ಯಕ್ಷರ ಭೇಟಿ Read More »

ಫೆ.18-19: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ ನಲ್ಲಿ ತುಳುನಾಡ ಜಾತ್ರೆ ‘‘ಒಡಿಯೂರು ರಥೋತ್ಸವ’’, ‘ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನ’ | ಫೆ.16 ಪುತ್ತೂರಿನಿಂದ ವೈಭವದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ | ಫೆ.14: ಕಾರ್ಯಾಲಯ ಉದ್ಘಾಟನೆ

ಪುತ್ತೂರು: ಫೆ.18 ಹಾಗೂ 19 ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ ನಲ್ಲಿ ನಡೆಯಲಿರುವ ತುಳುನಾಡ ಜಾತ್ರೆ ‘ಶ್ರೀ ಒಡಿಯೂರು ರಥೋತ್ಸವ’ ಹಾಗೂ ‘ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನ’ದ ಅಂಗವಾಗಿ ಪುತ್ತೂರಿನಿಂದ ತೆರಳುವ ಬೃಹತ್ ವೈಭವದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಫೆ.16 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಬೆಳಿಗ್ಗೆ 10.30 ಕ್ಕೆ ತೆರಳಲಿದೆ ಎಂದು ಪುತ್ತೂರು ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರು ಭಾಗದಿಂದ

ಫೆ.18-19: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ ನಲ್ಲಿ ತುಳುನಾಡ ಜಾತ್ರೆ ‘‘ಒಡಿಯೂರು ರಥೋತ್ಸವ’’, ‘ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನ’ | ಫೆ.16 ಪುತ್ತೂರಿನಿಂದ ವೈಭವದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ | ಫೆ.14: ಕಾರ್ಯಾಲಯ ಉದ್ಘಾಟನೆ Read More »

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ ? : ಅಶ್ವಿನ್ ಎಲ್. ಶೆಟ್ಟಿ

ಭಾಗ-3ಈಗ ನಾವು ಕಾಂಗ್ರೆಸ್ ನ ದಾಖಲೆಗಳನ್ನು ಗಮನಿಸೋಣ, ಕಳೆದ 70 ವರ್ಷಗಳಲ್ಲಿ 52% ಒಬಿಸಿ ಜನಸಂಖ್ಯೆಯಲ್ಲಿ ಕೇವಲ ಇಬ್ಬರು ಒಬಿಸಿ ರಾಷ್ಟ್ರಾಧ್ಯಕ್ಷರನ್ನುಮಾತ್ರ ಹೊಂದಿದ್ದು ಉಳಿದ ಎಲ್ಲಾ ರಾಷ್ಟ್ರಾಧ್ಯಕ್ಷರು ಮೇಲುಜಾತಿಯವರಾಗಿದ್ದಾರೆ. ಒಬಿಸಿ ಮುಖ್ಯಮಂತ್ರಿಗಳನ್ನು ನೋಡುವುದಾದರೆ ಕಾಂಗ್ರೆಸ್ ಪಕ್ಷವು ಕೆಳಮಟ್ಟದಿಂದ ಮೊದಲ ಸ್ಥಾನದಲ್ಲಿದೆ. ಇಲ್ಲೂ ಕೂಡಾ ಪ್ರಬಲ ಒಬಿಸಿ ಜಾತಿಗಳಿಗೆ ಹೆಚ್ಚು ಪ್ರಾತಿನಿಧ್ಯವನ್ನು ನೀಡಿರುವುದನ್ನು ಗಮನಿಸಬಹುದು. ನಾವು ಇಲ್ಲಿ ಇನ್ನೊಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ಕೇಂದ್ರೀಯ ವಿದ್ಯಾಲಯ ಮತ್ತು

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ ? : ಅಶ್ವಿನ್ ಎಲ್. ಶೆಟ್ಟಿ Read More »

ಚಿಂತೆಯ ಬದಲು ಚಿಂತನೆ ಮಾಡೋಣ: ಕೊಂಡೆವೂರು ಶ್ರೀಗಳು | ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಕೇಂದ್ರ ಸಮಿತಿ ಸಭೆ

ಬಂಟ್ವಾಳ: ಹಿರಿಯರ ಅನುಭವವು ನಂಬಿಕೆಯ ಜೊತೆಗೆ ಮಿಳಿತವಾದಾಗ ಜೀವನವು ಅರ್ಥಪೂರ್ಣವಾಗುತ್ತದೆ. ಚಿಂತೆಯ ಬದಲು ಎಲ್ಲರೂ ಚಿಂತನೆಯನ್ನು ಮಾಡಲು ಹಿರಿಯರ ಪ್ರತಿಷ್ಠಾನ ನಡೆಸುವ ಕಾರ್ಯಗಳು ಸಮಾಜದ ಒಳಿತಿಗೆ ದೊಡ್ಡ ಕೊಡುಗೆಯಾಗಿದೆ.  ಸಂಸ್ಕೃತಿಯ ರಕ್ಷಣೆಗೆ ಹಿರಿಯರ ಮಾರ್ಗದರ್ಶನವು ಇಂದಿನ ಅಗತ್ಯವಾಗಿದೆ ಎಂದು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು. ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳದ ಕೇಂದ್ರ ಸಮಿತಿ ಸಭೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಆಶ್ರಮದ ಮೂಲಕ

ಚಿಂತೆಯ ಬದಲು ಚಿಂತನೆ ಮಾಡೋಣ: ಕೊಂಡೆವೂರು ಶ್ರೀಗಳು | ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಕೇಂದ್ರ ಸಮಿತಿ ಸಭೆ Read More »

error: Content is protected !!
Scroll to Top